ಮೇನಲ್ಲಿ ಪ್ರಥಮ ಬಾರಿಗೆ ವಿಧಾನಸೌಧ ಮೆಟ್ಟಿಲು ಮೇಲೆ ಯಕ್ಷಗಾನ ಪ್ರದರ್ಶನ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ವಿಧಾನಸಭಾ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಇದೇ ಪ್ರಥಮ ಬಾರಿಗೆ ಉಭಯತಿಟ್ಟುಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಮುಂಬರುವ ಮೇ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ವಿಧಾನಸೌಧದ ಸ್ಪೀಕರ್‌ ಯು. ಟಿ .ಖಾದರ್‌ ತಿಳಿಸಿದ್ದಾರೆ. ಈ ಬಗ್ಗೆ ಕರ್ನಾ ಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿ ನಿಯೋಗ ಮಂಗಳವಾರ ವಿಧಾನಸೌಧದ ಸ್ಪೀಕರ್‌ […]

Continue Reading

ಉಪ್ಪಿನಂಗಡಿ: ಮಾನಭಂಗ ಪ್ರಕರಣ: ಆರೋಪಿಗೆ ಜಾಮೀನು

ಪುತ್ತೂರು: ಉಪ್ಪಿನಂಗಡಿ ಬೊಳ್ಳಾವು ಎಂಬಲ್ಲಿ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 11 ರಂದು ಬೆಳಿಗ್ಗೆ ತೋಟದಲ್ಲಿ ಅಡಿಕೆ ಹೆಕ್ಕಲು ಹೋಗಿದ್ದ ಸಂದರ್ಭ ಧರ್ನಪ್ಪ ನಾಯ್ಕ ಎಂಬಾತ ನನ್ನ ಬಳಿ ಬಂದು ನನ್ನ ಬಟ್ಟೆಯನ್ನು ಹರಿದು ಹಾಕಿ ಮೈಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿ ಅವಾಚ್ಯವಾಗಿ ಬೈದು, ತೋಟಕ್ಕೆ ನೀರು ಬಿಡುವ ಜೆಟ್ ನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಸುಮಿತ್ರಾ ಎಂಬವರು […]

Continue Reading

ಅಕ್ರಮ ಮಣ್ಣು ಮಾಫಿಯಾಕ್ಕೆ ಮೂಡಬಿದ್ರೆ ಆರ್.ಐ ಬಲಿಪಶುವಾದರೇ..?, ವರ್ಗಾವಣೆಯ ಮಸಲತ್ತು ನಡೆಸಿದ ಜಿಲ್ಲೆಯ ರಾಜಕಾರಣಿ ಯಾರು.?

ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಇದು ಕಾಲವಲ್ಲ.!, ಬಳ್ಳಾರಿ ಗಣಿ ಮಾಫಿಯಾವನ್ನು ಮೀರಿಸುವ ಬಾಕ್ಸೈಟ್ ದಂಧೆ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಕೇಂದ್ರವಾಗಿರುವ, ನಿರ್ಮಾಣ ಕಾಮಗಾರಿಗೆ ಅಗತ್ಯವಾಗಿರುವ, ನೂರಾರು ಬಡ ಕುಟುಂಬಗಳ ಪಾಲಿಗೆ ಆರ್ಥಿಕ ಶಕ್ತಿಯಾಗಿರುವ ಕೆಂಪು ಕಲ್ಲು ಗಣಿಗಾರಿಕೆಗೆ ದೊಡ್ಡ ಬ್ರೇಕ್ ಬಿದ್ದಿದ್ದರೂ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಮೂಡಬಿದ್ರೆಯಲ್ಲಿ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಕುಳಗಳಿಗೆ ಸಿಂಹಸ್ವಪ್ನರಾಗಿದ್ದ ಮೂಡಬಿದ್ರೆ ಕಂದಾಯ ನಿರೀಕ್ಷಕರಾದ ಹೆಚ್ ಬಿ ಮಂಜುನಾಥ ಅವರನ್ನು ಡಿಡೀರ್ ಆಗಿ […]

Continue Reading

​ಉಡುಪಿ: ಸಾರ್ವಜನಿಕ ಶೌಚಾಲಯಗಳು ‘ಲಕ್ಷ್ಮಿ’ ಪುತ್ರರ ಪಾಲೇ.? ಸಾರ್ವಜನಿಕರ ಸುಲಿಗೆಗೆ ಬೀಳಲಿ ಬ್ರೇಕ್ : ಕರವೇ ಜಿಲ್ಲಾಧ್ಯಕ್ಷ ಅ ರಾ ಪ್ರಭಾಕರ್ ಪೂಜಾರಿ

ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣ, ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣದಲ್ಲೂ ಕೂಡ ಇದೇ ರೀತಿಯ ಅನ್ಯಾಯ : ಹೋರಾಟ ಅನಿವಾರ್ಯ ​ಉಡುಪಿ: ಸಾಂಸ್ಕೃತಿಕ ನಗರಿ, ಪ್ರವಾಸಿ ತಾಣಗಳ ಬೀಡು ಉಡುಪಿ ಇಂದು ಶೌಚಾಲಯಗಳ ಹೆಸರಿನಲ್ಲಿ ನಡೆಯುತ್ತಿರುವ ಬಹಿರಂಗ ಲೂಟಿಗೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಇರುವ ‘ಸುಲಭ ಶೌಚಾಲಯ’ಗಳು ಹೆಸರಿಗೆ ಮಾತ್ರ ಸುಲಭ, ಆದರೆ ಸಾಮಾನ್ಯ ಜನರ ಜೇಬಿಗೆ ಮಾತ್ರ ಇದು ಕತ್ತರಿಯಾಗಿ ಪರಿಣಮಿಸಿದೆ. ಮನಸೋ ಇಚ್ಛೆ ದರ ವಸೂಲಿ ನಿಯಮಗಳನ್ನ ಗಾಳಿಗೆ ತೂರಾಟ​ನಗರದ ಪ್ರಮುಖ ಆಯಕಟ್ಟಿನ […]

Continue Reading

ವಿಟ್ಲ: ವೈದ್ಯ ಶರತ್ ಶೆಟ್ಟಿಯವರ ದೂರು ಹಿನ್ನಲೆ; ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ಬೀಗ ಜಡಿದ ಆರೋಗ್ಯ ಇಲಾಖೆ

ವಿಟ್ಲ: ರಕ್ತ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ ರಕ್ತದ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದು ದೂರು ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಚಂದಳಿಕೆಯಲ್ಲಿರುವ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಗೆ ಆಗಮಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅನಧಿಕೃತ ಲ್ಯಾಬೊರೇಟರಿಗೆ ಬೀಗ ಜಡಿದಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬದನಾಜೆ ನಿವಾಸಿ ಕಿಯಾನ್ಕ್ ಹರ್ಬಲ್ ಕಂಪನಿಯ ಮಾಲೀಕ ಡಾ.ಶರತ್ ಶೆಟ್ಟಿ ದೂರುದಾರರು.ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆಯಲ್ಲಿ ಕೆಲಸಮಯಗಳ ಹಿಂದಷ್ಟೇ ಆರಂಭಗೊಂಡ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ವಾರದ ಹಿಂದೆ […]

Continue Reading

ಮಂಗಳೂರು ನಗರದ ಗಾಳಿಯ ಗುಣಮಟ್ಟ ವಿಷಕಾರಿ; ಗಂಭೀರ ಆರೋಗ್ಯದ ಸಮಸ್ಯೆಗೆ ಕಾರಣವಾಗಲಿದೆ: ತಜ್ಞರ ಎಚ್ಚರಿಕೆ

ಮಂಗಳೂರು ನಗರದಲ್ಲಿ ವಾಯುಮಾಲಿನ್ಯ ವಿಪರೀತವಾಗಿರುವುದರಿಂದ ಗಾಳಿಯ ಗುಣಮಟ್ಟ ಸತತ ಕುಸಿತ ಕಾಣುತ್ತಿದ್ದು, ಅದೀಗ ಎಕ್ಯೂಐ ಸೂಚ್ಯಂಕದಲ್ಲಿ 200 ರ ಗಡಿ ತಲುಪಿದೆ. ಎಕ್ಯೂಐ ಮಾಪನದ ಪ್ರಕಾರ 200 ರಿಂದ 300 ಸೂಚ್ಯಂಕ ಕಂಡುಬಂದರೆ ಅದು ಗಂಭೀರ ಹಂತ ತಲುಪಿದೆ ಎಂದರ್ಥ. ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರಿನ ಗಾಳಿ ವಿಷಕಾರಿಯಾಗಿದ್ದು, ಪುಟಾಣಿಗಳು, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಉಳ್ಳವರು ಹಾಗೂ ವೃದ್ಧರ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ. ಮಂಗಳೂರಿನ ಈಗಿನ ವಾಯು ಗುಣಮಟ್ಟಗಳು ಆರೋಗ್ಯಕ್ಕೆ […]

Continue Reading

ಆಯುಷ್ಮಾನಡಿ ಬಡವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ( open heart surgery) ಮಾಡಲು ತಿಂಗಳುಗಟ್ಟಲೆ ಕಾಯಬೇಕಾ: ಸಂತೋಷ್ ಬಜಾಲ್ ಡಿವೈಎಪ್ಐ

ದ.ಕ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನಾ ಸಂಸ್ಥೆ ಸ್ಥಾಪನೆಗೆ ನಮ್ಮ ಬೇಡಿಕೆ ಯಾಕೆಂದು ಈ ಕೆಳಗಿನ ಕಥೆ ಓದಿ. ಇಂದು ಸಂಜೆಯ ಹೊತ್ತಿಗೆ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು ಸಮಸ್ಯೆ ಕೇಳಿ ಅವರಿರುವ ಆಸ್ಪತ್ರೆ ಬಳಿ ದಾವಿಸಿದೆ. ರೋಗಿಯ ಹೆಸರು ಕೃಷ್ಣಪ್ಪ ಸಪಲಿಗ ಸುಮಾರು 70 ಪ್ರಾಯ ಅವರದು ಕೂಲಿ ಕೆಲಸ ಮಾಡಿ ಬದುಕುವ ಸಾಮಾನ್ಯ ಬಡ ಕುಟುಂಬ. ಜೊತೆಗಿದ್ದ ಮಗ ಆತನದು ಮೆಕಾನಿಕ್ ವೃತ್ತಿ. ಮಗ ತಂದೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ […]

Continue Reading

ಪಣಂಬೂರು: ನಾಲ್ವರು ಗಾಂಜಾ ಮಾರಾಟಗಾರರ ಬಂಧನ, 22 ಕೆ.ಜಿ ಅಕ್ರಮ ಗಾಂಜಾ ವಶ

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಮಾರಾಟ ಮಾಡಲು ಹೊರ ರಾಜ್ಯದಿಂದ ತಂದಿರುವ ಅಕ್ರಮ ಗಾಂಜಾದ ಬಗ್ಗೆ ಖಚಿತ ಮಾಹಿತಿ ಪಡೆದ ಉತ್ತರ ಉಪ-ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಮತ್ತು ಅವರ ತಂಡದ ಅಧಿಕಾರಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ 22.250 ಗಾಂಜಾದೊಂದಿಗೆ ಆರೋಪಿತರಾದ ಕರಣ್ ಬಾಬು ರಾಂ ಜಾದವ್ ಮಹಾರಾಷ್ಟ್ರ , ಸಮೀರ್ ಶಾ ಮಧ್ಯಪ್ರದೇಶ, ಎಂ.ಹೆಚ್. ಮಯ್ಯದಿ ಹೆಜಮಾಡಿ ಗ್ರಾಮ, ಉಡುಪಿ, ಇಬ್ರಾಹಿಂ […]

Continue Reading

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಡಾ. ತಲ್ಲೂರು ಅವರಿಗೆ ರಂಗಮಹೋತ್ಸವ ಗೌರವ

ಉಡುಪಿ : ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಸಹಕಾರದಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ ಫೆ.1ರಿಂದ 6ರವರೆಗೆ ನಡೆದ ‘ಭಾರತ ರಂಗ ಮಹೋತ್ಸವ -2026 ಹಾಗೂ ರಂಗ ಪರಿಷೆ ‘ ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಸಮಾಜ ಸೇವೆ, ಯಕ್ಷಗಾನ, ಜಾನಪದ, […]

Continue Reading

ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ; ಗಾಂಜಾ ಸಹಿತ ಆರೋಪಿಯ ಬಂಧನ, ಪ್ರಕರಣ ದಾಖಲು.

ಬಂಟ್ವಾಳ ತಾಲೂಕು ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಎಂಬಲ್ಲಿ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡಿ, ಲಾಭಗಳಿಸುವ ಉದ್ದೇಶದಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವುದಾಗಿ ಖಚಿತ ಮಾಹಿತಿ ಮೇರೆಗೆ, ಬಂಟ್ವಾಳ ಠಾಣಾ ಪೊಲೀಸ್ ಉಪ ನಿರೀಕ್ಷಕರು ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಂಜಾ ಮಾರಾಟಗಾರನನ್ನು ಹಿಡಿದು ವಿಚಾರಿಸಿದಾಗ ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ ಎಂಬುದಾಗಿ ಹಾಗೂ ತಾನು ಗಾಂಜಾವನ್ನು ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿರುತ್ತಾನೆ. […]

Continue Reading