ಜೈನಮುನಿಯನ್ನೇ ಹತ್ಯೆಗೈದ ಖತರ್ನಾಕ್ ಪಾಪಿಗಳು; ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಮನಿಗಳನ್ನೇ ಮುಗಿಸಿ ಬಿಟ್ಟರು.!

ರಾಜ್ಯ

ಚಿಕ್ಕೊಡಿಯ ಹಿರೇಕೋಡಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿಮಹಾರಾಜರ ಸ್ವಾಮೀಜಿಗೆ ಕರೆಂಟ್ ಶಾಕ್ ನೀಡಿ ಟಾರ್ಚರ್ ನೀಡಿ, ನಂತರ ದೇಹವನ್ನು ತುಂಡು ತುಂಡಾಗಿ ಭೀಕರವಾಗಿ ಕತ್ತರಿಸಿ ಕೊಲೆ ಮಾಡಲಾಗಿದೆ.ಜುಲೈ 5ರಂದು ನಾಪತ್ತೆಯಾಗಿದ್ದ ಸ್ವಾಮೀಜಿ ಕುರಿತು ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಪೊಲೀಸರು ಬೆನ್ನಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು. ಆಗ ಪ್ರಕರಣದ ಭಯಾನಕತೆ ಹೊರಬಿದ್ದಿದೆ.

ಕೊಳವೆ ಬಾವಿಯಲ್ಲಿ ಶವ ಎಸೆದಿರುವುದಾಗಿ ಆರೋಪಿ ನಾರಾಯಣ ಮಾಳಿ, ಹುಸೇನ್ ಒಪ್ಪಿಕೊಂಡಿದ್ದರು.ಹೀಗಾಗಿ ಕೊಳವೆ ಬಾವಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.ಆರೋಪಿ ನಾರಾಯಣನ ಜೊತೆ ಜೈನ ಮುನಿಗೆ ಉತ್ತಮ ಸಂಬಂಧ ಇತ್ತು. ಮುನಿಗಳು ಹಂತಕ ನಾರಾಯಣನಿಗೆ 6 ಲಕ್ಷ ರೂ. ಹಣ ನೀಡಿದ್ದರು. ನಂತರ ಈ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದರು. ಹೀಗಾಗಿಯೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಜುಲೈ 5ರ ರಾತ್ರಿ ನಂದಿ ಪರ್ವತ ಆಶ್ರಮದ ಕೋಣೆಯಲ್ಲಿ ಹತ್ಯೆ ನಡೆಸಿದ್ದರು.ಪೊಲೀಸರ ವಿಚಾರಣೆಯ ವೇಳೆ ಅವರಿಬ್ಬರು ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಒಮ್ಮೆ ನದಿಯಲ್ಲಿ ಶವ ಎಸೆದಿರುವುದಾಗಿ ಮತ್ತೊಮ್ಮೆ ಕೊಳವೆ ಭಾವಿಯಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದರು. ತೀವ್ರ ವಿಚಾರಣೆ ಬಳಿಕ ಘಟನೆಯನ್ನು ಆರೋಪಿಗಳು ಒಪ್ಪಿಕೊಂಡಿದ್ದು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಜುಲೈ 5 ರಂದು ಅಡುಗೆ ಸಹಾಯಕಿ ಕೆಲಸ ಮುಗಿಸಿ ಹೋಗುತ್ತಿದ್ದಂತೆ ಆರೋಪಿಗಳು ಕೊಲೆಗೆ ಸ್ಕೆಚ್ ಹಾಕಿದ್ದಾರೆ. ವಿದ್ಯುತ್ ಶಾಕ್ ನೀಡಿ ಕತ್ತು ಹಿಸುಕಿ ಆರೋಪಿ ನಾರಾಯಣ ಕೊಲೆ ಮಾಡಿದ್ದಾನೆ.ನಂತರ ಸ್ನೇಹಿತ ಹುಸೇನ್‌ಗೆ ಕರೆಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಸ್ವಾಮೀಜಿ ಶವವನ್ನು ಇಬ್ಬರು ಜೊತೆಗೂಡಿ ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹಂತಕರು 39 ಕಿ.ಮೀ ಬೈಕ್ ಮೇಲೆಯೇ ಶವ ಸಾಗಿಸಿದ್ದಾರೆ. ಆನಂತರ ಕೊಳವೆ ಬಾವಿಯಲ್ಲಿ ಎಸೆದಿದ್ದಾರೆ