ಸನಾತನ ಧರ್ಮದ ಸಂತ್ರಸ್ತರಾದ ನರೇಂದ್ರ ಮೋದಿ.!

✍️. ನವೀನ್ ಸೂರಿಂಜೆ. ಪತ್ರಕರ್ತ “ನಿನ್ನನ್ನು ಕೊಲ್ಲುವ ಕತ್ತಿಯನ್ನು ನೀನೇ ರೆಡಿ ಮಾಡಿ ಕೊಡ್ತಿದ್ದಿಯಲ್ವೇನೋ ಕಾಟೇರಾ ?” ಎಂದು ಕಮ್ಮಾರನಿಗೆ ಹೇಳುವ ಮಾತು ಈಗಿನ ಹಿಂದುತ್ವವಾದಿ ಹಿಂದುಳಿದ ವರ್ಗಗಳಿಗೆ ಹೇಳುವಂತಿದೆ. “ಮೋದಿ ರಾಮನ ಮೂರ್ತಿ ಮುಟ್ಟುವುದೇ ? ಯಾರು ಎಷ್ಟೇ ದೊಡ್ಡ ಜನ ಆಗ್ಲಿ ಸನಾತನ ಶಾಸ್ತ್ರಗಳನ್ನು ಪಾಲಿಸಬೇಕು. ಮೋದಿಯವರ ಅತಿಯಾದ ಭಾಗಿಧಾರಿಕೆ, ಗರ್ಭಗುಡಿಯ ಸಾಮಿಪ್ಯವನ್ನು ನಾನು ವಿರೋಧಿಸುತ್ತೇನೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ” ಎಂದು ದೇಶದ ನಾಲ್ವರು ಪ್ರಮುಖ ಸ್ವಾಮೀಜಿಗಳು ಹೇಳಿಕೊಂಡಿದ್ದಾರೆ. ಪುರೋಹಿತಶಾಹಿ ವ್ಯವಸ್ಥೆ ಎಲ್ಲರನ್ನೂ ಬಳಸಿ […]

Continue Reading

ಅಪ್ರಾಪ್ತ ಬಾಲಕಿಯ ಮದುವೆಯಾಗಿದ್ದ ವ್ಯಕ್ತಿಯ ವಿರುದ್ದದ ಪ್ರಕರಣ ರದ್ದು; ಪ್ರಕರಣ ರದ್ದುಗೊಳಿಸದೆ ಇದ್ದರೆ ನಿಜವಾದ ನ್ಯಾಯಕ್ಕೆ ಸೋಲುಂಟಾಗುತ್ತದೆ: ದೆಹಲಿ ಹೈಕೋರ್ಟ್

ಅಪ್ರಾಪ್ತ ವಯಸ್ಕಳೊಂದಿಗೆ ಓಡಿಹೋದ ಕಾರಣಕ್ಕೆ ಅತ್ಯಾಚಾರ ಮತ್ತು ಅಪಹರಣ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ , “ಇಬ್ಬರು ವ್ಯಕ್ತಿಗಳ ನಡುವಿನ ನಿಜವಾದ ಪ್ರೀತಿಯನ್ನು, ಅವರಲ್ಲಿ ಒಬ್ಬರು ಅಪ್ರಾಪ್ತರಾಗಿರಲಿ ಅಥವಾ ಇಬ್ಬರೂ ಅಪ್ರಾಪ್ತರಾಗಿರಲಿ ಇಲ್ಲವೇ ಇಬ್ಬರೂ ಪ್ರೌಢ ವಯಸ್ಸಿನ ಸಮೀಪವಿರುವ ಅಪ್ರಾಪ್ತ ವಯಸ್ಕರಾಗಿರಲಿ, ಅವರನ್ನು ಕಾನೂನಿನ ಕಾಠಿಣ್ಯ ಅಥವಾ ಪ್ರಭುತ್ವದ ಕ್ರಮದ ಮೂಲಕ ನಿಯಂತ್ರಿಸಬಾರದು ಎಂಬ ತೀರ್ಮಾನಕ್ಕೆ ಈಗಾಗಲೇ ಹಲವು ಬಾರಿ ಈ […]

Continue Reading

2024 ರ ಮೇ ತಿಂಗಳ ಬಳಿಕ ಮೊಬೈಲ್ ಬಳಕೆದಾರರಿಗೆ ಶಾಕ್ ಕಾದಿದೆ.! ರಿಚಾರ್ಜ್ ದರಗಳಲ್ಲಿ ಭಾರೀ ಏರಿಕೆಯಾಗುವ ಸಾಧ‍್ಯತೆ

2024 ರ ಮೇ ತಿಂಗಳ ಬಳಿಕ ಮೊಬೈಲ್ ಬಳಕೆದಾರರಿಗೆ ಶಾಕ್ ಕಾದಿದೆ. ರಿಚಾರ್ಜ್ ದರಗಳಲ್ಲಿ ಭಾರೀ ಏರಿಕೆಯಾಗುವ ಸಾಧ‍್ಯತೆಯಿದೆ. ಸದ್ಯಕ್ಕೆ ವೊಡಾಫೋನ್, ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಸಂಕಷ್ಟದಲ್ಲಿವೆ. ಈ ಸಂಸ್ಥೆಗಳು ಚೇತರಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಟೆಲಿಕಾಂ ಸಂಸ್ಥೆಗಳು ಶೇ.20 ರಷ್ಟು ದರ ಏರಿಕೆ ಮಾಡುವ ಸಾಧ‍್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಇಷ್ಟು ದಿನ ಅಗ್ಗದ ದರದಲ್ಲಿ ಸಿಗುತ್ತಿದ್ದ ಮೊಬೈಲ್ ರಿಚಾರ್ಜ್ ಇನ್ನು ಮುಂದಕ್ಕೆ ದುಬಾರಿಯಾಗಬಹುದು. […]

Continue Reading

ಜೈಪುರ: ಬಸ್ಸಿನೊಳಗೆ ಕಂಡೆಕ್ಟರ್ ನಿಂದ 25 ವರ್ಷದ ವಿವಾಹಿತ ಮಹಿಳೆಯ ಅತ್ಯಾಚಾರ

ರಾಜಸ್ಥಾನದ ಭರತ್ಪುರ ಜಿಲ್ಲೆಯಲ್ಲಿ 25 ವರ್ಷದ ವಿವಾಹಿತ ಮಹಿಳೆಯನ್ನು ಬಸ್ಸಿನೊಳಗೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಕಂಡಕ್ಟರ್ ನನ್ನು ಬಂಧಿಸಲಾಗಿದೆ. ಆರೋಪಿಯನ್ನು ಜಿತೇಂದ್ರ ಸಿಂಗ್ ಗುರ್ಜರ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಇಲ್ಲಿನ ಟ್ರಾನ್ಸ್ಪೋರ್ಟ್ ನಗರದಿಂದ ಭರತ್ಪುರಕ್ಕೆ ತೆರಳುತ್ತಿದ್ದ ಬಸ್ಸಿಗೆ ಮಹಿಳೆ ಹತ್ತಿದ್ದರು. ಬಸ್ ಭರತ್ಪುರದ ಬಯಾನಾ ತಲುಪಿದ ನಂತರ ಗುರ್ಜರ್, ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಕಿಲಾನಿಯಾ ತಿಳಿಸಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು […]

Continue Reading

ಜನವರಿ 17 ರಿಂದ ಲಾರಿ ಮಾಲೀಕರ ಮುಷ್ಕರ

ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರು ಪರಾರಿಯಾದರೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿ ದಂಡ ಸರಿಯಲ್ಲ” ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಲು‌ ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿ ಜನವರಿ 17 ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ. “ಹಿಟ್ ಆಂಡ್ ರನ್ ಪ್ರಕರಣ ಸಂಬಂಧ ಜಾರಿಗೆ ತಂದಿರುವ ಕಾಯಿದೆ ಕುರಿತು ಲಾರಿ […]

Continue Reading

ನಿಷ್ಕ್ರಿಯಗೊಂಡ ಬ್ಯಾಂಕ್‌ ಖಾತೆಗಳಿಗೆ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ಅನ್ವಯ ಆಗಲ್ಲ: ರಿಸರ್ವ್ ಬ್ಯಾಂಕ್

ವರ್ಷಗಳಿಂದ ಯಾವುದೇ ವಹಿವಾಟು ನಡೆಯದ ಬ್ಯಾಂಕ್‌ ಖಾತೆಗಳಿಗೆ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ನಿಯಮ ಅನ್ವಯ ಆಗುವುದಿಲ್ಲ. ಹೀಗಾಗಿ ನಿಷ್ಕ್ರಿಯ ಖಾತೆಗಳಲ್ಲಿ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲದಿದ್ದರೂ ಶುಲ್ಕವನ್ನು ಕಡಿತಗೊಳಿಸಬಾರದು ಎಂದು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್(ಆರ್‌ಬಿಐ) ಸೂಚಿಸಿ, ಈ ಮೂಲಕ ಆರ್‌ಬಿಐ ಬ್ಯಾಂಕ್‌ ಗ್ರಾಹಕರಿಗೆ ನಿರಾಳತೆ ನೀಡಿದೆ. ಈ ಹೊಸ ನಿಯಮಗಳ ನಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿವೇತನ ಮತ್ತು ನೇರ ಲಾಭ ವರ್ಗಾವಣೆ (ಡಿಬಿಟಿ) ಗಾಗಿ ತೆರಯಲಾದ ಖಾತೆಗಳನ್ನು ನಿಷ್ಕ್ರೀಯಗೊಳಿಸಬಾರದು. ಎರಡು […]

Continue Reading

ಹನ್ನೆರಡು ವರ್ಷ ಅಪ್ರಾಪ್ತ ಬಾಲಕಿ ತನ್ನ ಅಪ್ರಾಪ್ತ ಸಹೋದರನಿಂದಲೇ ಗರ್ಭಿಣಿಯಾಗಿದ್ದಾಳೆ

ಗರ್ಭಪಾತ ಮಾಡಲು ಸಾಧ್ಯವಿಲ್ಲ; ಸೂಕ್ತ ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಬೇಕು: ಹೈಕೋರ್ಟ್ ತಿರುವನಂತಪುರಂ: ಹನ್ನೆರಡು ವರ್ಷದ ಬಾಲಕಿ ತನ್ನ ಅಪ್ರಾಪ್ತ ಸಹೋದರನಿಂದಲೇ ಗರ್ಭಿಣಿಯಾಗಿದ್ದಾಳೆ. ಪುಟ್ಟ ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ಮಾಹಿತಿ ತಿಳಿದ ಪೋಷಕರು ಕಂಗಾಲಾಗಿ ಗರ್ಭಪಾತಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಹೈಕೋರ್ಟ್, ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದೆ. ಇಷ್ಟೇ ಅಲ್ಲ ಸೂಕ್ತ ಆರೈಕೆ ನೀಡಲು ಸೂಚನೆ ನೀಡಿದೆ. ಜಸ್ಟೀಸ್ ದೇವನ್ ರಾಮಚಂದ್ರನ್ ಈ ಕ್ಲಿಷ್ಟ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ. […]

Continue Reading

ಹಿಟ್‌ ರನ್‌ ಪ್ರಕರಣದ ನೂತನ ಕಾಯ್ದೆಯನ್ನು ವಿರೋಧಿಸಿ ವಿವಿಧೆಡೆ ಲಾರಿ ಚಾಲಕರ ಪ್ರತಿಭಟನೆ

ಹಿಟ್‌ & ರನ್‌ ಪ್ರಕರಣಕ್ಕೆ ಸಂಬಂಧಿಸಿದ ನೂತನ ಕಾನೂನು ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಲಾರಿ ಚಾಲಕರು ಮಂಗಳವಾರದಿಂದ ಮುಷ್ಕರ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಪ್ರತಿಭಟನೆ ತೀವ್ರಗೊಂಡರೆ ಇಂಧನ ಸರಬರಾಜು ಮೇಲೆ ಪರಿಣಾಮ ಬೀರಬಹುದೆಂಬ ಭೀತಿಯಿಂದಾಗಿ ಮಹಾರಾಷ್ಟ್ರ, ಛತ್ತೀಸ್‌ ಗಢ, ಮಧ್ಯಪ್ರದೇಶದಲ್ಲಿ ನೂರಾರು ಜನರು ಪೆಟ್ರೋಲ್‌ ಬಂಕ್‌ ಬಳಿ ಜಮಾಯಿಸಿರುವುದಾಗಿ ವರದಿಯಾಗಿದೆ. ಬ್ರಿಟಿಷ್‌ ಕಾಲದ ಇಂಡಿಯನ್‌ ಪೀನಲ್‌ ಕೋಡ್‌(IPC) ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ನೂತನ ಕಾಯ್ದೆಯ ಪ್ರಕಾರ, ಹಿಟ್‌ ಆಂಡ್‌ ರನ್‌ ಕೇಸ್‌ ನಲ್ಲಿ ಆರೋಪಿ […]

Continue Reading

ಯುವಕರಿಗೆ ಲಕ್ಷ ಲಕ್ಷದ ಆಸೆ ತೋರಿಸಿ, ಮಹಿಳೆಯರನ್ನು ಗರ್ಭವತಿ ಮಾಡುವ ಕೆಲಸ ಕೊಡುತ್ತಿದ್ದ ಜಾಬ್ ಲಿಂಕ್ಸ್.!

ಬಿಹಾರ ರಾಜ್ಯದಲ್ಲಿ ವಿಲಕ್ಷಣ ಕೆಲಸ ನೀಡುವ ಏಜೆನ್ಸಿಯೊಂದು ಬೆಳಕಿಗೆ ಬಂದಿದೆ. ಯುವಕರಿಗೆ ಲಕ್ಷ ಲಕ್ಷ ರೂಪಾಯಿಗಳ ಆಸೆ ತೋರಿಸಿ ಮಹಿಳೆಯರನ್ನು ಗರ್ಭವತಿ ಮಾಡುವ ಕೆಲಸ ಕೊಡುತ್ತಿದೆ ಎಂದು ಮೋಸ ಮಾಡುವ ಜಾಬ್ ಲಿಂಕ್ಸ್ ಕಾರ್ಯಾಚರಿಯಿತ್ತಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಿಹಾರದ ನವಾಡದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಲಸದ ಅನಿವಾರ್ಯತೆಯಲ್ಲಿರುವ ಯುವಕರನ್ನು ಸಂಪರ್ಕಿಸಿ ಅವರಿಗೆ 13 ಲಕ್ಷ ನೀಡುವುದಾಗಿ ಆಸೆ ತೋರಿಸಿ, ಮಹಿಳೆಯರನ್ನು ಗರ್ಭವತಿ ಮಾಡುವ ಕೆಲಸ ಮಾಡಿಸುತ್ತಿತ್ತು ಈ ಗ್ಯಾಂಗ್. ‘ಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌’ […]

Continue Reading

ಬನರಾಸ್: ಐಐಟಿ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಬಿಜೆಪಿ ಐಟಿ ಸೆಲ್‌ನ ಮೂವರ ಬಂಧನ

ದೇಶಾದ್ಯಂತ ಸುದ್ದಿಯಾಗಿದ್ದ ಬನಾರಸ್ ಹಿಂದೂ ವಿವಿ ಅವರಣದಲ್ಲಿ ಐಐಟಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಐಟಿ ಸೆಲ್‌ನಲ್ಲಿ ಗುರುತಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಎರಡು ತಿಂಗಳ ಬಳಿಕ ಬಂಧಿಸಲಾಗಿದೆ. ಬಿಎಚ್‌ಯು ಕ್ಯಾಂಪಸ್‌ನಲ್ಲಿ ಐಐಟಿಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರನ್ನು ಕುನಾಲ್ ಪಾಂಡೆ, ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಹಾಗೂ ಸಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಗಳನ್ನು ಎರಡು ತಿಂಗಳು ನಂತರ ಪತ್ತೆ […]

Continue Reading