370ನೇ ವಿಧಿ ರದ್ದತಿಯ ವಾರ್ಷಿಕೋತ್ಸವದ ಹಿನ್ನೆಲೆ: ಅನುಮತಿಯಿಲ್ಲದೆ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ: ಜಮ್ಮು-ಕಾಶ್ಮೀರ ಪೊಲೀಸ್

ಶ್ರೀನಗರ: ಬುಧವಾರದಂದು 370ನೇ ವಿಧಿ ರದ್ದತಿಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಾರ್ವಜನಿಕ ಸೂಚನೆಯೊಂದನ್ನು ಹೊರಡಿಸಿದ್ದು, ಅನಧಿಕೃತ ಪ್ರತಿಭಟನೆಗಳು ಅಥವಾ ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ ಹಾಗೂ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ (PDP) ಪಕ್ಷವು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ವಿವಿಧ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಗಳು ಈ ಸೂಚನೆಯನ್ನು ಹೊರಡಿಸಿವೆ. “ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಯಾವುದೇ ಪ್ರತಿಭಟನೆ, ರ್ಯಾಲಿ, ಮೆರವಣಿಗೆ, ಪ್ರದರ್ಶನ ಅಥವಾ […]

Continue Reading

ಕೇರಳದಲ್ಲಿ ಭಾರಿ ಮಳೆ; ಎಂಟು ಮಂದಿ ಸಾವು, 13 ಮಂದಿಗೆ ಗಾಯ, 8 ಮಂದಿ ನಾಪತ್ತೆ: ಕೇರಳ ಸಿಎಂ

ತಿರುವನಂತಪುರಂ: (ಆಗಸ್ಟ್ 2) ರಾಜ್ಯದ ಹಲವೆಡೆ ಆಸ್ತಿಪಾಸ್ತಿ ಹಾನಿ, ಭೂಕುಸಿತ ಮತ್ತು ಜಲಾವೃತಕ್ಕೆ ಕಾರಣವಾದ ಹಿಂದಿನ ದಿನದ ಭಾರಿ ಮಳೆಯಿಂದಾಗಿ ಎಂಟು ಮಂದಿ ಮೃತಪಟ್ಟಿದ್ದಾರೆ, ಅಷ್ಟೇ ಸಂಖ್ಯೆಯ ಜನರು ನಾಪತ್ತೆಯಾಗಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭಾನುವಾರ ತಿಳಿಸಿದ್ದಾರೆ. ತಮ್ಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 27 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ, 196 ಮನೆಗಳು ಭಾಗಶಃ ಹಾನಿಗೀಡಾಗಿವೆ ಮತ್ತು ರಾಜ್ಯಾದ್ಯಂತ ತೆರೆಯಲಾದ 209 ಪರಿಹಾರ ಶಿಬಿರಗಳಿಗೆ 5,792 ಜನರನ್ನು ಸ್ಥಳಾಂತರಿಸಲಾಗಿದೆ […]

Continue Reading

SIR ಕೋಟಿಗೂ ಮಿಕ್ಕ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರ ಬೀಳುವ ಸಾಧ್ಯತೆ

ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವು ಭರದಿಂದ ಸಾಗುತ್ತಿದ್ದು, ಬೃಹತ್ ಪ್ರಮಾಣದಲ್ಲಿ ಹೆಸರುಗಳು ಕರಡು ಪಟ್ಟಿಯಿಂದ ಹೊರಬೀಳುವ ಲಕ್ಷಣಗಳು ಕಂಡುಬರುತ್ತಿವೆ. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ, ವಾರಾಂತ್ಯದ ವೇಳೆಗೆ ಸುಮಾರು 98.73 ಲಕ್ಷ ಮತದಾರರನ್ನು ‘ASDDO’ (ಪತ್ತೆಯಾಗದವರು, ಶಾಶ್ವತ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು, ಇತರೆ) ವರ್ಗಕ್ಕೆ ಸೇರಿಸಲಾಗಿದ್ದು, ಈ ಸಂಖ್ಯೆಯು ಆಗಸ್ಟ್ 8ರ ವೇಳೆಗೆ ಒಂದು ಕೋಟಿಗೂ ಮಿಕ್ಕಿ ಗಡಿ ದಾಟುವ ಸಾಧ್ಯತೆಯಿದೆ. ಇದುವರೆಗೆ ನಡೆಸಲಾದ ಸಾರ್ವತ್ರಿಕ ಪರಿಶೀಲನೆಯಲ್ಲಿ ಒಟ್ಟು 98.73 ಲಕ್ಷ ಜನರನ್ನು ಈ ತಾತ್ಕಾಲಿಕ […]

Continue Reading

ಜೆನ್ ಝೀ ‘ಪವರ್’ ಪತರುಗುಟ್ಟಿದ ಮೋ-ಶಾ ಸಾಮ್ರಾಜ್ಯ.. ನಮೋ ಸರಕಾರ ಮೆರೆದಾಡಲು ಕಾಂಗ್ರೆಸ್ ವೈಫಲ್ಯವೂ ಕಾರಣ

ಜೆನ್ ಝೀ ಕ್ರಾಂತಿಕಾರಿ ಹೋರಾಟ ಕಾಂಗ್ರೆಸ್ಸಿಗೊಂದು ಪಾಠವಾಗಲಿ.. ಕಾಂಗ್ರೆಸ್ ನಲ್ಲಿ ಯುವಶಕ್ತಿ ಮೊಳಗಲಿ.! ಆನೆ ನಡೆದದ್ದೇ ದಾರಿ, ಯಾರೂ ಬಗ್ಗಿಸಲು ಸಾಧ್ಯವಿಲ್ಲ ಅನ್ನುವ ಅಹಂ ನಲ್ಲಿದ್ದ ಮೋ-ಶಾ ಸಾಮ್ರಾಜ್ಯವನ್ನು ತಕ್ಕಮಟ್ಟಿಗೆ ಬಗ್ಗಿಸುವಲ್ಲಿ ತುಂಟ ಜಿರಳೆಗಳಿಗೆ ಸಾಧ್ಯವಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಸರಕಾರ ರಾಜೀನಾಮೆ ನೀಡುವ ಸರಕಾರವಲ್ಲ ಎಂದು ಲಂಗು ಲಗಾಮಿಲ್ಲದೆ ಚಲಿಸುತ್ತಿದ್ದ ಸರಕಾರಕ್ಕೆ ಬ್ರೇಕ್ ಹಾಕುವಲ್ಲಿ ನಿನ್ನೆ ಮೊನ್ನೆ ಹುಟ್ಟಿದ ಆನ್ ಲೈನ್ ಜಿರಳೆಗಳಿಗೆ ಸಾಧ್ಯವಾಗುವುದಾದರೆ ನೂರಾರು ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದಕ್ಕೆ ಆಡಳಿತಾರೂಢರ ಹುಳುಕುಗಳನ್ನು […]

Continue Reading

ಸೈಬರ್ ಅಪರಾಧಿಗಳಿಗೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ ಮತ್ತು ಮಾಲ್‌ವೇರ್ ತುಂಬಿದ APK ಫೈಲ್‌ ಪೂರೈಕೆ, 17 ವರ್ಷದ ಪೋರ ಡೆವಲಪರ್‌ನ ಬಂಧನ

ದೇಶಾದ್ಯಂತ ಸೈಬರ್ ಕ್ರಿಮಿನಲ್ ಗಳಿಗೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಮಾಲ್‌ವೇರ್ ತುಂಬಿದ APK ಫೈಲ್‌ಗಳನ್ನು ರಚಿಸಿ ಪೂರೈಸಿದ ಆರೋಪದ ಮೇಲೆ ಗುಜರಾತ್‌ನ ಸೂರತ್ ಸೈಬರ್ ಕ್ರೈಮ್ ಸೆಲ್ ಉತ್ತರ ಪ್ರದೇಶದ ಕಾನ್ಪುರದ 17 ವರ್ಷದ ಡೆವಲಪರ್‌ನನ್ನು ಬಂಧಿಸಲಾಗಿದೆ. ಆರೋಪಿಯು 11 ನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿದ್ದರೂ, ದೊಡ್ಡ ಪ್ರಮಾಣದ ಸೈಬರ್ ವಂಚನೆ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದ್ದ ಅತ್ಯಾಧುನಿಕ ಸಾಧನಗಳನ್ನು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ ಮತ್ತು ಟೆಲಿಗ್ರಾಮ್ ಅನ್ನು ಬಳಸಿದ್ದಾನೆ. ಬಂಧಿತನನ್ನು ರೋಹಿತ್ ವೀರೇಂದ್ರ ಸಿಂಗ್ ಶಕ್ಯಾ […]

Continue Reading

ಸಿಜೆಪಿ ಜೊತೆ ಮಾತುಕತೆಗೆ ಮುಂದಾದ ಕೇಂದ್ರ ಸರಕಾರ; ಸಚಿವ ಜೆ.ಪಿ. ನಡ್ಡಾ ಜೊತೆ ಮಾತುಕತೆ

ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ಪ್ರಶ್ನಿಸಿ ಕಾಕ್ರೋಜ್​ ಜನತಾ ಪಾರ್ಟಿಯ ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ಸಂಸತ್ ಚಲೋ ಎಂಬ ಪ್ರತಿಭಟನಾ ರ‍್ಯಾಲಿ ನಡೆಯುತ್ತಿದೆ. ಈ ಪ್ರತಿಭಟನೆಗೆ ದೆಹಲಿ ಪೊಲೀಸರ ಅನುಮತಿ ಇರದ ಕಾರಣ ಕೆಲ ಕಡೆಗಳಲ್ಲಿ ಲಾಠಿ ಚಾರ್ಜ್​ ಕೂಡ ಆಗಿದೆ ಎಂದು ವರದಿಯಾಗಿದೆ. ಇದರ ನಡುವೆ ಪ್ರತಿಭಟನೆಯ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರವು ಸಿಜೆಪಿಯೊಂದಿಗೆ ಮಾತುಕತೆಗೆ ಮುಂದಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಕಾಕ್ರೋಚ್ ಜನತಾ ಪಕ್ಷದ ಪ್ರತಿನಿಧಿಗಳು […]

Continue Reading

ಚುನಾವಣಾ ಆಯೋಗವು ಪೌರತ್ವವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯಲ್ಲ: ಸುಪ್ರೀಂ ಕೋರ್ಟ್

ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ಚುನಾವಣಾ ಆಯೋಗಕ್ಕೆ ವಿಶೇಷ ಅಧಿಕಾರವಿದೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಹೆಗೆದುಹಾಕಿದ ಮಾತ್ರಕ್ಕೆ ವ್ಯಕ್ತಿಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಚುನಾವಣಾ ಆಯೋಗವು ಪೌರತ್ವವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ (SIR) ಸಂಬಂಧಿಸಿದಂತೆ ಶುಕ್ರವಾರ ನಡೆದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ಬಿಹಾರ SIR ಪ್ರಕರಣದಲ್ಲಿ ಈಗಾಗಲೇ ನೀಡಿರುವ ತೀರ್ಪನ್ನ ಉಲ್ಲೇಖಿಸಿದ ನ್ಯಾಯಾಲಯ, ಪೌರತ್ವವನ್ನ […]

Continue Reading

ಸಂತ್ರಸ್ತ ಕೈದಿಗಳ ಬಿಡುಗಡೆಗೆ ಏಕರೂಪ ನೀತಿ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಈವರೆಗೂ ಜೈಲಿನಲ್ಲಿ ಕೊಳೆಯುತ್ತಿರುವ ವೃದ್ಧರು ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಮೂರು ತಿಂಗಳ ಒಳಗಾಗಿ ಸೂಕ್ತ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್​ ಗುರುವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್​ ನಾಥ್​ ಮತ್ತು ಸಂದೀಪ್​ ಮೆಹ್ತಾ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಈ ನೀತಿಯು ಕೈದಿಗಳ ಬಿಡುಗಡೆಗೆ ಇರಬೇಕಾದ ಅರ್ಹತಾ ಮಾನದಂಡಗಳು ಮತ್ತು ಕಾರ್ಯವಿಧಾನದ ಚೌಕಟ್ಟನ್ನು ಸ್ಪಷ್ಟವಾಗಿ […]

Continue Reading

ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಪ್ರಕ್ರಿಯೆಗೆ ಅಧಿಕೃತವಾಗಿ ವೇಗ; ರಾಜ್ಯ ಚುನಾವಣಾ ಆಯೋಗದಿಂದ ಸಿದ್ಧತೆ, ಮಹತ್ವದ ಸುತ್ತೋಲೆ

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ಈಗ ಅಧಿಕೃತವಾಗಿ ವೇಗ ಸಿಕ್ಕಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ಈಗಿನಿಂದಲೇ ರಾಜಕೀಯ ಕಾವೇರತೊಡಗಿದೆ. 2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಹೊಸದಾಗಿ ಪುನರ್‌ರಚಿತವಾಗಿರುವ 42 ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ […]

Continue Reading

ಪಾರ್ಕಿಂಗ್‌ ದೀಪ, ಸೂಚನಾ ಫಲಕ ಇಲ್ಲದೆ ನಿಲ್ಲಿಸಲಾಗಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಮಾತ್ರಕ್ಕೆ, ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ, ಆತನೇ ತಪ್ಪಿತಸ್ಥ ಎಂಬ ವಾದವನ್ನು ಒಪ್ಪಲಾಗದು: ಸುಪ್ರೀಂ ಕೋರ್ಟ್

ರಾತ್ರಿ ವೇಳೆ ಜನನಿಬಿಡ ರಸ್ತೆಯಲ್ಲಿ ಪಾರ್ಕಿಂಗ್‌ ದೀಪ, ಪ್ರತಿಫಲಕ ಅಥವಾ ಸೂಚನಾ ಫಲಕಗಳಿಲ್ಲದೆ ನಿಲುಗಡೆ ಮಾಡಲಾದ ಟ್ರಕ್‌ಗೆ ಕಾರು ಚಾಲಕನೊಬ್ಬ ಹಿಂದಿನಿಂದ ಡಿಕ್ಕಿ ಹೊಡೆದರೆ, ಆ ಅಪಘಾತಕ್ಕೆ ಟ್ರಕ್ ಚಾಲಕ ಮತ್ತು ಅದರ ಮಾಲೀಕರೇ ಪ್ರಾಥಮಿಕ ಹೊಣೆಗಾರರಾಗುತ್ತಾರೆ. ಇದರಲ್ಲಿ ಕಾರು ಚಾಲಕನ ತಪ್ಪೇನೂ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೆಹಲಿಯಲ್ಲಿ 2013ರಲ್ಲಿ 20 ವರ್ಷದ ಚಾರ್ಟರ್ಡ್‌ ಅಕೌಂಟೆನ್ಸಿ ವಿದ್ಯಾರ್ಥಿಯೊಬ್ಬನ ಸಾವಿಗೆ ಕಾರಣವಾಗಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ, ಓರಿಯಂಟಲ್‌ ಇನ್ಶುರೆನ್ಸ್‌ ಕಂಪನಿ ಸಲ್ಲಿಸಿದ್ದ […]

Continue Reading