MRPL ನಲ್ಲಿ ನಿರ್ಲಕ್ಷ್ಯಕ್ಕೆ ಆದಿವಾಸಿ ವಲಸೆ ಕಾರ್ಮಿಕ ಬಲಿ. ಸೂಕ್ತ ಪರಿಹಾರ, ಹಾಗೂ ಕಂಪೆನಿಯ ಮೇಲೆ ಕಠಿಣ ಕ್ರಮಕ್ಕೆ ಹೋರಾಟ ಸಮಿತಿ ಆಗ್ರಹ: ಮುನೀರ್ ಕಾಟಿಪಳ್ಳ
MRPL ನ ಹೈಡ್ರೋಲಿಕ್ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕನಾಗಿ ನಿಯೋಜನೆಗೊಂಡಿದ್ದ ಮಂಗಲ್ ಎಂಬ ಜಾರ್ಖಂಡ್ ಮೂಲದ ಆದಿವಾಸಿಯೊಬ್ಬ ಕರ್ತವ್ಯದ ಸಂದರ್ಭದಲ್ಲಿ ಅವಘಡದಲ್ಲಿ ಮೃತ ಪಟ್ಟಿರುವುದಾಗಿ ಸುದ್ದಿಯಾಗಿದೆ. ಕಂಪೆನಿಯ ನಿರ್ಲಕ್ಷ್ಯ, ಸರಿಯಾದ ಜೀವರಕ್ಷಕ ವ್ಯವಸ್ಥೆಗಳಿಲ್ಲದೆ ಕೆಲಸಕ್ಕೆ ನಿಯೋಜಿಸಿರುವುದರಿಂದ ಈ ಅವಘಡ ಸಂಭವಿಸಿ ವಲಸೆ ಕಾರ್ಮಿಕ ಮೃತ ಪಟ್ಟಿರುವುದಾಗಿ ಮಾಹಿತಿಗಳಿದ್ದು, ಎಮ್ಆರ್ ಪಿಎಲ್ ಕಂಪೆನಿಯು ಮೃತ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು, ನಿರ್ಲಕ್ಷ್ಯದಿಂದ ಅವಘಡಕ್ಕೆ ಕಾರಣವಾಗಿರುವ ಕಂಪೆನಿಯ ವಿರುದ್ದ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು […]
Continue Reading