ಪುತ್ರನ ಹುಟ್ಟುಹಬ್ಬಕ್ಕೆ ಕಡವೆಯ ಗುಂಡಿಟ್ಟು ಕೊಂದು ಮಾಂಸ ಫ್ರಿಡ್ಜ್ ನಲ್ಲಿಟ್ಟ ಪೋಷಕರು.

ದಾಳಿ ನಡೆಸಿ ಮಾಂಸ, ಕೋವಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು; ಆರೋಪಿಗಳು ಎಸ್ಕೇಪ್. ಮಗನ ಹುಟ್ಟುಹಬ್ಬಕ್ಕಾಗಿ ರಕ್ಷಿಣಾರಣ್ಯದಿಂದ ಕಡವೆಯನ್ನು ಗುಂಡಿಕ್ಕಿ ಕೊಂದು ಮಾಂಸವನ್ನು ಫ್ರಿಡ್ಜ್ ನಲ್ಲಿಟ್ಟ ಪ್ರಕರಣ ಉಪ್ಪಿನಂಗಡಿ ಬಳಿ ನಡೆದಿದೆ. ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಎಂಬವರ ಮನೆಗೆ ದಾಳಿ ನಡೆಸಿದೆ. ಹತ್ಯೆಗೆ ಬಳಸಿದ ಕೋವಿ, ಫ್ರಿಡ್ಜ್ ನಲ್ಲಿ ಇರಿಸಲಾಗಿದ್ದ ಕಡವೆ ಮಾಂಸವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಗುಂಡ್ಯ […]

Continue Reading

ಮಂಗಳೂರಿನ ಕೆ.ಪಿ.ಟಿ.ಬಳಿ ನಡೆದ ಅಪಘಾತ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಮೃತ್ಯು.

ಮಂಗಳೂರಿನ ಕೆ.ಪಿ.ಟಿ.ಬಳಿ ಗುರುವಾರದಂದು ಬೈಕ್-ನ್ಯಾನೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ (49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಣಿ ಸಮೀಪದ ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿ ಭಾಸ್ಕರ್ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಭಾಸ್ಕರ್ ಅವರು ಚಲಾಯಿಸುತ್ತಿದ್ದ ಬೈಕಿಗೆ ನ್ಯಾನೋ ಕಾರು ಕೆ.ಪಿ.ಟಿ.ಬಳಿ ಡಿಕ್ಕಿ ಹೊಡೆದು ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

Continue Reading

ರೋಗಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ನೀಡದ ಯುನಿಟಿ ಆಸ್ಫತ್ರೆಗೆ ಬಿಸಿ ಮುಟ್ಟಿಸಿದ ಗ್ರಾಹಕರ ನ್ಯಾಯಾಲಯ

ಗ್ರಾಹಕ ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲವಾದರೆ, ಕ್ರಿಮಿನಲ್ ಮೊಕದ್ದಮೆ ಮಂಗಳೂರು: ಅನಾರೋಗ್ಯ ಪೀಡಿತರಾಗಿ ಮಂಗಳೂರಿನ ಪಳ್ನೀರ್ ಬಳಿ ಇರುವ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ರಾಹಿಂ ಯು.ಎಚ್ ರವರ ವೈದ್ಯಕೀಯ ದಾಖಲೆಗಳನ್ನು ನೀಡದ ಕಾರಣ ಮಂಗಳೂರಿನ ವಕೀಲರಾದ ಪಿ.ಬಿ ಭಟ್ ರವರು ಗ್ರಾಹಕರ ಆಯೋಗದ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ದೂರು ದಾಖಲಿಸಿ, ಯುನಿಟಿ ಅಸ್ಫತ್ರೆಯವರು ರೋಗಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ತಕ್ಕ ಸಮಯಕ್ಕೆ ನೀಡದಿರುವ ಬಗ್ಗೆ ವಾದ ಮಂಡಿಸಿದ್ದರು. ಇದೀಗ ಗ್ರಾಹಕರ ನ್ಯಾಯಾಲಯವು ಮಂಗಳೂರಿನ ಯುನಿಟಿ ಆಸ್ಪತ್ರೆಗೆ […]

Continue Reading

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ; ಮಗುವಿನ ಡಿಎನ್ಎ ರಿಪೋರ್ಟ್ ನಲ್ಲಿ ಬಂತು ಅಸಲಿಯತ್ತು.!

ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡಿದ್ದು, ಮಗುವಿನ ಡಿಎನ್ಎ ರಿಪೋರ್ಟ್ ಸಲ್ಲಿಕೆಯಾಗಿದ್ದು, ಸಂತ್ರಸ್ತೆಯ ಮಗು ಅದೇ ಅನ್ನುವುದು ಇದೀಗ ಡಿಎನ್ಎ ವರದಿಯಲ್ಲಿ ಬಹಿರಂಗವಾಗಲಿದೆ. ಅಕ್ಟೋಬರ್ 18 ರಂದು ಪಾಣೆಮಂಗಳೂರು ನಿವಾಸಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ ಎರಡನೇ ಹೆರಿಗೆಗಾಗಿ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್ ಆಗಿದೆ ಎಂದು ಹೇಳಿದ್ದರು. […]

Continue Reading

ಆಟೋದಲ್ಲಿ ಅಕ್ರಮ ಗೋಸಾಗಾಟ. ಮಹಿಳೆ ಸಹಿತ ಆಟೋ ತಡೆದು ಪೊಲೀಸರಿಗೆ ಒಪ್ಪಿಸಿದ ಬಜರಂಗಿಗಳು.

ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ. ಅಕ್ರಮ ಸಾಗಾಟ ಮಾಡುತ್ತಿದ್ದ ಗೋವು ಜೊತೆ ಇಬ್ಬರು ಮಹಿಳೆಯರು ಕೂಡಾ ಪ್ರಯಾಣಿಸುತ್ತಿದ್ದು, ಚಾಲಕನ ಸಹಿತ ಎಲ್ಲರನ್ನೂ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

Continue Reading

ತೆರೆಮರೆಯಲ್ಲೊಬ್ಬ ಹಿರಿಯ ನಾದಸ್ವರ ವಾದಕ.

ಜಿಲ್ಲಾಡಳಿತ, ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಹೊರಜಗತ್ತಿಗೆ ಕಾಣದ ಅಸಾಧಾರಣ ಪ್ರತಿಭೆ ಕಾಪುಮಜಲು ಗೋಪಾಲ ಜೋಗಿ ಹೌದು. ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ಬಡಕುಟುಂಬದ ವೆಂಕಟಜೋಗಿ-ಲೀಲಾವತಿ ದಂಪತಿಗಳ ಇಬ್ಬರು ಪುತ್ರರು, ಓರ್ವ ಪುತ್ರಿಯ ಪೈಕಿ ಕಿರಿಯ ಪುತ್ರ ಗೋಪಾಲ ಜೋಗಿ(60). ಬಡತನದಿಂದಾಗಿ ಓದಿದ್ದು ಕೇವಲ ಐದನೇ ಕ್ಲಾಸು. ಬಳಿಕ ಹಿರಿಯ ನಾದಸ್ವರ ವಾದಕ ಸಜಿಪ ತನಿಯಪ್ಪ ಜೋಗಿ ಮತ್ತು ಅವರ ಪುತ್ರ ಚಂದ್ರನಾಥ ಜೋಗಿಯವರ ಗರಡಿಯಲ್ಲಿ ನಾದಸ್ವರ ಕಲಿತು ಪಳಗಿದ ಗೋಪಾಲ ಜೋಗಿ […]

Continue Reading

ನೆಹರೂ ಮೈದಾನದ ಇಂದಿರಾ ಕ್ಯಾಂಟೀನ್ ಬಳಿ ಖಾಸಗಿ ಬಸ್ ಕಂಡಕ್ಟರ್ ಶವ ಪತ್ತೆ.

ಕಲ್ಲು ಎತ್ತಿ ಹಾಕಿ ಕೊಲೆಗೈದ ಪಾತಕಿಗಳು. ಮಂಗಳೂರು ನೆಹರೂ ಮೈದಾನದ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಖಾಸಗಿ ಬಸ್ ನಿರ್ವಾಹಕನೊಬ್ಬನ ಶವ ಪತ್ತೆಯಾಗಿದೆ. ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30)ಎಂಬಾತ ಮೃತ ದುರ್ದೈವಿ. ಪ್ರತಿ ವರ್ಷವೂ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆ ಧರಿಸಿ ಹೋಗುತ್ತಿದ್ದ ರಾಜೇಶ್ ಸರಳ ಸ್ವಭಾವದವನಾಗಿದ್ದು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದನೆಂದು ಸಹೋದ್ಯೋಗಿ ಮಿತ್ರರು ತಿಳಿಸಿದ್ದಾರೆ. ಆದರೆ ಈವರೆಗೂ ರಾಜೇಶ್ ಎಲ್ಲಿಯವನೆಂಬ ಬಗ್ಗೆಯಾಗಲೀ, ಆತನ ಪೋಷಕರು, ಸಂಬಂಧಿಕರು ಯಾರೆಂಬ ಬಗ್ಗೆ […]

Continue Reading

ನವರಾತ್ರಿ ವೇಷಧಾರಿ ಸುಂದರ ನಾಯ್ಕ ನಿಗೂಢ ನಾಪತ್ತೆ. ಪತ್ನಿಯಿಂದ ವಿಟ್ಲ ಠಾಣೆಯಲ್ಲಿ ದೂರು ದಾಖಲು.

ನವರಾತ್ರಿ ವೇಷಧಾರಿ ವಿಟ್ಲ ಕಸಬಾ ಗ್ರಾಮದ ಪಳಿಕೆ ಅನ್ನಮೂಲೆ ನಿವಾಸಿ ಸುಂದರ ನಾಯ್ಕ(55) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಪ್ರತೀ ವರ್ಷ ವೇಷ ಹಾಕುತ್ತಿದ್ದ ಸುಂದರ ನಾಯ್ಕ ಈ ಬಾರಿಯೂ ವೇಷ ಹಾಕಲು ತಯಾರಿ ನಡೆಸಿದ್ದರು. ಇದೇ ತಿಂಗಳ ಒಂದರಂದು ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆಯುತ್ತೇನೆ ಎಂದು ಪತ್ನಿಯಲ್ಲಿ ಹೇಳಿ ಮನೆಯಿಂದ ಹೊರಟಿದ್ದ ಸುಂದರ ನಾಯ್ಕ ನವರಾತ್ರಿ ಹಬ್ಬ ಮುಗಿದರೂ ಮರಳಿ ಬಂದಿಲ್ಲ. ಆತಂಕಗೊಂಡ ಪತ್ನಿ ತನ್ನ ಸಂಬಂಧಿಕರಲ್ಲೆಲ್ಲಾ ವಿಚಾರಿಸಿದ್ದಾರೂ ಯಾವುದೇ ಮಾಹಿತಿ ಇಲ್ಲಿದ ಕಾರಣ […]

Continue Reading

ಮಂಗಳೂರಿನ ಕೆಲವು ಸ್ವಯಂಘೋಷಿತ ಕಾಕಾ.. ಗಳ ರಂಗೀನ್ ಕಹಾನಿಗಳು..!

ಇವರದ್ದೇ ಸಂಘಟನೆಗಳು, ಇವರೇ ಪದಾಧಿಕಾರಿಗಳು, ಇವರಿಗೇನೇ ಸನ್ಮಾನ; ಚರಂಡಿ, ಮೋರಿ, ಗಟಾರಕ್ಕೂ ಸೈ, ಒಟ್ಟಾರೆ ಅಧ್ಯಕ್ಷ. ಇದು ಮಂಗಳೂರಿನ ಕೆಲವು ಶ್ರೀಮಂತ ಕಾ..ಕಗಳ ರಂಗೀನ್ ಕಹಾನಿ. ಹೊರಗಡೆ ತಾವು ಸುಬಗರು, ಸಾತ್ವಿಕರಂತೆ ಕಂಡರೂ ಒಳಗಡೆಯ ಇವರ ಮುಖವಾಡವೇ ಬೇರೆ. ಮಂಗಳೂರಿನಲ್ಲಿ ಕನಿಷ್ಠ ಎಂದರೂ ಕೆಲವು ಸ್ವಯಂಘೋಷಿತ ಅಗರ್ಭ ಶ್ರೀಮಂತರ ಸರ್ಕಲ್ ಇದೆ. ರಾಜಕೀಯ, ಧಾರ್ಮಿಕ ಎಲ್ಲಾ ರಂಗದವರನ್ನು ತನ್ನ ಕೈಯಾರೆ ಕುಣಿಸುವ ಇವರು ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ವಕ್ಫ್, ಹಜ್ಜ್ ,ಅಲ್ಪಸಂಖ್ಯಾತ ಇನ್ನಿತರ ಸರಕಾರದ ಅಧೀನದಲ್ಲಿರುವ […]

Continue Reading

ಮುಮ್ತಾಜ್ ಅಲಿ ಸುಸೈಡ್ ಪ್ರಕರಣ; ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ.!

ಮಾಜಿ ಶಾಸಕ ಮೊಹಿದ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು; ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಡುವೆಯೇ ಮಂಗಳೂರಿನ ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಅಂಶ ಬಯಲಾಗಿದೆ. ಹೈ ಪ್ರೊಫೈಲ್ ಉದ್ಯಮಿಗಳ ಪೈಕಿ ಓರ್ವರು ಮುಮ್ತಾಜ್ ಅಲಿ ಬಳಗದಲ್ಲೇ ಕಾಣಿಸಿಕೊಂಡವರಾಗಿದ್ದು, ಅವರ ಕುಟುಂಬದವರೊಂದಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದಾರೆ. ಇನ್ನೊಬ್ಬ ಉದ್ಯಮಿ ಕೂಡ ಇದೇ ಬಳಗದಲ್ಲಿ […]

Continue Reading