ಮೂಗಿನ ಶಸ್ತ್ರಚಿಕಿತ್ಸೆ ಒಳಗಾಗಿದ್ದ ವ್ಯಕ್ತಿಗೆ ಆಸ್ಪತ್ರೆಯ ವೆಚ್ಚ ಭರಿಸಲು ಕೇರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ

ಉಸಿರಾಟ ಸಮಸ್ಯೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯ ಗ್ರಾಮದ ನಿವಾಸಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಯ ನಂತರ ಆಸ್ಪತ್ರೆಯ ವೆಚ್ಚವನ್ನು ಮಂಜೂರು ಮಾಡಲು ನಿರಾಕರಿಸಿದ್ದ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಗೆ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ ಚಿಕಿತ್ಸಾ ವೆಚ್ಚವನ್ನು ಪರಿಹಾರ ಮತ್ತು ವ್ಯಾಜ್ಯ ವೆಚ್ಚ ಸಮೇತ ಪಾವತಿಸಲು ಆದೇಶ ನೀಡಿದೆ. ದೂರುದಾರರು ತನ್ನ ಕುಟುಂಬಕ್ಕೆ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಯ ಪಾಲಿಸಿಯನ್ನು 2021 ರಿಂದಲೇ ಹೊಂದಿದ್ದು, 2024 ಇಸವಿಯಲ್ಲಿ ದೂರುದಾರರ ಮಗಳಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ವೈದ್ಯರು ರಿನೋ […]

Continue Reading

ಕೈರಂಗಳ: ಯಕ್ಷಗಾನ ಅಕಾಡೆಮಿಯಿಂದ ಯಕ್ಷಧಾರೆ ಸಂಪನ್ನ; ಯಕ್ಷಗಾನ ಬೆಳೆಸಲು ಕಲಾಪೋಷಕರ ಕೊಡುಗೆ ಅಗತ್ಯ: ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಉಡುಪಿ: ಸರಕಾರ ಯಕ್ಷಗಾನ ಅಕಾಡೆಮಿಗೆ ನೀಡುವ ಅನುದಾನವನ್ನು ಯಕ್ಷಗಾನ ಕಲೆಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಸಂಘಸoಸ್ಥೆಗಳಿಗೆ ತಲುಪಿಸಬೇಕು ಎಂಬುದೇ ಅಕಾಡೆಮಿಯ ಆಶಯವಾಗಿದೆ. ಯಕ್ಷಗಾನ ಕಲೆ ಇಂದು ದೇಶವಿದೇಶದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ ಅದಕ್ಕೆ ಸಿಕ್ಕಿರುವ ಜನಾದಾರದ ಜೊತೆಗೆ ಕಲಾಪೋಷಕರ ಪಾತ್ರ ಹಿರಿದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ದ.ಕ.ಜಿಲ್ಲೆಯ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ […]

Continue Reading

ಅಸಹಜ ಸಾವು, ಅತ್ಯಾಚಾರ, ಕೊಲೆ, ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ತನಿಖೆಗೆ ಒತ್ತಾಯಿಸಿ ಸೆ. 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರ, ಕೊಲೆ, ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಸೆಪ್ಟೆಂಬರ್ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ ನಡೆಯಲಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲಾ ಅಸಹಜ ಸಾವುಗಳು , ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ಅಕ್ರಮ, ದೌರ್ಜನ್ಯಗಳ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಬೇಕು, ಎಸ್ಐಟಿ ತಂಡಕ್ಕೆ […]

Continue Reading

ಬಂಟ್ವಾಳ: ಅಳಿಕೆ ಗ್ರಾಮದ ಬರೆಂಗೋಡಿಯಲ್ಲಿ ಅಕ್ರಮ ಗಣಿಗಾರಿಕೆ, ಹಲವು ಮನೆಗಳು ಬಿರುಕು; ಬಿಜೆಪಿ-ಕಾಂಗ್ರೆಸ್ ರಾಜಕೀಯ ‌ಜುಗಲ್ ಬಂದಿ

ಗಣಿಗಾರಿಕೆಯನ್ನು ಶೀಘ್ರ ಸ್ಥಗಿತಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ದೂರು. ಮಂಗಳೂರು: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬರೆಂಗೋಡಿ, ಕೋಡಿಜಾಲು ಎಂಬಲ್ಲಿ ಕಪ್ಪು ಕಲ್ಲು ಗಣಿಗಾರಿಕೆಯಲ್ಲಿ ಬಾರಿ ಪ್ರಮಾಣದ ಕಲ್ಲಿನ ಸ್ಪೋಟದ ತೀವ್ರತೆಗೆ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಜೀವ ಭಯದಿಂದ ದಿನ ಕಳೆಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ, ಶೀಘ್ರ ಪರಿಶೀಲಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರಿಗೆ ದೂರು ಸಲ್ಲಿಸಿದ್ದಾರೆ.ಗಣಿಗಾರಿಕೆಗೆ ಪರವಾನಿಗೆ ನೀಡುವ ಸಂಧರ್ಭದಲ್ಲಿ ಸ್ಥಳೀಯ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು […]

Continue Reading

ಮಂಗಳೂರು ಪೊಲೀಸರಿಗೂ ಬಂತು ದಮ್ಮು, ತಾಕತ್ತು.!

ಉಸ್ಕು ದಮ್ಮಿಲ್ಲದ ದ್ವೇಷ ಭಾಷಣಕೋರರು, ರಿವಾಲ್ವರ್ ಹಿಡಿದಿಲ್ಲ.., ಲಾಠಿ ಬೀಸಲಿಲ್ಲ.., ಮಂಗಳೂರು ಶಾಂತ ಶಾಂತ.. That is police ಪವರ್.! ಮಂಗಳೂರಿನಲ್ಲಿ ಗಣೇಶೋತ್ಸವ ಮೆರವಣಿಗೆಗಳು ಮಸೀದಿ ಮುಂದೆ ಹಾದು ಹೋದರೂ, ಕೇಕೆ ಹಾಕಿ ಕುಣಿಯಲಿಲ್ಲ ಭಕ್ತರು, ಈದ್ ಮಿಲಾದ್ ಜಾಥಾದಲ್ಲಿ ಯುವಕರ ಗುಂಪು ಕರ್ಕಶ ಹಾರ್ನ್ ಹಾಕಿ ನಾಗರೀಕರ ನೆಮ್ಮದಿ ಕಸಿದುಕೊಂಡಿಲ್ಲ. ಡಿಜೆ ಅಬ್ಬರವಿಲ್ಲ, ಹತ್ತು ಗಂಟೆಗೆ ಸುಚ್ ಆಪ್. ಇದಕ್ಕೆಲ್ಲ ಕಾರಣ ಮಂಗಳೂರು ಪೊಲೀಸ್ ಅಧಿಕಾರಿಗಳ ದಿಟ್ಟತನದ ನಿರ್ಧಾರ. ರಾಜಿ ರಹಿತವಾಗಿ ಕಾನೂನು ಪಾಲಿಸಿಕೊಂಡ ಪರಿಣಾಮ, […]

Continue Reading

ಬಜ್ಪೆ ಪಟ್ಟಣ ಪಂಚಾಯತ್ ಸೇರಿದಂತೆ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಆಸ್ಪತ್ರೆ ಇಲ್ಲದಿರುವುದು ಬಜ್ಪೆ ನಾಗರಿಕರ ದುರಂತ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ

ಇತ್ತೀಚೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಬಜ್ಪೆ ನಾಗರಿಕರ ಹಿತ ರಕ್ಷಣೆಯ ಬಗ್ಗೆ ನಡೆಸಿ, ಬಜ್ಪೆ ಪೇಟೆಯ ಸರ್ವಾಂಗೀಣ ಅಭಿವೃದ್ದಿ, ಬೆಳೆಯುತ್ತಿರುವ ಬಜ್ಪೆ ಪಟ್ಟಣ ಪಂಚಾಯತ್ನೊಳಗೊಂಡಂತೆ,ಸಮೀಪದ 4 ಗ್ರಾಮಪಂಚಾಯತ್ ಸೇರಿಸಿಕೊಂಡು, ಬಜ್ಪೆ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ,ಸಮುದಾಯ ಅರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ರಾಜಕೀಯ ಪಕ್ಷಗಳು, ನಮಗೆ ಇದುವರೆಗೆ ಆಶ್ವಾಸನೆ ಕೊಟ್ಟದು ಸಾಕು, ನಾವು ಇನ್ನೂ ತಡಮಾಡದೆ ಹಿತ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ತೀರ್ಮಾನಿಸಲಾಯಿತು. […]

Continue Reading

ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್, ಒಂದು ಚಿನ್ನ, ಒಂದು ಬೆಳ್ಳಿ ಪದಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025ರಲ್ಲಿ 2 ಪದಕಗಳು ದೊರೆತಿವೆ. ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಪಟುಗಳು 1 ಚಿನ್ನ ಹಾಗೂ 1 ಬೆಳ್ಳಿ ಸಹಿತ ಒಟ್ಟು 2 ಪದಕಗಳನ್ನು ತಮ್ಮದಾಗಿಸಿಕೊಂಡು ಸಾಧನೆಗೈದಿದ್ದಾರೆ. ಮೊಹಮ್ಮದ್ ನಿಹಾಲ್ ನಝೀರ್ ಅವರು 69 ಕೆಜಿ ವಿಭಾಗದಲ್ಲಿ […]

Continue Reading

ಮಾರಣಾಂತಿಕ ರಸ್ತೆ ಗುಂಡಿಗಳು- ದುರಂತಗಳ ಹಿಂದೆ ಇರುವ ವ್ಯವಸ್ಥೆಯ ವೈಫಲ್ಯ; ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿರುವ ಅಮಾಯಕ ಜೀವಗಳು.

ಜೀವಕಳೆದುಕೊಂಡವರ ಆತ್ಮಕ್ಕೆ ಮೋಕ್ಷ ಸಿಗಬೇಕಾದರೆ, ಅದು ದುಃಖದಿಂದಲ್ಲ. ಬದಲಾಗಿ ಈ ಅವ್ಯವಸ್ಥೆಗೆ ಕಾರಣೀಕರ್ತರನ್ನು ಹೊಣೆಗಾರನ್ನಾಗಿ ಮಾಡುವುದರಿಂದ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು 2025ರ ಸೆಪ್ಟೆಂಬರ್ 9ರಂದು, ಮಂಗಳೂರಿನ ಪಣಂಬೂರು ಕೂಳೂರು ರಾಷ್ಟ್ರೀಯ ಹೆದ್ದಾರಿ-66ಯಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಲ್ಯಾಬ್ ತಂತ್ರಜ್ಞೆ ಮಾಧವಿ ಎಂಬವರು, ಮಾರಣಾಂತಿಕ ರಸ್ತೆ ಗುಂಡಿಗೆ ಬಿದ್ದು ಅವರ ಮೇಲೆ ಮೀನಿನ ಲಾರಿ ಹರಿದು ದಾರುಣವಾಗಿ ಮೃತಪಟ್ಟಿರುತ್ತಾರೆ. ಯಾರದೋ ತಪ್ಪಿಗೆ ಆ ಅಮಾಯಕ ಮಹಿಳೆ ತಮ್ಮ ಜೀವನ್ನೇ ಕಳೆದುಕೊಳ್ಳುವಂತಾಗಿದ್ದು, ದುರದೃಷ್ಟವೇ ಸರಿ.ಸುರತ್ಕಲ್‌ನ ಟೋಲ್ ಗೇಟ್ ವಿರುದ್ಧ […]

Continue Reading

ಜೀವ ಕಸಿಯುವ ಅಲೆಗಳು ಹಾಗೂ ನೀರಿನಿಂದ ದೂರವಿರಿ, ಹುಚ್ಚು ಸಾಹಸಕ್ಕೆ ಯುವ ಜೀವಗಳು ಬಲಿಯಾಗದಿರಲಿ.

ದುರಂತಗಳು ನಮಗೆ ನೀಡುವ ಸಂದೇಶ ಸರಳ “ಜೀವನವೇ ಮೊದಲ ಆದ್ಯತೆ” “ಸಾಹಸ, ಉಲ್ಲಾಸ, ಸೆಲ್ಫಿಎಲ್ಲವೂ ನಗಣ್ಯ” ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಪ್ರಕೃತಿ ಯಾವಾಗಲೂ ಮಾನವನನ್ನು ಆಕರ್ಷಿಸಿ, ತನ್ನತ್ತ ಸೆಳೆಯುತ್ತದೆ. ಕಡಲತೀರದ ಅಲೆಗಳು, ಜಲಪಾತಗಳ ಘರ್ಜನೆ, ನದಿಗಳ ಹರಿವು ಈ ಎಲ್ಲವೂಗಳು ವಿಸ್ಮಯಕಾರಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಥಳಗಳು ಅನೇಕ ಕುಟುಂಬಗಳಿಗೆ ಸಂತೋಷದ ನೆನಪಿಗಿಂತ ದುಃಖದ ಕಣ್ಣೀರನ್ನು ನೀಡುತ್ತಿವೆ. ಇದರಲ್ಲಿ ಪ್ರಕೃತಿಯ ತಪ್ಪಿಲ್ಲವಾದರೂ, ಮನುಷ್ಯ ತನ್ನ ಪ್ರವೃತ್ತಿಯಿಂದ ತನಗೆ ತಾನೇ ಕಂಕಟಕಾರಿಯಾಗಿ ಪರಿಣಮಿಸುತ್ತಾನೆ. ವಿಶೇಷವಾಗಿ […]

Continue Reading

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು, ಇದರ ಆಶ್ರಯದಲ್ಲಿ ಸೆಪ್ಟೆಂಬರ್ 11 ರಂದು ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 11-09-2025 ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ. ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. […]

Continue Reading