ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ

ಕನಿಷ್ಠ ವೇತನ ಪುನರ್ ವಿಮರ್ಶೆಗೆ ಆಗ್ರಹಿಸಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳ ಸಂರಕ್ಷಿಸಲು ಒತ್ತಾಯಿಸಿ ನಗರದಲ್ಲಿಂದು ಸಾರ್ವಜನಿಕರ ಮಧ್ಯೆ ಸಹಿ ಸಂಗ್ರಹ ಚಳುವಳಿಯನ್ನು ನಡೆಸಲಾಯಿತು. ಕಾರ್ಮಿಕ ವರ್ಗದ ಆಶಾಕಿರಣವಾದ ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮದಿನಾರಣೆಯ ದಿನದಂದು ಕರ್ನಾಟಕ ರಾಜ್ಯಾದ್ಯಂತ ಸಹಿ ಸಂಗ್ರಹ ಚಳುವಳಿಯನ್ನು ನಡೆಸಬೇಕೆಂಬ CITU ಕರೆಯ ಮೇರೆಗೆ CITU ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಈ ಕಾರ್ಯಕ್ರಮವನ್ನು‌ ಆಯೋಜಿಸಲಾಯಿತು. ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿದ ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು […]

Continue Reading

ಡಾ. ಕೆ. ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ; ಗೋವಿಂದ ಭಟ್ ಇಂದಿನ ಕಲಾವಿದರಿಗೆ ಮಾದರಿ, ಆದರ್ಶಪ್ರಾಯರು: ಡಾ.ತಲ್ಲೂರು

ಉಡುಪಿ : ಸುದೀರ್ಘ ಕಾಲ ಕಲಾ ಸೇವೆಯನ್ನು ಮಾಡಿದ ಡಾ.ಕೆ.ಗೋವಿಂದ ಭಟ್ ಅವರಿಗಿದ್ದ ಯಕ್ಷಗಾನದ ಮೇಲಿನ ಪ್ರೀತಿ, ಕಲಾರಾಧನೆಯೇ ಅವರನ್ನು ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿದೆ. ಕಲಾವಿದ ಹೇಗೆ ಇರಬೇಕು ಎನ್ನುವುದಕ್ಕೆ ಗೋವಿಂದ ಭಟ್ ಇಂದಿನ ಕಲಾವಿದರಿಗೆ ಮಾದರಿಯಾಗಿದ್ದಾರೆ, ಆದರ್ಶಪ್ರಾಯರಾಗಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಬಂಟ್ವಾಳ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಸೋಮವಾರ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ನಡೆದ ಇತ್ತೀಚಿಗೆ ಅಗಲಿದ ಯಕ್ಷಗಾನದ ಮೇರುನಟ […]

Continue Reading

ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣ ಅನಿವಾರ್ಯ: ಕೆ.ಪಿ. ಅಹ್ಮದ್ ಹಾಜಿ

ಆಧುನಿಕ ಕಾಲಘಟ್ಟದ ಅಗತ್ಯತೆಗಳಿಗೆ ಅನುಗುಣವಾಗಿ ಹೊಸ ಪಠ್ಯಕ್ರಮ, ವಿವಿಧ ಶೈಕ್ಷಣಿಕ ಯೋಜನೆಗಳನ್ನು ರೂಪಿಸುತ್ತಿರುವ ‘ಸಮಸ್ತ’ ಸಂಸ್ಥೆಯ ಶೈಕ್ಷಣಿಕ ಸಾಧನೆ ಪ್ರಶಂಸನೀಯ ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ವ್ಯಕ್ತಿಯ ಉಜ್ವಲ ಭವಿಷ್ಯವನ್ನು ರೂಪಿಸಲು ಶಿಕ್ಷಣ ಅನಿವಾರ್ಯ ಆದ್ದರಿಂದ ಪ್ರತಿಯೊಬ್ಬರೂ ಇದರ ಮಹತ್ವವನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದು ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಆಕರ್ಷಣ್ ಅವರು ಹೇಳಿದರು. ಅವರು ಸಾಲ್ಮರ ದಾರುಲ್ […]

Continue Reading

ಮಂಗಳೂರು: ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ದಿಶಾ ರವರಿಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಸನ್ಮಾನ

ಮಂಗಳೂರು: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಇದರ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿ ವಿದ್ಯಾರ್ಥಿನಿ ಕುಮಾರಿ ದಿಶಾ ಮೂಡಬಿದ್ರಿ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸನ್ಮಾನ ಸ್ವೀಕರಿಸಿದ ಕು. ದಿಶಾರವರು ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತದೆ ಹಾಗೂ ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ದಿಶಾ ಅವರ ಪಾಲಕರಾದ […]

Continue Reading

ಗಂಜಿಮಠ: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ; ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲಿಕರ ಮತ್ತು ಆಯೋಜಕರ ವಿರುದ್ದ ಪ್ರಕರಣ ದಾಖಲು.

ಗಂಜಿಮಠ: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಗಂಜಿಮಠ ಒಂಡೇಲಾ ಬಳಿಯ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರು ಮತ್ತು ಆಯೋಜಕರ ವಿರುದ್ದ ಪ್ರಕರಣ ದಾಖಲು. ದಿನಾಂಕ 12-04-2026 ರಂದು ಮದ್ಯಾಹ್ನ 12 ಗಂಟೆಯಿಂದ 2-00 ಗಂಟೆಯ ಮಧ್ಯೆ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರು ಮದುವೆಗೆ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ಮದುವೆ ಕಾರ್ಯಕ್ರಮಕ್ಕೆ ಹಾಲ್ ನ್ನು ಬಾಡಿಗೆ […]

Continue Reading

ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸೇತುವೆ ನಿರ್ಮಾಣಕ್ಕೆ ಮತ್ತೆ ವಿಘ್ನ; ಸದ್ಯಕಿಲ್ಲ ಕಾಮಗಾರಿ ಭಾಗ್ಯ

ಒಟ್ಟಾರೆ ಕಾನೂನು, ಸರ್ಕಾರ, ಇಲಾಖೆಗಳ ನಡುವೆ ಅಮಾಯಕ ಆದಿವಾಸಿ ಕಾಡಿನ ಮಕ್ಕಳು ಹೈರಾಣು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡು, ಶಂಕುಸ್ಥಾಪನೆಯಾದರೂ, ಕಾಮಗಾರಿಗೆ ಬ್ರೇಕ್ ಬಿದ್ದಿದ್ದು, ಸದ್ಯ ಕಾಮಗಾರಿ ನಿಲ್ಲಿಸಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಭಿವೃದ್ಧಿಗಾಗಿ ಜನರ ನಿರಂತರ ಮೂರು ದಶಕಗಳ ಹೋರಾಟ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷ ಕಳೆದರೂ ಇಂದಿಗೂ ಇಲ್ಲಿ ವಿದ್ಯುತ್, […]

Continue Reading

ಬ್ಯಾರಿ ಮುಸ್ಲಿಂ ಸಮಾಜದಲ್ಲಿ ಶಿಕ್ಷಣ ಅಸಮಾನತೆ, ಕುಟುಂಬ ವ್ಯವಸ್ಥೆಯ ಶಿಥಿಲತೆ ಮತ್ತು ವಿವಾಹ ಬಿಕ್ಕಟ್ಟು; ಒಂದು ಆಳವಾದ ಸಾಮಾಜಿಕ ಅಧ್ಯಯನ ಪ್ರಾಸ್ತಾವಿಕ

✍️. ಇಸ್ಮಾಯಿಲ್ ಎಸ್. ವಕೀಲರು, ಲೇಖಕರು. ಮಂಗಳೂರು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಕರಾವಳಿ ನಾಡಿನಲ್ಲಿ ಶತಮಾನಗಳ ಕಾಲ ವ್ಯಾಪಾರ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಬ್ಯಾರಿ ಮುಸ್ಲಿಂ ಸಮಾಜ ಇಂದು ಒಂದು ನಿರ್ಣಾಯಕ ಸಂಕ್ರಮಣ ಕಾಲದಲ್ಲಿ ನಿಂತಿದೆ. ಈ ಸಮಾಜ ಹಿಂದೊಮ್ಮೆ ವರದಕ್ಷಿಣೆ ಎಂಬ ಪಿಡುಗು ಅನುಭವಿಸಿ, ಧಾರ್ಮಿಕ ಮತ್ತು ಸಾಮಾಜಿಕ ನೇತೃತ್ವದ ಮೂಲಕ ಅದರಿಂದ ಹೊರಬಂದ ಇತಿಹಾಸ ಹೊಂದಿದೆ. ಆ ಗೆಲುವು ನಿಜಕ್ಕೂ ಅಭಿಮಾನಾರ್ಹ. ಆದರೆ ಹಳೆಯ ಒಂದು […]

Continue Reading

ಸುಳ್ಯ: ಚಿನ್ನಾಭರಣ ಕಳ್ಳತನ ಪ್ರಕರಣ; ಆರೋಪಿಗಳಿಂದ ಚಿನ್ನಾಭರಣ ವಶ, ಪ್ರಕರಣ ದಾಖಲು

ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರು ನೀಡಿರುವ ದೂರಿನಂತೆ, ಪ್ರಕರಣದ ಆರೋಪಿತೆಯಾದ ಶೃತಿ @ ವಿಶ್ಮೀತ ಎಂಬಾಕೆಯೊಂದಿಗೆ ನನ್ನ ತಂದೆಗೆ ಸಂಪರ್ಕವಿದ್ದು, ಆಕೆಗೆ ಪುಣ್ಯಶ್ರೀಯವರ ತಂದೆ ಸಾಲವಾಗಿ ಸರಿ-ಸುಮಾರು 6 ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿದೆ. ಪಿರ್ಯಾದಿದಾರರು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಆರೋಪಿತೆ ಶೃತಿ ಯಾನೆ ವಿಶ್ಮೀತರವರಿಗೆ ತಿಳಿಸಿದ ಮೇರೆಗೆ ಆಕೆಯು ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡು ದಿನಾಂಕ: 07.04.2026 ರಂದು ಪಿರ್ಯಾದಿದಾರರ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರ ಮನೆಗೆ ಬಂದಿರುತ್ತಾರೆ. ದೂರುದಾರರು ಆ ಬಳಿಕ ಕೆಲಸಕ್ಕೆ ತೆರಳಿದ್ದು, […]

Continue Reading

ಮಂಗಳೂರು: ತಲೆ ಮರೆಸಿಕೊಂಡಿರುವ ಕುಖ್ಯಾತ ಆರೋಪಿಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರು ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ. ಕುಶಾಲನಗರ ನಿವಾಸಿ ಸುಲೈಮಾನ್ ಅಲಿಯಾಸ್ ಶಮೀರ್ ಮತ್ತು ಸಂಶುದ್ದೀನ್ ರೆಡ್ ಕಾರ್ನರ್ ನೋಟಿಸ್ ಜಾರಿ, ತಲೆಮರೆಸಿಕೊಂಡಿರುವ ಆರೋಪಿಗಳು. ಕುಶಾಲನಗರದ ಸುಲೈಮಾನ್ 2017ರಲ್ಲಿ ಮಂಗಳೂರಿನ ಉರ್ವ ಠಾಣಾ ಎಎಸ್ ಐ ಆಗಿದ್ದ ಐತಪ್ಪ ಅವರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳಲ್ಲಿ ಓರ್ವ. ಕೊಣಾಜೆ ಠಾಣಾ […]

Continue Reading

ಟೊಪ್ಪಿ ನೌಫಲ್ ಹತ್ಯೆಗೆ ಸಂಭ್ರಮಿಸಿದ್ದೇ ಟ್ಯಾಬ್ಲೆಟ್ ಆರೀಫ್ ಹತ್ಯೆಗೆ ಕಾರಣ.!

ಆರೀಫ್ ಹತ್ಯೆಯಲ್ಲಿ ಭಾಗಿಯಾದ ಏಳು ಆರೋಪಿಗಳು ಪೊಲೀಸ್ ವಶದಲ್ಲಿ.! ಹತ್ಯೆಗೂ ಇದೆ ಸೌದಿ ಲಿಂಕ್.! ತೊಕ್ಕೋಟು ಓವರ್ ಬ್ರಿಡ್ಜ್ ಮೇಲೆ ನಡೆದ ಅರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೆಲ ತಿಂಗಳುಗಳ ಹಿಂದೆ ಉಪ್ಪಳದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಬಜಾಲ್‌ನ ನೌಫಲ್ ಎಂಬಾತನ ಸಾವನ್ನು ಅರಿಫ್ ಸಂಭ್ರಮಿಸಿದ್ದೇ ಈ ಭೀಕರ ಕೊಲೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಈ ಸೇಡಿನ ಕೃತ್ಯಕ್ಕೆ […]

Continue Reading