ಮಂಗಳೂರು ಪೊಲೀಸ್ ಕಮೀಷನರ್ ವರ್ಗಾವಣೆಗೆ ಆಗ್ರಹಿಸಿ ರಸ್ತೆ ತಡೆಗೆ ಪ್ರಯತ್ನ; ಡಿವೈಎಫ್ಐ ಕಾರ್ಯಕರ್ತರ ಬಂಧನ

ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿರುವ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಇಂದು ನಗರದ ರಾವ್ ಆಂಡ್ ರಾವ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಯಿತು. ಕಮೀಷನರ್ ಅಗ್ರವಾಲ್ ಹಟಾವೋ ಮಂಗಳೂರು ಭಚಾವೋ ಎಂದು ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಲು ಮುಂದಾದ ಡಿವೈಎಫ್ಐ ಕಾರ್ಯಕರ್ತರನ್ನು ಅಪಾರ ಸಂಖ್ಯೆಯಲ್ಲಿ ನಿಯೋಜಿಸಿದ್ದ ಪೊಲೀಸರು ತಡೆಯಲು ಯತ್ನಿಸಿದರು ಡಿವೈಎಫ್ಐ ಕಾರ್ಯಕರ್ತರನ್ನು ಬಂಧಿಸುವ ವೇಳೆ ಪೊಲೀಸರ ನಡುವೆ ತಿಕ್ಕಾಟ […]

Continue Reading

ಕಮೀಷನರ್ ಅನುಪಮ್ ಅಗರವಾಲ್ ವರ್ಗಾವಣೆಗೆ ಆಗ್ರಹಿಸಿ ಸರಣಿ ಹೋರಾಟ, ಗೃಹ ಸಚಿವ, ಮುಖ್ಯಮಂತ್ರಿಗಳ ಭೇಟಿ; ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿರ್ಧಾರ.

ಪ್ರತಿಭಟನೆ, ಧರಣಿಗಳಿಗೆ ಅವಕಾಶ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ, ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮೇಲೆ ಶಿಸ್ತು ಕ್ರಮ ಜರುಗಿಸಲು, ಮಂಗಳೂರು ನಗರ ಕಮೀಷನರೇಟ್ ನಿಂದ ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು, ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಕಮೀಷನರ್ ಅಗರ್ ವಾಲ್ ಹಾಗೂ ಡಿಸಿಪಿ ಗೋಯಲ್ ನಡೆ ಪೊಲೀಸ್ ಇಲಾಖೆಯ ಗೌರವಕ್ಕೆ ತಕ್ಕುದಾಗಿಲ್ಲ. ಜನ ಸಾಮಾನ್ಯರು, ದುರ್ಬಲ ವಿಭಾಗಗಳು ತಮ್ಮ […]

Continue Reading

ಮುಮ್ತಾಜ್ ಅಲಿ ಅನುಸ್ಮರಣೆ ಕಾರ್ಯಕ್ರಮದಲ್ಲಿ ಕೆಲವು ಬ್ಯಾರಿ ಕಾಕಾ.. ಗಳು ನಾಪತ್ತೆ.!

ರೈಟ್ -ಲೆಪ್ಟ್ ಎಂದು ಕಾಣಿಸಿಕೊಂಡವರೆಲ್ಲ ಮಾಯ..ಮಾಯ! ಓರ್ವ ವ್ಯಕ್ತಿಯ ಬಳಿ ಸಾಕಷ್ಟು ದುಡ್ಡು, ಅಧಿಕಾರ, ಶ್ರೀಮಂತಿಕೆ ಇದ್ದರೆ ಇರುವೆಗಳು ಮುತ್ತಿಕ್ಕುವಂತೆ ಸ್ನೇಹಿತರ ಬಳಗವೇ ಇರುತ್ತದೆ, ಆತ ಖಾಲಿಯಾದಾಗ ಆತನನ್ನು ಮೂಸುವವರು ಯಾರೂ ಇಲ್ಲ ಎಂದು ಸಾಮಾನ್ಯವಾಗಿ ಜನ ಹೇಳುವುದುಂಟು. ಅದೇ ರೀತಿ ಅಧಿಕಾರ, ಹುದ್ದೆ ಇದ್ದಾಗ ಲೆಫ್ಟ್, ರೈಟ್ ಎಂದು ದೋಸ್ತ್ ಗಳು ಅಡ್ಡಾಡುತ್ತಲೇ ಇರುತ್ತಾರೆ. ಆದರೆ ಆತ ಮರಣವನ್ನಪ್ಪಿದಾಗ ಆತನ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳಲು ಯಾರೂ ಇರುವುದಿಲ್ಲ. ಆತನಿಂದ ಲಾಭ ಪಡೆದವರೇ ಮಾಯವಾಗಿ ಬಿಡುತ್ತಾರೆ. […]

Continue Reading

ದೇಶದಲ್ಲಿ ವಕ್ಫ್ ಮಂಡಳಿಗಳ ಒಟ್ಟು 58,929 ಆಸ್ತಿ, ಕರ್ನಾಟಕದಲ್ಲಿ 869 ಆಸ್ತಿಗಳ ಅತಿಕ್ರಮವಾಗಿದೆ: ಕೇಂದ್ರ ಸರ್ಕಾರ

ದೇಶದಲ್ಲಿ ವಕ್ಫ್ ಮಂಡಳಿಗಳ 58,929 ಆಸ್ತಿಗಳ ಅತಿಕ್ರಮವಾಗಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಕರ್ನಾಟಕದ 869 ಆಸ್ತಿಗಳೂ ಸೇರಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆಣ್‌ ರಿಜಿಜು, ಕಾಲ ಕಾಲಕ್ಕೆ ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಂದ್ರೀಯ ವಕ್ಫ್‌ ಪರಿಷತ್‌ಗೆ ಬಂದಿವೆ. ಅವುಗಳನ್ನು ಆಯಾ ಸಂದರ್ಭದಲ್ಲೇ ರಾಜ್ಯ ವಕ್ಫ್ ಮಂಡಳಿ ಮತ್ತು ಸರ್ಕಾರಕ್ಕೆ ಕಳುಹಿಸಿ ಸೂಕ್ತ ಕ್ರಮಕ್ಕೆ […]

Continue Reading

ಅಜ್ಮೀರ್ ದರ್ಗಾ ಶಿವ ದೇವಾಲಯ ಎಂಬ ತಕರಾರು ಅರ್ಜಿ; ವಿಚಾರಣೆಗೆ ನಡೆಸಲು ನ್ಯಾಯಾಲಯದ ಒಪ್ಪಿಗೆ, ದರ್ಗಾ ಸಮಿತಿ, ಎಎಸ್ಐಗೆ ಸಮನ್ಸ್

ಈ ವಿಚಾರದಲ್ಲಿ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಗೆ ಸಮನ್ಸ್ ಜಾರಿ ಮಾಡಬೇಕು ಎಂದು ನ್ಯಾಯಮೂರ್ತಿ ಚಂದೇಲ್ ನಿರ್ದೇಶಿಸಿದ್ದಾರೆ. ಅಜ್ಮೀರ್ ನ್ಯಾಯಾಲಯವು ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಪ್ರತಿಪಾದಿಸುವ ಅರ್ಜಿಯನ್ನು ಸ್ವೀಕರಿಸಿದೆ, ದರ್ಗಾ ಸಮಿತಿಗೆ ಸಮನ್ಸ್, ASI ನ್ಯಾಯಾಲಯವು ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಹೇಳಿಕೊಳ್ಳುವ ಅರ್ಜಿಯನ್ನು ಆಲಿಸಲು ಸಮ್ಮತಿಸುತ್ತದೆ, ದರ್ಗಾ ಸಮಿತಿ, ASI ಗೆ ಸಮನ್ಸ್. ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಅಥವಾ […]

Continue Reading

ಅಣೆಕಟ್ಟು ನೀರಿನಲ್ಲಿ ಮೋಜಿನಾಟ; ವೇಣೂರು ಬಳಿ ಮೂವರು ಯುವಕರ ದುರ್ಮರಣ.

ಗೆಳೆಯನ ಮನೆಗೆ ಬಂದ ಮೂವರು ಯುವಕರು ಕಿಂಡಿ ಅಣೆಕಟ್ಟು ನೀರಿನಲ್ಲಿ ಮೋಜಿನಾಟ ನಡೆಸಲು ಹೋಗಿ ಪ್ರಾಣತೆತ್ತ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೇಣೂರು ಬರ್ಕಜೆ ನದಿಗೆ ಹಾಕಲಾಗಿದ್ದ ಕಿಂಡಿ ಅಣೆಕಟ್ಟು ನೀರಿನಲ್ಲಿ ಮುಳುಗಿ ಮೂವರು ಯುವಕರ ದುರ್ಮರಣ. ವೇಣೂರು ಚರ್ಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೆಳೆಯನ ಮನೆಗೆ ಬಂದಿದ್ದ ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಸಾವಿಗೀಡಾಗಿದ್ದಾರೆ. ಕಟ್ಟೆ ರೆಸ್ಕ್ಯೂಮ್ ತಂಡದ ಕಾರ್ಯಕರ್ತರು ಅಣೆಕಟ್ಟು ನೀರಿನಲ್ಲಿ ಮುಳುಗಿದ್ದ ಮೂವರು ಯುವಕರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ವೇಣೂರು […]

Continue Reading

ಇದ್ಯಾವ ನ್ಯಾಯ ಸ್ವಾಮಿ..!ಗುಂಡಿ ಮುಚ್ಚಿ, ರಸ್ತೆ ಸರಿಪಡಿಸಲು ಹೋರಾಟ ಮಾಡಿದರೆ ಕೇಸು.. ದೊಡ್ಡವರು ರಸ್ತೆ ಬಂದ್ ಮಾಡಿ ಕಾರ್ಯಕ್ರಮ ಮಾಡಿದರೆ ಅನುಮತಿ.!

ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಮಂಗಳೂರು, ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಂತಿಯುತ ಧರಣಿ ನಡೆಸಿದ್ದು ಅಪರಾಧ ಅಂತ ಹೇಳಿ ಮೊಕದ್ದಮೆ ಹೂಡಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ “ಮುನೀರ್ ಕಾಟಿಪಳ್ಳ” ಎಂದು ಒಂದು ಹೆಸರನ್ನು ಮಾತ್ರ ಉಲ್ಲೇಖಿಸಿ ಸ್ವಯಂಪ್ರೇರಿತ FIR ಹಾಕಿದ್ದಾರೆ. ಇದರ ಉದ್ದೇಶ ಸ್ಪಷ್ಟ, ಮುನೀರ್ ಕಾಟಿಪಳ್ಳ ಈಗ ಮಂಗಳೂರು ಕಮೀಷನರ್ ಅವರಿಗೆ ಟಾರ್ಗೆಟ್, ಆ ಮೂಲಕ ಮಂಗಳೂರಿನ ಜನಪರ ಚಳವಳಿಗಳನ್ನು ಬೆದರಿಸುವ, ಬಾಯಿ ಮುಚ್ಚಿಸುವ ಯತ್ನ ನಡೆಸುತ್ತಿದ್ದಾರೆ‌. ಇದು ಬಿಜೆಪಿ ಶಾಸಕರುಗಳ ನಿರ್ದೇಶನದಂತೆ […]

Continue Reading

ಭ್ರಷ್ಟರ ಪರಮ ಅಡ್ಡೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಕಂತೆ ಕಂತೆ ನೋಟು, ಕೆಜಿ ಗಟ್ಟಲೆ ಒಡವೆ ಲೋಕಾಯುಕ್ತ ಅಧಿಕಾರಿಗಳೇ ಹೈರಾಣು.! ಮರಳು.. ಕಲ್ಲು.. ಮಣ್ಣು.. ಮುಕ್ಕಿ ಮುಕ್ಕಿ ಕೋಟಿ.. ಕೋಟಿ ಡೀಲು.. ಇದು ಮಂಗಳೂರು. ಬುದ್ಧಿವಂತರ ಜಿಲ್ಲೆ. ಶಿಕ್ಷಿತರ ತವರೂರು. ಇಲ್ಲಿನ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಲಕ ಲಕ ಹೊಳೆಯುತ್ತಿದೆ. ಉತ್ತರ ಕರ್ನಾಟಕ ಅಥವಾ ಇತರ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಭ್ರಷ್ಟ ಅಧಿಕಾರಿಗಳು ಕಂತೆ ಕಂತೆ ನೋಟುಗಳನ್ನು ಪೈಪುಗಳಲ್ಲಿ ಅಡಗಿಸಿಟ್ಟಿರುವುದು, ಕೋಣೆಯಲ್ಲಿ ಬಚ್ಚಿಟ್ಟಿರುವುದು ಇಂತಹ ನ್ಯೂಸ್ ಗಳನ್ನು ಕೇಳಿರಬಹುದು. ಆದರೆ ಮಂಗಳೂರಿನಲ್ಲಿ ಲೋಕಾಯುಕ್ತರು […]

Continue Reading

ಅಂತರಾಜ್ಯ ಹೆದ್ದಾರಿಯ ವಿಟ್ಲ-ಉಕ್ಕುಡ-ಪಡಿಬಾಗಿಲು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ.

ಶಾಸಕ-ಸಂಸದರ ಬೇಜವಾಬ್ದಾರಿಗೆ ವಾಹನ ಚಾಲಕರು ಹೈರಾಣ. ಅಂತರಾಜ್ಯ ಹೆದ್ದಾರಿಯ ವಿಟ್ಲ- ಉಕ್ಕುಡ- ಪಡಿಬಾಗಿಲು ರಸ್ತೆ ದುರವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಆಟೋರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘದ ವತಿಯಿಂದ ಕಾಶಿಮಠ ಬಳಿ ಪ್ರತಿಭಟನೆ ನಡೆಯಿತು. ಕಲ್ಲಡ್ಕ- ಚೆರ್ಕಳ ಅಂತರಾಜ್ಯ ಹೆದ್ದಾರಿಯ ವಿಟ್ಲದಿಂದ ಪಡಿಬಾಗಿಲು ತನಕದ ಮೂರು ಕಿಲೋಮೀಟರ್ ರಸ್ತೆ ಹೊಂಡಗುಂಡಿಗಳಿಂದಾಗಿ ನಾಪತ್ತೆಯಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಪ್ರತಿನಿತ್ಯ ವಾಹನ ಅಪಘಾತಗಳು ನಡೆಯುತ್ತಿವೆ. ರಸ್ತೆ ದುರಸ್ತಿಗಾಗಿ ಪಟ್ಟಣ ಪಂಚಾಯತಿಗೆ ದೂರು ನೀಡಿದರೆ ಹೆದ್ದಾರಿ ದುರಸ್ತಿ ನಾವು […]

Continue Reading

ಸಾಲೆತ್ತೂರು ಬಳಿ ಆಟೋ-ಬೈಕ್ ಮಧ್ಯೆ ಅಪಘಾತ. ಮೂವರಿಗೆ ಗಂಭೀರ ಗಾಯ.

ವಿಟ್ಲ : ಸಾಲೆತ್ತೂರು ಸಮೀಪದ ಕಾಡುಮಠ ಸೇತುವೆಯಲ್ಲಿ ಆಟೋರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ಚಾಲಕ ಸಾಲೆತ್ತೂರು ನಿವಾಸಿ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಗಾಯಾಳುಗಳು. ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುತ್ತಿದ್ದ ಉಮ್ಮರ್ ಮತ್ತು ಅಬೂಬಕ್ಕರ್ ಅವರ ಬೈಕ್ ಸಾಲೆತ್ತೂರು ಕಡೆಗೆ ಸಂಚರಿಸುತ್ತಿದ್ದ ರಫೀಕ್ ಎಂಬವರ ಆಟೋಗೆ ಕಾಡುಮಠ ಸೇತುವೆಯಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ […]

Continue Reading