ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮೃತಪಟ್ಟ ಪ್ರಕರಣ: ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ, ಹತ್ತು ಲಕ್ಷ ರೂ. ಪರಿಹಾರಕ್ಕೆ ಆದೇಶ: ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಗರ್ಭಿಣಿ ಮೃತಪಟ್ಟ ಪ್ರಕರಣದಲ್ಲಿ ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ, ವೈದ್ಯರಿಂದ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ ಸಂಭವಿಸಿದೆ ಎಂದು ತೀರ್ಪು ನೀಡಿ, ದೂರುದಾರ (ಮೃತಳ ಗಂಡ) ರವರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದೆ. ವ್ಯಾಜ್ಯ ವೆಚ್ಚವಾಗಿ ರೂ.30 ಸಾವಿರ ನೀಡುವಂತೆ ಆದೇಶ ನೀಡಿದೆ. ಅದೇ ರೀತಿ 10 ಲಕ್ಷದ ಮೊತ್ತದ ಜೊತೆಗೆ 6 ಶೇಕಡಾ ಬಡ್ಡಿಯನ್ನು ಪ್ರಕರಣ ದಾಖಲಾತಿ […]

Continue Reading

ಮದುವೆಗೆ ಒಲ್ಲೆ ಅನ್ನುತ್ತಿರುವ ಯುವತಿಯರು.! ‘ಅವಿವಾಹಿತ’ ಟ್ರೆಂಡ್ ಗೆ ಮಾರುಹೋದ ಹೊಸ ತಲೆಮಾರಿನ ಯುವತಿಯರು.!

ಭಾರತದಲ್ಲಿ ಬರೋಬ್ಬರಿ 72 ಮಿಲಿಯನ್ ಅವಿವಾಹಿತ ಮಹಿಳೆಯರು; ಮಾರ್ಗನ್ ಸ್ಟಾನ್ಲಿ ಬಿಚ್ಚಿಟ್ಟ ಭಯಾನಕ ಸರ್ವೇ ಈಗಿನದ್ದು ತಂತ್ರಜ್ಞಾನದ ಯುಗ. ಹೊಸ ಹೊಸ ಟ್ರೆಂಡ್ ಗೆ ಹೊಸ ತಲೆಮಾರು ಮಾರುಹೋಗುತ್ತಿದ್ದಾರೆ. ಅದರಲ್ಲೂ ಯುವತಿಯರಂತೂ ಹೊಸ ಟ್ರೆಂಡ್ ಫಾಲೋ ಮಾಡುತ್ತಾ ಹೊಸ ಬಿಕ್ಕಟ್ಟಿಗೂ ಕಾರಣರಾಗುತ್ತಿದ್ದಾರೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅವಿವಾಹಿತ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಾರ್ಗನ್ ಸ್ಟಾನ್ಲಿ ಬಿಡುಗಡೆಗೊಳಿಸಿರುವ ಸರ್ವೇ ರಿಪೋರ್ಟ್ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ. ಯುವತಿಯರು ವಿವಾಹ ಬಂಧನ ಕ್ಕೆ ಒಲ್ಲೆ ಅನ್ನುತ್ತಿದ್ದು, 2030 […]

Continue Reading

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಕರುನಾಡ ಸೇವಾ ಕಣ್ಮಣಿ ರಾಜ್ಯ ಪ್ರಶಸ್ತಿ’

ಉಡುಪಿ : ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ವತಿಯಿಂದ ‘ರಂಗ ದಿಬ್ಬಣ- 2025′ ಕಾರ್ಯಕ್ರಮದಡಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ಸೋಮವಾರ ನಡೆದ ನಾಡು, ನುಡಿ, ನೆಲ, ಜಲ, ಕಲೆ ಭಾಷೆ, ಸಂಸ್ಕೃತಿ ಹಾಗೂ ಸಮಾಜ ಸೇವೆ ಮಾಡಿದ ನಾಡಿನ ಸಾಧಕರಿಗೆ ನೀಡುವಕರುನಾಡ ಸೇವಾ ಕಣ್ಮಣಿ ರಾಜ್ಯ ಪ್ರಶಸ್ತಿ’ ಯನ್ನು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಜಸ್ಟಿಸ್ […]

Continue Reading

ಸುಂದರ ಯುವತಿಯರನ್ನು ಬಳಸಿ ಹನಿಟ್ರ್ಯಾಪ್; ಪೊಲೀಸ್ ಪೇದೆ ಸಹಿತ ಐವರ ಬಂಧನ

ಸುಂದರವಾದ ಸುರಂಗಿಣಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಣ ದೋಚುತ್ತಿದ್ದ ಪೊಲೀಸ್ ಪೇದೆ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹನಿಟ್ರ್ಯಾಪ್ ಜಾಲದಲ್ಲಿ ಭಾಗಿಯಾಗಿದ್ದ ಸೂತ್ರದಾರಿ ಪಿರಿಯಾಪಟ್ಟಣ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಶಿವಣ್ಣಮೂರ್ತಿ ಸೇರಿಂದತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರ ಸುಂದರವಾದ ಹುಡುಗಿಯರನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಿ, ವಸೂಲಿಸಿ ಮಾಡುತ್ತಿದ್ದ ಗ್ಯಾಂಗ್ ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ಅವರನ್ನು ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದರು. […]

Continue Reading

ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ?; ವಿಜಯೇಂದ್ರ ಪಟ್ಟಾಭಿಷೇಕ ಗ್ಯಾರಂಟಿ

ಕುಮಾರಣ್ಣನ ಲೇಟೆಸ್ಟು ಯೋಚನೆ; ಮಹಿಳಾ ಕ್ಯಾಂಡಿಡೇಟ್ ಶೋಧಿಸುವ ಕೆಲಸಕ್ಕೆ ಚಾಲನೆ ✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳ ಹಿಂದೆ ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರನ್ನು ಸಂಪರ್ಕಿಸಿದ ಬಿಜೆಪಿಯ ವರಿಷ್ಟರು ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕನ್ನಡಪರ ಧ್ವನಿ ತಾರಕಕ್ಕೇರುವ ಮುನ್ನ ಅದನ್ನು ಶಾಂತಗೊಳಿಸಿ ಎಂಬುದು ಅವರ ಮಾತು.ಅಂದ ಹಾಗೆ ಕರ್ನಾಟಕದಲ್ಲಿ ಐಟಿ-ಬಿಟಿ ಯುಗ ಆರಂಭವಾದ ನಂತರ ದೇಶದ ವಿವಿಧ ಭಾಗಗಳಿಂದ ಬಂದು ಜನ ನೆಲೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಪರಭಾಷಿಕರು ಹೆಚ್ಚಾದಂತೆ ಕರ್ನಾಟಕದ ಆರ್ಥಿಕ, ಸಾಮಾಜಿಕ ಚೌಕಟ್ಟು ಬದಲಾಗುತ್ತಾ […]

Continue Reading

ಸವಣಾಲು ಕೂಡುಜಾಲು ಸಮೀಪದ ನದಿಯಲ್ಲಿ ಯುವಕರಿಬ್ಬರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ, ಸಿನಿಮೀಯ ರೀತಿಯಲ್ಲಿ ಬದುಕಿ ಉಳಿದ ಘಟನೆ ನಡೆದಿದೆ

ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುತ್ತಿರುವ ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ನದಿಯನ್ನು ಬೈಕ್ ಸಮೇತ ದಾಟುವ ಸಂದರ್ಭದಲ್ಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ. ಅದೃಷ್ಟವಶಾತ್ ಬೈಕ್ ನದಿ ಬದಿಯಲ್ಲಿ ಸಿಲುಕಿದ್ದು , ಯುವಕರಿಬ್ಬರು ಯಾವುದೋ ಬಳ್ಳಿಯ ಸಹಾಯದಿಂದ […]

Continue Reading

ಶಿಥಿಲಾವಸ್ಥೆಯಲ್ಲಿರುವ ಮೂರು ದಶಕಗಳ ನೀರಿನ ಟ್ಯಾಂಕ್. ಕುಸಿದು ಬೀಳುವ ಭೀತಿಯಲ್ಲಿ ಬಡ ಕುಟುಂಬಗಳು. ಸಾಲೆತ್ತೂರು ಗ್ರಾಮ ಪಂಚಾಯತ್ ನಿರ್ಲಕ್ಷ್ಯ.

ಮೂವತ್ತು ವರ್ಷ ಹಿಂದಿನ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ಕುಸಿಯುವ ಹಂತದಲ್ಲಿದ್ದರೂ ಸಾಲೆತ್ತೂರು ಗ್ರಾಮ ಪಂ.ಪಿ.ಡಿ.ಒ.ಎಚ್ಚೆತ್ತುಕೊಳ್ಳದ ಕಾರಣ ಜನ ಭೀತಿಯಲ್ಲಿ ಬದುಕುವಂತಾಗಿದೆ.ಇಲ್ಲಿನ ಪಾಲ್ತಾಜೆ ಹೊಸ ಕಾಲೋನಿಯಲ್ಲಿ ಮೂವತ್ತು ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯಲ್ಲಿ ನಿರ್ಮಾಣವಾಗಿದ್ದ ಕುಡಿಯುವ ನೀರಿನ ಟ್ಯಾಂಕ್ ಇದೀಗ ಕುಸಿಯುವ ಹಂತದಲ್ಲಿದೆ. ಸುಮಾರು ನಲುವತ್ತು ಅಡಿ ಎತ್ತರದಲ್ಲಿರುವ ಟ್ಯಾಂಕಿನ ಆಧಾರ ಸ್ತಂಭಗಳು ಶಿಥಿಲಗೊಂಡು ಒಳಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಅಸ್ತಿಪಂಜರದಂತೆ ಕಂಡುಬರುತ್ತಿವೆ. ಮೇಲ್ಭಾಗದಲ್ಲಿ ನೀರು ಸೋರುತ್ತಿದೆ. ಟ್ಯಾಂಕಿಗೆ ಹತ್ತುವ ಕಾಂಕ್ರೀಟ್ ಕಂಬದ ಮೆಟ್ಟಿಲುಗಳು ಯಾವುದೇ ಕ್ಷಣ […]

Continue Reading

ಮಸೀದಿಯ ಅಂಗಳಕ್ಕೆ ಬಂದು ಹಿಂದೂ ಬಾಂಧವರಿಂದ ರಕ್ತದಾನ. ಮಳಲಿ ಮಸೀದಿ, SKSSF ಯೂನಿಟ್ ‘ಸೌಹಾರ್ದ ರಕ್ತದಾನ ಶಿಬಿರ’ ದ ಝಲಕ್.!

ಐಕ್ಯತೆ ಒಡೆದು ದ್ವೇಷ ಹರಡಲು ಮುಂದಾಗಿದ್ದ ಸ್ವಯಂಘೋಷಿತ ಕೋಮುವಾದಿ ನಾಯಕರಿಗೆ ಮುಖಭಂಗ.! ಅದು ಮಂಗಳೂರು ತಾಲೂಕಿನ ಗಂಜಿಮಠ ಬಳಿಯ ಮಳಲಿ ಅನ್ನುವ ಪ್ರದೇಶ. ಯಾವುದೇ ಕೋಮು ಸೋಂಕು ಹರಡದೆ ಹಿಂದೂ -ಮುಸ್ಲಿಮರು ಪರಸ್ಪರ ಸೌಹಾರ್ದತೆಯಿಂದ ಇದ್ದ ಊರದು. ಇಲ್ಲಿನ ಸೌಹಾರ್ದತೆಗೆ ಯಾರದ್ದೋ ಕಣ್ಣು ಕುಕ್ಕಿತ್ತೋ ಗೊತ್ತಿಲ್ಲ. ಪರಸ್ಪರ ಸೌಹಾರ್ದತೆಯಿಂದಿದ್ದ ಊರಿನಲ್ಲಿ ದ್ವೇಷದ ಬೆಳೆ ಬಿತ್ತಲು ಕೆಲವರು ಹವಣಿಸಿದರು. ಶತಮಾನಗಳಷ್ಟು ಇತಿಹಾಸವಿರುವ ಪುರಾತನ ಮಸೀದಿ ಹಿಂದೂಗಳ ದೇವಾಲಯವಾಗಿತ್ತು ಅನ್ನುವ ಪುಕಾರು ಹಬ್ಬಿಸಿ ಸೌಹಾರ್ದದ ಊರಿನಲ್ಲಿ ಅಶಾಂತಿಯ ಕಿಡಿ ಹಬ್ಬಿಸಿದರು. […]

Continue Reading

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್

ಭಾರತದಲ್ಲಿ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕರಾವಳಿಯಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಎಂದರೆ ಒಂದು ಆರಾಧನೆಯಾಗಿದೆ. ಅದೇ ಅಂಡರ್ ಆರ್ಮ್ ಕ್ರಿಕೆಟ್ ನ ಕಥೆ ತುಳು ಸಿನಿಮಾದಲ್ಲಿ ಬರುತ್ತಿದೆ ಎಂದರೆ ಅಭಿಮಾನಿಗಳಿಗೆ ಒಂದು ಹಬ್ಬ. ಹೌದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಕಥೆಯನ್ನು ಗಜಾನನ ಕ್ರಿಕೆಟರ್ಸ್ ಸಿನಿಮಾದ ಮೂಲಕ ತೆರೆದಿಡಲಾಗಿದೆ. ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು ಚಿತ್ರ ಪ್ರೇಮಿಗಳೆಲ್ಲ ಹುಬ್ಬೇರಿಸಿ ನೋಡುತ್ತಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ಅನ್ವಿತಾ ಸಾಗರ್, […]

Continue Reading

2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್ 6 ಸಾವಿರ ಸೀಟುಗಳ ಕಡಿತ

64,047 ಸರಕಾರಿ ಕೋಟಾ ಸೀಟುಗಳು ಸೇರಿ 1.35 ಲಕ್ಷ ಸೀಟುಗಳು ಮಾತ್ರ ಲಭ್ಯ. ಕಂಪ್ಯೂಟರ್ ಸೈನ್ಸ್ ಗೆ ಈ ಬಾರಿ ಅತ್ಯಧಿಕ ಸೀಟು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಜಿನಿಯರಿಂಗ್ ಪದವಿ ಕೋರ್ಸ್ ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿದರೂ ಸೀಟುಗಳು ಸುಲಭದಲ್ಲಿ ಸಿಗಲು ಕಷ್ಟಪಡುವಂತಹ ಕಾಲವಿತ್ತು. ಆದರೆ ಈಗ ಆ ರೀತಿಯಿಲ್ಲ. ರಾಜ್ಯದಲ್ಲಿ ವಿವಿಧ ಸರಕಾರಿ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಉಳಿಯುತ್ತಿವೆ. ಪ್ರಸಕ್ತ 2025-26 ನೇ ಸಾಲಿನಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ […]

Continue Reading