ಧರ್ಮಸ್ಥಳ ಪ್ರಕರಣ: ಬೇಜಾವಾಬ್ದಾರಿಯುತ ಪೋಸ್ಟ್ ಹಾಕುವ ಪ್ರವೃತ್ತಿಯನ್ನು ತಕ್ಷಣವೇ ನಿಲ್ಲಿಸಬೇಕು. ಗಿರೀಶ್ ಮಟ್ಟಣ್ಣ ನವರಿಗೆ ಹೈಕೋರ್ಟ್ ಖಡಕ್‌ ತಾಕೀತು

ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ತೇಜೋವಧೆ ಮಾಡುವಂತಹ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಗಿರೀಶ್ ಮಟ್ಟಣ್ಣ ನವರಿಗೆ ಹೈಕೋರ್ಟ್ ಖಡಕ್‌ ತಾಕೀತು ಮಾಡಿದೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಗಿರೀಶ್ ಮಟ್ಟಣವರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಆರ್.ರಂಗನಾಥ ರೆಡ್ಡಿ, […]

Continue Reading

ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯ ಬಂಧನ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ ಆರೋಪಿಯಾದ ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಮೊಹಮ್ಮದ್ ಸಲಾಂ @ K. M. ಸಲಾಂ @ ಡಾಲರ್ ಸಲಾಂ ಎಂಬಾತನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು ವಿಟ್ಲ ಠಾಣಾ ಪೊಲೀಸರು ದಿನಾಂಕ:16.06 2026 ರಂದು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೋಪಿ ಡಾಲರ್ ಸಲಾಂ ಎಂಬಾತನ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ:ಸಂ 45/2023, ವಿಟ್ಲ ಪೊಲೀಸ್ […]

Continue Reading

ಉಪ್ಪಿನಂಗಡಿ: ದರೋಡೆ ಪ್ರಕರಣ; ಆರೋಪಿಗಳಿಗೆ ಶಿಕ್ಷೆ ಪ್ರಕಟ:

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಎಂಬಲ್ಲಿ, 2023 ರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 34/2023 ರಂತೆ ಪ್ರಕರಣ ದಾಖಲಾಗಿತ್ತು. ದರೋಡೆ ಪ್ರಕರಣದ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕರಾಗಿದ್ದ ರವಿ ಬಿ.ಎಸ್ ರವರು ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ, ಆರೋಪಿಗಳಾದ ಬೆಳ್ತಂಗಡಿ ಇಳಂತಿಲ ನಿವಾಸಿ ರಾಜೀಮ್ ಹಾಗೂ ಕೊಕ್ಕಡ ನಿವಾಸಿ ಮುಸ್ತಫಾ ಎಂಬವರುಗಳನ್ನು ಬಂಧಿಸಿ, ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸದ್ರಿ ಪ್ರಕರಣದ ವಿಚಾರಣೆ ನಡೆಸಿದ […]

Continue Reading

ಮಳಲಿಯ ಮರಳು ಕಳ್ಳರು.. ಖಡಕ್ ಪೊಲೀಸ್ ಆಫೀಸರ್ಸ್ ಇದ್ದರೂ ಫಲ್ಗುಣಿಯನ್ನೇ ಮುಂಡಾಮೋಚಿದ ದಂಧೆಕೋರರು.!

ಅಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ, ದಂಧೆಕೋರರು ರಂಗೋಲಿ ಕೆಳಗೆ ನುಸುಳುತ್ತಾರೆ ಎನ್ನುವುದು ಹಳೆ ಗಾದೆ. ಆದರೆ, ಮಂಗಳೂರಿನ ಮಟ್ಟಿಗೆ ಆ ಗಾದೆಯೇ ಉಲ್ಟಾ. ದಂಧೆಕೋರರಿಗೆ ಅದೇ ವರದಾನ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್ ಪೊಲೀಸ್ ಆಫೀಸರ್ಸ್ ಎಂಟ್ರಿಯ ನಂತರ ಇಲ್ಲಿನ ಕ್ಲಬ್, ಮಸಾಜ್ ಎಲ್ಲವೂ ಬಾಗಿಲು ಹಾಕಿಕೊಂಡಿರುವುದೇನೂ ನಿಜ. ಆದರೆ ಅಕ್ರಮ ಮರಳುಗಾರಿಕೆಗೆ ಮಾತ್ರ ಸಂಪೂರ್ಣ ಬ್ರೇಕ್ ಬಿದ್ದಿಲ್ಲ ಅನ್ನುವುದು ಅಷ್ಟೇ ನಿಜ. ನಿನ್ನೆಯಷ್ಟೇ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠದ ಮಳಲಿಯ ಮೊಗರು ಗ್ರಾಮದಲ್ಲಿ ಅಕ್ರಮವಾಗಿ […]

Continue Reading

ಮಂಗಳೂರು: ಇಲ್ಲಿ ಎಲ್ಲವೂ ಬೀದಿ ಬದಿಯಲ್ಲೇ: ಪಾನಿಪುರಿಯಿಂದ ಹಿಡಿದು ಚರ್ಮ ವ್ಯಾಪಾರದ ತನಕ

✍️. ಇಸ್ಮಾಯಿಲ್ ಎಸ್., ವಕೀಲರು ಮತ್ತು ನೋಟರಿ, ಮಂಗಳೂರು ಮಂಗಳೂರು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದಾಗ ಒಂದು ಸಂಗತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪಾದಚಾರಿಗಳಿಗೆ ಮೀಸಲಾಗಿರಬೇಕಾದ ಫುಟ್‌ಪಾತುಗಳು ಇಂದು ಅನಧಿಕೃತ ವ್ಯಾಪಾರ ಮಂಡಿಗಳಾಗಿ ಪರಿವರ್ತನೆಗೊಂಡಿವೆ. ಜನಸಾಮಾನ್ಯರು ನಡೆದಾಡಲು ಜಾಗವಿಲ್ಲದೆ ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆಯ ಹಿಂದೆ ಒಂದು ಕ್ರಮಬದ್ಧ ವಿಧಾನವೇ ಅಡಗಿರುವುದು ಗಮನಾರ್ಹ. ಆರಂಭದಲ್ಲಿ ಫುಟ್‌ಪಾತಿನ ಮೇಲೆ, ರಸ್ತೆಯ ಬದಿಯಲ್ಲಿ ಅಥವಾ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂದೆ ಒಂದು ಪುಟ್ಟ ಪೆಟ್ಟಿಗೆ ಕಾಣಿಸಿಕೊಳ್ಳುತ್ತದೆ. ಕೆಲವು ದಿನಗಳ […]

Continue Reading

ಬಜಪೆ ಪೊಲೀಸರು ಮತ್ತು ಗಣಿ ಇಲಾಖೆಯ ಜಂಟಿ ಕಾರ್ಯಾಚರಣೆ: ಮಳಲಿಯಲ್ಲಿ ಅಕ್ರಮ ಮರಳುಗಾರಿಕೆ ದಾಸ್ತಾನು ಪತ್ತೆ

ಗಂಜಿಮಠ: ಬಜಪೆ ಠಾಣಾ ವ್ಯಾಪ್ತಿಯ ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಎಂಬವರು ಗುರುಪುರ ಪಲ್ಗುಣಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಪಡೆದು ದಿನಾಂಕ: 15-06-2026 ರಂದು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ H.N ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಪವನ್ ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ, […]

Continue Reading

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ವಾಹನ ಚಾಲಕ ಚಂದ್ರು, ಕ್ಲೀನರ್ ಮೋಹನ ಇಬ್ಬರ ಬಂಧನ; ಜಾನುವಾರು ವಶ

ಕಡಬ: ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ, ದಿನಾಂಕ:13.06.2026 ರಂದು ಬೆಳಗ್ಗಿನ ಜಾವ ಪಿಕಪ್ ವಾಹನವೊಂದು ಆಯತಪ್ಪಿ ಬಿದ್ದಿರುವ ವಾಹನದಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪ-ನಿರೀಕ್ಷಕರಿಗೆ ಬಂದ ಮಾಹಿತಿ ಆಧರಿಸಿ, ಪಿಕಪ್ ವಾಹನದ ಚಾಲಕ ಹಾಸನ ಅರಕಲಗೂಡು ನಿವಾಸಿಗಳಾದ ಚಂದ್ರು @ ಚಂದ್ರಶೇಖರ ಮತ್ತು ಕ್ಲೀನರ್ ಮೋಹನ ಎಂಬವರುಗಳನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಸದ್ರಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಚಾಲಕ ಹಾಗೂ […]

Continue Reading

ಜೂನ್ 16 ರಂದು ಸಂಜೆ 4.30 ಕ್ಕೆ ಸುರತ್ಕಲ್ ನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಉಳಿಸಿ, ಬಲಗೊಳಿಸಲು ಒತ್ತಾಯಿಸಿ ಮಾನವ ಸರಪಳಿ

ಸರಕಾರಿ ಆಸ್ಪತ್ರೆಗಳನ್ನು ಉಳಿಸುವುದು, ಬಲಗೊಳಿಸಲು ಒತ್ತಾಯಿಸುವುದು ಇಂದಿನ ತುರ್ತು. ಬನ್ನಿ ಸುರತ್ಕಲ್ ನಲ್ಲಿ ನಡೆಯುವ ಮಾನವ ಸರಪಳಿಗೆ ಕೊಂಡಿಯಾಗಿ, ಹೋರಾಟಕ್ಕೆ ಬಲ ತುಂಬಿ. ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವುವ ಆರೋಗ್ಯ ಇಲಾಖೆಯ ಆದೇಶ ಅತ್ಯಂತ ಆಘಾತಕಾರಿ. ಖಾಸಗಿ ವೈದ್ಯಕೀಯ ಸೇವೆಯು ವ್ಯಾಪಾರವನ್ನು ದಾಟಿ ದಂಧೆಯಾಗಿರುವ ಈ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯೆ ಜನಸಾಮಾನ್ಯರ ಪಾಲಿಗೆ ಆಶಾಕಿರಣ.ಸರಕಾರಿ ಆರೋಗ್ಯ ಸೇವೆಯ ಖಾಸಗೀಕರಣದ ವಿರುದ್ಧ ದೊಡ್ಡ ಪ್ರತಿರೋಧವನ್ನು ನಾವು ತೋರಬೇಕಿದೆ. ಜೊತೆಗೆ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು […]

Continue Reading

ಇಲ್ಲಿ ಗುಂಡಿ ದಾಟಲು ಗುಂಡಿಗೆ ಬೇಕು.! ಸರಲಿಕಟ್ಟೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರೆ ನಟ್ಟು ಬೋಲ್ಟು ಲೂಸು-ಲೂಸು

ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಈ ರಸ್ತೆ ಸರ್ವ ಧರ್ಮೀಯ ಬಾಂಧವರಿಗೆ ನನ್ನ ನಮಸ್ಕಾರಗಳು. ನನ್ನನ್ನು ನೀವು ರಾತ್ರಿ-ಹಗಲು ಅನ್ನದೆ ಉಪಯೋಗಿಸಿ, ತನ್ನ ಎದೆಯ ಮೇಲೆ ನೀವು ವಾಹನ ಓಡಿಸಿ ಇದೀಗ ನನಗೆ ಪ್ರಾಯವಾಗಿದೆ. ಮಳೆ ಗಾಳಿ, ಬಿಸಿಲು ಎನ್ನದೆ ನಿಮಗೆ ಮೈಯೊಡ್ಡಿ ಸೇವೆ ನೀಡಿದೆ. ಇದೀಗ ನನ್ನ ದೇಹದ ಹಲವು ಭಾಗಗಳಲ್ಲಿ ಗುಂಡಿ ಎಂಬ ಹುಣ್ಣಿನ ರೋಗ ಬಾಧಿಸಿದೆ. ಬಿಳಿ ಬಟ್ಟೆಯ ಖಾಧಿದಾರಿಗಳು ಗಿರ್ ಗೀಟ್ಲೆ ಹೊಡೆಯುವ ಲೈಟ್ ಹಾಕಿ, ನನ್ನ ಎದೆಯ ಮೇಲೆಯೇ […]

Continue Reading

ರಸ್ತೆ ದುರಸ್ತಿಗೆ ಆಗ್ರಹ: ಬೆಳ್ತಂಗಡಿ ತಾಲೂಕಿನ ಗ್ರಾಮಸ್ಥರಿಂದ ಮುಂಬರುವ ಚುನಾವಣೆಗಳ ಬಹಿಷ್ಕಾರದ ಎಚ್ಚರಿಕೆ

ಬೆಳ್ತಂಗಡಿ ತಾಲೂಕಿನ ಪುತ್ತಿಲ-ಬಾರ್ಯ-ತೆಕ್ಕಾರು-ಸರಳಿಕಟ್ಟೆ ನಾಗರಿಕರ ಗೋಳು ಕೇಳುವವರಾರು.? ಬೆಳ್ತಂಗಡಿ: ತಾಲೂಕಿನ ಪುತ್ತಿಲ ಗ್ರಾಮದಿಂದ ಸರಳಿಕಟ್ಟೆವರೆಗಿನ ಹಾಗೂ ಸುತ್ತಮುತ್ತಲಿನ ಒಳರಸ್ತೆಗಳ ಅತ್ಯಂತ ಶೋಚನೀಯ ಸ್ಥಿತಿಯನ್ನು ಖಂಡಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಪ್ರಮುಖ ರಸ್ತೆಗಳ ದುಸ್ಥಿತಿ ಮತ್ತು ಸಾರ್ವಜನಿಕರ ಗೋಳು ಕೇಳುವವರಿಲ್ಲಾಂತಗಿದೆ. ಸಂಪೂರ್ಣ ಹದಗೆಟ್ಟ ಸಂಪರ್ಕ ಕೊಂಡಿಪುತ್ತಿಲದಿಂದ ಸರಳಿಕಟ್ಟೆವರೆಗಿನ ಪ್ರಮುಖ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿವೆ. ಬಹುತೇಕ ಒಳರಸ್ತೆಗಳು ಅಭಿವೃದ್ಧಿ ಕಾಣದೆ ವರ್ಷಗಳೇ […]

Continue Reading