ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಇನ್ನೂ ದಲಿತ, ಆದಿವಾಸಿಗಳ ಅಭಿವೃದ್ಧಿ ಮರೀಚಿಕೆ

ಕಾಲು ಸಂಕ, ರಸ್ತೆ ವಂಚಿತ ಕುಗ್ರಾಮಕ್ಕೆ ಅಧಿಕಾರಿಗಳ ದೌಡು, ಬೆಳ್ತಂಗಡಿಯಲ್ಲೊಂದು ಕಣ್ಣೀರ ಕಥೆ ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ ಹಾಡಿಗೆ ಕಿವಿಯಾದ ಅಧಿಕಾರಿಗಳುಬರೆಮೇಲು ನಡುಗುಡ್ಡೆ ಕಾಲುಸಂಕ ಪ್ರದೇಶ ಹಾಗೂ ರಸ್ತೆ ವಂಚಿತ ಬಜಕ್ರೆಸಾಲು ಪ್ರದೇಶಕ್ಕೆ ಅಧಿಕಾರಿಗಳ ದಂಡು. ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ/ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಪ್ರದೇಶದ ಕಾಲುಸಂಕದ ವಿಚಾರ ವ್ಯಾಪಕ ಚರ್ಚೆ ಆಕ್ರೋಶಕ್ಕೆ ಕಾರಣವಾಗಿತ್ತು. ಬಜಕ್ರೆಸಾಲು ಪ್ರದೇಶದ 8-10 ಪರಿಶಿಷ್ಟ […]

Continue Reading

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಮರು ತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಸೌಜನ್ಯ ತಾಯಿ ಕುಸುಮವತಿ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ.ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ವಿಚಾರಣೆ ವೇಳೆ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿತು. ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿತು. ಹದಿನಾಲ್ಕು ವರ್ಷ ಆಯಿತು. ಸರಿಯಾದ ತನಿಖೆಯಾಗಿಲ್ಲ. ಸಾಕ್ಷ್ಯಗಳಿಗೆ ಭದ್ರತೆ ಮುಂದುವರಿಸಿ. ಆದೇಶ ಮಾಡಿದ ಬಳಿಕ ಮಧ್ಯಂತರ ವರದಿ ಕೇಳುತ್ತೇವೆ. ಎಸ್‌ಐಟಿ […]

Continue Reading

ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶ- ಯು.ಟಿ ಕಾದರ್ ಭರವಸೆ, ಸಭೆ ನಿಗದಿ ಮಾಡಲು ಆಯುಕ್ತರಿಗೆ ಸೂಚನೆ

ಮಂಗಳೂರು : ನಗರದಲ್ಲಿ ಅನೇಕ ವರ್ಷಗಳಿಂದ ಪುರಭವನದ ಬಳಿ ವಾರದ ರಜಾದಿನದ ವ್ಯಾಪಾರ ನಡೆಯುತ್ತಿದ್ದ ಸಂಡೆ ಬಜಾರ್ ವ್ಯಾಪಾರಸ್ಥರನ್ನು ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಡೆ ಬಜಾರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಮನವಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾದ ಯು.ಟಿ ಕಾದರ್ ಅವರು ಇಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ಸಂಡೆ ಬಜಾರ್ ವ್ಯಾಪಾರಸ್ಥರ ಅಹವಾಲು ಆಲಿಸಿ, ಸಂಡೆ […]

Continue Reading

ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ಮನೆ ಕೆಲಸಕ್ಕೆ ಬಂದಾತನಿಂದ ಕಳ್ಳತನ ಕೃತ್ಯ; ಚಿನ್ನಾಭರಣ ಸಹಿತ ಆರೋಪಿಯ ಬಂಧನ

ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರ ಕೊಠಡಿಯ ಛಾವಣಿ ಮತ್ತು ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಸುತ್ತಿದ್ದ ಅವಧಿಯಲ್ಲಿ ಮನೆಯೊಳಗಿನ ಕಪಾಟಿನಲ್ಲಿಟ್ಟಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಒಟ್ಟು 6.37 ಲಕ್ಷ ರೂಪಾಯಿ ಬೆಲೆ ಬಾಳುವ ಸೊತ್ತುಗಳು ಕಳವಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ […]

Continue Reading

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ

ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ಠಾಣೆಗಳ ಅಪರಾಧ ಪ್ರಕರಣಗಳ ಪತ್ತೆ ಕಾರ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗುರುತಿಸಿ, ದಿನಾಂಕ 20-07-2026 ರಂದು ಮಾನ್ಯ ಪೊಲೀಸ್ ಆಯುಕ್ತರು 29 ಪೊಲೀಸ್ ಅಧಿಕಾರಿಗಳಿಗೆ ಹಾಗೂ 118 ಸಿಬ್ಬಂದಿಗಿಗೆ ನಗದು ಬಹುಮಾನ […]

Continue Reading

ಮಂಗಳೂರು: ಕಾರ್ಪೊರೇಷನ್ ಆರೋಗ್ಯ ಇಲಾಖೆಯಲ್ಲಿ ಸಡೇಸಾತ್ ಗಳು; ಜನನ-ಮರಣದಲ್ಲೂ ಭ್ರಷ್ಟಾಚಾರ.!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ಇಲಾಖೆ ಎಂಬುವುದೊಂದು ಇದೆ. ಯಾವ ಕರ್ಮಕ್ಕೆ ಈ ಇಲಾಖೆ ಅನ್ನುವುದು ಗೊತ್ತಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳೇ ಅನಾರೋಗ್ಯ ಪೀಡಿತರಾದರೆ ಆ ಇಲಾಖೆಯ ಬಗ್ಗೆ ನಾಗರೀಕರಿಗೆ ಯಾವ ರೇಂಜಿನಲ್ಲಿ ಅಸಡ್ಡೆ ಇರಬಹುದು ಅಲ್ಲವೇ. ಆರೋಗ್ಯ ಇಲಾಖೆಗೊಬ್ಬರು ಮುಖ್ಯಾಧಿಕಾರಿ. ಹತ್ತು ಹದಿನೈದು ಇನ್ಸ್ ಪೆಕ್ಟರ್ ಗಳು. ಇಪ್ಪತ್ತೈದಕ್ಕೂ ಅಧಿಕ ಸಿಬ್ಬಂದಿಗಳು. ಮಾತ್ರವಲ್ಲ ವಾರ್ಡ್ ವಾರ್ಡ್ ಗಳಿಗೆ ಆರೋಗ್ಯ ನಿರೀಕ್ಷಕ ಕಚೇರಿಗಳು. ಸರಕಾರದ ದುಡ್ಡನ್ನು ಬಾಚಿ ತಿನ್ನುವ ಕಾರ್ಪೊರೇಷನ್ ಆರೋಗ್ಯ ಕುಳಗಳು ಸಾರ್ವಜನಿಕರಿಗೆ ಒಂದು ನಯಾಪೈಸೆಯ […]

Continue Reading

ನೀಟ್ ಫಲಿತಾಂಶ: ಕಮ್ಯೂನಿಟಿ ಸೆಂಟರ್ ನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ; ಹದಿನೈದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ MBBS

ನೀಟ್ ಎದುರಿಸಿದ 108 ವಿದ್ಯಾರ್ಥಿಗಳ ಪೈಕಿ, ಪ್ರತಿ ವಿದ್ಯಾರ್ಥಿಯು ಸರಕಾರಿ ಪ್ರಾಯೋಜಿತ ಮೆಡಿಕಲ್ ಕೋರ್ಸ್ ಗೆ ಅರ್ಹತೆ; 100% ಫಲಿತಾಂಶ ಕಳೆದ ಐದು ವರ್ಷಗಳಿಂದ ಕಮ್ಯೂನಿಟಿ ಸೆಂಟರಿನ ನಿರಂತರ ಜಾಗೃತಿ, ಪ್ರೋತ್ಸಾಹ ಮತ್ತು ಪ್ರಯತ್ನದ ಫಲ, ನೀಟ್ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಬೆಂಬಲ, ಮಾರ್ಗದರ್ಶನ ಮತ್ತು ನೆರವು ಒದಗಿ ಬರುತ್ತಿದೆ. ಸಮುದಾಯದಲ್ಲೂ ಹಲವು ಶಿಕ್ಷಣ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಉನ್ನತ ಶ್ರೇಣಿಯಲ್ಲಿ ಆರಂಭಿಸಿದೆ. […]

Continue Reading

ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ: ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ಬಂಧನ 10 ಲಕ್ಷ ಮೌಲ್ಯದ ಆಭರಣ ವಶ

ಮಂಗಳೂರು ನಗರದ, ಉರ್ವ ಮಾರ್ಕೆಟ್ ಬಳಿಯ ಮಠದಕಣಿ ಎಂಬಲ್ಲಿಯ ಮನೆಯವರು ದಿನಾಂಕ 11-07-2026 ರಂದು ಸಂಜೆ ಮನೆಗೆ ಲಾಕ್ ಮಾಡಿ, ಬಂಟ್ವಾಳದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ದಿನಾಂಕ 12-07-2026 ರಂದು ವಾಪಾಸು ಬಂದು ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಒಡೆದು ಯಾರೋ ಕಳ್ಳರು ಒಳ ನುಗ್ಗಿ ಮನೆಯಲ್ಲಿದ್ದ ಸುಮಾರು 64 ಗ್ರಾಂ ತೂಕದ ಚಿನ್ನಾಭರಣ ಹಾಗೂ 25 ಸಾವಿರ ರೂ. ಸೇರಿದಂತೆ ಒಟ್ಟು 8 ಲಕ್ಷದ 57 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ […]

Continue Reading

ಮಂಗಳೂರಿನಲ್ಲಿ ಮತ್ತೆ ಚಾಕು, ಚೂರಿಯ ಆರ್ಭಟ.. ಈ ಬಾರಿ ಟಾರ್ಗೆಟ್ ಮಾತ್ರ ಅಮಾಯಕ ಹೆಣ್ಮಕ್ಕಳು.. ಏನಾಗುತ್ತಿದೆ ಮಂಗಳೂರಿನಲ್ಲಿ..?

ಪುರುಷರ ಕಟ್ಟೆಯಲ್ಲಿ ಪೌರುಷ ತೋರಿಸಿದ ದರ್ಮ ರಕ್ಷಕರು ಪುಲ್ ಸೈಲೆಂಟ್.. ಸಂಘಟನೆಗಳ ಉಸ್ಕು ದಮ್ಮಿಲ್ಲ.. ಹಂತಕ, ಸಂತ್ರಸ್ತೆ ಒಂದೇ ಧರ್ಮೀಯರಾದರೆ ಅದು ಅಪರಾಧ ಅಲ್ಲವೇ.. ಒನ್ಸ್ ಎಗೈನ್.. ಮಂಗಳೂರಿನಲ್ಲಿ ಮತ್ತೆ ಚಾಕು,ಚೂರಿಗಳದ್ದೇ ಸದ್ದು. ಮರ್ಡರ್ ಸಿಟಿ ಅಂತ ಕಳಂಕ ಹೊತ್ತಿದ್ದ ಮಂಗಳೂರಿನಲ್ಲಿ ಈ ಬಾರಿ ಮತೀಯ ಸಂಘರ್ಷ, ಮತೀಯ ಹತ್ಯೆಯ ಕಾರಣಕ್ಕಾಗಿ ಸುದ್ದಿ ಮಾಡುತ್ತಿಲ್ಲ. ಬದಲಾಗಿ ಉಭಯ ಧರ್ಮದ ಅಮಾಯಕ ಹೆಣ್ಮಕ್ಕಳು ಟಾರ್ಗೆಟ್ ಆಗುತ್ತಿದ್ದಾರೆ. ಅಸಲಿಗೆ ಹಂತಕರು ಮತ್ತು ಸಂತ್ರಸ್ತೆಯರು ಒಂದೇ ಧರ್ಮಕ್ಕೆ ಸೇರಿರುವುದರಿಂದ ಸಣ್ಣ ಸಣ್ಣ […]

Continue Reading

ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ: ಖೋಟಾ ನೋಟು ಮುದ್ರಣ ಜಾಲ ಪತ್ತೆ. ಏಳು ಮಂದಿ ಆರೋಪಿಗಳ ಬಂಧನ; ಪ್ರಿಂಟಿಗ್ ಸಾಮಾಗ್ರಿ ವಶ

ಬೆಳ್ತಂಗಡಿ: ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಭಾರತೀಯ ನಕಲಿ ನೋಟುಗಳನ್ನು ಮುದ್ರಿಸುತ್ತಿರುವ ಬಗ್ಗೆ, ಉಪ್ಪಿನಂಗಡಿ ಠಾಣಾ ಪೊಲೀಸರಿಗೆ ಬಂದ ಖಚಿತ ಮಾಹಿತಿ ಬಂದ ಮೇರೆಗೆ, ದಿನಾಂಕ: 16.07.2026 ರಂದು ಬೆಳಗ್ಗಿನ ಜಾವ ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿ, 500 ರೂ. ಮುಖಬೆಲೆಯ ನೋಟು, ಗಣಕಯಂತ್ರ, ಝರಾಕ್ಸ್ ಮೆಷಿನ್, ಸೀಲ್ ಗಳು ಸೇರಿದಂತೆ ಇತರ ಸೊತ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 103/2026 […]

Continue Reading