ರೊನಾಲ್ಡೋ ಗೆ ಛಡಿಯೇಟು ಶಿಕ್ಷೆ ಮಾಧ್ಯಮಗಳ ಸುಳ್ಳು ಸುದ್ದಿ: ಇರಾನ್ ಸ್ಪಷ್ಟನೆ

ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಗೆ ಇರಾನ್ 99 ಛಡಿಯೇಟು ಶಿಕ್ಷೆ ನೀಡುವ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸ್ಪೇನ್ ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಈ ಸುದ್ದಿ ಆಧಾರರಹಿಣವಾಗಿದ್ದು, ಅದರಲ್ಲಿ ಸತ್ಯಾಂಶ ಇಲ್ಲವೆಂದು ಇರಾನ್ ಖಚಿತಪಡಿಸಿದೆ. ಪೋರ್ಚುಗಲ್ ಮೂಲದ ಪುಟ್ಬಾಲ್ ಆಟಗಾರ ಕಳೆದ ತಿಂಗಳು ಟೆಹರಾನ್ ಗೆ ಭೇಟಿ ನೀಡಿದ್ದ ವೇಳೆ ವಿಕಲಚೇತನ ಕಲಾವಿದೆ ಫಾತಿಮಾ ಹಮಾಮಿ ಅವರನ್ನು ಸಂಧಿಸಿದ್ದರು. ಈ ಸಂದರ್ಭದಲ್ಲಿ ರೊನಾಲ್ಡೋ ಆಕೆಯನ್ನು ಆಲಿಂಗಿಸಿ ಕೆನ್ನೆಗೆ ಮುತ್ತಿಕ್ಕಿದ್ದರು. […]

Continue Reading

ನವಜಾತ ಶಿಶು, ಮಕ್ಕಳು, ವೃದ್ಧರು ಎನ್ನದೆ ಇಸ್ರೇಲ್‌ ನಿಂದ ಭೀಕರ ಮಾರಣಹೋಮ: ವಿಶ್ವಸಂಸ್ಥೆ ಕಳವಳ

ಪ್ಯಾಲೆಸ್ತೀನ್ ಹಮಾಸ್ ಇಸ್ರೇಲ್‌ ನೆಲಕ್ಕೆ ಲಗ್ಗೆ ಇಟ್ಟು ಇಸ್ರೇಲ್ ದೇಶದ ನೂರಾರು ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ನಿರಂತರ ಬಾಂಬ್‌ಗಳ ಮಳೆ ಸುರಿಸುತ್ತಿದೆ. ಗಾಜಾಪಟ್ಟಿಗೆ ಸರಬರಾಜು ಆಗುತ್ತಿದ್ದ ಆಹಾರ, ನೀರು, ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. ಈ ಹಿನ್ನೆಲೆಯಲ್ಲಿ ಗಾಜಾಪಟ್ಟಿಯ ಪರಿಸ್ಥಿತಿ ಭೀಕರವಾಗಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ವಿದ್ಯುತ್, ಆಹಾರ ಹಾಗೂ ನೀರಿನ ಕೊರತೆಯ ಜೊತೆಯಲ್ಲೇ ಇಸ್ರೇಲ್ […]

Continue Reading

ಕುಣಿಕೆ ಬಿಗಿಯಲು ಇದ್ದಿದ್ದು ಬರೀ ಕೆಲವೇ ಸೆಕೆಂಡುಗಳು.. ಮರಣದಂಡನೆಯಿಂದ ಪಾರಾಗಿ ಬಂದ ಯುವಕ.!

ತಬೂಕಿನಲ್ಲಿ ನಡೆಯಿತು ಅಪರೂಪದ ಕ್ಷಮಾದಾನ ಅದು ಸೌದಿ ಅರೇಬಿಯಾ. ಭಾರತದಂತಲ್ಲ ಅಲ್ಲಿನ ಕಾನೂನು. ತಪ್ಪಿತಸ್ಥರಿಗೆ ಅಲ್ಲಿ ಗಲ್ಲು ಖಾಯಂ. ಮರಣದಂಡನೆಗೆ ಹೆದರಿ ಅಲ್ಲಿ ಅಪರಾಧಗಳು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕಮ್ಮಿ ಎಂದೇ ಹೇಳಬೇಕು. ಒಮ್ಮೊಮ್ಮೆ ಭಾರತದಲ್ಲಿ ಅಪರಾಧಗಳು ವಿಜೃಂಭಿಸುತ್ತಿರುವಾಗ ಸೌದಿಯಂತಹ ಕಟ್ಟುನಿಟ್ಟಿನ ಕಾನೂನುಗಳು ಇಲ್ಲಿ ಜಾರಿಯಾಗಬೇಕು ಎಂದು ಹೇಳುವವರಿದ್ದಾರೆ. ಆ ಮಟ್ಟಿಗೆ ಸೌದಿ ಕಾನೂನುಗಳು ಪವರ್ ಫುಲ್. ಒಬ್ಬನಿಗೆ ಆಯುಷ್ಯವಿದ್ದರೆ ಹೇಗೂ ಬದುಕಿ ಬರಬಹುದು ಅನ್ನುವುದಕ್ಕೆ ಸೌದಿ ಅರೇಬಿಯಾದ ತಬೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸೌದಿ […]

Continue Reading

ವೃತ್ತಿಗಾಗಿ ವಿದೇಶದಲ್ಲಿ ನೆಲೆಸಲಿದ್ದಾರೆಂದು ತಾಯಿಗೆ ಮಗುವಿನ ಸುರ್ಪಧಿ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಉತ್ತಮ ವೃತ್ತಿಜೀವನದ ನಿರೀಕ್ಷೆಗಳಿಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆಂದ ಮಾತ್ರಕ್ಕೆ ತಾಯಿಗೆ ಮಗುವಿನ ಸುಪರ್ದಿಯನ್ನು ನಿರಾಕರಿಸಲಾಗದು ಎಂಬುದಾಗಿ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮಗುವಿನ ಯೋಗಕ್ಷೇಮವು ಸುರಕ್ಷಿತವಾಗಿರುತ್ತದೆ ಎಂದಾದಲ್ಲಿ ಅಪೀಲುದಾರೆ ತಾಯಿಯು ಉತ್ತಮ ಭವಿಷ್ಯಕ್ಕಾಗಿ ಸ್ಥಳಾಂತರ ಹೊಂದುವುದನ್ನು ಮಗುವಿನ ಸುಪರ್ದಿಯನ್ನು ಕೋರುವುದಕ್ಕೆ ವಿರುದ್ಧವಾಗಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. ಮಗುವಿನ ಪೋಷಕರು ವಿಚ್ಛೇದನ […]

Continue Reading

ಅಕ್ರಮವಾಗಿ 328 ಕಿಡ್ನಿ ಕಸಿ: ಡಾಕ್ಟರ್ ಹಾಗೂ ಮೋಟಾರು ಮೆಕ್ಯಾನಿಕ್ ಬಂಧನ!

ಅಕ್ರಮವಾಗಿ ಸರಿ-ಸುಮಾರು 328 ಮೂತ್ರಪಿಂಡ ಕಸಿ ಮಾಡಿದ್ದ ವೈದ್ಯ ಮತ್ತು ಮೋಟಾರ್ ಮೆಕ್ಯಾನಿಕ್ ನಡೆಸುತ್ತಿದ್ದ ಅಂಗಾಂಗ ಕಳ್ಳಸಾಗಣೆ ಜಾಲವನ್ನು ಪಾಕಿಸ್ತಾನ ಪೊಲೀಸರು ಭೇದಿಸಿದ್ದಾರೆ.ವೈದ್ಯ ಫವಾದ್ ಮುಖ್ತಾರ್ ಬಂಧಿತ ಆರೋಪಿ. ದುಷ್ಕೃತ್ಯಕ್ಕಾಗಿ ಈಗಾಗಲೇ ಐದು ಬಾರಿ ಈತನನ್ನು ಬಂಧಿಸಲಾಗಿತ್ತು. ಆಸ್ಪತ್ರೆಗಳಿಂದ ಆಮಿಷವೊಡ್ಡಿ ದುರ್ಬಲ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಹಾಯಕ ಮತ್ತು ಅರಿವಳಿಕೆ ತಜ್ಞನಾಗಿ ಮೆಕ್ಯಾನಿಕ್ ನನ್ನು ವೈದ್ಯ ಬಳಸಿಕೊಳ್ಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.  ಖಾಸಗಿ ಮನೆಗಳಲ್ಲಿ ಕಿಡ್ನಿ ಕಸಿ ನಡೆಸಲಾಗುತಿತ್ತು. ಕೆಲವೊಮ್ಮೆ ರೋಗಿಗೆ ತಿಳಿಯದೆ, ಪ್ರತಿ ಮೂತ್ರಪಿಂಡಗಳನ್ನು 35,000 […]

Continue Reading

ಮತ್ತೆ ಸಾಮೂಹಿಕ ಲಸಿಕೀಕರಣಕ್ಕೆ ಜಗತ್ತು ಚಿಂತನೆ.. ಕೊರೊನಾಗಿಂತ ಮಾರಕ ಡಿಸೀಸ್ ‘ಎಕ್ಸ್’

ಕೋವಿಡ್-19 ಸಾಂಕ್ರಾಮಿಕವು ನಿಧಾನವಾಗಿ ಜನಜೀವನದ ನಡುವೆ ಹಾಸುಹೊಕ್ಕಾಗುತ್ತಿರುವ ನಡುವೆಯೇ ಅದಕ್ಕಿಂತಲೂ ಮಾರಕವಾದ ‘ಡಿಸಿಸ್ ಎಕ್ಸ್’ ಹಬ್ಬುವ ಆತಂಕವನ್ನು ಅಂತಾರಾಷ್ಟ್ರೀಯ ತಜ್ಞ ವೈದ್ಯರು ವ್ಯಕ್ತಪಡಿಸಿದ್ದಾರೆ. ‘ಕೋವಿಡ್ ಗಿಂತಲೂ ವಿನಾಶಕಾರಿಯಾದ ಸಾಂಕ್ರಾಮಿಕ ಎದುರಿಸಲು ವಿಶ್ವ ಸಜ್ಜಾಗುವ ಸ್ಥಿತಿ ನಿರ್ಮಾಣವಾಗಲಿದೆ.’ ಎಂದು ಬ್ರಿಟನ್ ಆರೋಗ್ಯ ತಜ್ಞೆ ಕೇಟ್ ಬಿಂಗಮ್ ಅವರು ಡೈಲಿಮೇಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “1919-20 ರ ಕಾಲದ ವಿನಾಶಕಾರಿ ಸ್ಪ್ಯಾನಿಶ್ ಪ್ಲೂ ಗೆ ಸಮಾನವಾದ ಪರಿಣಾಮವನ್ನು ಎಕ್ಸ್ ಎಂಬ ಹೊಸ ವೈರಾಣು ಜಗತ್ತಿನ ಮೇಲೆ ಬೀರಬಹುದು. ಸ್ಪ್ಯಾನಿಶ್ […]

Continue Reading

ನಿಜ್ಜರ್‌ ಹತ್ಯೆಯ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು, ಕೆನಡಾ ಜೊತೆ ಹಂಚಿಕೊಂಡರೇ.? ಅಥವಾ ಕೆನಡಾದ ಅಧಿಕಾರಿಗಳು ಕದ್ದಾಲಿಕೆಯ ಮೂಲಕ ಪಡಕೊಂಡರೇ.?

ವಾಷಿಂಗ್ಟನ್: ಸಿಖ್ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್‌ ಹತ್ಯೆಯ ನಂತರ ಆತನ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು, ಕೆನಡಾ ಜೊತೆ ಹಂಚಿಕೊಂಡಿದ್ದರು. ಆದರೆ, ಕೆನಡಾದ ಅಧಿಕಾರಿಗಳು ಕದ್ದಾಲಿಕೆಯ ಮೂಲಕ ಪಡೆದ ಮಾಹಿತಿ ಹೆಚ್ಚು ನಿರ್ಣಾಯಕವಾಗಿತ್ತು. ಆ ಮಾಹಿತಿ ಆಧರಿಸಿ, ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸಿತು ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ತನ್ನ ಕೆಲವು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಶನಿವಾರ ಈ ವರದಿ ಪ್ರಕಟಿಸಿದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, […]

Continue Reading

ಕೆನಡಾದ ಪ್ರಜೆಯ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟರು ನಡೆಸಿದ್ದಾರೆ: ಕೆನಡಾ ಪ್ರಧಾನಿ

ಅಸಂಬದ್ಧ ಹೇಳಿಕೆ ಎಂದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತ ಮತ್ತು ಕೆನಡಾ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತವು ಕೆನಡಾದಲ್ಲಿ ತನ್ನ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಿದೆ. ಬಿಎಲ್ ಎಸ್ ಇಂಟರ್‌ನ್ಯಾಶನಲ್ ಎಂಬ ಕೆನಡಿಯನ್ನರ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿ ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21, 2023 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ.  ಜೂನ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ […]

Continue Reading

ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ನೀಡಬೇಕು; ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ ಹೇಳಿದ್ದೇನೆ’: ಅಮೆರಿಕದ ಅಧ್ಯಕ್ಷ ಜೋ ಬೈಡನ್‌

ವಿಯೆಟ್ನಾಂ: ‘ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ನೀಡಬೇಕು ಎಂಬುದನ್ನು ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ ಹೇಳಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.ವಿಯೆಟ್ನಾಂನ ಹನೋಯಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾತುಕತೆ ವೇಳೆ (ಮೋದಿ ಜೊತೆಗೆ) ನಾಗರಿಕ ಸಮಾಜದಲ್ಲಿ ಮಾನವ ಹಕ್ಕುಗಳ ಮಹತ್ವ ಕುರಿತು ಒತ್ತಿ ಹೇಳಿದ್ದೇನೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಾಮುಖ್ಯತೆ ಬಗ್ಗೆಯೂ ಮನದಟ್ಟು ಮಾಡಿಕೊಟ್ಟಿದ್ದೇನೆ. ನಾನೂ ಕೂಡ ಗೌರವಿಸುತ್ತೇನೆ’ ಎಂದರು. ನವದೆಹಲಿಯಲ್ಲಿ […]

Continue Reading

ಸೌದಿ ಅರೇಬಿಯಾ: 20 ದಿನಕ್ಕಿಂತ ಹೆಚ್ಚು ಶಾಲೆಗೆ ಮಕ್ಕಳು ಗೈರಾದರೆ ಪೋಷಕರಿಗೆ ಜೈಲು ಶಿಕ್ಷೆ

ಸೂಕ್ತ ಕಾರಣವಿಲ್ಲದೆ ಮಕ್ಕಳು 20 ದಿನಗಳಿಗಿಂತ ಹೆಚ್ಚು ಶಾಲೆಗೆ ಗೈರು ಹಾಜರಾದರೆ ಅಂತಹ ಮಕ್ಕಳ ಪೋಷಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾದ ನಿಯಮವನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ. ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿಸಲು ಸೌದಿ ಅರೇಬಿಯಾ ಮಕ್ಕಳ ರಕ್ಷಣಾ ಕಾನೂನಿಗೆ ಅನುಸಾರವಾಗಿ ಈ ಕ್ರಮ ಜಾರಿಗೊಳಿಸಲಾಗಿದೆ. ಕಾನೂನು ಬದ್ಧ ಕ್ಷಮೆಯಿಲ್ಲದೆ ವಿದ್ಯಾರ್ಥಿಯು 20 ದಿನಗಳವರೆಗೆ ಗೈರು ಹಾಜರಾಗಿದ್ದರೆ, ಅವರ ತಂದೆ-ತಾಯಿ, ಪೋಷಕರನ್ನು ಮಕ್ಕಳ ರಕ್ಷಣಾ ಕಾನೂನಿನ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್ ಮೂಲಕ ತನಿಖೆಗೆ ಒಳಪಡಿಸಬಹುದು ಎಂದು ಗಲ್ಫ್ ನ್ಯೂಸ್ […]

Continue Reading