ಇಲ್ಲಿ ಗುಂಡಿ ದಾಟಲು ಗುಂಡಿಗೆ ಬೇಕು.! ಸರಲಿಕಟ್ಟೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರೆ ನಟ್ಟು ಬೋಲ್ಟು ಲೂಸು-ಲೂಸು

ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಈ ರಸ್ತೆ ಸರ್ವ ಧರ್ಮೀಯ ಬಾಂಧವರಿಗೆ ನನ್ನ ನಮಸ್ಕಾರಗಳು. ನನ್ನನ್ನು ನೀವು ರಾತ್ರಿ-ಹಗಲು ಅನ್ನದೆ ಉಪಯೋಗಿಸಿ, ತನ್ನ ಎದೆಯ ಮೇಲೆ ನೀವು ವಾಹನ ಓಡಿಸಿ ಇದೀಗ ನನಗೆ ಪ್ರಾಯವಾಗಿದೆ. ಮಳೆ ಗಾಳಿ, ಬಿಸಿಲು ಎನ್ನದೆ ನಿಮಗೆ ಮೈಯೊಡ್ಡಿ ಸೇವೆ ನೀಡಿದೆ. ಇದೀಗ ನನ್ನ ದೇಹದ ಹಲವು ಭಾಗಗಳಲ್ಲಿ ಗುಂಡಿ ಎಂಬ ಹುಣ್ಣಿನ ರೋಗ ಬಾಧಿಸಿದೆ. ಬಿಳಿ ಬಟ್ಟೆಯ ಖಾಧಿದಾರಿಗಳು ಗಿರ್ ಗೀಟ್ಲೆ ಹೊಡೆಯುವ ಲೈಟ್ ಹಾಕಿ, ನನ್ನ ಎದೆಯ ಮೇಲೆಯೇ […]

Continue Reading

ರಸ್ತೆ ದುರಸ್ತಿಗೆ ಆಗ್ರಹ: ಬೆಳ್ತಂಗಡಿ ತಾಲೂಕಿನ ಗ್ರಾಮಸ್ಥರಿಂದ ಮುಂಬರುವ ಚುನಾವಣೆಗಳ ಬಹಿಷ್ಕಾರದ ಎಚ್ಚರಿಕೆ

ಬೆಳ್ತಂಗಡಿ ತಾಲೂಕಿನ ಪುತ್ತಿಲ-ಬಾರ್ಯ-ತೆಕ್ಕಾರು-ಸರಳಿಕಟ್ಟೆ ನಾಗರಿಕರ ಗೋಳು ಕೇಳುವವರಾರು.? ಬೆಳ್ತಂಗಡಿ: ತಾಲೂಕಿನ ಪುತ್ತಿಲ ಗ್ರಾಮದಿಂದ ಸರಳಿಕಟ್ಟೆವರೆಗಿನ ಹಾಗೂ ಸುತ್ತಮುತ್ತಲಿನ ಒಳರಸ್ತೆಗಳ ಅತ್ಯಂತ ಶೋಚನೀಯ ಸ್ಥಿತಿಯನ್ನು ಖಂಡಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಪ್ರಮುಖ ರಸ್ತೆಗಳ ದುಸ್ಥಿತಿ ಮತ್ತು ಸಾರ್ವಜನಿಕರ ಗೋಳು ಕೇಳುವವರಿಲ್ಲಾಂತಗಿದೆ. ಸಂಪೂರ್ಣ ಹದಗೆಟ್ಟ ಸಂಪರ್ಕ ಕೊಂಡಿಪುತ್ತಿಲದಿಂದ ಸರಳಿಕಟ್ಟೆವರೆಗಿನ ಪ್ರಮುಖ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿವೆ. ಬಹುತೇಕ ಒಳರಸ್ತೆಗಳು ಅಭಿವೃದ್ಧಿ ಕಾಣದೆ ವರ್ಷಗಳೇ […]

Continue Reading

ಮನೆ ಹಾಗೂ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಗೃಹಿಣಿಯರು ರಾಷ್ಟ್ರ ನಿರ್ಮಾಣಕಾರರು

ಗೃಹಿಣಿಯರ ಕೆಲಸ ಪ್ರತಿ ತಿಂಗಳ 30,000 ರೂಪಾಯಿ ವೇತನಕ್ಕೆ ಸಮ: ಸುಪ್ರೀಂ ಕೋರ್ಟ್ ಮನೆ ಹಾಗೂ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಗೃಹಿಣಿಯರ ಕೆಲಸ ಸಮಾಜ ಮತ್ತು ರಾಷ್ಟ್ರ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಮಹತ್ವದ ಕಾರ್ಯ ನಿರ್ವಹಿಸುವ ಮಹಿಳೆಯರನ್ನು ಗೃಹಿಣಿ ಬದಲು ರಾಷ್ಟ್ರ ನಿರ್ಮಾಣಕಾರರು ಎಂದು ಪರಿಗಣಿಸುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಗೃಹಿಣಿಯರ ಕೆಲಸ ಪ್ರತಿ ತಿಂಗಳು 30 ಸಾವಿರ ರೂಪಾಯಿ ಸಂಬಳಕ್ಕೆ ಸಮ ಎಂದು ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ […]

Continue Reading

ಪಣಂಬೂರು ಪೊಲೀಸರ ಕಾರ್ಯಾಚರಣೆ: ಬಿಹಾರ ಮೂಲದ ಚಂದನ್ ಚೌಹಾನ್ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಎಂಬಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ (MSEZ) ಸೇರಿದ ನೀರು ಹರಿಯುವ ತೋಡಿನಲ್ಲಿ ದಿನಾಂಕ: 10-06-2026 ರಂದು ಬೆಳಗ್ಗೆ 8:00ರ ಸಮಯಕ್ಕೆ, ಸರಿ-ಸುಮಾರು 40 ವರ್ಷದ ಆಸುಪಾಸಿನ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆ ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕಿಶೋರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 82/2026 ರಂತೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ […]

Continue Reading

ಶಿರ್ತಾಡಿ: ಸರಕಾರಿ ಆಸ್ಪತ್ರೆಗೆ ಖಾಯಂ ರೋಗಿಗಳಿದ್ದಾರೆ; ಖಾಯಂ ವೈದ್ಯಾಧಿಕಾರಿಗಳಿಲ್ಲ.!

ಆರೋಗ್ಯ ಸಚಿವರು ಜಿಲ್ಲೆಯವರು, ಆಸ್ಪತ್ರೆಗೆ ಬಡಿದಿರುವ ರೋಗವ ವಾಸಿ ಮಾಡಿಯಾರಾ.? ಇದು ನಮ್ಮ ಆರೋಗ್ಯ ಮಂತ್ರಿ ಮಹೋದಯರ ಜಿಲ್ಲೆಯ ಪಕ್ಕದ ಊರು ಶಿರ್ತಾಡಿ. ಇಲ್ಲಿ ಬಹಳ ಹಳೇ ಕಾಲದ ಸರಕಾರಿ ಆಸ್ಪತ್ರೆವೊಂದಿದೆ. ಈ ಆಸ್ಪತ್ರೆ ಸರಿ-ಸುಮಾರು ಹನ್ನೆರಡು ಊರುಗಳಿಗೆ ಕೇಂದ್ರವಾಗಿರುವ ಬಡವರ ಸರಕಾರಿ ಆಸ್ಪತ್ರೆ. ಶಿರ್ತಾಡಿ ಆಸುಪಾಸಿನ ಹಲವು ಗ್ರಾಮಗಳಿಗೆ ಸರಕಾರಿ ಆಸ್ಪತ್ರೆ ಅಂತ ಇರುವುದು ಇದೊಂದೇ ಆರೋಗ್ಯ ಮಂತ್ರಿಗಳೇ.. ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಈ ಆಸ್ಪತ್ರೆ ಈಗ ಈ ನಾಡಿನ ನಾಗರಿಕರಿಗೆ ಬೇಕು. ಆದರೆ.. […]

Continue Reading

ಗಂಜಿಮಠ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ; ನೆರೆಮನೆಯ ಜಲೀಲ್ ಎಂಬಾತನ ದುಷ್ಕೃತ್ಯ ಬಯಲು

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠ ನಾರ್ಲಪದವು ಎಂಬಲ್ಲಿ ಹತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಲಕಿ ಮೇಲೆ ನಿರಂತರ ಅತ್ಯಾಚಾರಗೈದ ನೆರೆಮನೆಯ ಆರೋಪಿ ಜಲೀಲ್ ಎಂಬಾತನ ಮೇಲೆ ಪೋಸ್ಕೋ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಗೆ (ಹೆಸರು ಬದಲಿಸಲಾಗಿದೆ) ಆರು ವರ್ಷ ತುಂಬುವಾಗಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆ ಬಿಟ್ಟು ಹೋಗಿದ್ದಾರೆ. ಈಕೆ ತನ್ನ ತಾಯಿಯ ತಂಗಿ (ಚಿಕ್ಕಮ್ಮ) ಯೊಂದಿಗೆ ಗಂಜಿಮಠ ಸಮೀಪದ ನಾರ್ಲಪದವು […]

Continue Reading

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ವಿಶೇಷ ಕಾನೂನು: ವಕೀಲ ಮನೋರಾಜ್ ಸಲಹೆಗೆ ಕಾನೂನು ಆಯೋಗ ಅಸ್ತು, ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಲೂನ್‌ಗಳು, ಸ್ಪಾ/ಮಸಾಜ್ ಕೇಂದ್ರಗಳು, ಬ್ಯೂಟಿ ಪಾರ್ಲರ್‌ಗಳು, ಯುನಿಸೆಕ್ಸ್ ಸಲೂನ್‌ಗಳು ಹಾಗೂ ಜಿಮ್ನೇಷಿಯಂಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲು ಕರ್ನಾಟಕ ಕಾನೂನು ಆಯೋಗ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ. ಮಂಗಳೂರಿನ ಮಾಜಿ ಸರ್ಕಾರಿ ವಕೀಲ ಮನೋರಾಜ್ ರಾಜೀವ ಅವರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಆಯೋಗ ತನ್ನ 76ನೇ ವರದಿಯಲ್ಲಿ ಈ ಶಿಫಾರಸುಗಳನ್ನು ನೀಡಿದೆ. ಪ್ರಸ್ತುತ ರಾಜ್ಯದಲ್ಲಿ ಸ್ಪಾ ಮತ್ತು ಮಸಾಜ್ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನೇರವಾಗಿ ನಿಯಂತ್ರಿಸುವ ಸ್ಪಷ್ಟ ಕಾನೂನು ಇಲ್ಲ. ಈ ಹಿನ್ನೆಲೆಯಲ್ಲಿ […]

Continue Reading

ನಾವೂರು: ಒಂಬತ್ತು ವರ್ಷಗಳ ಹಿಂದೆ ಡಾಮರೀಕರಣಗೊಂಡ ರಸ್ತೆ; ಇಂದು ಕಂಬಳದ ಗದ್ದೆಯನ್ನು ನಾಚಿಸುವಂತಾಗಿದೆ

ಇದು ಕೇವಲ ಒಂಬತ್ತು ವರ್ಷಗಳ ಹಿಂದೆ ನಡೆದ ರಸ್ತೆ ಡಾಮರೀಕರಣಗೊಂಡ ರಸ್ತೆಯ ಇಂದಿನ ಪರಿಸ್ಥಿತಿ. ಇಲ್ಲಿ ರಸ್ತೆಯಲ್ಲಿ ಗುಂಡಿ ಇದೆಯೋ.. ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ.. ಎಂದು ಅರ್ಥವಾಗದ ಸ್ಥಿತಿಯಲ್ಲಿದೆ.! ಇದು ನಾವೂರು ಗ್ರಾಮದ ಕೈಕಂಬ ಜಂಕ್ಷನ್ ನಿಂದ ಮೂರು ಮಾರ್ಗ ಸಂಪರ್ಕಿಸುವ ರಸ್ತೆಯ ಕಥೆ, ವ್ಯಥೆ.! ನಾವೂರು ಗ್ರಾಮದ ಕೈಕಂಬ ಜಂಕ್ಷನ್ ನಿಂದ ಫಾರೆಸ್ಟ್ ಬಂಗಲೆಗೆ ಸಂಪರ್ಕಿಸುವ 1.40 ಕಿಮೀ ದೂರದ ರಸ್ತೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಬೆಳ್ತಂಗಡಿ ಇದರಿಂದ 50 ಲಕ್ಷ ರೂಪಾಯಿ […]

Continue Reading

ಕುಖ್ಯಾತ ರೌಡಿ ಮನೋಜ್ ಕೋಡಿಕೆರೆ ಮತ್ತು ಚೇತು ಪಡೀಲ್ ಬಂಧನ.

ಬಾತ್ಮೀದಾರರಿಗೆ ಘೋಷಿಸಲಾಗಿದ್ದ ನಗದು ಮೊತ್ತವನ್ನು ಪೊಲೀಸ್ ಇಲಾಖೆಯಿಂದ ವಿತರಣೆ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೋಕಾ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ಘೋಷಿಸಲಾಗಿದ್ದ ನಗದು ಮೊತ್ತವನ್ನು ಪೊಲೀಸ್ ಇಲಾಖೆಯಿಂದ ನೀಡಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಕೋಕಾ ಕಾಯ್ದೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆ ಹಾಗೂ ಚೇತನ್ @ ಚೇತು ಪಡೀಲ್ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಸಾರ್ವಜನಿಕರಿಂದ ಮಾಹಿತಿ ಕೋರಿದ್ದ […]

Continue Reading

ಯು ಟಿ ಖಾದರ್ ಖಾಸಗಿ ವೈದ್ಯಕೀಯ ಕಾಲೇಜುಗಳ ಸಚಿವರಂತೆ ವರ್ತಿಸುತ್ತಿದ್ದಾರೆ : ಮುನೀರ್ ಕಾಟಿಪಳ್ಳ ಕಿಡಿ

ಸಿಪಿಐಎಂ ವತಿಯಿಂದ ಉಳ್ಳಾಲ ಸರಕಾರಿ ಆಸ್ಪತ್ರೆ ಮುಂಭಾಗ ಮಾನವ ಸರಪಳಿ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ, ಸರಕಾರಿ ಆಸ್ಪತ್ರೆಗಳನ್ನು ರಕ್ಷಿಸಿ ಎಂಬ ಬೇಡಿಕೆಯೊಂದಿಗೆ ಸಿಪಿಐಎಂ ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ ಉಳ್ಳಾಲ ಸಮುದಾಯ ಆಸ್ಪತ್ರೆ ಮುಂಭಾಗ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಮಾನವ ಸರಪಳಿ ತರುವಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಆರೋಗ್ಯ ರಂಗ ವ್ಯಾಪಾರೀಕರಣಗೊಳ್ಳಬಾರದು ಎಂಬುದು ಸಂವಿಧಾನದ ಆಶಯ. ಖಾಸಗಿ ಆಸ್ಪತ್ರೆಗಳ […]

Continue Reading