ಕೃತಕ ಗರ್ಭಧಾರಣೆಗೆ ತನ್ನದೇ ವೀರ್ಯ ನೀಡಿ ಸಿಕ್ಕಿ ಬಿದ್ದ ವೈದ್ಯ.!!

ಇತ್ತೀಚೆಗೆ ಕೃತಕ ಗರ್ಭಧಾರಣೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಈ ಒಂದು ಜಾಲದಲ್ಲಿ ವೈದ್ಯನೋರ್ವ ತನ್ನದೇ ವೀರ್ಯವನ್ನು ಕೊಟ್ಟಿರುವ ಘಟನೆಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಮೂವತ್ತು ವರ್ಷದ ಹಿಂದೆ ಕೃತಕ ಗರ್ಭಧಾರಣೆ ಪ್ರಕ್ರಿಯೆ ವೇಳೆ ವೈದ್ಯರೊಬ್ಬರು ನನಗೆ ಮೋಸ ಮಾಡಿದ್ದಾರೆ ಎಂದು ಅಮೆರಿಕ ಮಹಿಳೆ ದೂರು ನೀಡಿದ್ದಾರೆ. ಅನಾಮಿಕ ವ್ಯಕ್ತಿಯ ವೀರ್ಯವನ್ನು ಸಂತಾನೋತ್ಪತ್ತಿಗೆ ಬಳಸುವ ಬದಲು ತನ್ನ ವೀರ್ಯ ನೀಡಿದ್ದಾರೆ ಎನ್ನುವುದು 67ವರ್ಷದ ಮಹಿಳೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. 34 ವರ್ಷದ ಹಿಂದೆ ಶರೋನ್‌ ಹೇಯ್ಸ್‌ ಎಂಬ ಮಹಿಳೆ […]

Continue Reading

ಇಸ್ರೇಲ್‌ ಪರ ಕತಾರ್‌ನಲ್ಲಿ ಬೇಹುಗಾರಿಕೆ; ಭಾರತದ 8 ಮಂದಿ ಹಿರಿಯ ನೌಕಾಪಡೆಯ ಅಧಿಕಾರಿಗಳಿಗೆ ಕತಾರ್‌ ಗಲ್ಲು ಶಿಕ್ಷೆ ವಿಧಿಸಿದೆ.

ಇಸ್ರೇಲ್‌ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ಮಾಡಿದ್ದ ಆರೋಪ ಹೊತ್ತಿದ್ದ ಭಾರತದ 8 ಮಂದಿ ಹಿರಿಯ ನೌಕಾಪಡೆಯ ಅಧಿಕಾರಿಗಳಿಗೆ ಕತಾರ್‌ ಗಲ್ಲು ಶಿಕ್ಷೆ ವಿಧಿಸಿದೆ. ಇವರು ಬೇಹುಗಾರಿಕೆ ನಡೆಸಿದ ಬಗ್ಗೆ ತಮ್ಮಲ್ಲಿ ಎಲೆಕ್ಟ್ರಾನಿಕ್‌ ಸಾಕ್ಷ್ಯವನ್ನು ಹೊಂದಿದ್ಧೇವೆ ಎಂದು ಕತಾರ್‌ ತಿಳಿಸಿದೆ. ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಕಳೆದ ಎಂಟು ತಿಂಗಳಿನಿಂದ ಕತಾರ್‌ನಲ್ಲಿ ಏಕಾಂತ ಸೆರೆಮನೆಯಲ್ಲಿದ್ದ ಎಂಟು ಭಾರತೀಯರಿಗೆ ಗಲ್ಲು ಶಿಕ್ಷೆ ನೀಡಲಾಗಿದ್ದು, ಇವರು ಬೇಹುಗಾರಿಕಯ ಕಠಿಣ ಆರೋಪಗಳನ್ನು ಎದುರಿಸಿದ್ದರು ಎಂದು ಕತಾರ್‌ ತಿಳಿಸಿದೆ. ಕ್ಯಾಪ್ಟನ್ […]

Continue Reading

ಇಸ್ರೇಲ್‌ ರಣರಂಗ; ಬೆಂಜಮೀನ್ ಪುತ್ರ ಅಮೇರಿಕಾ ಬೀಚ್‌ನಲ್ಲಿ ಮಜಾ!

ಇಸ್ರೇಲ್‌-ಹಮಾಸ್‌ ನಡುವೆ ಭೀಕರ ಯುದ್ಧ ಮುಂದುವರಿದಿರುವ ನಡುವೆಯೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಟೀಕೆಗೆ ಗುರಿಯಾಗಿದ್ದಾರೆ. ಇಸ್ರೇಲ್‌ನಲ್ಲಿ ಯುದ್ಧದ ಸ್ಥಿತಿ ಇದ್ದು, ಇಡೀ ದೇಶವು ವಿರೋಧಿಗಳ ವಿರುದ್ಧ ಹೋರಾಡುತ್ತಿದೆ. ಆದರೆ, ಪ್ರಧಾನಿ ನೆತನ್ಯಾಹು ಅವರ ಪುತ್ರ ಯಾಯೀರ್‌ ಅಮೇರಿಕಾದಲ್ಲಿ ಉಳಿದುಕೊಂಡಿದ್ದಾರೆ ಎಂದು ಹಲವರಿಂದ ಟೀಕೆಗೆ ಗುರಿಯಾಗಿದ್ದಾರೆ. ಅಕ್ಟೋಬರ್ 7ರ ದಾಳಿಯ ನಂತರ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ ತನ್ನ ದೇಶದ ಸುಮಾರು 4 ಲಕ್ಷ ಯುವಕರು ಸೇರಿಕೊಂಡಿರುವ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ […]

Continue Reading

ಮಾನವೀಯತೆ ನೆಲೆಯಲ್ಲಿ ಇಬ್ಬರು ವೃದ್ಧ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಇಡೀ ವಿಶ್ವದ ಬಹುತೇಕ ರಾಷ್ಟ್ರಗಳು ಹಮಾಸ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಕರೆಯುತ್ತಿದೆ. ಅದೇ ಹಮಾಸ್ ಇಬ್ಬರು ವಯಸ್ಸಾದ, ಆರೋಗ್ಯ ಸಂಬಂಧಿತ ಕಾಯಿಲೆಯಿಂದ ನರಳುತ್ತಿರುವ ಇಬ್ಬರು ವೃದ್ಧ ಇಸ್ರೇಲಿಗರನ್ನು ಒತ್ತೆಯಾಳುಗಳಿಂದ ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಅದೇ ರೀತಿ ಇಸ್ರೇಲ್ ಸೈನಿಕರನ್ನು ಬಹುತೇಕ ವಿಶ್ವದ ರಾಷ್ಟ್ರ ಕೊಂಡಾಡುತ್ತಿದೆ. ಅದೇ ಇಸ್ರೇಲ್ ಮಹಿಳೆಯರು, ಸಣ್ಣ ಸಣ್ಣ ಮಕ್ಕಳನ್ನು ಗುರಿ ಮಾಡಿ ಕೊಂದು ಹಾಕುತ್ತಿದೆ. ಆಸ್ಪತ್ರೆಗೆ ಬಾಂಬ್ ಹಾಕಿ ಯುದ್ಧ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಈಗ ನೀವೇ ಹೇಳಿ […]

Continue Reading

ಪುರುಷರ ಗರ್ಭನಿರೋಧಕ ಚುಚ್ಚುಮದ್ದು ಬಿಡುಗಡೆಗೆ ಸಿದ್ದತೆ.!

ವಿಶ್ವದ ಮೊದಲ ಪುರುಷ ಗರ್ಭನಿರೋಧಕ ಚುಚ್ಚುಮದ್ದು ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಟಿಸಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಪುರುಷರಿಗಾಗಿ ಈ ಗರ್ಭನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಲಾಗಿದೆ. ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲ ಎಂದು ಅದು ಬಹಿರಂಗಪಡಿಸಿದೆ. ಹಂತ 3 ಕ್ಲಿನಿಕಲ್ ಪ್ರಯೋಗಗಳಲ್ಲಿ, 25ರಿಂದ 40 ವರ್ಷ ವಯಸ್ಸಿನ 303 ಜನರ ಮೇಲೆ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಅಧ್ಯಯನದ ವಿವರಗಳನ್ನು ಇತ್ತೀಚೆಗೆ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಆಂಡ್ರೊಲಜಿಯಲ್ಲಿ ಪ್ರಕಟಿಸಲಾಗಿದೆ ಎಂದು […]

Continue Reading

ರೊನಾಲ್ಡೋ ಗೆ ಛಡಿಯೇಟು ಶಿಕ್ಷೆ ಮಾಧ್ಯಮಗಳ ಸುಳ್ಳು ಸುದ್ದಿ: ಇರಾನ್ ಸ್ಪಷ್ಟನೆ

ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಗೆ ಇರಾನ್ 99 ಛಡಿಯೇಟು ಶಿಕ್ಷೆ ನೀಡುವ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸ್ಪೇನ್ ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಈ ಸುದ್ದಿ ಆಧಾರರಹಿಣವಾಗಿದ್ದು, ಅದರಲ್ಲಿ ಸತ್ಯಾಂಶ ಇಲ್ಲವೆಂದು ಇರಾನ್ ಖಚಿತಪಡಿಸಿದೆ. ಪೋರ್ಚುಗಲ್ ಮೂಲದ ಪುಟ್ಬಾಲ್ ಆಟಗಾರ ಕಳೆದ ತಿಂಗಳು ಟೆಹರಾನ್ ಗೆ ಭೇಟಿ ನೀಡಿದ್ದ ವೇಳೆ ವಿಕಲಚೇತನ ಕಲಾವಿದೆ ಫಾತಿಮಾ ಹಮಾಮಿ ಅವರನ್ನು ಸಂಧಿಸಿದ್ದರು. ಈ ಸಂದರ್ಭದಲ್ಲಿ ರೊನಾಲ್ಡೋ ಆಕೆಯನ್ನು ಆಲಿಂಗಿಸಿ ಕೆನ್ನೆಗೆ ಮುತ್ತಿಕ್ಕಿದ್ದರು. […]

Continue Reading

ನವಜಾತ ಶಿಶು, ಮಕ್ಕಳು, ವೃದ್ಧರು ಎನ್ನದೆ ಇಸ್ರೇಲ್‌ ನಿಂದ ಭೀಕರ ಮಾರಣಹೋಮ: ವಿಶ್ವಸಂಸ್ಥೆ ಕಳವಳ

ಪ್ಯಾಲೆಸ್ತೀನ್ ಹಮಾಸ್ ಇಸ್ರೇಲ್‌ ನೆಲಕ್ಕೆ ಲಗ್ಗೆ ಇಟ್ಟು ಇಸ್ರೇಲ್ ದೇಶದ ನೂರಾರು ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ನಿರಂತರ ಬಾಂಬ್‌ಗಳ ಮಳೆ ಸುರಿಸುತ್ತಿದೆ. ಗಾಜಾಪಟ್ಟಿಗೆ ಸರಬರಾಜು ಆಗುತ್ತಿದ್ದ ಆಹಾರ, ನೀರು, ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. ಈ ಹಿನ್ನೆಲೆಯಲ್ಲಿ ಗಾಜಾಪಟ್ಟಿಯ ಪರಿಸ್ಥಿತಿ ಭೀಕರವಾಗಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ವಿದ್ಯುತ್, ಆಹಾರ ಹಾಗೂ ನೀರಿನ ಕೊರತೆಯ ಜೊತೆಯಲ್ಲೇ ಇಸ್ರೇಲ್ […]

Continue Reading

ಕುಣಿಕೆ ಬಿಗಿಯಲು ಇದ್ದಿದ್ದು ಬರೀ ಕೆಲವೇ ಸೆಕೆಂಡುಗಳು.. ಮರಣದಂಡನೆಯಿಂದ ಪಾರಾಗಿ ಬಂದ ಯುವಕ.!

ತಬೂಕಿನಲ್ಲಿ ನಡೆಯಿತು ಅಪರೂಪದ ಕ್ಷಮಾದಾನ ಅದು ಸೌದಿ ಅರೇಬಿಯಾ. ಭಾರತದಂತಲ್ಲ ಅಲ್ಲಿನ ಕಾನೂನು. ತಪ್ಪಿತಸ್ಥರಿಗೆ ಅಲ್ಲಿ ಗಲ್ಲು ಖಾಯಂ. ಮರಣದಂಡನೆಗೆ ಹೆದರಿ ಅಲ್ಲಿ ಅಪರಾಧಗಳು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕಮ್ಮಿ ಎಂದೇ ಹೇಳಬೇಕು. ಒಮ್ಮೊಮ್ಮೆ ಭಾರತದಲ್ಲಿ ಅಪರಾಧಗಳು ವಿಜೃಂಭಿಸುತ್ತಿರುವಾಗ ಸೌದಿಯಂತಹ ಕಟ್ಟುನಿಟ್ಟಿನ ಕಾನೂನುಗಳು ಇಲ್ಲಿ ಜಾರಿಯಾಗಬೇಕು ಎಂದು ಹೇಳುವವರಿದ್ದಾರೆ. ಆ ಮಟ್ಟಿಗೆ ಸೌದಿ ಕಾನೂನುಗಳು ಪವರ್ ಫುಲ್. ಒಬ್ಬನಿಗೆ ಆಯುಷ್ಯವಿದ್ದರೆ ಹೇಗೂ ಬದುಕಿ ಬರಬಹುದು ಅನ್ನುವುದಕ್ಕೆ ಸೌದಿ ಅರೇಬಿಯಾದ ತಬೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸೌದಿ […]

Continue Reading

ವೃತ್ತಿಗಾಗಿ ವಿದೇಶದಲ್ಲಿ ನೆಲೆಸಲಿದ್ದಾರೆಂದು ತಾಯಿಗೆ ಮಗುವಿನ ಸುರ್ಪಧಿ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಉತ್ತಮ ವೃತ್ತಿಜೀವನದ ನಿರೀಕ್ಷೆಗಳಿಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆಂದ ಮಾತ್ರಕ್ಕೆ ತಾಯಿಗೆ ಮಗುವಿನ ಸುಪರ್ದಿಯನ್ನು ನಿರಾಕರಿಸಲಾಗದು ಎಂಬುದಾಗಿ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮಗುವಿನ ಯೋಗಕ್ಷೇಮವು ಸುರಕ್ಷಿತವಾಗಿರುತ್ತದೆ ಎಂದಾದಲ್ಲಿ ಅಪೀಲುದಾರೆ ತಾಯಿಯು ಉತ್ತಮ ಭವಿಷ್ಯಕ್ಕಾಗಿ ಸ್ಥಳಾಂತರ ಹೊಂದುವುದನ್ನು ಮಗುವಿನ ಸುಪರ್ದಿಯನ್ನು ಕೋರುವುದಕ್ಕೆ ವಿರುದ್ಧವಾಗಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. ಮಗುವಿನ ಪೋಷಕರು ವಿಚ್ಛೇದನ […]

Continue Reading

ಅಕ್ರಮವಾಗಿ 328 ಕಿಡ್ನಿ ಕಸಿ: ಡಾಕ್ಟರ್ ಹಾಗೂ ಮೋಟಾರು ಮೆಕ್ಯಾನಿಕ್ ಬಂಧನ!

ಅಕ್ರಮವಾಗಿ ಸರಿ-ಸುಮಾರು 328 ಮೂತ್ರಪಿಂಡ ಕಸಿ ಮಾಡಿದ್ದ ವೈದ್ಯ ಮತ್ತು ಮೋಟಾರ್ ಮೆಕ್ಯಾನಿಕ್ ನಡೆಸುತ್ತಿದ್ದ ಅಂಗಾಂಗ ಕಳ್ಳಸಾಗಣೆ ಜಾಲವನ್ನು ಪಾಕಿಸ್ತಾನ ಪೊಲೀಸರು ಭೇದಿಸಿದ್ದಾರೆ.ವೈದ್ಯ ಫವಾದ್ ಮುಖ್ತಾರ್ ಬಂಧಿತ ಆರೋಪಿ. ದುಷ್ಕೃತ್ಯಕ್ಕಾಗಿ ಈಗಾಗಲೇ ಐದು ಬಾರಿ ಈತನನ್ನು ಬಂಧಿಸಲಾಗಿತ್ತು. ಆಸ್ಪತ್ರೆಗಳಿಂದ ಆಮಿಷವೊಡ್ಡಿ ದುರ್ಬಲ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಹಾಯಕ ಮತ್ತು ಅರಿವಳಿಕೆ ತಜ್ಞನಾಗಿ ಮೆಕ್ಯಾನಿಕ್ ನನ್ನು ವೈದ್ಯ ಬಳಸಿಕೊಳ್ಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.  ಖಾಸಗಿ ಮನೆಗಳಲ್ಲಿ ಕಿಡ್ನಿ ಕಸಿ ನಡೆಸಲಾಗುತಿತ್ತು. ಕೆಲವೊಮ್ಮೆ ರೋಗಿಗೆ ತಿಳಿಯದೆ, ಪ್ರತಿ ಮೂತ್ರಪಿಂಡಗಳನ್ನು 35,000 […]

Continue Reading