ಮೂಡಬಿದ್ರೆ ಹಂಡೇಲು ಬಳಿ ‘ಮಾಸ್ಟರ್’ ಬಸ್ ಶರವೇಗದ ಚಾಲನೆ ; ಇಬ್ಬರಿಗೆ ಗಂಭೀರ ಗಾಯ; ಸಿಡಿದೆದ್ದ ವಿಧ್ಯಾರ್ಥಿಗಳಿಂದ ಬಸ್ಸಿನ ಗಾಜು ಪುಡಿಪುಡಿ

ಮೂಡಬಿದ್ರೆ ಹಂಡೇಲು ಬಳಿ ಮಾಸ್ಟರ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಭೀಕರ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಹರಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ತೋಡಾರ್ ಮೈಟ್ ಕಾಲೇಜು ಬಳಿ ಕಾಲೇಜಿನ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಈ ಘಟನೆ ನಡೆದಿದ್ದು, ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರು -ಮೂಡಬಿದ್ರೆ […]

Continue Reading

ಬಿಜೆಪಿ ಸಿದ್ಧಾಂತಕ್ಕೆ ಒಗ್ಗಿಕೊಳ್ಳದ ಕಳಂಕಿತರನ್ನು ಹೊರಗೆ ಹಾಕುವ ಕೆಲಸ ಆಗಬೇಕು; ಕಳಂಕಿತರನ್ನು ಪ್ರಮುಖ ಸ್ಥಾನದಿಂದ ಹೊರಗೆ ಇಡದೇ ಇದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ: ಗಡ್ಕರಿ

ಬಿಜೆಪಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಪಕ್ಷಾಂತರದ ಮೂಲಕ ಸೆಳೆಯಲಾಗುತ್ತಿದೆ. ಆದರೆ ಕಳಂಕಿತ ರಾಜಕಾರಣಿಗಳ ಸೇರ್ಪಡೆಯಿಂದ ಪಕ್ಷದ ವರ್ಚಸ್ಸು ಕುಂದುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೈದ್ಧಾಂತಿಕ ಪಕ್ಷವಾಗಿದ್ದು, ಈ ಸಿದ್ಧಾಂತ ಒಪ್ಪಿ ಬರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೇರಿಸಿಕೊಳ್ಳಬೇಕು. ಆದರೆ ಕಳಂಕಿತ ರಾಜಕಾರಣಿಗಳನ್ನು ಪ್ರಮುಖ ಸ್ಥಾನದಿಂದ ಹೊರಗೆ ಇಡದೇ ಇದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂದು ಹೇಳಿದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ […]

Continue Reading

ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕ. ಎರಡು ಜೀವಗಳ ರಕ್ಷಿಸಿದ ಗುರುಪುರದ ಹೃದಯವಂತ ಮುಸ್ಲಿಮರು.

ಪತ್ನಿಯ ಅನೈತಿಕ ಸಂಬಂಧ,ಪ್ರತಿನಿತ್ಯ ಗಲಾಟೆ, ಮಾನಸಿಕ ಹಿಂಸೆ ತಾಳಲಾರದೇ ಪುಟ್ಟ ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಗುರುಪುರಕ್ಕೆ ಯುವಕನೊಬ್ಬ ಬಂದಿದ್ದಾನೆ. ಜನ ಸಂಚಾರ ಇಲ್ಲದ ಸಂದರ್ಭ ಪುಟ್ಟ ಮಗುವನ್ನು ಎತ್ತಿಕೊಂಡು ಸೇತುವೆಯ ಮೇಲೇರಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಪ್ರಶ್ನಿಸುತ್ತಾ ಬೇರೆಡೆ ಗಮನ ಹೋಗುವಂತೆ ಮಾಡಿದ್ಜಾರೆ. ಸ್ಥಳೀಯರ ಪ್ರಶ್ನೆಗಳಿಗೆ ಪುಟಾಣಿಯ ಹಿಡಿದುಕೊಂಡು ಸೇತುವೆ ಮೇಲಿದ್ದ ಯುವಕ ಉತ್ತರಿಸುತ್ತಲೇ ನದಿಗೆ ಹಾರಲು ಮುಂದಾಗಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಮುಸ್ಲಿಂ ಬಾಂಧವರು ಮಗು ಮತ್ತು ಆತನನ್ನು ಹಿಡಿದು ಎರಡು […]

Continue Reading

ವಿಟ್ಲ-ಉಕ್ಕುಡ-ಬೈರಿಕಟ್ಟೆ ರಸ್ತೆಯುದ್ದಕ್ಕೂ ನೂರಾರು ಮರಣ ಗುಂಡಿಗಳು.! ಮಾನ್ಯ ಶಾಸಕರೇ ಸೀರೆ ಬೇಡ, ಸಾಧ್ಯವಾದರೆ ದಯವಿಟ್ಟು ಸಂಚರಿಸಲು ಯೋಗ್ಯವಾದ ರಸ್ತೆ ಕೊಡಿ..

ರಸ್ತೆ ನಿರ್ಬಂಧವಿದ್ದರೂ ಕನ್ಯಾನ ಕಡೆಯಿಂದ ಟನ್ ಗಟ್ಟಲೆ ಮಣ್ಣು ತುಂಬಿಕೊಂಡು ಬರುವ ಭಾರಿ ಘನ ವಾಹನಗಳು. ಲಂಚ ತಿಂದು ಕಣ್ಮುಚ್ಚಿ ಕುಳಿತರೇ ಸಂಬಂಧಪಟ್ಟ ಅಧಿಕಾರಿಗಳು.? ದಯವಿಟ್ಟು ವಿಟ್ಲ-ಉಕ್ಕುಡ-ಬೈರಿಕಟ್ಟೆ ರಸ್ತೆಯಲ್ಲೊಮ್ಮೆ ಸಂಚರಿಸಿ ನೋಡಿ. ಒಂದಲ್ಲ ಎರಡಲ್ಲ ನೂರಾರು ಯಮ ಮರಣ ಗುಂಡಿಗಳು ನಿಮ್ಮನ್ನು ಸ್ವಾಗತಿಸಲು ಕಾದು ಕುಳಿತಿವೆ.!! ರಸ್ತೆಯಲ್ಲಿ ದಿನಾ ಸಂಚರಿಸುವ ಪ್ರಯಾಣಿಕರು, ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಚಿಕ್ಕ ಪುಟ್ಟ ಗುಂಡಿಗಳು ಸೃಷ್ಟಿಯಾಗುವುದು ಸಾಮಾನ್ಯ, ಆದರೆ ಈ ರಸ್ತೆಯಲ್ಲಿ ಕಾಣಸಿಗುವುದು ಕೇವಲ ಗುಂಡಿಯಲ್ಲ, ಚಾಲಕನ ಕೈಯಿಂದ […]

Continue Reading

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಅಂತರಾಜ್ಯ ದರೋಡೆಕೋರರು.

ಮಂಜೇಶ್ವರ ಠಾಣಾ ವ್ಯಾಪ್ತಿಯ ದೈಗೋಳಿಯಲ್ಲಿ ಸ್ಥಳೀಯರ ಕಾರ್ಯಾಚರಣೆ. ಕರ್ನಾಟಕ-ಕೇರಳ ಗಡಿಭಾಗದ ಸುಂಕದಕಟ್ಟೆ ದೈಗೋಳಿ ಎಂಬಲ್ಲಿ ರವಿವಾರ ಮುಂಜಾನೆ ಕುಖ್ಯಾತ ಅಂತರಾಜ್ಯ ದರೋಡೆಕೋರರು ಸ್ಥಳೀಯರು ಕೈಗೆ ಸಿಕ್ಕಿಬಿದ್ದಿದ್ದಾರೆ. ಮುಂಜಾನೆ ಮೂರು ಗಂಟೆಯ ಸುಮಾರಿಗೆ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಎಚ್ಚರಗೊಂಡ ಮಹಿಳೆಯೊಬ್ಬರು ಬೊಬ್ಬೆ ಹೊಡೆದಿದ್ದಾರೆ. ತಕ್ಷಣವೇ ಸ್ಥಳೀಯರು ಜಮಾಯಿಸುತ್ತಿದ್ದಂತೆ ದರೋಡೆಕೋರರು ತಮ್ಮ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರ ಬುದ್ಧಿವಂತಿಕೆಯ ಮುಂದೆ ದರೋಡೆಕೋರರ ಯತ್ನ ವಿಫಲವಾಗಿದೆ. ದರೋಡೆಕೋರರ ಕಾರನ್ನು ಬೆನ್ನಟ್ಟಿದ ಸ್ಥಳೀಯರು ಸುಂಕದಕಟ್ಟೆ ದೈಗೋಳಿ ಎಂಬಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಂದರ್ಭ […]

Continue Reading

ವಕ್ಫ್ ಭೂಮಿ ಹೆಸರಿನಲ್ಲಿ ಕೋಲಾಹಲ ಎಬ್ಬಿಸಿ ವಿವಾದವಾದ ಆದೇಶಕ್ಕೆ ಇದೀಗ ಸರ್ಕಾರ ಮಹತ್ವದ ಆದೇಶ; ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ: ಸಿ.ಎಂ

ರಾಜ್ಯಾದ್ಯಂತ ವಕ್ಫ್ ಭೂಮಿ ಹೆಸರಿನಲ್ಲಿ ಕೋಲಾಹಲ ಎಬ್ಬಿಸಿ ವಿವಾದವಾದ ಆದೇಶಕ್ಕೆ ಇದೀಗ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಮಹತ್ವದ ಸೂಚನೆ ನೀಡಿದೆ. ಕೆಲವು ರೈತರು ಹಾಗೂ ಇತರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಿ ಸೂಚನೆ ನೀಡಿದ್ದನ್ನು ಈ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಯಾವುದೇ ಪ್ರಾಧಿಕಾರದಿಂದ (ವಕ್ಫ್) […]

Continue Reading

ಸ್ಪೀಕರ್ ಕ್ಷೇತ್ರದಲ್ಲಿ ಹೆದ್ದಾರಿ ಮರಣ ಗುಂಡಿಗೆ ಮಹಿಳೆ ಬಲಿ.!

ಹೆದ್ದಾರಿ ಮರಣಗುಂಡಿಯ ಬಗ್ಗೆ ಈ ಹಿಂದೆಯೇ ಪ್ರತಿಭಟಿಸಿದ್ದ ನಾಗರಿಕ ಸಂಘಟನೆಗಳು; ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ, ಶಾಸಕರು.! ಸರಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಜೀವಹಾನಿಯಾಗುತ್ತದೆ ಎಂಬುದಕ್ಕೆ ಮತ್ತೊಂದು ಘಟನೆಯು ಸಾಕ್ಷಿಯಾಗಿದೆ. ಉಳ್ಳಾಲದ ತೊಕ್ಕೊಟ್ಟು ಚೆಂಬುಗುಡ್ಡೆ ಹೆದ್ದಾರಿಯ ಮರಣ ಗುಂಡಿಯ ಬಗ್ಗೆ ಈ ಹಿಂದೆಯೇ DYFI ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟಿಸಿದರೂ ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ಸ್ಪಂದಿಸಲೇ ಇಲ್ಲ. ಈ ರಸ್ತೆಯಲ್ಲಿ ಹಲವು ಬಾರಿ ಸಣ್ಣ ಪುಟ್ಟ ಅಪಘಾತ ನಡೆದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಲೇ ಇಲ್ಲ. ಇದೀಗ ಹೆದ್ದಾರಿ ಮರಣ ಗುಂಡಿಗೆ […]

Continue Reading

ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಪ್ರಕರಣ: ವಿವಿದ ಠಾಣೆಗಳಲ್ಲಿ ಕಾಂಗ್ರೆಸ್ ಮುಖಂಡರಿಂದ ದೂರು ದಾಖಲು.

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ವೀಡಿಯೋವನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಿರುವ ಮೋಹಿತ್ ಎನ್.ಎಮ್. @ಮೋಹಿತ್ ನರಸಿಂಹಮೂರ್ತಿ ಎಂಬ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನಿರ್ದೇಶನ ಮೇರೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್, ಪಣಂಬೂರು, ಕಾವೂರು, ವಾಮಂಜೂರು, ಬಜಪೆ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ […]

Continue Reading

ಮೂಡಬಿದ್ರೆ: ಪರಿಚಿತನಂತೆ ನಂಬಿಸಿ ಮಕ್ಮಲ್ ಟೋಪಿ ಇಡುವ ಖತರ್ನಾಕ್ ಚಿನ್ನ ಕಳ್ಳನ ಬಂಧನ

ಅಂದಾಜು 2.50 ಲಕ್ಷ ಮೌಲ್ಯದ 36 ಗ್ರಾಂ ತೂಕದ ಚಿನ್ನದ ಸರ ಪತ್ತೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಗಸ್ಟ್ 5, 2024 ರಂದು ಸುಂದರಿ ಪೂಜಾರಿ (73 ವರ್ಷ) ರವರು ತನ್ನ ಮಗಳ ಮನೆಯಾದ ಅಶ್ವಥಪುರಕ್ಕೆ ಹೋಗಲು ನಾರಾವಿಯಿಂದ ಬಸ್ಸಿನಲ್ಲಿ ಹೊರಟು ಮದ್ಯಾಹ್ನ ಸುಮಾರು 2.30 ಗಂಟೆಗೆ ಮೂಡಬಿದ್ರೆಯ ಬಸ್ ಸ್ಯಾಂಡ್ ಗೆ ಬಂದು ಇಳಿದು ಹಣ್ಣು ತರಲೆಂದು ಅಂಗಡಿಗೆ ಹೋಗಿದ್ದು, ಅಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಸುಂದರಿ ಪೂಜಾರಿ ರವರ ಬಳಿಗೆ ಬಂದು ಅವರ […]

Continue Reading

ಜಾರ್ಖಂಡ್ ‌ನಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ, ಸಿಎಂ ಹೇಮಂತ್ ಸೋರೆನ್ ಆಪ್ತರ ಬಳಿ ಶೋಧ

ರಾಂಚಿ: ತೆರಿಗೆ ವಂಚನೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ಶನಿವಾರ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ಸಂಪರ್ಕ ಹೊಂದಿರುವ ವ್ಯಕ್ತಿಯ ಆವರಣ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮುಂಜಾನೆ ಆರಂಭವಾದ ಕಾರ್ಯಾಚರಣೆಯಲ್ಲಿ ರಾಜ್ಯದ ರಾಜಧಾನಿ ರಾಂಚಿ ಮತ್ತು ಜೆಮ್‌ಶೆಡ್‌ಪುರದ ಒಟ್ಟು ಒಂಬತ್ತು ಆವರಣಗಳ ಮೇಲೆ ದಾಳಿ ನಡೆಸಲಾಗಿದೆ. ಸಿಆರ್‌ಪಿಎಫ್‌ನ ಭದ್ರತಾ ತಂಡವೊಂದು ಐಟಿ ದಾಳಿಗೆ ನೆರವು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಆಪ್ತರಾಗಿರುವ ಸುನೀಲ್ ಶ್ರೀವಾಸ್ತವ್ ಅವರಿಗೆ […]

Continue Reading