SSLC ಪರೀಕ್ಷಾ ಫಲಿತಾಂಶ: ಮಂಗಳೂರು, ಬಂದರಿನ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 4ನೇ ಬಾರಿ 100% ಫಲಿತಾಂಶ

ಮಂಗಳೂರು: 2026ನೇ ಸಾಲಿನ SSLC ಫಲಿತಾಂಶ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಬಂದರು ವಾರ್ಡಿನಲ್ಲಿರುವ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆ ಸತತ 4ನೇ ಬಾರಿ ಶೇಕಡಾ 100% ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಎಲ್ಲಾ 32 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆಯಾದರೆ,22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಉತ್ತೀರ್ಣಗೊಂಡಿದ್ದಾರೆ. ಅಮೋಘ ಸಾಧನೆ ಮಾಡಲು ಶ್ರಮ […]

Continue Reading

ಪಣಂಬೂರು: ಸುಲಿಗೆ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಕುಖ್ಯಾತ ಆರೋಪಿ ಚಂದು ಹಾರಿಸ್ ಬಂಧನ

ದಿನಾಂಕ 13.04.2026 ರಂದು ಅಜಯ್. ಕೆ, ಸೋಮವಾರಪೇಟೆ, ಮಡಿಕೇರಿ ಎಂಬವರು ತನ್ನ ಸ್ನೇಹಿತರಾದ ರಮೇಶ್ ಮತ್ತು ರಫೀಕ್ ಎಂಬವರ ಜೊತೆ ಕಾರಿನಲ್ಲಿ ತಣ್ಣೀರುಬಾವಿ ಬೀಚಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಜೊತೆಗೂಡಿ ಬಂದಿದ್ದು, ಬೆಳಗಿನ ಜಾವ 2:30 ಸುಮಾರಿಗೆ ತಣ್ಣೀರುಬಾವಿ ಬೀಚ್ ಸಮೀಪ ಬಂದು ಸ್ವಲ್ಪ ಮುಂದಕ್ಕೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆ ಹೋಗಿದ್ದು, ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿದ್ದವರನ್ನು ಕಂಡು ಕಾರನ್ನು ನಿಲ್ಲಿಸಿ, ಅವರಲ್ಲಿ ವಿಳಾಸ ಕೇಳುವ ಸಲುವಾಗಿ ಅವರನ್ನು ಮಾತನಾಡಿಸಿರುತ್ತಾರೆ. […]

Continue Reading

ಕುಂದಾಪುರ ಪುರಸಭೆ: ರಣ ಹಸಿವಿನ ಭ್ರಷ್ಟ ಅಧಿಕಾರಿಗಳು; ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ

ರಣ ಹಸಿವಿನ ಅಧಿಕಾರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಕುಂದಾಪುರ ಪುರಸಭೆ. ಇಲ್ಲಿ ಹೇಳೋರಿಲ್ಲ. ಕೇಳೋರಿಲ್ಲ.. ಚೀಫ್ ಆಫೀಸರ್ಸ್ ನದ್ದೇ ಅಂಧಾ ದರ್ಬಾರ್. ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಮಹತ್ವದ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕೇ ಹೆಚ್ಚು ಸಮೃದ್ಧಿಯಾದ ತಾಲೂಕು. ಕೆಲವು ಆಫೀಸರ್ಸ್ ಗಳಂತೂ ಕುಂದಾಪುರಕ್ಕೆ ಲಾಬಿ ಮಾಡಿಕೊಂಡೇ ಬರುವವರು ಹೆಚ್ಚು. ಮೇಯಲು ಸಮೃದ್ಧಭರಿತ ತಾಲೂಕು ಅನ್ನುವ ಅನ್ವರ್ಥನಾಮವಿದೆ. ಕುಂದಾಪುರ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ […]

Continue Reading

ಬೃಹತ್ ಪ್ರಮಾಣದ MDMA ಮಾದಕ ವಸ್ತು ಮಾರಾಟ ಜಾಲದ ಡ್ರಗ್ ಪೆಡ್ಲರ್ ಗಳ ಬಂಧನ; ಮಾದಕ ವಸ್ತು ವಶ

ಮಂಗಳೂರು ನಗರ ಜೆಪ್ಪಿನಮೊಗರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ದೊಡ್ಡ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವುದಾಗಿ ಕಂಕನಾಡಿ ನಗರ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಕೆಎ 70 ಕೆ 3333 ನಂಬರ್ ನ ಬಜಾಜ್ ಫ್ರೀಡಂ ಬೈಕ್ ನಲ್ಲಿ MDMA ಅನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿಗಳಾದ ಪರ್ವೇಜ್ @ ದಾವೂದ್ ಪರ್ವೇಜ್, ಪಿಲಾರು ಹೊಸಗದ್ದೆ ಮನೆ, ಪೆರ್ಮಾನ್ನೂರು ಹಾಗೂ ನಜರತ್ ಅಲಿ ಪಿಲಾರು ಪೆರ್ಮಾನ್ನೂರು ಅಂಚೆ ಮಂಗಳೂರು ತಾಲೂಕು ಎಂಬವರನ್ನು ವಶಕ್ಕೆ ಪಡೆದು ಅವರು […]

Continue Reading

ಸುಶಿಕ್ಷಿತ ಅವಳಿ ಜಿಲ್ಲೆಗಳ ಮಹಾಭಾಗ್ಯ; ಗುಬ್ಬಿ, ಬೇಲಿ ಮತ್ತು ಸಹಿಯ ಸಾಮ್ರಾಜ್ಯದಲ್ಲಿ ಒಂದು ಸುತ್ತು

ಹಂಪ್‌ಗಳು ಬೆಳೆಯುತ್ತವೆ, ಬ್ಯಾರಿಕೇಡ್‌ಗಳು ಎತ್ತರಿಸುತ್ತವೆ, ಪಾದಚಾರಿಗಳು ಸಾಯುತ್ತಾರೆ, ಫೈಲ್‌ಗಳು ಧೂಳು ಹಿಡಿಯುತ್ತವೆ, ನೋಟುಗಳು ಮಡಚುತ್ತವೆ. ಇದೇ ನಮ್ಮ ಸುಶಿಕ್ಷಿತ ಅವಳಿ ಜಿಲ್ಲೆಗಳ ಮಹಾಭಾಗ್ಯ. ✍️. ಇಸ್ಮಾಯಿಲ್ ಎಸ್., ವಕೀಲರು ಮತ್ತು ನೋಟರಿ, ಮಂಗಳೂರು ಮಂಗಳೂರಿಗೆ ಬರುವವರಿಗೆ ಒಂದು ಸಿಹಿ ಸುದ್ದಿ ಇದೆ. ನೀವು ಕಾಸರಗೋಡಿನಿಂದಲೋ, ಬೆಂಗಳೂರಿನಿಂದಲೋ, ಅಥವಾ ಇನ್ನೆಲ್ಲಿಂದಲೋ ಬರುತ್ತಿರಲಿ, ದಕ್ಷಿಣ ಕನ್ನಡ ಮತ್ತು ಉಡುಪಿಯ ಗಡಿಯನ್ನು ಪ್ರವೇಶಿಸಿದ ಕ್ಷಣ ನಿಮಗೆ ಗೂಗಲ್ ಮ್ಯಾಪ್ ಕೂಡ ಬೇಕಾಗಿಲ್ಲ. ರಸ್ತೆಯ ಮೇಲಿನ ಹಂಪ್‌ಗಳೇ, ಬೇಲಿಗಳೇ, ಬ್ಯಾರಿಕೇಡ್‌ಗಳೇ ನಿಮ್ಮ ಸ್ವಾಗತಾರ್ಥ […]

Continue Reading

ಮೂಡಬಿದ್ರೆ: ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಅರ್ಗ ಬಷೀರ್ ಅರೆಸ್ಟ್

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಮಿಜಾರು ಗ್ರಾಮದ ನಿವಾಸಿ ಕೆ. ಅಬ್ದುಲ್ ಬಶೀರ್ ಯಾನೆ ಅರ್ಗ ಬಶೀರ್ ಬಂಧಿತ ಆರೋಪಿಯಾಗಿದ್ದು ಈತನ ವಿರುದ್ಧ ಮಂಗಳೂರು ನಗರ, ದ.ಕ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ ಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆ ಮರಿಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್, ಉದ್ಗೋಷಣ […]

Continue Reading

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ರೇಪ್; ಇಬ್ಬರು ಆರೋಪಿಗಳು ಅಂದರ್; ಹಸೆಮಣೆ ಏರಬೇಕಾಗಿದ್ದ ಯುವಕ ಸೆರೆಮನೆಗೆ.!

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಎರ್ಮಾಯಿ ಫಾಲ್ಸ್ ನ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಏಪ್ರಿಲ್ 16 ರಂದು ಘಟನೆ ನಡೆದಿದ್ದು, ಮರುದಿನ ಬಾಲಕಿಯ ಪೋಷಕರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಪೊಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ […]

Continue Reading

ಬಂಟ್ವಾಳ ಪುರಸಭೆಗೆ ಖಡಕ್ ಚೀಫ್ ಆಫೀಸರ್: ದಿನಗೂಲಿ ನೌಕರರಿಗೆ ಗೇಟ್ ಪಾಸ್

ಬಂಟ್ವಾಳ ಪುರಸಭೆಯಲ್ಲಿ ದಿನಗೂಲಿ ನೌಕರರ ಕಾರುಬಾರು ಎಂಬ ಶೀರ್ಷಿಕೆಯಡಿಯಲ್ಲಿ ಸೃಷ್ಟಿ 238 ರಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಬಂಟ್ವಾಳ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲ ಕಾರಣವೇ ದಿನಗೂಲಿ ನೌಕರರು. ಇವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅಧಿಕಾರಿ ವರ್ಗ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ದಿನಗೂಲಿ ನೌಕರರ ಅಂಧಾ ದರ್ಬಾರ್ ಮೇಳೈಸುತ್ತಿದೆ. ಬಂಟ್ವಾಳ ಪುರಸಭೆ ಒಳಹೊಕ್ಕರೆ ಯಾವೊಂದು ಕೆಲಸವೂ ಸಲೀಸಾಗಿ ನಡೆಯುತ್ತಿಲ್ಲ. ಇಲ್ಲಿ ಖಾತಾ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಲೈಸೆನ್ಸ್ ಯಾವ ಕೆಲಸವೂ ಇಲ್ಲಿ ನಡೆಯುತ್ತಿಲ್ಲ. ಜನಸಾಮಾನ್ಯರ […]

Continue Reading

ನಿಷೇದಿತ ಮಾದಕವಸ್ತು ಮಾರಾಟ ಪ್ರಕರಣದ ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ

ಬೆಳ್ತಂಗಡಿ ಉಜಿರೆ ರಥಬೀದಿ ಎಂಬಲ್ಲಿ, ದಿನಾಂಕ: 08-03-2009 ರಂದು ಅಂದಾಜು 50 ಸಾವಿರ ರೂ. ಬೆಲೆಬಾಳುವ 1.500 ಕಿ.ಗ್ರಾಂ ತೂಕದ ನಿಷೇದಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಬೆಳ್ತಂಗಡಿ ಠಾಣಾ ಅ.ಕ್ರ 60/09 ರಂತೆ ದಾಖಲಾಗಿದ್ದ ಪ್ರಕರಣದ ಆರೋಪಿ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಟಿ.ಇ ಜೋಸೆಫ್ ಎಂಬಾತನಿಗೆ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರು ದಿನಾಂಕ 10-04- 2026 ರಂದು ಟಿ.ಇ ಜೋಸೆಫ್ ಎಂಬವರನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ […]

Continue Reading

ಬೆಳ್ತಂಗಡಿ: ಮುಖ್ಯ ಭಾಷಣಕಾರನಿಗೆ ಎಚ್ಚರಿಕೆ, ಶಾಸಕರ ಸುಳ್ಳುಗಳ ನಡುವೆ ಸಾಂಗವಾಗಿ ನಡೆದ ಅಂಬೇಡ್ಕರ್ ಜಯಂತಿ.

ಹಲವು ಗೊಂದಲಗಳ ನಡುವೆ ಇಂದು ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಸಾಂಗವಾಗಿ ನಡೆಯಿತು. ಆದರೂ ಶಾಸಕ ಹರೀಶ್ ಪೂಂಜಾ ಎಂದಿನಂತೆ ರಾಜಕೀಯ ಮಾತನಾಡುವ ಮೂಲಕ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು. ಸಭೆಯ ಆರಂಭಕ್ಕೆ ಮೊದಲೇ ಸಭಾಂಗಣಕ್ಕೆ ಆಗಮಿಸಿದ್ದ ಮುಖ್ಯ ಭಾಷಣಕಾರ ಶಿವಪ್ರಸಾದ್ ಸುರ್ಯರನ್ನು ಸುತ್ತುವರಿದ ದಲಿತ ನಾಯಕರ ಗುಂಪು ನಾಲ್ಕೈದು ದಿನಗಳಿಂದ ನಡೆದ ಬೆಳವಣಿಗೆಯನ್ನು ವಿವರಿಸಿ, ಸಭೆಯಲ್ಲಿ ಅಂಬೇಡ್ಕರ್ ಚಿಂತನೆ, ಜೀವನ ಚರಿತ್ರೆ ಹೊರತುಪಡಿಸಿ ಬೇರೆ […]

Continue Reading