ಹೊಸ ಪಾಸ್‌ಪೋರ್ಟ್ ನಿಯಮ ಜಾರಿ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್ ಸಿಂಧುತ್ವದ ನಿಯಮ ಬದಲು

18 ವರ್ಷ ತುಂಬಿದ ತಕ್ಷಣ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದೆ ವಿದೇಶಾಂಗ ಸಚಿವಾಲಯವು ಪಾಸ್‌ಪೋರ್ಟ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್ ಸಿಂಧುತ್ವದ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ಮಗುವಿಗೆ 18 ವರ್ಷ ತುಂಬಿದ ತಕ್ಷಣ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದ್ದು, ನೂತನ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದೆ. ಮಕ್ಕಳ ಪಾಸ್‌ಪೋರ್ಟ್ ಪಡೆಯಲು ಬಯಸುವ ಪೋಷಕರಿಗೆ ವಿದೇಶಾಂಗ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಅಪ್ರಾಪ್ತರಿಗೆ ನೀಡುವ 26 ಪುಟಗಳ ಪಾಸ್‌ಪೋರ್ಟ್ ಸಿಂಧುತ್ವವನ್ನು ಗರಿಷ್ಠ 5 […]

Continue Reading

ಜನನ-ಮರಣಗಳ ನೋಂದಣಿಗೆ ಸಂಬಂಧಿಸಿ ಅಕ್ಟೋಬರ್ ಒಂದು 2026 ರಿಂದ ಹೊಸ ನಿಯಮ ಜಾರಿ

ಜನನ ಮತ್ತು ಮರಣಗಳ ನೋಂದಣಿಗೆ ಸಂಬಂಧಿಸಿದ ಅಕ್ಟೋಬರ್ 1, 2026ರಿಂದ ನಿಯಮಗಳು ಬದಲಾಗಲಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ, 2026ರ ಎಲ್ಲಾ ನಿಬಂಧನೆಗಳು ಅಂದಿನಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 2026ರ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು, ರಾಷ್ಟ್ರಪತಿಯ ಅಂಕಿತದ ಬಳಿಕ ಅದು ಕಾನೂನಾಗಿದೆ. ತಡವಾಗಿ ಜನನ ಅಥವಾ ಮರಣ ನೋಂದಣಿ ಮಾಡುವ ಸಂದರ್ಭಗಳಲ್ಲಿ ಇನ್ನು ಮುಂದೆ ಹೆಚ್ಚಿನ ಪರಿಶೀಲನೆ ಮತ್ತು ಅಧಿಕಾರಿಗಳ ಆದೇಶ ಅಗತ್ಯವಾಗಲಿದೆ. […]

Continue Reading

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ; ಪ್ರೀತಿಸುವ ನಾಟಕ, ಎಂಟು ಮಂದಿ ಕಾಮುಕರಿಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ. ಆರೋಪಿಗಳ ಬಂಧನ

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪವೊಡ್ಡಿ 8 ಮಂದಿ ಕಾಮುಕರು ಅನೇಕ ಬಾರಿ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಅಲ್ವಾಲ್ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಸುಮಾರು ಎಂಟು ಮಂದಿ ಪುರುಷರು 16 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದಳು ಎಂದು ತಿಳಿದು ಬಂದಿದೆ. ಮಚಾ ಬೊಲ್ಲಾರಮ್ ನಿವಾಸಿ ಮತ್ತು ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಬಾಲಕಿ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಜೆರ್ರಿ […]

Continue Reading

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ. 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಅಥವಾ ಧಾರ್ಮಿಕ ಬೋಧನೆ ನೀಡುವ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ಶಿಕ್ಷಣ ಸಚಿವಾಲಯಕ್ಕೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಸಚಿವಾಲಯ ಪಾಲಿಸಿಲ್ಲ ಎಂಬುದನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತಾ, ಶೀಲ್‌ ನಾಗೂ ಅವರಿದ್ದ […]

Continue Reading

ಲೈಂಗಿಕ ದುರುದ್ದೇಶವಿರದ ದೈಹಿಕ ಶಿಕ್ಷೆಯನ್ನು ಪೋಕ್ಸೋ ಎಂದು ಪರಿಗಣಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಲೈಂಗಿಕ ದುರುದ್ದೇಶವಿರದ ದೈಹಿಕ ಶಿಕ್ಷೆಯನ್ನು ಪೋಕ್ಸೋ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪಾಠವನ್ನು ಪೂರ್ಣ ಗೊಳಿಸಲು ವಿಫಲರಾದ ವಿದ್ಯಾರ್ಥಿನಿಯರಿಗೆ ಹೊಡೆಯುವುದು, ಅವರ ಕೈಗಳನ್ನು ಹಿಡಿಯುವುದು, ಬೆನ್ನು ಅಥವಾ ಸೊಂಟವನ್ನು ಮುಟ್ಟುವುದು ಸೇರಿ ಲೈಂಗಿಕ ಉದ್ದೇಶವಿಲ್ಲದೆ ಶಿಕ್ಷಕರು ನೀಡುವ ದೈಹಿಕ ಶಿಕ್ಷೆಯು ಪೋಕ್ಸೊ ಅಪರಾಧವಲ್ಲ, ಇದು ಪೋಕ್ಸೊ ಕಾಯ್ದೆಯ ಸೆಕ್ಷನ್‌ 10ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಶಿಕ್ಷಕರ ಇಂತಹ ನಡವಳಿಕೆಯು ಅನುಚಿತವಾದ ಶಿಕ್ಷೆಯ ಸ್ವರೂಪವಾಗಿದೆ. ಎಳೆಯ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಹೆಚ್ಚು ಸಂವೇದನಾಶೀಲರಾಗಿ ಇರಬೇಕು’ […]

Continue Reading

ಉದ್ಯೋಗ ಬಿಡಿ, ಇಲ್ಲದಿದ್ದರೆ ಸಾಯಲು ರೆಡಿಯಾಗಿ.! ಕಾಶ್ಮೀರಿ ಪಂಡಿತರಿಗೆ ಉಗ್ರರ ಬೆದರಿಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಕ್ತಪಾತದ ಭೀತಿ ಶುರುವಾಗಿದೆ. ಕಣಿವೆ ರಾಜ್ಯದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ವಿರುದ್ಧ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾದ ಅಂಗ ಸಂಸ್ಥೆಯಾದ ‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ ಮೂಲಕ ಜೀವ ಬೆದರಿಕೆ ನೀಡಿದೆ. ಉದ್ಯೋಗಕ್ಕೆ ತಕ್ಷಣ ರಾಜೀನಾಮೆ ನೀಡಿ, ಇಲ್ಲದಿದ್ದರೆ ಸಾಯಲು ತಯಾರಾಗಿ ಎಂದು ಉಗ್ರರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಕಳೆದೊಂದು ತಿಂಗಳಲ್ಲಿ 5-6 ಬಾರಿ ಇಂಥ ಬೆದರಿಕೆ ಸಂದೇಶಗಳು ಬಂದಿದ್ದು, ಸುಮಾರು 7000 ಕಾಶ್ಮೀರಿ ಪಂಡಿತರು ಆತಂಕದಲ್ಲಿದ್ದಾರೆ. ಈ ನಡುವೆ ಉದ್ಯೋಗಿಗಳ […]

Continue Reading

2029 ಕ್ಕೆ ದೇಶದಲ್ಲಿ ಜೆನ್ ಝೀ ಗಳದ್ದೇ ಕಾರುಬಾರು.. ಜೆನ್ ಝೀ ಗಳ ಹೃದಯ ಗೆದ್ದವರಿಗೆ ಗದ್ದುಗೆ ಫಿಕ್ಸ್!

ಹಿಂದೂ -ಮುಸ್ಲಿಂ ಖೇಲ್ ಖತಂ.. ಜೆನ್ ಝೀ -ಮಿಲೇನಿಯಲ್ಸ್ ತೀರ್ಪೆ ಫೈನಲ್ 2029 ಕ್ಕೆ ಚುನಾವಣೆಯ ಇಶ್ಯೂ ಯಾವುದೆಂದರೆ ಒಳ್ಳೆಯ ಗುಣಮಟ್ಟದ ಶಿಕ್ಷಣ, ಉಜ್ವಲ ಭವಿಷ್ಯಕ್ಕಾಗಿ ಯುವಜನತೆಗೆ ಉದ್ಯೋಗ, ಪರಿಸರದ ಬಗ್ಗೆ ಕಾಳಜಿ, ಆರೋಗ್ಯಕರ ಜೀವನ, ಬೆಲೆ ಏರಿಕೆಗೆ ಕಡಿವಾಣ, ಸ್ವಾಭಿಮಾನದ ಬದುಕು ಇದೇ ಮುಖ್ಯ ಅಸ್ತ್ರ ವಾಗುವ ಸಾಧ್ಯತೆಗಳಿವೆ. ದೇಶದೆಲ್ಲೆಡೆ ಜೆನ್ ಝೀ ಗಳ ಸಂಖ್ಯೆ ಗಣನೀಯ ಮಟ್ಟದಲ್ಲಿರುವುದರಿಂದ ಈ ತಲೆಮಾರನ್ನು ರಾಜಕಾರಣಿಗಳು ಭಾವನಾತ್ಮಕ ಅಂಶಗಳನ್ನು ಮುಂದಿಟ್ಟು ಮಂಕು ಮರುಳು ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಒಟ್ಟು […]

Continue Reading

ಡೇತ್ ನೋಟಲ್ಲಿ ದೋಷಿತನಾದ ಮಾತ್ರಕ್ಕೆ ಪ್ರಚೋದನೆಯ ಅಪರಾಧವಾಗಲ್ಲ

FIR ದಾಖಲಿಸಿದ ಮಾತ್ರಕ್ಕೆ ಆತ್ಮಹತ್ಯೆಗೆ ಕುಮ್ಮಕ್ಕು ಎನ್ನಲಾಗದು: ಸುಪ್ರೀಂ ಕೋರ್ಟ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದ ಮಾತ್ರಕ್ಕೆ ಆತನನ್ನು ಕ್ರಿಮಿನಲ್ ಅಪರಾಧಕ್ಕೆ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನಿನಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ದೃಢ ಹಕ್ಕನ್ನು ಹೊಂದಿದ್ದಾರೆ ಎಂದು ಅದು ಒತ್ತಿ ಹೇಳಿದೆ. ಯಾರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೋ ಅವರು ನಂತರ ಆತ್ಮಹತ್ಯೆ ಮಾಡಿಕೊಂಡರು ಎಂಬ ಕಾರಣಕ್ಕೆ […]

Continue Reading

ಪೋಷಕರನ್ನು ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ವಾಸಿಸುತ್ತಿರುವ ಮಕ್ಕಳು ಅಥವಾ ಇತರರು ಖಾಲಿ ಮಾಡಬೇಕು

ಹಿರಿಯ ನಾಗರಿಕರ ರಕ್ಷಣೆ, ಭದ್ರತೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ, ಅವರ ಆಸ್ತಿಯಲ್ಲಿ ವಾಸಿಸುತ್ತಿರುವ ಮಕ್ಕಳು ಅಥವಾ ಇತರರನ್ನು ತೆರವುಗೊಳಿಸಲು ‘ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ- 2007’ ರಡಿಯಲ್ಲಿ ರಚಿಸಲಾದ ನ್ಯಾಯಾಧಿಕರಣಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಪ್ರಮುಖ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು, ಪುತ್ರ ಮತ್ತು ಸೊಸೆಯನ್ನು ಮನೆಯಿಂದ ತೆರವುಗೊಳಿಸುವಂತೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು […]

Continue Reading

ಇಡೀ ದೇಶಕ್ಕೆ 2002ರ ವರ್ಷವನ್ನು ಮೂಲ ವರ್ಷವಾಗಿ ನಿಗದಿಪಡಿಸಲಾಗಿದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ: ಸುಪ್ರೀಂ ಕೋರ್ಟ್

ಸಿಕ್ಕಿಂನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SIR‌) 2002ನೇ ವರ್ಷವನ್ನು ಆಧಾರವಾಗಿರಿಸಿಕೊಂಡಿರುವ ಚುನಾವಣಾ ಆಯೋಗದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ. ಸಿಕ್ಕಿಂ ಮೂಲನಿವಾಸಿ ಸುರಕ್ಷಾ ಸಂಘವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಜಾಗೊಳಿಸಿದೆ. ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಗಾಗಿ 2002ರ ಬದಲಿಗೆ 1993 ಅನ್ನು ಮೂಲ ವರ್ಷವಾಗಿ ನಿಗದಿಪಡಿಸಲು ಚುನಾವಣಾ ಸಮಿತಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ […]

Continue Reading