ದ.ಕ.ಜಿಲ್ಲೆಯಾಧ್ಯಂತ ಬೀಡುಬಿಟ್ಟಿರುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರು..

ಮನೆ ಮನೆಗೆ ಬಂದು ಕಡಿಮೆ ಬೆಲೆಯ ಅಟೋಮ್ಯಾಟಿಕ್ ಸ್ಟವ್ ನೀಡುವ ವಂಚಕರು. ಎಂಟು ಸಾವಿರ ಮುಖಬೆಲೆಯ ಅಟೋಮೆಟಿಕ್ ಸ್ಟವ್ ಕೇವಲ ಎರಡು ಸಾವಿರಕ್ಕೆ ಬಂತೆಂದು ಖುಷಿಪಡ್ತೀರಾ ಜೋಕೆ. ಬೈಕುಗಳಲ್ಲಿ ಸುತ್ತಾಡುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರ ತಂಡ ನಾಳೆ ನಿಮ್ಮ ಮನೆಗೂ ಬರ್ತಾರೆ. ಎಂಟು ಸಾವಿರದಿಂದ ಆರಂಭವಾಗುವ ದರ ಚರ್ಚೆ ಇಳಿಯುತ್ತಾ ಕೊನೆಗೆ ಕೇವಲ ಎರಡು ಸಾವಿರಕ್ಕೆ ಬಂದು ನಿಲ್ಲುತ್ತದೆ. ಹೈಫೈ ಅಟೋಮೆಟಿಕ್ ಸ್ಟವ್ ನಿಮ್ ಕೈಗೆ ಕೊಟ್ಟು ಬೈಕ್ ವಾಲಾ ಹೋಗ್ತಾನೆ‌. ಎರಡು ಸಾವಿರಕ್ಕೆ […]

Continue Reading

ಕೋಮುಭಾವನೆ ಕೆರಳಿಸುವ ಪೋಸ್ಟ್; ಬಂಟ್ವಾಳ ಅರಳದ ಜಯಪೂಜಾರಿಗೆ 14 ದಿನಗಳ ನ್ಯಾಯಾಂಗ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ಧರ್ಮಗಳ ಮಧ್ಯೆ ಅವಹೇಳನಕಾರಿ ಪೋಸ್ಟ್ ಬರೆದು ವೈರಲ್ ಮಾಡಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯ ಪೂಜಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ ಬರೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ . ಬಂಟ್ವಾಳ ಗ್ರಾಮಾಂತರ ಪೋಲೀಸರು ಈತನನ್ನು ಬಂಧಿಸಿ ಸುಮೋಟೋ ಕೇಸ್ ದಾಖಲಿಸಿದ್ದಾರೆ. ಆರೋಪಿ ಜಯ ಪೂಜಾರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಧರ್ಮ, ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ […]

Continue Reading

ವಿಟ್ಲ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕಿ. ಬಾಲಕಿಯ ಬಲಿ ಪಡೆದ ಜೋಕಾಲಿ ಹಗ್ಗ.

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಮನಕಲಕುವ ಘಟನೆ ನಡೆದಿದೆ. ಮಡಲ ನಿವಾಸಿ ಕಿಶೋರ್ ಎಂಬವರ ಪುತ್ರಿ ಮಾಣಿ ಸಮೀಪದ ಸೇರ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತೀರ್ಥಶ್ರೀ(8) ಮೃತ ಬಾಲಕಿ.ರವಿವಾರದಂದು ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ಜೋಕಾಲಿ ಹಗ್ಗ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಈ ಹಿಂದೆ ಇದೇ ರೀತಿ ಅನಂತಾಡಿ ಗ್ರಾಮದಲ್ಲಿ, ವಿಟ್ಲ ಸಮೀಪದ ಉಕ್ಕುಡ ದರ್ಬೆಯಲ್ಲೂ ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಪುಟಾಣಿಗಳು ಸಾವನ್ನಪ್ಪಿದ್ದರು. ಮಕ್ಕಳು ಆಟವಾಡುವ ಸಂದರ್ಭ […]

Continue Reading

ಉಳ್ಳಾಲ: ಗ್ಯಾಸ್ ಸಿಲಿಂಡರ್ ಸ್ಪೋಟ; ತಾಯಿ, ಮೂವರು ಮಕ್ಕಳು ಗಂಭೀರ

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿದ್ದ ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಡಿಸೆಂಬರ್ 7 ರ ಶನಿವಾರ ತಡರಾತ್ರಿ ಸಂಭವಿಸಿದೆ . ಸ್ಪೋಟಗೊಂಡಿದ್ದು, ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಜನಾಡಿ ಕಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಪತ್ನಿ ಕುಬ್ರ (40), ಮಕ್ಕಳಾದ ಮೆಹದಿ(15), ಮಝಿಹಾ (13) ಮಾಯಿ಼ಝಾ (11) ಗಂಭೀರ ಗಾಯಗೊಂಡಿದ್ದಾರೆ. ಪತಿ ವಿದೇಶದಲ್ಲಿ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಐಕಾನ್ ತುಂಬೆ ಶೆಟ್ರು.!

ಕರಾವಳಿ, ಮಲೆನಾಡಿನಲ್ಲಿ ಲಗಾಡಿ ತೆಗೆದ ನಾಯಕರಿಗೆ ಸಿಂಹಸ್ವಪ್ನವಾದ ಯುವ ನಾಯಕ ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಧೂಳೀಪಟ.! ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಡಿಶುಂ.. ಡಿಶುಂ ಸಖತ್ ಸುದ್ದಿ ಮಾಡಿದ್ದಂತೂ ಸತ್ಯ. ಕಛೇರಿ ಒಳಗಡೆ ನಡೆದ ಭಾರೀ ತಮ್ಮಣಕ್ಕೆ ಪೇಚಿಗೆ ಸಿಲುಕಿದ ನಾಲಾಯಕರು ಮೀಡಿಯಾದೆದುರು ನಮ್ಮ ನಡುವೆ ಹಂಗೇನಿಲ್ಲ, ಎಲ್ಲವೂ ಸರಿಯಾಗಿದೆ ಎಂದು ತೇಪೆ ಹಚ್ಚಿದರೂ ಕಾಂಗ್ರೆಸ್ ನಾಯಕರೊಳಗೆ ಬೂದಿ ಮುಚ್ಚಿದ ಕೆಂಡದಂತಿದೆ. ಪಾಪ ಕಾರ್ಯಕರ್ತರು ಮಾತ್ರ ಈ ಹೈಡ್ರಾಮವನ್ನು ಎಂಜಾಯ್ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ […]

Continue Reading

ಮಂಗಳೂರು ಕಮೀಷನರ್ ಅಮಾನತಿಗೆ ಸಂಘಟಿತ ಹೋರಾಟ ನಡೆಸಲು ನಿರ್ಧಾರ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಧರಣಿ, ಪ್ರತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಲು ಆಗ್ರಹ

ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಸಮಾಲೋಚನಾ ಸಭೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜನಚಳವಳಿಗಳು ಧರಣಿ, ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳುವುದರ ಮೇಲೆ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಚರ್ಚಿಸಲು ಸಮಾನ ಮನಸ್ಕ ಜನಪರ ಸಂಘಟನೆಗಳು ನಗರದಲ್ಲಿ ಸಮಾಲೋಚನಾ ಸಭೆ ನಡೆಸಿದವು. ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳು, ಎಡಪಕ್ಷಗಳ ಪ್ರಮುಖರು ಸಭೆಯಲ್ಲಿ ಭಾಗಿಯಾದರು. ಬಿಜೆಪಿ ದುರಾಡಳಿತದ ಎದುರಾಗಿ ಜನಪರ ಸಂಘಟನೆಗಳ ಒಕ್ಕೊರಲ ಬೆಂಬಲ […]

Continue Reading

ವಿಟ್ಲ: ಸ್ವಾಮಿ ಹೋಲೋ ಬ್ಲಾಕ್ ನ ಉದ್ಯಮಿ ಆತ್ಮಹತ್ಯೆ; ಕಂಪನಿಯ ಶೆಡ್ಡಿನೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಮಾಲಿಕನ ಮೃತದೇಹ ಪತ್ತೆ

ಉದ್ಯಮಿ ಸಾವಿನ ಸುತ್ತ ಸಂಶಯದ ಹುತ್ತ. ವಿಟ್ಲದ ಸ್ವಾಮಿ ಹೋಲೋ ಬ್ಲಾಕ್ & ಇಂಟರ್ ಲಾಕ್ ಕಂಪನಿಯ ಮಾಲಿಕ ನಿಡ್ಯ ದಾಮೋದರ ಪೂಜಾರಿ(59) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ವಿಟ್ಲ-ಕುಂಡಡ್ಕ ರಸ್ತೆಯ ಪರನೀರು ಎಂಬಲ್ಲಿ ಹೋಲೋ ಬ್ಲಾಕ್ ಕಂಪನಿ ನಡೆಸುತ್ತಿದ್ದ ದಾಮೋದರ ಪೂಜಾರಿಗೆ ಮೇಲ್ನೋಟಕ್ಕೆ ಯಾವುದೇ ರೀತಿಯಲ್ಲೂ ಆರ್ಥಿಕ ಸಂಕಷ್ಟಗಳಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಾ ಎಲ್ಲರೊಂದಿಗೂ ಸಹಬಾಳ್ವೆಯಿಂದ ಕೊಡುಗೈ ದಾನಿಯಾಗಿದ್ದ ದಾಮೋದರ ಪೂಜಾರಿಯವರ ಸಾವಿನ ಸುತ್ತ ಹಲವಾರು ಸಂಶಯಗಳು ವ್ಯಕ್ತವಾಗಿವೆ. ಘಟನಾ […]

Continue Reading

ಶಕ್ತಿನಗರ ಜನರಿಗೂ ಸಿಕ್ತು ‘ಶಕ್ತಿ’ಯ ಖುಷಿ..! ಭಗೀರಥ ಪ್ರಯತ್ನದ ನಂತರ ಬಂದ ಸರ್ಕಾರಿ ಬಸ್ ಕಂಡು ಜನ ಫುಲ್ ಖುಷ್..

ಮಂಗಳೂರು: ಬಂದರು ನಗರಿ ಮಂಗಳೂರಿನ ಶಕ್ತಿನಗರದ ಜನರಲ್ಲಿ ಎಂದಿಲ್ಲದ ಹರ್ಷ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಗ್ಯಾರೆಂಟಿ ಯೋಜನೆ ರಾಜ್ಯದ ಎಲ್ಲೆಡೆ ಮಹಿಳೆಯರ ಪಾಲಿಗೆ ಆಶಾಕಿರಣವಾದರೆ, ಖಾಸಗಿ ಬಸ್’ಗಳ ಪ್ರಾಬಲ್ಯವಿರುವ ದಕ್ಷಿಣ ಕನ್ನಡದ ಬಹುತೇಕ ಊರುಗಳ ಮಹಿಳೆಯರಿಗೆ ನಿಲುಕದ ಕುಸುಮದಂತಿದೆ. ಇಂತಹಾ ಸ್ಥಿತಿಯನ್ನು ಮನಗಂಡ ಸಾಮಾಜಿಕ ಹೋರಾಟಗಾರರೂ ಆದ ಮಂಗಳೂರಿನ ಹಿರಿಯ ವಕೀಲ ಮನೋರಾಜ್ ರಾಜೀವ್ ಅವರ ಕಾಳಜಿಯಿಂದ ಮಂಗಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸರ್ಕಾರಿ ಬಸ್ ಸಂಚರಿಸುವಂತಾಗಿದೆ. ಮಂಗಳೂರಿನ ಶಕ್ತಿನಗರ ಅನನ್ಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ಶಕ್ತಿನಗರ ಪದವು […]

Continue Reading

ಪೊಲೀಸ್ ಕಮೀಷನರ್ ವರ್ಗಾವಣೆ ಅಸಾಧ್ಯವಾದರೆ ಜಿಲ್ಲಾಡಳಿತದ ಕಾರ್ಯಕ್ರಮಗಳಿಗೆ ಮುತ್ತಿಗೆ; ಯೋಗೀಶ್ ಜಪ್ಪಿನಮೊಗರು ಎಚ್ಚರಿಕೆ

ಮಂಗಳೂರು ನಗರದ ಪೊಲೀಸ್‌‌ ಕಮೀಷನರ್ ವಿನಾ ಕಾರಣ ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಿಸುವ, ಪ್ರತಿಭಟನೆಯ ಹಕ್ಕನ್ನು ನಿರಾಕರಿಸುತ್ತಿರುವುದು ಸಂವಿಧಾನ ವಿರೋಧಿ ಮತ್ತು ಈ ನೆಲದ ಕಾನೂನು ವಿರೋಧಿ ನಡೆಯಾಗಿದೆ ಇಂತಹ ವರ್ತನೆ ಬದಲಾಯಿಸದಿದ್ದರೆ ಕಮೀಷನರ್ ಅಗ್ರವಾಲರು ಮಂಗಳೂರಿಗೆ ಬೇಕಾಗಿಲ್ಲ ಕೂಡಲೇ ವರ್ಗಾಯಿಸಲು ಕ್ರಮಕೈಗೊಳ್ಳಿ ಇಲ್ಲವೆಂದಾದರೆ ಜಿಲ್ಲಾಡಳಿತ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಎಚ್ಚರಿಸಿದರು. ಅವರು ಇಂದು ಡಿವೈಎಫ್ಐ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ನಗರದ ಪಂಪ್ವೆಲ್ […]

Continue Reading

ಸರ್ಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು. ಬಂಟ್ವಾಳ ಸಮೀಪದ ವಗ್ಗ ಬಳಿ ಘಟನೆ.

ಬಂಟ್ವಾಳ-ಗುರುವಾಯನಕೆರೆ ರಸ್ತೆಯ ವಗ್ಗ ಸಮೀಪ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ರಾಜೇಂದ್ರಪೂಜಾರಿ (45) ಮೃತ ಬೈಕ್ ಸವಾರ. ಬಂಟ್ವಾಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ರಾಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಆಗಮಿಸಿ […]

Continue Reading