ದೇರಳಕಟ್ಟೆ ಆಸ್ಪತ್ರೆಯ ಜಂಕ್ಷನ್ ನಲ್ಲಿ ಕೊಳಚೆ ನೀರು ಶೇಖರಣೆ; ವಿಪರೀತ ದುರ್ವಾಸನೆ ಕಠಿಣ ಕ್ರಮ ಕೈಗೊಳ್ಳಲು ಸಿಪಿಐ(ಎಂ) ಒತ್ತಾಯ

ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಜಂಕ್ಷನ್ ನಲ್ಲಿ ಕಳೆದ ಹಲವಾರು ತಿಂಗಳಿನಿಂದ ಕೊಳಚೆ ನೀರು ಶೇಖರಣೆಗೊಂಡಿದ್ದು ಇದರಿಂದ ವಿಪರೀತ ದುರ್ವಾಸನೆ ಪರಿಸರದಾದ್ಯಂತ ಬೀರುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ) ಉಳ್ಳಾಲ ವಲಯ ಸಮಿತಿಯು ಇಂದು(26-05-2026) ಉಳ್ಳಾಲ ತಾಲೂಕು ತಹಶೀಲ್ದಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಬೆಳ್ಮ ಗ್ರಾಮ ಪಂಚಾಯತ್ ನ‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಿಗೆ ಮನವಿಯನ್ನು […]

Continue Reading

ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ರೌಡಿಶೀಟರ್ ಟೊಪ್ಪಿ ನೌಫಾಲ್ ಸಹೋದರನ ಬಂಧನ.

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ “ಟ್ಯಾಬ್ಲೆಟ್ ಆರೀಫ್” ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿ ಮೊಹಮ್ಮದ್ ಇಬ್ರಾಹಿಂ ಸಿನಾನ್ @ ಚಿನ್ನು, ಎಂಬಾತನನ್ನು ದಿನಾಂಕ 25-05-2026 ರಂದು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ. ತೊಕ್ಕೊಟ್ಟು ಪ್ಲೈಓವರ್ ಮೇಲಿಂದ ಬೈಕ್ನಲ್ಲಿ ಸಂಚರಿಸುತ್ತಿದ್ದ ಆರೀಫ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೆಡವಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು […]

Continue Reading

ಆತ್ಮಹತ್ಯೆ ಗೈಯ್ಯಲು ಯತ್ನಿಸಿದ ಕೃಷಿಕನ ಜೀವ ರಕ್ಷಿಸಿದ ಪಣಂಬೂರು ಪೊಲೀಸರು

ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್ ನೇತೃತ್ವದ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ಪೊಲೀಸರೆಂದರೆ ಸಾಕು ನಾಗರೀಕರು ಭಯ ಬೀಳುವ ಪ್ರಸಂಗವೇ ಹೆಚ್ಚು. ಅಪರಾಧಿಗಳ ಹೆಡೆಮುರಿ ಕಟ್ಟಿ ಜೈಲು ಕಂಬಿಗೆ ದೂಡುವುದೇ ಪೊಲೀಸರ ಕೆಲಸ ಅಂದುಕೊಂಡವರೆ ಹೆಚ್ಚು. ಆದರೆ ಪಣಂಬೂರು ಪೊಲೀಸರು ಇದಕ್ಕಿಂತ ಭಿನ್ನ.‌ ಮಾನವೀಯ ಕಾಳಜಿಗೆ ಪಣಂಬೂರು ಪೊಲೀಸರು ಎತ್ತಿದ ಕೈ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆ ಪಣಂಬೂರು ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್ ನೇತೃತ್ವದ ಪೊಲೀಸ್ ತಂಡ […]

Continue Reading

ಪುತ್ತೂರು: ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು

ಬದಿಯಡ್ಕದ ಪೃಥ್ವಿರಾಜ್, ಜಾರ್ಖಂಡ್ ಮೂಲದ ರೇಮುಂಡಾ ನಿಗೆ ಜಾಮೀನು ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಬದಿಯಡ್ಕದ ನಿವಾಸಿ ಪ್ರಥ್ವಿರಾಜ್ ಹಾಗೂ ಮತ್ತೊಂದು ಪೋಕ್ಸೋ ಪ್ರಕರಣದ ಆರೋಪಿ ಜಾರ್ಖಂಡ್ ಮೂಲದ ರೇಮುಂಡಾ ಎಂಬಾತನಿಗೂ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸರಿತಾ. ಡಿ ರವರು ಎರಡೂ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ. ಆರೋಪಿ ಪ್ರಥ್ವಿರಾಜ್ ಸಂತ್ರಸ್ಥೆಯೊಂದಿಗೆ ಪ್ರೀತಿಯ ನಾಟಕವಾಡಿ, ಆಕೆಯನ್ನು ಪುಸಲಾಯಿಸಿ ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದ. ಸಂತ್ರಸ್ಥೆಯ ತಾಯಿಯ […]

Continue Reading

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ:

ಉಪ್ಪಿನಂಗಡಿ ಠಾಣಾ ಅ.ಕ್ರ.ಸಂ: 158/2015ರ ಪ್ರಕರಣದಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸರಿ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ @ ಬೋಜ ಅಕ್ರ ಎಂಬಾತನನ್ನು ದಿನಾಂಕ: 22-05-2026 ರಂದು, ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸೈ ಕೌಶೀಕ್ ಬಿ.ಸಿ, ನೇತ್ರತ್ವದ ತಂಡ ಆರೋಪಿಯನ್ನು ಮಂಗಳೂರಿನ ಪಣಂಬೂರು ಎಂಬಲ್ಲಿ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿ ಅಕ್ರಂ @ ಬೋಜ ಅಕ್ರ ನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೊಪಿಯ ವಿರುದ್ಧ ಪಣಂಬೂರು […]

Continue Reading

ನೆಲ್ಲಿಕಾರು ಪಂಚಾಯತ್ ಗೆ ಹಿಡಿಶಾಪ; ಕಂದಾಯ ಇಲಾಖೆಯ ಬೇಜವಾಬ್ದಾರಿತನ

ಅನುದಾನ ಮಂಜೂರು ಆದರೂ ರಸ್ತೆಗಿಲ್ಲ ಕಾಯಕಲ್ಪ; ಮೂಡಬಿದ್ರೆ ಮಾಂಟ್ರಾಡಿ ನಾಗರಿಕರ ನರಕಯಾತನೆ.! ಇನ್ನೇನೂ ಕೆಲವೇ ದಿನಗಳಲ್ಲಿ ಮುಂಗಾರು ಮಳೆ ತೀವ್ರತೆ ಪಡೆದುಕೊಳ್ಳಲಿದೆ. ಸುಸ್ಥಿತಿಯಲ್ಲಿರುವ ರಸ್ತೆಯಲ್ಲೇ ವಾಹನ ಓಡಿಸುವುದು ಕಷ್ಟ. ಅಂತಹದರಲ್ಲಿ ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ವಾಹನ ಚಲಾಯಿಸುವುದು ಹೇಗೆ ಸಾಧ್ಯ.? ಇಂತಹದ್ದೊಂದು ನರಕಯಾತನೆ ಮಾಂಟ್ರಾಡಿ ಕ್ರಾಸ್ ರಸ್ತೆಯಲ್ಲಿ ಕಂಡುಬಂದಿದೆ. ಮೂಡಬಿದ್ರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕ್ರಾಸ್ (ಕೈಕಂಬ) ರಸ್ತೆ ಅಷ್ಟೊಂದು ಹದಗೆಟ್ಟಿದೆ. ವಾಹನ ಸಂಚಾರ ಬಿಡಿ ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ಅಯೋಗ್ಯವಾದ ಸ್ಥಿತಿಯಲ್ಲಿದೆ. ಒಂದು […]

Continue Reading

ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ; ಮೇ 26 ರಂದು ಮಂಗಳೂರಿನಲ್ಲಿ ದುಂಡು ಮೇಜಿನ ಸಭೆ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ, ಆರೋಗ್ಯ ಕ್ಷೇತ್ರದ ಖಾಸಗೀಕರಣದ ನೀತಿಯ ಕುರಿತು ಚರ್ಚಿಸಲು, ಮುಂದಿನ ಹೋರಾಟವನ್ನು ತೀರ್ಮಾನಿಸಲು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಮೇ 26 ರಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರು ನಗರದ ಸಹೋದಯ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ. ಸಭೆಯಲ್ಲಿ ಎಡಪಕ್ಷಗಳು, ರೈತ, ದಲಿತ, ಕಾರ್ಮಿಕ, ಯುವಜನ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಬರಹಗಾರರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಪ್ರಕಟನೆ ತಿಳಿಸಿದೆ. ಇಂದು ಜಿಲ್ಲಾ ಪ್ರವಾಸದಲ್ಲಿದ್ದ […]

Continue Reading

ಬೆಳ್ತಂಗಡಿ: ಮಡಿವಾಳ ಕುಟುಂಬದ ಪಡಿತರ ಚೀಟಿಯಲ್ಲಿ ಬಂಟ ಸಮುದಾಯದ ಹೆಸರು ಸೇರ್ಪಡೆ..!

ವಿಕಲಚೇತನ ಹೆಸರಿನಲ್ಲಿ ಮಂಜೂರಾಗಿರುವ ನ್ಯಾಯಬೆಲೆ ಅಂಗಡಿ ಮುಕ್ಕಲು ಷಡ್ಯಂತ್ರ.. ಆಹಾರ ಇಲಾಖೆ ಅಧಿಕಾರಿಗಳು ಸಾಥ್. ಬೆಳ್ತಂಗಡಿ ತಾಲೂಕಿನ ಕೋಡಿಬೆಟ್ಟು ನಿವಾಸಿಯಾಗಿರುವ ತ್ಯಾಂಪಣ್ಣ ಮಡಿವಾಳರ ಪತ್ನಿಯಾಗಿರುವ ಅಮಿತಾ ಎಂಬವರು ನಂ. 110100157404 ನ ಆದ್ಯತಾ ಕುಟುಂಬಕ್ಕೆ ಮೀಸಲಾಗಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಪಡಿತರ ಚೀಟಿಯಲ್ಲಿ ಅವರ ಮಗಳಾದ ಕೆ.ನಿಕ್ಷಿತಾ ಳ ಹೆಸರು ಇದೆ . ಕೆ. ನಿಕ್ಷಿತಾ ಎಂಬಾಕೆ ವಿಕಲಚೇತನಳಾಗಿದ್ದು , ಮನೆಯಲ್ಲಿಯೇ ಇರುತ್ತಾಳೆ. ಆಕೆಯ ಹೆಸರಿನಲ್ಲಿ 21 ಎಂವಿಎಸ್ಎಸ್ ಗುರುವಾಯನಕೆರೆ ನ್ಯಾಯಬೆಲೆ ಅಂಗಡಿಯ ಪರವಾನಗಿ ಇರುತ್ತದೆ. […]

Continue Reading

ಉಪ್ಪಿನಂಗಡಿ: ಖಾಸಗಿ ಆಸ್ಪತ್ರೆಯ ಘೋರ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಬಲಿಯಾಗುತ್ತಿದೆ ಅಮಾಯಕ ಜೀವಗಳು “ಮೆಡಿಕಲ್ ಹಬ್” ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿ ಘಟನೆಗಳು ಪದೇಪದೇ ಮರುಕಳಿಸುತ್ತಿರುವುದು ದುರಂತದ ಸಂಗತಿ. ದುರಂತಗಳು ಸಂಭವಿಸಿ ಒಂದೆರಡು ದಿನ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಮಾತ್ರ ತೋರಿಕೆಗೆ ತನಿಖೆ ನಡೆಸಿ ಹಳೇ ಕಡತ ಸೇರಿಸುವ ಪ್ರವೃತ್ತಿ ನಮ್ಮ ಇಲಾಖೆಗಳಲ್ಲಿದೆ. ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಮೇಲಿನ ಸರ್ಕಾರದ ನಿಯಂತ್ರಣ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಇಂತಹ ಘಟನೆಗಳಲ್ಲಿ ಅಮಾಯಕರು ಬಲಿಯಾದಾಗ ಅವರ ಕುಟುಂಬಗಳು […]

Continue Reading

ಬಡವರ ಆಸ್ಪತ್ರೆಯ ಗೋಳು ಕೇಳುವವರ್ಯಾರು..?

ಆರೋಪಿಗಳಿಗೆ ಜಾಮೀನು ಬೇಕಿದ್ದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ಸಾಕು.. ವೆನ್ಲಾಕ್ ನಲ್ಲಿ ನಡೆಯುತ್ತಿದೆ ಮೆಗಾ ಡೀಲಿಂಗ್.. ಸೆಟ್ಟಿಂಗ್.! ಮಂಗಳೂರು ತುಂಬಾ ಖಾಸಗಿ ಆಸ್ಪತ್ರೆಗಳದ್ದೇ ದರ್ಬಾರ್. ರೋಗಿಯೊಬ್ಬ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಒಳಹೊಕ್ಕು ಹೊರಬರುವ ಹೊತ್ತಿಗೆ ಲಕ್ಷಗಟ್ಟಲೆ ಬಿಲ್ ಪಾವತಿಸಬೇಕಾಗುತ್ತದೆ. ಬಡವರಿಗಂತೂ ಚಿಕಿತ್ಸೆ ಪಡೆಯಲು ಇಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗಳು ಗಗನ ಕುಸುಮ. ಮಂಗಳೂರಿನಲ್ಲಿ ಬಡವರಿಗೆ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಇರುವ ಸರ್ಕಾರಿ ಆಸ್ಪತ್ರೆ ಇದು. ಕೆಲವು ವರ್ಷಗಳ […]

Continue Reading