ಪಂಜಿಮೊಗರು ಸರಕಾರಿ ಶಾಲೆಯ ಆವರಣಗೋಡೆ ಕೆಡವಿಹಾಕಿರುವ ಕಾರ್ಪೊರೇಟರ್ ವಿರುದ್ಧ DYFI ಆಕ್ರೋಶ.

ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಮಂಗಳೂರು ಉತ್ತರ ಇಲ್ಲಿನ ಆವರಣಗೋಡೆ ನಿರ್ಮಾಣಕ್ಕೆ pwd ಇಲಾಖೆಯಿಂದ ಅನುದಾನ ಮಂಜೂರು ಆಗಿರುತ್ತದೆ. ಶಿಥಿಲಗೊಂಡಿದ್ದ ಹಳೆಯ ಆವರಣಗೋಡೆಯನ್ನು ಕೆಡವಿ ಹೊಸ ಗೋಡೆ ನಿರ್ಮಾಣ ಆರಂಭಿಸುವಾಗ ಸ್ಥಳೀಯ ಕಾರ್ಪೊರೇಟರ್ ಅನಿಲ್‌ಕುಮಾರ್ ಕಾಮಗಾರಿಗೆ ತಡೆಯೊಡ್ಡಿ ಅಕ್ರಮವಾಗಿ ಶಾಲೆಯ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿರುತ್ತಾರೆ. ಆದರೆ ರಸ್ತೆ ಅಗಲೀಕರಣದ ಕುರಿತು ಶಾಲೆಯ ಹಾಗೂ ಶಿಕ್ಷಣ ಇಲಾಖೆಯ ಯಾವುದೇ ಅನುಮತಿ ಪಡೆಯದ ಕಾರಣ ಶಾಲೆಯ ಜಾಗವನ್ನು ಅತಿಕ್ರಮಣ ಮಾಡದಂತೆ ಶಾಲಾ ಮಂಡಳಿ ಆದೇಶಿಸಿರುತ್ತದೆ. ಆದರೂ ಕಾರ್ಪೊರೇಟರ್ […]

Continue Reading

ಬಿಜೆಪಿ ಪರಿವಾರದ ಅಜೆಂಡಾದಂತ ಮುಸ್ಲಿಂ ದ್ವೇಷದಿಂದ ಕುರುಡಾಗುವುದನ್ನು ಬಿಟ್ಟು, ಯುವಜನತೆ “ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ” ಎಂಬ ಘೋಷಣೆ ಮೊಳಗಿಸಲು ಮುಂದಾಗಬೇಕಿದೆ: ಮುನೀರ್ ಕಾಟಿಪಳ್ಳ

ಮಹಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. 33 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸತತವಾಗಿ ಆಳುತ್ತಿರುವ ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಿ ಅಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ತುಳುನಾಡಿನ ಬಿಕ್ಕಟ್ಟುಗಳಿಗೆ ಉತ್ತರ ಅಷ್ಟು ಸರಳ ಅಲ್ಲ. ಬಿಜೆಪಿ ಕೆಲವು ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕಾಗುತ್ತದೆ, ಅದಕ್ಕಿಂತ ಪ್ರಧಾನವಾಗಿ ತುಳುನಾಡಿನ ಯುವಜನತೆ ಈ ಪ್ರಶ್ನೆಗಳನ್ನು ಬಿಜೆಪಿ ಎದುರು ಬಲವಾಗಿ ಕೇಳಲೇಬೇಕಾಗಿದೆ. ತುಳುನಾಡಿನ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಕೆಂಪು ಹಾಸು ಹಾಕಿ ಮಂಗಳೂರಿನಲ್ಲಿ ನೆಲೆಗೊಳಿಸಿದ mrpl ಈ […]

Continue Reading

ಪಲ್ಗುಣಿ ನದಿಯ ಮೇಲೆ ನಿರಂತರ ಮುಂದುವರಿದ ಕೈಗಾರಿಕಾ ದಾಳಿ; ಜನತೆ ಎಚ್ಚೆತ್ತುಕೊಂಡು ಫಲ್ಗುಣಿಯ ಉಳಿವಿಗೆ ಧ್ವನಿ ಎತ್ತದಿದ್ದರೆ ಮುಂದೆ ಅನಾಹುತಗಳು ಕಾದಿದೆ: ಮುನೀರ್ ಕಾಟಿಪಳ್ಳ

ಮೂರು ದಿನಗಳ ವಿರಾಮದ ಬಳಿಕ ನಿನ್ನೆ ರಾತ್ರಿಯಿಂದ ಮತ್ತೆ mrpl, hpcl ಕಡೆಯಿಂದ ದೊಡ್ಡ ಪ್ರಮಾಣದಲ್ಲಿ ಮಾರಕ ಕೈಗಾರಿಕಾ ತ್ಯಾಜ್ಯವನ್ನು ತೋಕೂರು ಹಳ್ಳದ ಮೂಲಕ ಫಲ್ಗುಣಿ ನದಿಗೆ ಹರಿಯಬಿಡಲಾಗಿದೆ. ನೀರು ತೈಲ ಮಿಶ್ರಿತ ಕಪ್ಪು ಬಣ್ಣದಲ್ಲಿ ಪೆಟ್ರೋಲ್ ವಾಸನೆಯೊಂದಿಗೆ ಹರಿಯುತ್ತಿದೆ. ಮೂರು ವಾರಗಳಿಂದ ಈ ಕುರಿತು ಜಿಲ್ಲಾಡಳಿತ, ನಾಗರಿಕ ಸಮಾಜದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದ್ದರೂ, ಜಿಲ್ಲಾಧಿಕಾರಿ ಸಹಿತ ಜಿಲ್ಲಾಡಳಿತದ ಪ್ರತಿನಿಧಿಗಳ ಫಲ್ಗುಣಿ ನದಿಯ ಕಡೆಗೆ ತಲೆ ಹಾಕದಿರುವುದು ಆಘಾತಕಾರಿ. ಹಾಗೆಯೆ ಈಗ ಮಲಿನ ಗೊಂಡಿರುವ ತೋಕೂರು […]

Continue Reading

‘ಬಂಡಾಯ’ ಪುತ್ತಿಲ ಬಿಜೆಪಿ ಪರಿವಾರಕ್ಕೆ..ಚಾರ್ಮ್ ಕಳೆದುಕೊಂಡರಾ ಡೈನಾಮಿಕ್ ಲೀಡರ್.!

ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಹಾದಿಯಲ್ಲಿ ಪುತ್ತಿಲ ಕೂಡ ಸೇರುತ್ತರಾ.? ಪ್ರತಿಯೊಂದು ಚುನಾವಣೆಯಲ್ಲಿ ಬಿಜೆಪಿಯನ್ನು ಕಾಡುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಇದೀಗ ಯಾವುದೇ ಕಮಿಟ್ ಮೆಂಟ್ ಇಲ್ಲದೇ ಸೈಲೆಂಟಾಗಿ ಬಿಜೆಪಿ ಸೇರಿರುವುದು ಭವಿಷ್ಯದಲ್ಲಿ ಪುತ್ತಿಲ ಸೈಡ್ ಲೈನಿಗೆ ತಳ್ಳಲ್ಪಡುತ್ತರಾ ಅನ್ನುವ ಬಗ್ಗೆ ಇದೀಗ ರಾಜಕೀಯ ಪಡಸಾಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಜೊತೆ ಮುನಿಸಿ ಪ್ರತ್ಯೇಕವಾಗಿ ಪುತ್ತಿಲ ಪರಿವಾರ ಕಟ್ಟಿ ತನ್ನದೇ ಆದ ವೈಯುಕ್ತಿಕ ವರ್ಚಸ್ಸಿನ ಮೂಲಕ ಕರಾವಳಿಯಲ್ಲಿ […]

Continue Reading

ಸಿಎಎ ಮೂಲಕ ಜನರ ಗಮನ ದಿಕ್ಕು ತಪ್ಪಿಸುವ ಹುನ್ನಾರ: ಬಿ.ಕೆ ಇಮ್ತಿಯಾಜ್

ಭಾರತ ದೇಶದ ಜನ ಸಂದಿಗ್ಧ ಪರಿಸ್ಥಿತಿಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಬದುಕು ಭವಣೆಯ ಬಗ್ಗೆ ಚರ್ಚೆಯಾಗಬೇಕಾಗಿದೆ ಸಂಸತ್ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಭಾರತದ ಬಹುತ್ವಕ್ಕೆ ಅಪಾಯ ಒಡ್ಡುವ, ಆರೆಸ್ಸೆಸ್ಸಿನ ಅಜೆಂಡಾ ಜಾರಿಗೊಳಿಸುವ ಮೋದಿ ಸರಕಾರದ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಿರುವ ತೀರ್ಮಾನವು ಜನರ ಗಮನವನ್ನು ಧಿಕ್ಕು ತಪ್ಪಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಪೌರತ್ವ ತಿದ್ದುಪಡಿ ಕಾಯಿದೆಯ ಜಾರಿಗೊಳಿಸುವ ನೀತಿಯನ್ನು ವಿರೋಧಿಸಿ ಇಂದು (ತಾ/14/03/2024) ಮಂಗಳೂರಿನ ಕ್ಲಾಕ್ ಟವರ್ ಬಳಿ ಡಿವೈಎಫ್ಐ […]

Continue Reading

‘ಸಜ್ಜನ ಮುಖವಾಡದ’ ಹಿಂದಿದೆ ಕರಾಳ ರಹಸ್ಯ.! ‘ಜನಪರ’ ಕೋಟಾ ಅಸಲಿಯತ್ತು ಬಿಚ್ಚಿಟ್ಟ ಕಾಟಿಪಳ್ಳ.!

ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿ ಸಜ್ಜನ ಮುಖವಾಡದ “ಜೀ ಹುಜೂರ್” ಸಂಸ್ಕೃತಿಯ ಕೋಟಾ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಆಡಳಿತದ ವಿರುದ್ದ ಇರುವ ಜನಾಕ್ರೋಶವನ್ನು ಕೋಟಾ ಎಂಬ “ಸರಳ, ಸಜ್ಜನ” ಎಂಬ ಮುಖವಾಡದ ಮೂಲಕ ನಿಭಾಯಿಸಲು ಬಿಜೆಪಿ ಪರಿವಾರ ಯತ್ನಿಸುತ್ತಿದೆ. ಈ ಕೋಟಾ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅವರ ಕಾರ್ಯವೈಖರಿ ಹತ್ತಿರದಿಂದ ಕಂಡಿದ್ದೇವೆ. (ಉಡುಪಿಯ ಎಲ್ಲಾ MLA ಗಳು ಒಂದಾಗಿ ಕೋಟಾರನ್ನು ಉಡುಪಿ ಉಸ್ತುವಾರಿ ಸಚಿವ ಮಾಡಬಾರದು ಎಂದು ಹಠ ಹಿಡಿದಾಗ […]

Continue Reading

ಕೃಷಿ ಭೂಮಿಯ ಸಂರಕ್ಷಣೆಗಾಗಿ ಸಂಘಟಿತ ಹೋರಾಟ ಅಗತ್ಯ – ಮುನೀರ್ ಕಾಟಿಪಳ್ಳ

ಉಳುವವನೆ ಹೊಲದೊಡೆಯ ಘೋಷಣೆಯಡಿ ಗೇಣಿದಾರರು ನಡೆಸಿದ ಸಂಘರ್ಷಮಯ ಹೋರಾಟದಿಂದಾಗಿ ನೂರಾರು ಎಕರೆ ಭೂಮಿ ಹೊಂದಿದ್ದ ಭೂ ಒಡೆಯರು ರೈತರಿಗೆ ಭೂಮಿಯನ್ನು ಬಿಟ್ಟುಕೊಡಬೇಕಾಯ್ತು. ಅಂದು ಇಂತಹ ಚಾರಿತ್ರಿಕ ಹೋರಾಟದ ಕೇಂದ್ರವಾಗಿದ್ದ ಉಳ್ಳಾಲ ತಾಲೂಕಿನಲ್ಲಿ ಬಂಡವಾಳಶಾಹಿಗಳು ಸಣ್ಣ ರೈತರಿಂದ ವಿವಿಧ ರೀತಿಯ ಆಮಿಷ, ಬೆದರಿಕೆ, ರಾಜಕೀಯ ಬೆಂಬಲದ ಮೂಲಕ ಜಮೀನನ್ನು ಬಲವಂತವಾಗಿ ವಶ ಪಡಿಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳು, ಭೂದಂಧೆ ಕೋರರ ಕೈಯಲ್ಲಿ ನೂರಾರು ಎಕರೆ ಭೂಮಿ ಜಮೆಯಾಗತೊಡಗಿದೆ. ಉಳ್ಳಾಲ ಮತ್ತೊಮ್ಮೆ ಜಮೀನ್ದಾರಿ ಯುಗಕ್ಕೆ ತೆರೆದುಕೊಳ್ಳುತ್ತಿದೆ. ಗ್ರಾಮಸ್ಥರು ಮೈಕೊಡವಿ […]

Continue Reading

ಫಲ್ಗುಣಿಯ ಮಾಲಿನ್ಯದ ಕುರಿತು ಸುದ್ದಿಯಾಗುತ್ತಿದ್ದರೂ ತಿರುಗಿ ನೋಡದ ಜಿಲ್ಲಾಧಿಕಾರಿಗಳು; ಕಂಪೆನಿಯ ಪರವಾಗಿ ನೋಟೀಸು ಹೊರಡಿಸಲು ಆತುರರಾಗಿದ್ದಾರೆ: ಮುನೀರ್ ಕಾಟಿಪಳ್ಳ

ಕಪ್ಪು ಬಣ್ಣಕ್ಕೆ ತಿರುಗಿ ನಾರುತ್ತಿದ್ದ ಪಲ್ಗುಣಿಯ ಕವಲು ತೋಕೂರು ಹಳ್ಳದಲ್ಲಿ (mrpl, hpcl ಭಾಗದಲ್ಲಿ) ಇವತ್ತು ನೀರಿನ ಬಣ್ಣ ಕೆಂಪು ಮಿಶ್ರಿತ ಗೊಂಡಿದೆ, ಪೆಟ್ರೋಲಿಯಂನ ಪದರ ನೀರಿನ ಮೇಲ್ಭಾಗದಲ್ಲಿ ಎದ್ದು ಕಾಣುತ್ತಿದೆ. ಜನ ವಸತಿ ಭಾಗದ ತೆರೆದ ಚರಂಡಿಗಳಿಂದ ನೀರು ಹರಿದರೆ (ಈ ಭಾಗದಲ್ಲಿ ಜನವಸತಿಯೂ ಇಲ್ಲ) ನೀರು ಈ ಬಣ್ಣಕ್ಕೆ ತಿರುಗಲು ಸಾಧ್ಯವಿಲ್ಲ. ಪಲ್ಗುಣಿಯ ಮೇಲೆ ಮಾರಕ ಮಾಲಿನ್ಯ ನಡೆಯುತ್ತಿರುವುದು ಬಹಿರಂಗಗೊಂಡಿದ್ದರೂ, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನ ವಹಿಸಿರುವುದು ಖಂಡನೀಯ. ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಇನ್ನಾದರು […]

Continue Reading

ಉಳ್ಳಾಲ ಪೊಲೀಸ್ ನಿರೀಕ್ಷಕ ಹೆಚ್.ಎನ್ ಬಾಲಕೃಷ್ಣರವರ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ FIR, ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ಸದಸ್ಯರ ಮೇಲೆ ಹಲ್ಲೆ ಆರೋಪ

ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಇದರ ಸ್ವಾಧೀನದಲ್ಲಿರುವ ಸ್ಥಳಕ್ಕೆ ತಡೆಬೇಲಿ ಹಾಕುವ ಸಂದರ್ಭದಲ್ಲಿ ಟ್ರಸ್ಟ್ ನ ಮಹಿಳಾ ಕಾರ್ಯದರ್ಶಿಗೆ ತಡೆಯೊಡ್ಡಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಉಳ್ಳಾಲ ಪೊಲೀಸ್ ನಿರೀಕ್ಷಕ ಹೆಚ್.ಎನ್ ಬಾಲಕೃಷ್ಣ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ, ಸರ್ವೆ ನಂ. 149 ರಲ್ಲಿ ಎರಡು ಎಕರೆ ಜಮೀನು ಮಂಜೂರಾಗಿರುತ್ತದೆ. ಜ.26 ಬೆಳಗ್ಗೆ ಸರಿಸುಮಾರು 8ರ ಸಮಯಕ್ಕೆ ಟ್ರಸ್ಟ್‌ […]

Continue Reading

ಕರಾವಳಿ ಭಾಗದಲ್ಲಿ ಹೊಸ ಪ್ರಯೋಗಕ್ಕೆ ಪರಿವಾರ ಚಿಂತನೆ.!ಹೊಸ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ

2024ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ರಾಜಕೀಯ ಪಕ್ಷಗಳು ತಲೆಕೆಡೆಸಿಕೊಂಡಿದೆ. ಕಾಂಗ್ರೆಸ್ ರಾಜ್ಯದ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದರೂ, ಬಿಜೆಪಿ ಬುಧವಾರ ಅಥವಾ ಗುರುವಾರ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಉಡುಪಿ – ಚಿಕ್ಕಮಗಳೂರು ಮತ್ತು ಮಂಗಳೂರು. ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿದ್ದರೆ, ಗೋ ಬ್ಯಾಕ್ ಅಭಿಯಾನದಿಂದ ವಿಚಲಿತರಾದಂತೆ ಕಾಣುತ್ತಿದೆ. ಸತತ ಎರಡು ಬಾರಿ ಆಯ್ಕೆಯಾಗಿರುವ ಅವರಿಗೆ ಸದ್ಯ ವಿರೋಧದ ಬಿಸಿಯೂ ಕಾಡುತ್ತಿದೆ. […]

Continue Reading