ವಿಟ್ಲ: ಆರ್.ಐ ಕಛೇರಿಗೆ ನುಗ್ಗಿ ನಿಂದನೆ, ಹಲ್ಲೆಗೆ ಯತ್ನ, ಜೀವ ಬೆದರಿಕೆ ಹಾಕಿ ದಾಂಧಲೆ ಪ್ರಕರಣ; ಇಬ್ಬರ ವಿರುದ್ದ ಪ್ರಕರಣ ದಾಖಲು

ವಿಟ್ಲ ಕಂದಾಯ ನಿರೀಕ್ಷಕರ ಕಚೇರಿಗೆ ಒಳನುಗ್ಗಿ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿ ಟೇಬಲ್ ಗ್ಲಾಸ್ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಹರೀಶ್ ರೈ ಕಲ್ಮಲೆ ಮತ್ತು ಧನಂಜಯ ಪಾದೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಟ್ಲದಲ್ಲಿನ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಸಹಾಯಕ ಕೆ.ಗಿರೀಶ್‌ ಶೆಟ್ಟಿರವರ ಜೊತೆ ಕರ್ತವ್ಯದಲ್ಲಿದ್ದರು. ವೀರಕಂಭ ಗ್ರಾಮದ ನಿವಾಸಿಗಳಾದ ಹರೀಶ್‌ ರೈ ಕಲ್ಮಲೆ ಮತ್ತು ಧನಂಜಯ ಎಂಬವರು […]

Continue Reading

ಕೋವಿಡ್ ಹಗರಣ: ಸತ್ತಿದ್ದು 1,57,914 ಮಂದಿ, 37,206 ಮಂದಿ ಸಾವನ್ನಪ್ಪಿರುವ ಲೆಕ್ಕ.

1,20,708 ಮಂದಿ ಸಾವಿನ ಬಗ್ಗೆ ಶಂಕೆ ಇದ್ದು, ಇದು ಮಹಾಪರಾಧ ಅಂತ ಆಯೋಗ ಹೇಳಿದೆ. ಬಿ ಎಸ್‌ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರವಿದ್ದಾಗ ಕೋವಿಡ್ ವೇಳೆಯಲ್ಲಿ ಭಾರೀ ಹಗರಣ ನಡೆಸಿದೆ ಅಂತ ಆರೋಪವಿದ್ದು, ಈಗಾಗಲೇ ಅದರ ತನಿಖೆಗೆ ನ್ಯಾ.ಕುನ್ಹಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸಮಿತಿಯು ಮಧ್ಯಂತರ ವರದಿಯನ್ನು ನೀಡಿದೆ. ಸರಿ-ಸುಮಾರು 1,57,914 ಮಂದಿ ಕೋವಿಡ್ ಅವಧಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಸಾಂಖ್ಯಿಕ ನಿರ್ದೇಶನಾಲಯದ ಮಾಹಿತಿ ನೀಡಿದೆ. ಆದರೆ ಅದನ್ನು ಬಚ್ಚಿಟ್ಟು 37,206 ಮಂದಿ ಸಾವನ್ನಪ್ಪಿರುವ ಲೆಕ್ಕ ನೀಡಿರುವ […]

Continue Reading

ಶಾಲಾ ಮಕ್ಕಳ ಸಾಗಿಸುತ್ತಿದ್ದ ಟವೆರಾ ಪಲ್ಟಿ. ವಿಟ್ಲ ಸಮೀಪದ ಪೆರುವಾಯಿ ಸಮೀಪ ಅಪಘಾತ. ಹಲವರಿಗೆ ಗಾಯ.

ಪೆರುವಾಯಿ ಕಡೆಯಿಂದ ವಿಟ್ಲದ ಶಾಲೆಗಳಿಗೆ ಮಕ್ಕಳ ಸಾಗಿಸುತ್ತಿದ್ದ ಟವೆರಾ ಮುಚ್ಚಿರಪದವು ಎಂಬಲ್ಲಿ ಪಲ್ಟಿ ಹೊಡೆದಿದೆ. ಹಲವು ಮಕ್ಕಳು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಟವೆರಾ ಅಪ್ಪಚ್ಚಿಯಾಗಿದ್ದರೂ ಪುಟಾಣಿಗಳು ಬದುಕಿರುವುದೇ ಪವಾಡವಾಗಿದೆ.ವಿಟ್ಲ ಪರಿಸರದ ಏಳು ಶಾಲೆಗಳಿಗೆ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಮಕ್ಕಳ ಸಾಗಿಸುತ್ತಿದ್ದಾರೆ. ಕೇಳೋರೇ ಇಲ್ಲ.. ಆಟೋಗಳಲ್ಲಿ ಹದಿನೈದು, ಮಾರುತಿ ವ್ಯಾನಲ್ಲಿ ಇಪ್ಪತ್ತು, ಟೆಂಪೋ, ಮಿನಿ ಬಸ್ಸುಗಳಲ್ಲಿ ನಲುವತ್ತಕ್ಕೂ ಹೆಚ್ಚು ಮಕ್ಕಳನ್ನು ತುಂಬಿಸಿ ಬೇಕಾಬಿಟ್ಟಿಯಾಗಿ ಚಾಲಕರು ಸಾಗಾಟ ಮಾಡುತ್ತಿದ್ದರೂ ಕೇಳೋರೇ ಇಲ್ಲವಾಗಿದೆ. ಡಿ.ಎಲ್ಲೂ ಇಲ್ಲ..ಇನ್ಸೂರೆನ್ಸ್ ಇಲ್ಲಾ.. ಸಾರಿಗೆ […]

Continue Reading

ಪ್ರಕರಣಗಳ ಮೌಖಿಕ ಉಲ್ಲೇಖವನ್ನು ನಿಷೇಧಿಸುವ CJI ನಿರ್ದೇಶನದ ಮೇಲೆ ವಕೀಲರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು

ಹೊಸದಿಲ್ಲಿ: ತುರ್ತು ಪಟ್ಟಿಗಾಗಿ ಪ್ರಕರಣಗಳನ್ನು ಮೌಖಿಕವಾಗಿ ಉಲ್ಲೇಖಿಸುವುದನ್ನು ನಿಷೇಧಿಸುವ ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಿರ್ದೇಶನವು ಕಾನೂನು ವಲಯದಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ ಮತ್ತು ಒಂದು ವಿಭಾಗವು “ಶ್ಲಾಘನೀಯ” ಎಂದು ಬಣ್ಣಿಸಿದೆ ಆದರೆ ಇತರರು “ಅತ್ಯಂತ ತುರ್ತು ಪ್ರಕರಣಗಳನ್ನು ಎದುರಿಸಲು ಪ್ರಸ್ತುತ ಅಭ್ಯಾಸವನ್ನು ಮುಂದುವರಿಸಲು ಬಯಸುತ್ತಾರೆ” “. ಮಂಗಳವಾರ ಪ್ರಕಟಿಸಲಾದ ಹೊಸ ನೀತಿಯು ದೀರ್ಘಕಾಲದ ಅಭ್ಯಾಸದಿಂದ ಬದಲಾವಣೆಯನ್ನು ಸೂಚಿಸುತ್ತದೆ, ಅಲ್ಲಿ ವಕೀಲರು ಪ್ರತಿ ದಿನದ ವಿಚಾರಣೆಯ ಪ್ರಾರಂಭದಲ್ಲಿ ಸಿಜೆಐ ನೇತೃತ್ವದ ಪೀಠದ ಮುಂದೆ […]

Continue Reading

ಕರ್ನಾಟಕ ಸೇರಿ ದೇಶಾದ್ಯಂತ ಏಕಕಾಲಕ್ಕೆ ಎನ್ ಐ ಎ ದಾಳಿ ನಡೆಸಿ, ಶೋದಕಾರ್ಯಾಚರಣೆ

ಕರ್ನಾಟಕ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ಸೋಮವಾರದಂದು ಏಕಕಾಲಕ್ಕೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಮಾಡಿದ್ದಾರೆ. ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದಾರೆ. ಜೊತೆಗೆ ಅಲ್ ಖೈದಾ ಉಗ್ರ ಸಂಘಟನೆ ಕುರಿತು ಪ್ರಚಾರ, ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳ ವಿರುದ್ದ ಜಮ್ಮು-ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಆಸ್ಸಾಂನ 9 ಕಡೆ ಎನ್‌ಐಎ ದಾಳಿ ನಡೆಸಿದೆ. ಎನ್‌ಐಎ ಅಧಿಕಾರಿಗಳು ಕಾರ್ಯಾಚಾರಣೆ ವೇಳೆ ಬ್ಯಾಂಕಿಂಗ್ ವಹಿವಾಟುಗಳು, ಮೊಬೈಲ್ […]

Continue Reading

ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಮರವೇರಿದ ಕಾರು. ವಿಟ್ಲ ಸಮೀಪದ ಕಂಬಳೆಬೆಟ್ಟು ವಿನಲ್ಲಿ ಘಟನೆ

ವಿಟ್ಲ-ಪುತ್ತೂರು ರಸ್ತೆಯ ಕಂಬಳೆಬೆಟ್ಟುನಲ್ಲಿ ಒಳರಸ್ತೆಯಿಂದ ಅಚಾನಕ್ ಆಗಿ ಬಂದ ಬೈಕ್ ಸವಾರನ ಪ್ರಾಣ ಉಳಿಸಲು ಕಾರು ಚಾಲಕ ಮುಂದಾಗಿದ್ದ. ಆ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಹತ್ತಿ ಪಲ್ಟಿಹೊಡೆದು ಸಿನಿಮೀಯ ಸ್ಟಂಟ್ ರೀತಿಯಲ್ಲಿ ಮರವೇರಲು ಮುಂದಾಗಿದೆ. ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ್ ಗಾಯಗೊಂಡಿದ್ದಾರೆ. ಕಾರು ಜಖಂಗೊಂಡಿದ್ದರೂ ಚಾಲಕ ಬೊಳಂತಿಮುಗೇರು ನಿವಾಸಿ ಸನಾನ್ ಅಪಾಯದಿಂದ ಪಾರಾಗಿದ್ದಾರೆ.

Continue Reading

ರೇವ್ ಪಾರ್ಟಿ ಪ್ರಕರಣ: ಸಿಸಿಬಿ ಪೊಲೀಸರ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಆದೇಶ

ಹೆಬ್ಬಗೋಡಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಆದೇಶಿಸಿದೆ.ಪ್ರಕರಣದ ಆರೋಪಿ ವಿಜಯ್ ಡೆನ್ನಿಸ್ ಎಂಬವರು ಮಾನವ ಹಕ್ಕುಗಳು ಆಯೋಗಕ್ಕೆ ದೂರು ನೀಡಿದ್ದರು.ದೂರು ಆಧರಿಸಿ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಅವರಿಗೆ ಆಯೋಗವು ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿಚಾರಣೆ ನಡೆಸಿ ನವಂಬರ್ 21ರ ಒಳಗೆ ವರದಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿದೆ. ಹೆಬ್ಬಗೋಡಿ ಠಾಣೆಯಲ್ಲಿ ‌ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ […]

Continue Reading

ಬಿಜೆಪಿ ಮುಖಂಡ ಹಾಗೂ ಬೆಂಬಲಿಗರಿಂದ ವಿಟ್ಲ ಆರ್.ಐ.ಕಛೇರಿಯಲ್ಲಿ ದಾಂಧಲೆ. ಮೇಜು-ಗಾಜು ಧ್ವಂಸ, ಅಧಿಕಾರಿ ಮೇಲೆ ಹಲ್ಲೆಗೆ ಯತ್ನ..

ಬಿಜೆಪಿ ಗೂಂಡಾ ಸಂಸ್ಕೃತಿಗೆ ವಿಟ್ಲ ಬ್ಲಾಕ್ ಕಾಂಗ್ರೆಸ್ ಖಂಡನೆ. ವಿಟ್ಲ: ಮನೆ ಅಡಿಸ್ಥಳದ ಹಕ್ಕು ಪತ್ರ 94ಸಿ ವಿಚಾರದಲ್ಲಿ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ಬಿಜೆಪಿ ಮುಖಂಡನ ಜೊತೆಯಲ್ಲಿ ಬಂದ ಬೆಂಬಲಿಗರಿಂದ ದಾಂಧಲೆ ನಡೆದಿದ್ದು, ಮೇಜಿನ ಗಾಜು ಪುಡಿಪುಡಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತು ಏರ್ಪಡಿಸಿದ್ದಾರೆ. ವೀರಕಂಬ ಗ್ರಾಮದ ನಿವಾಸಿ ಶೇಖ್ ಶಿಬಾನ್ ಎಂಬವರು ಇತ್ತೀಚೆಗೆ ಸರ್ಕಾರಿ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು. ಅಡಿಸ್ಥಳವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕಾಗಿ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. […]

Continue Reading

ಮಾಜಿ ಕ್ರಿಕೆಟಿಗನ ಪುತ್ರ ಆರ್ಯನ್ ಬಂಗಾರ್ ಲಿಂಗ ಬದಲಾವಣೆ; ಅನಾಯಾ ಎಂದು ನಾಮಕರಣ

ಮಾಜಿ ಕ್ರಿಕೆಟಿಗೆ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಬಂಗಾರ್ ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿದ್ದು, ತಮ್ಮ ಹೆಸರನ್ನು ಅನಾಯಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. 23 ವರ್ಷ ಪ್ರಾಯದ ಆರ್ಯನ್ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುತ್ತಾರೆ. ಭಾರತದ ಮಾಜಿ ನಾಯಕರೊಂದಿಗೆ ಹಾಗೂ ಅವರ ತಂದೆಯೊಂದಿಗೆ ಕೆಲವು ಹಳೆಯ ಚಿತ್ರಗಳನ್ನು ಪೋಸ್ಟ್ ಮಾಡಿ, ಲಿಂಗ ಬದಲಾವಣೆಯ ಥೆರಪಿಯೊಂದಿಗೆ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ 10 ತಿಂಗಳ ನಂತರ, ಕ್ರಿಕೆಟಿಗ ತನ್ನನ್ನು ಅನಾಯಾ ಎಂದು ಗುರುತಿಸಿಕೊಂಡಿದ್ದಾಳೆ. ತನ್ನ ತಂದೆಯಂತೆಯೇ ಕ್ರಿಕೆಟಿಗ, […]

Continue Reading

ಮೂಡಬಿದ್ರೆ ಹಂಡೇಲು ಬಳಿ ‘ಮಾಸ್ಟರ್’ ಬಸ್ ಶರವೇಗದ ಚಾಲನೆ ; ಇಬ್ಬರಿಗೆ ಗಂಭೀರ ಗಾಯ; ಸಿಡಿದೆದ್ದ ವಿಧ್ಯಾರ್ಥಿಗಳಿಂದ ಬಸ್ಸಿನ ಗಾಜು ಪುಡಿಪುಡಿ

ಮೂಡಬಿದ್ರೆ ಹಂಡೇಲು ಬಳಿ ಮಾಸ್ಟರ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಭೀಕರ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಹರಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ತೋಡಾರ್ ಮೈಟ್ ಕಾಲೇಜು ಬಳಿ ಕಾಲೇಜಿನ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಈ ಘಟನೆ ನಡೆದಿದ್ದು, ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರು -ಮೂಡಬಿದ್ರೆ […]

Continue Reading