ಕಲಮಶ್ಯೇರಿ ಬ್ಲಾಸ್ಟ್ ಯಹೂದಿಗಳನ್ನು ಗುರಿಯಾಗಿಸಿ ನಡೆದಿಲ್ಲ; ಇಲ್ಲಿ ಯಹೂದಿಗಳು ವಾಸವಿಲ್ಲ: ದಿ ಕ್ವಿಂಟ್ ಪ್ಯಾಕ್ಟ್ ಚೆಕ್

ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನಾ ಸಭೆ ನಡೆಸುತ್ತಿದ್ದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಇಬ್ಬರು ಮಹಿಳೆಯರು ಸಾವಿಗಿಡಾಗಿದ್ದು, ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಪ್ಯಾಲೆಸ್ಟೀನ್‌ ಪರವಾದ ರ್‍ಯಾಲಿಯೊಂದು ಇದೇ 28ರಂದು ನಡೆದಿತ್ತು. ಈ ವೇಳೆ ಹಮಾಸ್‌ನ ನಾಯಕ ಖಾಲಿದ್‌ ಮಶಾಲ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದ್ದರು. ಖಾಲಿದ್‌ ಭಾಷಣವನ್ನು ಉಲ್ಲೇಖಿಸಿ, ‘ಜಿಹಾದಿಗಳು ಭಾರತದ ಬೀದಿಗಿಳಿಯಲು ಸಿದ್ಧರಾಗಬೇಕು ಎಂದು ಖಾಲಿದ್‌ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದ್ದರಿಂದಲೇ ಈ ಸ್ಫೋಟ […]

Continue Reading

ವಂಚನೆಯ ಹೊಸ ಟ್ರೆಂಡ್: ಸಿಮ್ ಅದಲು ಬದಲು ದಂಧೆ.. ಎಚ್ಚರ ತಪ್ಪಿದರೆ ನಿಮ್ಮ ಖಾತೆಯ ಹಣ ಮಾಯ.!

ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ರೀತಿಯ ವಂಚನೆ ಪ್ರಕರಣಗಳೂ ಹುಟ್ಟಿಕೊಳ್ಳುತ್ತಿವೆ. ಸೈಬರ್ ಕ್ರೈಂ ಬಲಿಪಶು ಆಗಬಾರದು ಎಂದರೆ ಯಾವುದೇ ಕಾರಣಕ್ಕೂ ಯಾರಿಗೂ ಒಟಿಪಿ ಕೊಡಬೇಡಿ ಅಂತಾರೆ ಪೊಲೀಸರು. ಆದರೆ, ನಿಮ್ಮ ಬಳಿ ಒಟಿಪಿ ಪಡೆಯದೇ ನಿಮ್ಮ ಖಾತೆಯಲ್ಲಿ ಇರುವ ಹಣ ವಂಚಕರ ಪಾಲಾಗಿಬಿಟ್ರೆ? ಈ ಪ್ರಶ್ನೆಯೇ ಆತಂಕಕಾರಿ! ಆದರೆ, ಈ ರೀತಿಯ ಕೃತ್ಯಗಳು ನಡೆದಿವೆ. ಇದಕ್ಕೆ ಸಿಮ್ ಸ್ವ್ಯಾಪಿಂಗ್ ವಂಚನೆ ಅಂತಾರೆ! ನಿಮ್ಮ ಮೊಬೈಲ್ ನಂಬರ್‌ ವಂಚಕರ ಪಾಲಾಗುವ ಕುತಂತ್ರ ಇದು! ಇತ್ತೀಚೆಗೆ ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ […]

Continue Reading

ಸರಕಾರಿ ನೌಕರರು ‘ಬಹುಪತ್ನಿತ್ವ’ ಹೊಂದಿದರೆ ದಂಡ, ಕಡ್ಡಾಯ ನಿವೃತ್ತಿ ಶಿಕ್ಷೆ: ಅಸ್ಸಾಂನಲ್ಲಿ ಕಾನೂನು ಜಾರಿ

ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ಇಲ್ಲಿನ ರಾಜ್ಯ ಸರಕಾರ ಮಹತ್ವದ ಕಾನೂನೊಂದನ್ನು ಜಾರಿಗೆ ತಂದಿದ್ದು, ಧರ್ಮ ಅವಕಾಶ ನೀಡಿದರೂ, ರಾಜ್ಯದಲ್ಲಿ ಯಾವುದೇ ಸರ್ಕಾರಿ ನೌಕರ ಬಹುಪತ್ನಿತ್ವ ಹೊಂದಲು ಅವಕಾಶ ಇಲ್ಲ. ಒಂದು ವೇಳೆ ಕಾನೂನು ಮೀರಿದರೆ ದಂಡ ಹಾಗೂ ಸರಕಾರಿ ನೌಕರಿಯಿಂದಲೇ ವಜಾ ಮಾಡುವ ಕಾನೂನನ್ನು ಜಾರಿಗೆ ತಂದಿದೆ. ಈ ಸಂಬಂಧ ಶುಕ್ರವಾರ ಅಸ್ಸಾಂ ಸರಕಾರಿ ಸೇವಾ ನಿಯಮ 26ರ ಅಡಿ ಆದೇಶ ಹೊರಡಿಸಿರುವ ರಾಜ್ಯ ಸರಕಾರವು ಯಾವುದೇ ಧರ್ಮ, ಮತ ಪಂಥಗಳ ಉಲ್ಲೇಖ ಮಾಡದೆ […]

Continue Reading

ದೇಶಗಳಿಗೆ ವಲಸೆ ಹೋಗುವಲ್ಲಿ, ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ

ದೆಹಲಿ: ದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಇತ್ತೀಚಿನ ವರದಿಯೊಂದರಲ್ಲಿ ಹೇಳಿದೆ. ಆ ಪೈಕಿ ಅಮೆರಿಕದ ಪೌರತ್ವವೇ ಅಗ್ರಸ್ಥಾನದಲ್ಲಿದೆ. ವಿದೇಶೀಯರಿಗೆ ಪೌರತ್ವ ಮಂಜೂರು ಮಾಡುವಲ್ಲಿ ಕೆನಡಾ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ ಎಂದು ‘ಅಂತಾರಾಷ್ಟ್ರೀಯ ವಲಸೆ ಮುನ್ನೋಟ: 2023′ ಶೀರ್ಷಿಕೆಯ ವರದಿ ತಿಳಿಸಿದೆ. ಕೆನಡಾದಲ್ಲಿ ಪೌರತ್ವ ನೀಡಿಕೆ ಪ್ರಮಾಣ 2021 ಮತ್ತು 2022ರ ನಡುವೆ […]

Continue Reading

ಸಾಲ ವಸೂಲಾತಿಗೆ ಬೆಳಿಗ್ಗೆ 8 ರ ಮೊದಲು, ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್.ಬಿ.ಐ ಮಹತ್ವದ ಆದೇಶ

ಬಾಕಿ ಇರುವ ಸಾಲಗಳನ್ನು ವಸೂಲಿ ಮಾಡಲು ಆರ್ಬಿಐ ಗುರುವಾರ ಕಠಿಣ ನಿಯಮಗಳನ್ನು ಪ್ರಸ್ತಾಪಿಸಿದೆ, ಇದರ ಅಡಿಯಲ್ಲಿ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಸೂಲಾತಿ ಏಜೆಂಟರು ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆಯುವಂತಿಲ್ಲ ಅಂತ ಉಲ್ಲೇಖ ಮಾಡಿದೆ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಂತಹ ನಿಯಂತ್ರಿತ ಘಟಕಗಳು (ಆರ್‌ಇಗಳು) ನೀತಿ ನಿರೂಪಣೆ ಮತ್ತು ಕೆವೈಸಿ ಮಾನದಂಡಗಳ ಅನುಸರಣೆಯನ್ನು ನಿರ್ಧರಿಸುವುದು ಮತ್ತು ಸಾಲಗಳಿಗೆ ಮಂಜೂರಾತಿ ನೀಡುವಂತಹ ನಿರ್ಧಾರ ತೆಗೆದುಕೊಳ್ಳುವ ಕಾರ್ಯಗಳು ಸೇರಿದಂತೆ ಪ್ರಮುಖ ನಿರ್ವಹಣಾ […]

Continue Reading

ಭಾರತದಲ್ಲಿ ಯುವಜನರ ನಿರುದ್ಯೋಗ ದರವು ನೆರೆದೇಶಗಳಿಗಿಂತ ಹೆಚ್ಚಿದೆ: ವಿಶ್ವಬ್ಯಾಂಕ್

ಕಳೆದ ವರ್ಷ ಭಾರತದಲ್ಲಿ ಯುವಜನರ ನಿರುದ್ಯೋಗ ದರವು ಶೇ.23.22ರಷ್ಟಿದ್ದು,ಇದು ನೆರೆದೇಶಗಳಾದ ಪಾಕಿಸ್ತಾನ (ಶೇ.11.3),ಬಾಂಗ್ಲಾದೇಶ (ಶೇ.12.9) ಮತ್ತು ಭೂತಾನ (ಶೇ.14.4)ಗಿಂತ ಅಧಿಕವಾಗಿತ್ತು ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ವರದಿಯ ಪ್ರಕಾರ 2022ರಲ್ಲಿ ನಿರುದ್ಯೋಗ ದರವು ಚೀನಾದಲ್ಲಿ ಶೇ.13.2,ಸಿರಿಯಾದಲ್ಲಿ ಶೇ.22.1,ಇಂಡೋನೇಶ್ಯಾದಲ್ಲಿ ಶೇ.13,ಮಲೇಶ್ಯಾದಲ್ಲಿ ಶೇ.11.7,ವಿಯೆಟ್ನಾಮ್ನಲ್ಲಿ ಶೇ.7.4,ದಕ್ಷಿಣ ಕೊರಿಯಾದಲ್ಲಿ ಶೇ.6.9 ಮತ್ತು ಸಿಂಗಪುರದಲ್ಲಿ ಶೇ.6.1ರಷ್ಟಿತ್ತು. ವರದಿಯು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ದತ್ತಾಂಶಗಳನ್ನು ಪಡೆದುಕೊಂಡಿದೆ. ಯುವಜನರ ನಿರುದ್ಯೋಗ ದರವು 15ರಿಂದ 24 ವರ್ಷ ವಯೋಮಾನದ, ಉದ್ಯೋಗವಿಲ್ಲದ ಆದರೆ ಉದ್ಯೋಗಕ್ಕಾಗಿ ಸಕ್ರಿಯ ಹುಡುಕಾಟದಲ್ಲಿರುವವರನ್ನು ಸೂಚಿಸುತ್ತದೆ. […]

Continue Reading

ಹಳೆಯ ಮೊಬೈಲ್ ಗಳಲ್ಲಿ ವಾಟ್ಸ್ ಆ್ಯಪ್ ಸೇವೆ ಬಂದ್

ಕೆಲವು ಹಳೆಯ ಕಾರ್ಯಾಚರಣೆ ಪದ್ಧತಿ ಹೊಂದಿರುವ 18 ಸ್ಮಾರ್ಟ್ ಪೋನ್ ಗಳಲ್ಲಿ ವಾಟ್ಸ್ ಆ್ಯಪ್ ಅಕ್ಟೋಬರ್ 24 ರ ನಂತರ ಬಂದ್ ಆಗಿದೆ. ಹೊಸ ಮೊಬೈಲ್ ಗೆ ಅಪ್ ಗ್ರೇಡ್ ಆಗುವುದೊಂದೇ ಪರಿಹಾರ ಎಂದು ತಜ್ಞರು ಹೇಳಿದ್ದಾರೆ. ಆಂಡ್ರಾಯ್ಡ್ ಓಎಸ್ ನ 4.1 ಆವೃತಿ ಹೊಂದಿದ ಸ್ಮಾರ್ಟ್ ಪೋನ್ ಗಳನ್ನು ಈಗ ವಾಟ್ಸ್ ಆ್ಯಪ್ ಬೆಂಬಲಿಸುವುದಿಲ್ಲ. ನೆಕ್ಸಸ್ 7, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2, ಎಚ್ ಟಿ ಸಿ ಒನ್, ಸೋನಿ ಎಕ್ಸ್ ಪೀರಿಯಾ ಜೆಡ್, […]

Continue Reading

ಆರೋಪಿ ಅಲಗಪ್ಪನ್ ಪರ ಬಿಜೆಪಿ ಪಕ್ಷದ ಹಿರಿಯ ನಾಯಕರು; ನಟಿ ಗೌತಮಿ ಪಕ್ಷ ತೊರೆಯುವ ನಿರ್ಧಾರ

ತಮಿಳುನಾಡಿನ ಬಿಜೆಪಿ ನಾಯಕಿ, ನಟಿ ಗೌತಮಿ ತಡಿಮಲ್ಲಾ ಅವರು ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಪಕ್ಷದ ಕಾರ್ಯಕರ್ತೆಯಾಗಿದ್ದೆ. ಪಕ್ಷದ ಬದ್ಧತೆಗೆ ಒಗ್ಗೂಡಿಕೊಂಡಿದ್ದೆ. ಆದರೆ ನನ್ನ ಆಸ್ತಿ ವಿವಾದದಲ್ಲಿ ವಿರೋಧಿಗಳೊಂದಿಗೆ ನಮ್ಮ ಪಕ್ಷದವರೇ ಕೈಜೋಡಿಸಿ ಕಿರುಕುಳ ನೀಡುತ್ತಿರುವುದಕ್ಕೆ ಬೇಸತ್ತು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಗೌತಮಿ, ನನ್ನ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಪಕ್ಷದ ಹಿರಿಯ ನಾಯಕರು ಸಹಾಯ ಮಾಡುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು […]

Continue Reading

ಬ್ರಿಟಿಷರ ಕಾನೂನಿಗೆ ಭಾರತೀಯತೆಯ ಸ್ಪರ್ಶ; ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬದಲಾಯಿಸಲು 3 ಹೊಸ ಕಾನೂನು ಜಾರಿ; ಅಮಿತ್ ಶಾ ಘೋಷಣೆ

ನವದೆಹಲಿ: ಸಮಾಜದ ಸುರಕ್ಷೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೊಲೀಸರನ್ನು ಗೌರವಿಸಿದ ಸುಸಂದರ್ಭ. ದೇಶಾದ್ಯಂತ ಶನಿವಾರ ‘ಪೊಲೀಸ್ ಸಂಸ್ಮರಣಾ’ ದಿನವನ್ನು ಗೌರವ ಭಕ್ತಿಯಿಂದ ಆಚರಿಸಲಾಯಿತು. ನಾಡು ರಕ್ಷಿಸುವ ಪೊಲೀಸರ ಅಬ್ಯುದಯ ಸಂಬಂಧ ಹಲವಾರು ಕಾರ್ಯಕ್ರಮಗಳನ್ನೂ ಸರ್ಕಾರ ಘೋಷಿಸುವ ಮೂಲಕ ‘ಪೊಲೀಸ್ ಸಂಸ್ಮರಣಾ’ ದಿವನ್ನು ಅರ್ಥಪೂರ್ಣಗೊಳಿಸಿತು. ರಾಷ್ಟ್ರ ರಾಜಧಾನಿ ದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ‘ಪೊಲೀಸ್ ಸಂಸ್ಮರಣಾ’ ದಿನದಂದು ಹುತಾತ್ಮ ಪೊಲೀಸ್ ರಿಗೆ ಗೌರವ ಸಲ್ಲಿಸಿದರು. ಕೇಂದ್ರ ಗೃಹ […]

Continue Reading

ಸಾಲ ಪೂರ್ಣಗೊಳಿಸಿದ ಗ್ರಾಹಕರ ದಾಖಲೆಗಳನ್ನು 30 ದಿನದೊಳಗೆ ಹಿಂದಿರುಗಿಸುವಂತೆ ಬ್ಯಾಂಕುಗಳಿಗೆ ಸೂಚನೆ: ಆರ್ ಬಿ ಐ

ಆರ್ ಬಿ ಐ ನಿಯಮ ಪಾಲನೆ ಮಾಡದೇ ಇದ್ದರೆ ಬ್ಯಾಂಕುಗಳಿಗೆ ದಿನಕ್ಕೆ 5,000 ರೂಪಾಯಿ ದಂಡ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲ ಗೃಹಸಾಲ,ವಾಹನ ಸಾಲವನ್ನು ಜನರು ಪಡೆದುಕೊಳ್ಳುತ್ತಾರೆ. ಆದರೆ ಸಾಲದ ಮೇಲಿನ ಬಡ್ಡಿದರ, ಸಾಲದ ನಿಯಮಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡುತ್ತದೆ.ಇದೀಗ ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಏನಾದರೂ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ರೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಜಾರಿ ಮಾಡಿರುವ ಹೊಸ ನಿಯಮ ಅನ್ವಯವಾಗಲಿದೆ. ಭಾರತೀಯ ರಿಸರ್ವ್‌ […]

Continue Reading