ವಕ್ಫ್ ಆಸ್ತಿಯೆಂದು ಗುರುತಿಸಿದ ಹಾಗೂ ಘೋಷಿಸಿದ ಸರ್ಕಾರದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಕಾನೂನು ಸಚಿವ ಕಿರೆಣ್ ರಿಜಿಜು ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆಯನ್ನು ಮಂಡಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ ಪ್ರತಿ ಅಂಶವನ್ನೂ ಸದನಕ್ಕೆ ಕಾನೂನು ಸಚಿವರು ಓದಿ ಹೇಳಿದಾಗ ಎನ್‌ಡಿಎ ಸಂಸದರು ಬೆಂಚ್ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ಕೆಲ ಕಾಲ ಗದ್ದಲ ಎಬ್ಬಿಸಿದವು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಅಂಶಗಳ ಪೈಕಿ ಈ ಮಸೂದೆ ಅಂಗೀಕಾರವಾಗುವ ಮುನ್ನ ಹಾಗೂ ಅಂಗೀಕಾರವಾದ ನಂತರ ವಕ್ಫ್ ಆಸ್ತಿಯೆಂದು […]

Continue Reading

ಪೆರ್ಮುದೆ ಮನೆಯಲ್ಲಿ ಕಳ್ಳರ ಕೈಚಳಕ, ಕೆ.ಜಿ ಗಟ್ಟಲೆ ಚಿನ್ನಾಭರಣ ಕಳವು

12 ಸಿಸಿ ಕ್ಯಾಮರಾ, 11 ಹೈಬ್ರಿಡ್ ನಾಯಿಗಳು, ವಾಚ್ ಮ್ಯಾನ್ ಇದ್ದರೂ, ಲಾಕರ್ ಒಡೆದು ಚಿನ್ನಾಭರಣ ದೋಚಿದ ಕಳ್ಳರು ಬಜಪೆ: ಪೆರ್ಮುದೆ ಪೇಟೆಯಲ್ಲಿರುವ ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಲಾಕರ್‌ನಲ್ಲಿದ್ದ ಸುಮಾರು ಒಂದು ಕೆ.ಜಿ. ಚಿನ್ನಾಭರಣ, ಕಳವು ಮಾಡಿರುವ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಬೆಳಕಿಗೆ ಬಂದಿದೆ. ಪೆರ್ಮುದೆಯ ನಿವಾಸಿ ಪ್ರವೀಣ್ ಪಿಂಟೋ ಎಂಬವರಿಗೆ ಸೇರಿದ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್‌ ಪಿಂಟೋ […]

Continue Reading

ವಿಟ್ಲ: ಮಹೇಶ್ ಭಟ್ಟರ ದಿನಸಿ ಅಂಗಡಿಯಲ್ಲಿ ಬೆಂಕಿ ದುರಂತ. ಒಕ್ಕೆತ್ತೂರು ಇಸ್ಮಾಯಿಲ್ ಸಾಬ್ರ ಸಮಯಪ್ರಜ್ಞೆ, ತಪ್ಪಿದ ಭಾರಿ ದುರಂತ.

ವಿಟ್ಲ : ಇಲ್ಲಿನ ಹೃದಯ ಭಾಗದ ನಾಲ್ಕು ರಸ್ತೆ ಜಂಕ್ಷನಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ತಕ್ಷಣವೇ ಸ್ಥಳೀಯ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಿಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದಂತಾಗಿದೆ. ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನೆತ್ರಕೆರೆ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಮಾಲಿಕರಾದ ನೆತ್ರಕೆರೆ ನಿವಾಸಿ ಮಹೇಶ್ ಭಟ್ ಅವರು ದೇವರಿಗೆ ದೀಪ ಹಚ್ಚಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ಕೆಲ ಕ್ಷಣದಲ್ಲೇ ಅಂಗಡಿ ಒಳಗಡೆಯಿಂದ ಭಾರಿ ಪ್ರಮಾಣದಲ್ಲಿ ಹೊಗೆ ಬರಲಾರಂಭಿಸಿತು. […]

Continue Reading

ಕೇರಳ, ಆಂಧ್ರ, ತಮಿಳು ನಾಡು ಮಾದರಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ಪೀಕ್ ಕ್ಯಾಪ್: ರಾಜ್ಯ ಪೊಲೀಸ್ ಇಲಾಖೆ ಚಿಂತನೆ

ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಹೆಡ್ ಕಾನ್ಸ್ ಟೇಬಲ್ ಗಳ ಟೋಪಿ ಬದಲಾವಣೆಗೆ ಚಿಂತನೆ ನಡೆಸಿರುವ ರಾಜ್ಯ ಪೊಲೀಸ್ ಇಲಾಖೆ, ಈ ಕುರಿತು ಚರ್ಚೆ ನಡೆಸಲು ಏಪ್ರಿಲ್ 4 ರಂದು ವಿವಿಧ ಘಟಕಗಳ ಮುಖ್ಯಸ್ಥರ ಸಭೆ ಕರೆದಿದೆ. ಕಾನ್ಸ್ ಟೇಬಲ್ ಗಳು ಹಾಲಿ ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ನೀಡುವ ಸಂಬಂಧ ಕೆಎಸ್ ಆರ್ ಪಿ ಎಡಿಜಿಪಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜತೆಗೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಡಿಜಿ ಐಜಿಯವರಿಗೆ ಕಳುಹಿಸಲಾಗುತ್ತದೆ. ಆನಂತರ […]

Continue Reading

ಕರಾವಳಿಯ ದೈವರಾಧನೆಗೂ ಬ್ಯಾರಿ ಮುಸ್ಲೀಮರಿಗೂ ಅವಿನಾನುಭವ ಸಂಬಂಧವಿದೆ.

ಬೈಲುಪೇಟೆ ಜುಮ್ಮಾ ಮಸೀದಿಯ ಧರ್ಮಗುರು ಮತ್ತು ಜುಮಾದಿಯ ಪೂಜಾರಿಯ ನಡುವಿನ ಮಾನವೀಯ ಸಂಬಂಧ ✍️. ನವೀನ್ ಸೂರಿಂಜೆ, ಪತ್ರಕರ್ತರು ದೈವವೆಂದರೆ ಹಾಗೆಯೇ ! ಎಲ್ಲರನ್ನೂ ಪ್ರೀತಿಸುವ, ಪೊರೆಯುವ ಶಕ್ತಿಗಳು. ಹಿಂದೂ, ಮುಸ್ಲಿಂ, ಗಂಡು, ಹೆಣ್ಣು, ಆಜಾನ್, ಗಂಟೆನಾದ ಇವುಗಳ ಮಧ್ಯೆ ದೈವಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿಯೇ ಕರಾವಳಿಯ ಹಿಂದೂಗಳ ದೈವಾರಾಧನೆಯ ಜೊತೆಗೆ ಬ್ಯಾರಿ ಮುಸ್ಲೀಮರ ಕತೆಗಳು ಇರಲೇಬೇಕು ಕರ್ನಾಟಕದ ಕರಾವಳಿಯ ದೈವರಾಧನೆಗೂ ಬ್ಯಾರಿ ಮುಸ್ಲೀಮರಿಗೂ ಅವಿನಾನುಭವ ಸಂಬಂಧವಿದೆ. ಅನೇಕ ಕ್ರಾಂತಿಕಾರಿ ಮುಸ್ಲೀಮರು ತುಳುನಾಡಿನಲ್ಲಿ ಹಿಂದೂಗಳ ದೈವಗಳಾಗಿ ಆರಾಧನೆಗೊಳ್ಳುತ್ತಿದ್ದಾರೆ. […]

Continue Reading

ಮಂಗಳೂರು: ಮುಡಾ ಕಮೀಷನರ್ ಗೆ ಜೀವ ಬೆದರಿಕೆ, ವಾಮಾಚಾರ ಮಾಡುವುದಾಗಿ ಧಮ್ಕಿ, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು ನಗರದ ಮುಡಾ ಆಯುಕ್ತರಿಗೆ ಇಬ್ಬರು ಮಧ್ಯವರ್ತಿಗಳು ತಮಗೆ ಮಾನಹಾನಿಕರ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ, ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಮಂಗಳೂರು ಮೂಡಾ ಆಯುಕ್ತೆ ಆರೋಪಿಸಿ, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜನವರಿ 7 ರಂದು ಸಿಬಂಧಿಗಳು ಊಟಕ್ಕೆ ಹೋದ ಸಮಯದಲ್ಲಿ ಮುಡಾ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಮೇಜಿನ ಮೇಲಿದ್ದ ಕಡತಗಳನ್ನು ವಿರೂಪಗೊಳಿಸಿದ ಆರೋಪದ, ಅಲ್ಲದೆ ಮೂಡಾದಲ್ಲಿ ನಡೆದಿರುವ ಕೆಲವು ವಿದ್ಯಾಮಾನ, ಮುಡಾ ಕಚೇರಿಯಲ್ಲಿನ ಏಕ-ಸ್ಥಳ ಅನುಮೋದನೆಗಳು ಮತ್ತು ಇತರ ಕೆಲಸಗಳಿಗೆ […]

Continue Reading

ಹಿಂದುತ್ವ ಅಂದರೆ ಏನು.? ನಾಮ ಹಾಕಿದರೆ ಮಾತ್ರ ಹಿಂದುತ್ವವಾ.? ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಮಾತ್ರ ಹಿಂದೂತ್ವ ಆಗುತ್ತದಾ: ಕಲ್ಲಡ್ಕ ಭಟ್

ಹಿಂದುತ್ವವೆಂದು ಏನು ಬೇಕಾದರೂ ಮಾತಾನಾಡಬಹುದಾ.? ಸಂಘಟನೆಗೆ ಸೇರಿದ ಮೇಲೆ ಏನು ಮಾತನಾಡಬೇಕು ಎಂಬ ಪ್ರಜ್ಞೆ ಮೈಮೇಲೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಶಾಸಕ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಯತ್ನಾಳ್ ಉಚ್ಚಾಟನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಲ್ಲಡ್ಕ ಪ್ರಭಾಕರ ಭಟ್‌,’ ಸಂಘಟನೆಯ ವ್ಯಾಪ್ತಿಯೊಳಗೆ ಇದ್ದಾಗ ಗಡಿ ಮೀರಿ ಹೋಗಬಾರದು. ಮಾತನಾಡಲು ಅವಕಾಶ ಇದೆ. ಪಕ್ಷದ ಸಮಿತಿ ಇದೆ. ಆ ಸಮಿತಿಯೊಳಗೆ ಎಷ್ಟು […]

Continue Reading

ಬಂಧನ ನಿಯಮವನ್ನೇ ಪಾಲಿಸುತ್ತಿಲ್ಲ ರಾಜ್ಯ ಪೊಲೀಸರು. 70% ಬಂಧನದಲ್ಲಿ ನಿಯಮ ಉಲ್ಲಂಘನೆ: ಎನ್ ಜಿ ಒ ವರದಿ

ರಾಜ್ಯದ ಪೊಲೀಸರು ಶೇಕಡಾ 70 ರಷ್ಟು ಬಂಧನ ಪ್ರಕರಣಗಳಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಯ ವರದಿ ಬಹಿರಂಗವಾಗಿದೆ. ಲೋಕನೀತಿ, ಸಿಎಸ್ ಡಿ ಎಸ್ ಮತ್ತು ಲಾಲ್ ಫ್ಯಾಮಿಲಿ ಫೌಂಡೇಶನ್ ನೇತೃತ್ವದಲ್ಲಿ ‘ಕಾಮನ್ ಕಾಸ್’ ಎಂಬ ಎನ್ ಜಿ ಒ ಎಲ್ಲ ರಾಜ್ಯಗಳಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ವರದಿ ಬಹಿರಂಗಪಡಿಸಿದೆ. ನೆರೆ ರಾಜ್ಯ ಕೇರಳದಲ್ಲಿ ಪೊಲೀಸರು ಶೇಕಡಾ 94 ರಷ್ಟು ಪ್ರತಿಶತ ಬಂಧನ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಜಾರ್ಖಂಡ್ ನಲ್ಲೂ ಕೂಡ ಶೇಕಡಾ 70 […]

Continue Reading

ಮಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ನಂದಿಗುಡ್ಡೆ ಫ್ಲ್ಯಾಟ್ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳು ಖುಲಾಸೆ

ಮಂಗಳೂರಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಅತ್ತಾವರದ ನಂದಿಗುಡ್ಡೆ ಫ್ಲ್ಯಾಟ್‌ನಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. 2022 ರಲ್ಲಿ ಈ ಘಟನೆ ನಡೆದಿತ್ತು. ಮಂಗಳೂರಿನ ಮುಸ್ಲಿಂ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ಹಿಂದೆ ಪ್ರಭಾವೀಗಳು, ರಾಜಕಾರಣಿಗಳು ಶಾಮೀಲಾಗಿದ್ದರು. ಉಳ್ಳಾಲದ ಪ್ರಮುಖ ರಾಜಕಾರಣಿಗಳ ಸಹವರ್ತಿಗಳು ಹಾಗೂ ಬಿಲ್ಡರ್ ಗಳು ಸೇರಿದಂತೆ ಈ ಪ್ರಕರಣದಲ್ಲಿ 17 ಮಂದಿಯನ್ನು ಅಂದಿನ ಪೊಲೀಸ್ ಆಯುಕ್ತರಾದ ಶಶಿಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿತ್ತು. ಕಾಸರಗೋಡಿನ ಉಪ್ಪಳದ ಶಮೀನಾ ಎಂಬಾಕೆ […]

Continue Reading

ರಂಜಾನ್ ಮತ್ತು ಈದ್-ಉಲ್-ಫಿತ್ರ್‌ನ ಸಾರ: ನಂಬಿಕೆ ಮತ್ತು ಆಚರಣೆಯ ಪಯಣ

ರಂಜಾನ್: ಆಧ್ಯಾತ್ಮಿಕ ಶುದ್ಧೀಕರಣದ ತಿಂಗಳು. ಈದ್-ಉಲ್-ಫಿತ್ರ್‌ನ ಶಿಷ್ಟಾಚಾರಗಳು ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು. ರಂಜಾನ್ ಮತ್ತು ಈದ್-ಉಲ್-ಫಿತ್ರ್ ಇಸ್ಲಾಮ್ ಧರ್ಮದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿವೆ. ರಂಜಾನ್ ತಿಂಗಳು ಉಪವಾಸ, ಪ್ರಾರ್ಥನೆ ಮತ್ತು ಸ್ವಯಂ-ಶಿಸ್ತಿನ ಸಮಯವಾದರೆ, ಈದ್-ಉಲ್-ಫಿತ್ರ್ ಈ ಪವಿತ್ರ ತಿಂಗಳ ಸಂತೋಷದ ಸಮಾಪ್ತಿಯನ್ನು ಸೂಚಿಸುತ್ತದೆ. ಈ ಲೇಖನವು ರಂಜಾನ್ ಉಪವಾಸ, ಈದ್-ಉಲ್-ಫಿತ್ರ್‌ನ ಸಾರ, ಆಚರಣೆಯ ಶಿಷ್ಟಾಚಾರಗಳು ಮತ್ತು ಈದ್ ನಂತರವೂ ಈ ಆತ್ಮೀಯ ಚೈತನ್ಯವನ್ನು ಕಾಪಾಡಿಕೊಳ್ಳುವ ವಿಧಾನವನ್ನು ಕುರಾನ್‌ನ ಸಂಬಂಧಿತ ಭಾಗಗಳೊಂದಿಗೆ ವಿವರಿಸುತ್ತದೆ. […]

Continue Reading