ಜನವರಿ 01 2026 ರಿಂದ ನಿಷ್ಕ್ರಿಯಗೊಳ್ಳಲಿದೆ ಪ್ಯಾನ್ ಕಾರ್ಡ್: ಕೇಂದ್ರ ಸರ್ಕಾರ

ಡಿಸೆಂಬರ್ 31, 2025 ರೊಳಗೆ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನಮ್ಮ ದಿನನಿತ್ಯದ ಹಣಕಾಸು ವಹಿವಾಟುಗಳಲ್ಲಿ ಅತ್ಯಂತ ಅಗತ್ಯವಾದ ದಾಖಲೆಯಾಗಿದೆ ಪ್ಯಾನ್ ಕಾರ್ಡ್. ಟ್ಯಾಕ್ಸ್ ಸಲ್ಲಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ, ಉನ್ನತ ಮೌಲ್ಯದ ವಹಿವಾಟುಗಳನ್ನು ಮಾಡಲು ಪ್ಯಾನ್ ಕಾರ್ಡ್‌ ಬಹಳ ಪ್ರಮುಖವಾದ ದಾಖಲೆಯಾಗಿದೆ. ಅದ್ದರಿಂದ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡದಿದ್ದರೆ, ಅದು ಜನವರಿ 01 2026 ರಿಂದ ನಿಷ್ಕ್ರಿಯಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಡಿಸೆಂಬರ್ 31, 2025ರೊಳಗೆ ಲಿಂಕ್ ಪ್ರಕ್ರಿಯೆ […]

Continue Reading

ಮುಸ್ಲಿಂ ಪುರುಷ ಎರಡನೇ ವಿವಾಹವಾಗುವ ಮುನ್ನ ಮೊದಲ ಪತ್ನಿಯ ಒಪ್ಪಿಗೆ ಕೇಳುವುದು ಅನಿವಾರ್ಯ: ಕೇರಳ ಹೈಕೋರ್ಟ್ ತಾಕೀತು

ಮುಸ್ಲಿಂ ಕಾನೂನಿನಲ್ಲಿ ವಿವಾಹೇತರ ಸಂಬಂಧ ಹರಾಂ ಎಂದು ಸ್ಪಷ್ಟವಾಗಿ ಹೇಳಿದೆ: ಹೈಕೋರ್ಟ್ ಅಭಿಪ್ರಾಯ ಮುಸ್ಲಿಂ ಪುರುಷ ಎರಡನೇ ವಿವಾಹವಾಗುವ ಮುನ್ನ ಮೊದಲ ಪತ್ನಿ ಇದಕ್ಕೆ ಒಪ್ಪುತ್ತಾರೋ ಇಲ್ಲವೋ ಎಂದು ಆಕೆಯ ಅಭಿಪ್ರಾಯವನ್ನು ಕೇಳಬೇಕು ಎಂದು ಕೇರಳ ಹೈಕೋರ್ಟ್ ಸಲಹೆ ನೀಡಿದೆ. ನ್ಯಾಯಮೂರ್ತಿ ಪಿ.ವಿ ಕುಂಞಕೃಷ್ಣನ್ “ಎರಡನೇ ಮದುವೆಯನ್ನು ಕೇರಳ ನೋಂದಣಿ (ಸಾಮಾನ್ಯ) ನಿಯಮಗಳು 2008 ರ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ಬಯಸಿದರೆ ಮೊದಲ ಅಭಿಪ್ರಾಯ ಕೇಳಬೇಕು. ಇಂತಹ ಪರಿಸ್ಥಿತಿಯಲ್ಲಿ ಧರ್ಮವು ಗೌಣವಾಗಿದ್ದು, ಸಾಂವಿಧಾನಿಕ ಹಕ್ಕುಗಳು ಸರ್ವೋಚ್ಚವಾಗುತ್ತವೆ. ಆದ್ದರಿಂದ ಎರಡನೇ […]

Continue Reading

ಎಂಸಿಎ ಚುನಾವಣೆಗೆ ಅಭ್ಯರ್ಥಿಗಳ ಮಾನ್ಯ ಪಟ್ಟಿ ಪ್ರಕಟಿಸುವುದಕ್ಕೆ ಬಾಂಬೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ

ಮುಂಬೈ: ನವೆಂಬರ್ 12 ರಂದು ನಡೆಯಲಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಚುನಾವಣೆಗೆ ನಾಮಪತ್ರಗಳ ಪರಿಶೀಲನೆಯ ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಕ್ಕೆ ಬಾಂಬೆ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅಂತಿಮ ಮತದಾರರ ಪಟ್ಟಿಯನ್ನು ನೀಡುವ ಮೊದಲು ಕೆಲವು ಸದಸ್ಯರು ಎತ್ತಿರುವ ಆಕ್ಷೇಪಣೆಗಳ ಕುರಿತು ಚುನಾವಣಾ ಅಧಿಕಾರಿ ಮೊದಲು ತಾರ್ಕಿಕ ಆದೇಶವನ್ನು ಹೊರಡಿಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ರಿಯಾಜ್ ಚಾಗ್ಲಾ ಮತ್ತು ಫರ್ಹಾನ್ ದುಬಾಷ್ ಅವರ ಪೀಠ ಗಮನಿಸಿತು. “ಆದ್ದರಿಂದ, ಮುಂದಿನ ದಿನಾಂಕದವರೆಗೆ ಚುನಾವಣಾ ಅಧಿಕಾರಿಯನ್ನು ತಾತ್ಕಾಲಿಕ ತಡೆಯಾಜ್ಞೆಯ ಆದೇಶದ […]

Continue Reading

ವಿಮಾನಯಾನ ಪ್ರಯಾಣಿಕರಿಗೆ ಶುಭಸುದ್ದಿ; ಟಿಕೆಟ್ ರದ್ದುಪಡಿಸಿದರೆ ಇನ್ಮುಂದೆ ಹೆಚ್ಚುವರಿ ಶುಲ್ಕ ಇಲ್ಲ

ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಶುಭ ಸುದ್ದಿ. ವಿಮಾನ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಟಿಕೆಟ್ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕದಲ್ಲಿ ಬದಲಾವಣೆ ಮಾಡಿದರೆ ವಿಮಾನಯಾನ ಸಂಸ್ಥೆಗಳು ಅದಕ್ಕೆ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವುದಿಲ್ಲ. ಈ ನಿಯಮ ಶ್ರೀಘ್ರದಲ್ಲಿ ಜಾರಿಗೆ ಬರಲಿದ್ದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಈ ಸಂಬಂಧ ಕರಡು ನಿಯಮಗಳನ್ನು ಪ್ರಕಟಿಸಿದೆ. 21 ಕೆಲಸದ ದಿನಗಳ ಒಳಗೆ ಟಿಕೆಟ್ ದರ ಮರುಪಾವತಿಸಬೇಕು. ಜತೆಗೆ ವಿಮಾನಯಾನ ಸಂಸ್ಥೆಗಳು ಡಿಜಿಟಲ್ ವ್ಯಾಲೆಟ್ ಗೆ […]

Continue Reading

ಬಿಜೆಪಿ ನಿತೀಶ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ, ಬದಲಿಗೆ ‘ಚೇಲಾ’ರಿಗೆ ಹುದ್ದೆ ನೀಡುತ್ತದೆ: ಖರ್ಗೆ

ಬಿಹಾರ: ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ, ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ, ಬದಲಿಗೆ ಕೇಸರಿ ಪಕ್ಷದ ‘ಚೇಲಾ’ರಿಗೆ ಹುದ್ದೆ ನೀಡುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಹಾಜಿಪುರದ ಪ್ರಧಾನ ಕಚೇರಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ವೈಶಾಲಿ ಜಿಲ್ಲೆಯ ರಾಜಾ ಪಕರ್‌ನಲ್ಲಿ ತಮ್ಮ ಮೊದಲ ಬಿಹಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ ಮತ್ತು ಕರ್ಪೂರಿ ಠಾಕೂರ್ ಅವರಂತಹ ಸಮಾಜವಾದಿ ಐಕಾನ್‌ಗಳ ಪರಂಪರೆಗೆ […]

Continue Reading

ಕ್ರಿಮಿನಲ್‌ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅನುಮೋದನೆ ಇಲ್ಲದ ಹೊರತು ತನಿಖಾಧಿಕಾರಿಗಳು ವಕೀಲರಿಗೆ ಸಮನ್ಸ್‌ ನೀಡುವಂತಿಲ್ಲ: ಸುಪ್ರೀಂ ಕೋರ್ಟ್‌

ಕ್ರಿಮಿನಲ್‌ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅನುಮೋದನೆ ಇಲ್ಲದ ಹೊರತು ತನಿಖಾಧಿಕಾರಿಗಳು ವಕೀಲರಿಗೆ ಸಮನ್ಸ್‌ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ತನ್ನ ಕಕ್ಷಿದಾರರಿಗೆ ಕಾನೂನು ಸಲಹೆ ನೀಡುವ ವಕೀಲರಿಗೆ ತನಿಖಾ ಸಂಸ್ಥೆಗಳು ಮನಸ್ಸಿಗೆ ತೋಚಿದಂತೆ ಸಮನ್ಸ್‌ ನೀಡುವುದಕ್ಕೆ ಕಡಿವಾಣ ಹಾಕುವುದಕ್ಕಾಗಿ ಸುಪ್ರೀಂ ಕೋರ್ಟ್‌, ಹಲವು ನಿರ್ದೇಶನಗಳನ್ನೂ ನೀಡಿದೆ. ಪ್ರಕರಣವೊಂದರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಪ್ರತಾಪ್‌ ವೇಣುಗೋಪಾಲ್‌ ಅವರಿಗೆ ನೀಡಿದ್ದ ಸಮನ್ಸ್‌ಗಳನ್ನು […]

Continue Reading

ಬರೋಬ್ಬರಿ 49 ಕೋಟಿ ರೂಪಾಯಿ ದೋಚಿದ್ದ ಸೈಬರ್ ವಂಚಕರು, ರಾಜಸ್ಥಾನ ಮೂಲದ ಇಬ್ಬರು ಮಾಸ್ಟರ್ ಮೈಂಡ್‌ಗಳು

ಇಬ್ಬರು ಸೈಬರ್ ವಂಚಕರನ್ನು ಬಂಧಿಸುವಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಯಶಸ್ವಿ ಖಾಸಗಿ ಫೈನಾನ್ಸ್ ಕಂಪನಿಯೊಂದರ ಆಯಪ್‌ ಹ್ಯಾಕ್‌ ಮಾಡಿ ಎರಡು ತಾಸಿನಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ದೋಚಿದ್ದ ಸೈಬರ್ ವಂಚನೆ ಜಾಲದ ಇಬ್ಬರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ಮೂಲದ ಸಂಜಯ್ ಪಾಟೀಲ್ ಹಾಗೂ ಬೆಳಗಾವಿಯ ಇಸ್ಮಾಯಿಲ್ ರಶೀದ್‌ ಅತ್ತಾರ್ ಬಂಧಿತ ಸೈಬರ್ ವಂಚಕರು. ಆರೋಪಿಗಳಿಂದ ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾಯಿಸಿದ್ದ 10 ಕೋಟಿ ರೂ ಜಪ್ತಿ ಮಾಡಲಾಗಿದೆ. ಈ ವಂಚಕ ಜಾಲದ […]

Continue Reading

ವಿಚ್ಛೇದನ ಪಡೆದ ಸಂಗಾತಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಜೀವನಾಂಶವನ್ನು ನೀಡುವ ಅಗತ್ಯವಿಲ್ಲ: ದಿಲ್ಲಿ ಹೈಕೋರ್ಟ್

ಶಾಶ್ವತ ಜೀವನಾಂಶವನ್ನು ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗುತ್ತದೆಯೇ ಹೊರತು ಇಬ್ಬರು ಸಮರ್ಥ ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಅಳೆಯುವ ಸಾಧನವಾಗಿ ಅಲ್ಲ” ಎಂದು ಪೀಠ ಅಭಿಪ್ರಾಯ ವಿಚ್ಛೇದನ ಪಡೆದ ಸಂಗಾತಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಜೀವನಾಂಶವನ್ನು ನೀಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ. ಭಾರತೀಯ ರೈಲ್ವೆ ಸಂಚಾರ ಸೇವೆಯ ಗ್ರೂಪ್ ‘ಎ’ ಅಧಿಕಾರಿಯಾಗಿರುವ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. “ಶಾಶ್ವತ ಜೀವನಾಂಶವನ್ನು ಸಾಮಾಜಿಕ ನ್ಯಾಯಕ್ಕಾಗಿ […]

Continue Reading

ಮಹಾರಾಷ್ಟ್ರದಲ್ಲಿ 96 ಲಕ್ಷ ‘ನಕಲಿ’ ಮತದಾರರು; ಸ್ಥಳೀಯ ಚುನಾವಣೆಗೆ ಮುನ್ನ ಶುದ್ಧೀಕರಣಕ್ಕೆ ಆಗ್ರಹ: ರಾಜ್ ಠಾಕ್ರೆ

ಮುಂಬೈ: (ಅಕ್ಟೋಬರ್ 19) ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ 96 ಲಕ್ಷ ನಕಲಿ ಮತದಾರರನ್ನು ಸೇರಿಸಲಾಗಿದೆ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಭಾನುವಾರ ಆರೋಪಿಸಿದ್ದಾರೆ ಮತ್ತು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೇಗೆ ನಡೆಸುತ್ತೀರಿ ಎಂದು ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಯ ಬೂತ್ ಮಟ್ಟದ ಏಜೆಂಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮತದಾರರ ಪಟ್ಟಿಯಲ್ಲಿ ತಿರುಚುವ ಮೂಲಕ ಚುನಾವಣೆ ನಡೆಸಿದರೆ, ಅದು ಮತದಾರರಿಗೆ ಮಾಡುವ ದೊಡ್ಡ ಅವಮಾನ ಎಂದು […]

Continue Reading

ರಾಜ್ಯದಲ್ಲಿ ವೋಟ್ ಚೋರಿ ಪ್ರಕರಣ ಬಾರಿ ಸದ್ದು ಮಾಡುತ್ತಿದೆ. ವೋಟ್ ಚೋರಿ ಪ್ರಕರಣ ಇದೀಗ ಬಿಜೆಪಿ ಬುಡಕ್ಕೆ.

ರಾಜ್ಯದಲ್ಲಿ ವೋಟ್ ಚೋರಿ ಪ್ರಕರಣ ಸದ್ದು ಬಾರಿ ಮಾಡುತ್ತಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ ಬಳಿಕ ರಾಜ್ಯ ಎಸ್​ಐಟಿ ತಂಡ ಅಖಾಡಕ್ಕೆ ಇಳಿದಿದೆ. ಪ್ರಕರಣ ಈಗ ಬಿಜೆಪಿ ಬುಡಕ್ಕೆ ಬರುತ್ತಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಮತಗಳ್ಳತನ ಆರೋಪ ಪ್ರಕರಣವನ್ನು ಕರ್ನಾಟಕ ಸರ್ಕಾರ ಸೀರಿಯಸ್ ಆಗಿ ಪರಿಗಣಿಸಿದೆ. ಮತಗಳ್ಳತನ ಪ್ರಕರಣದ ತನಿಖೆಗೆ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದೆ. ಇದೀಗ ಈ ಕೇಸ್ ಬಿಜೆಪಿ ಮಾಜಿ ಶಾಸಕನ ಮನೆಯ ಅಂಗಳಕ್ಕೆ ಬಂದು […]

Continue Reading