ಅಂಗಿ ತೆಗೆದು ಸೋಫಾದ ಮೇಲೆ ಇಟ್ಟಿದ್ದೆ ಮುಳುವಾಯಿತು; ಸೊಸೆಯಿಂದ ಮಾವನಿಗೆ ವಾಕಿಂಗ್‌ ಸ್ಟಿಕ್‌ನಿಂದ ಕಾಲಿಗೆ, ಸೊಂಟಕ್ಕೆ ಹಲ್ಲೆ

ಕುಲಶೇಖರ ಹಾಲಿನ ಡೇರಿ ಬಳಿಯ ಮನೆಯೊಂದರಲ್ಲಿ 87 ವರ್ಷದ ಮಾವ ಪದ್ಮನಾಭ ಎಂಬವರಿಗೆ ಸೊಸೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವನಿಗೆ ಹಲ್ಲೆ ನಡೆಸಿದ ಆರೋಪಿಯಾಗಿರುವ ಮಂಗಳೂರಿನ ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಹಲ್ಲೆಗೊಳಗಾದ ಪದ್ಮನಾಭ ಅವರ ಮಗ ಪ್ರೀತಮ್‌ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರೀತಂ ಅವರ ಹೆಂಡತಿ ಮೆಸ್ಕಂ ಉದ್ಯೋಗಿ ಉಮಾಶಂಕರಿಯವರೊಂದಿಗೆ ಪದ್ಮನಾಭ ಅವರು ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ. ನೀವು ಯಾಕೆ ಈ ಮನೆಯಲ್ಲಿದ್ದೀರಿ, […]

Continue Reading

ಪಿ.ಯು.ಸಿ.ಎಲ್ ದ.ಕನ್ನಡ ಜಿಲ್ಲಾ ಘಟಕದ ಹೊಸ ತಾತ್ಕಾಲಿಕ ಆಡಳಿತ ಸಮಿತಿ ರಚನೆ

ಮಂಗಳೂರು: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ದ.ಕನ್ನಡ. ಇದರ ತಾತ್ಕಾಲಿಕ ಆಡಳಿತ ಸಮಿತಿಗೆ ಟಿ.ಆರ್ ಭಟ್ ರವರನ್ನು ಸಂಚಾಲಕರಾಗಿ ಹಾಗೂ ಜೋಷಿ ಸತ್ಯಾನಂದ ಜಿ., ಕಾಲಿನ್ ಡಿಸಿಲ್ವ ಮತ್ತು ಮೊಹಮ್ಮದ್ ಹನೀಫ್.ಯು ಹಾಗೂ ಕಿಶೋರ್ ಅತ್ತಾವರ, ಇವರುಗಳನ್ನು ಸದಸ್ಯರನ್ನಾಗಿ ಸರ್ವಾನುಮತದಿಂದ ನೇಮಕಗೊಳಿಸಲಾಯಿತು. 2024 ರ ಮಾರ್ಚ್ 8 ಮತ್ತು 9 ರಂದು ಮಂಗಳೂರಿನ ರೋಶನೀ ನಿಲಯದಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ದ.ಕ ಜಿಲ್ಲೆಯ ಪಿಯುಸಿಎಲ್ ಘಟಕದ ಆಗು-ಹೋಗುಗಳ ಬಗ್ಗೆ ಪರಿಶೀಲನೆ ನಡೆಸಿದ, ರಾಷ್ಟ್ರೀಯ ಪಿಯುಸಿಎಲ್‌ […]

Continue Reading

ಮಂಗಳೂರಿನಲ್ಲಿ ‘ಪಬ್’ ಹಾವಳಿ.. ರಾತ್ರಿಯಿಡೀ ಮೋಜು ಮಸ್ತಿ, ನಂಗಾನಾಚ್.!

ಇದು ಮಂಗಳೂರು. ಇಲ್ಲಿ ಏನುಂಟು ಏನಿಲ್ಲ.. ಸ್ಮಾರ್ಟ್ ಸಿಟಿ ಅನ್ನುವ ಅನ್ವರ್ಥ ನಾಮದ ಜೊತೆಗೆ ಮೋಜು ಮಸ್ತಿಗೆ ಓಪನ್ ಆಗಿ ಅನುಮತಿ ಇರುವ ನಗರ ಬುದ್ಧಿವಂತರ ಜಿಲ್ಲೆ ಮಂಗಳೂರು. ಈ ಹಿಂದೆ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿದ್ದ ಪಬ್ ಅನ್ನು ಕೆಲವೊಂದು ದಕ್ಷ ಪೊಲೀಸ್ ಅಧಿಕಾರಿಗಳ ಪರಿಶ್ರಮದಿಂದ ಹತೋಟಿಗೆ ತಂದಿದ್ದರು. ಆದರೆ ಇದೀಗ ಎಲ್ಲವೂ ಖುಲ್ಲಾಂ ಖುಲ್ಲಾ. ಹೇಳುವವರು ಇಲ್ಲ, ಕೇಳುವವರು ಇಲ್ಲ. ರಾತ್ರಿಯಿಡೀ ಯಾವುದೇ ನಿರ್ಭಯ ಇಲ್ಲದೆ ಪಬ್ ನಲ್ಲಿ ಜಾಗರಣೆ ನಡೆಯುತ್ತಿದೆ. ವಿಚಿತ್ರ ಅಂದರೆ […]

Continue Reading

ನಾಲ್ಕು ಮಕ್ಕಳ ತಂದೆಯಿಂದ ಅನ್ಯಮತೀಯ ಮಹಿಳೆಯ ಅಪಹರಣ; ಮತಾಂತರ ಮಾಡುವ ಶಂಕೆ: ಹಿಂದೂ ಸಂಘಟನೆಯಿಂದ ಠಾಣೆಗೆ ದೂರು

ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ವಿಧವೆ ಮಹಿಳೆ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ಸಂದರ್ಭ ನಾಲ್ಕು ಮಕ್ಕಳ ತಂದೆಯಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬ ಮಹಿಳೆಯನ್ನು ಅಪಹರಿಸಿ ಮತಾಂತರ ಮಾಡುವ ಬಗ್ಗೆ ಹಿಂದೂ ಸಂಘಟನೆಗಳು ಠಾಣೆಗೆ ದೂರು ನೀಡಿದೆ. ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ವೇದಾವತಿ ನಾಪತ್ತೆಯಾದ ಮಹಿಳೆ. ಇದೇ ಪರಿಸರದ ಫ್ಲ್ಯಾಟಲ್ಲಿದ್ದ ಮೂಲತಃ ಸಜಿಪ ನಿವಾಸಿ ಗುಜುರಿ ಕಾರ್ಮಿಕನಾಗಿದ್ದು ಸ್ಥಳೀಯ ವಾಟರ್ ಮ್ಯಾನ್ ಶರೀಫ್ ಯಾನೆ ಅಬ್ದುಲ್ ರಹಿಮಾನ್ ಕೂಡಾ ನಾಪತ್ತೆಯಾಗಿದ್ದಾನೆ. […]

Continue Reading

ಬೆಳ್ತಂಗಡಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ; ಕರ್ತವ್ಯಕ್ಕೆ ಅಡ್ಡಿ; ಮಹೇಶ್ ಸೇರಿದಂತೆ ನಾಲ್ಕು ಜನರ ಮೇಲೆ ಕೇಸ್ ದಾಖಲು

ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ರಾಮಯ್ಯ ಹೆಗ್ಡೆ ಎಂಬವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಏಳು ಜನರ ಮೇಲೆ ಎಫ್ ಐ ಆರ್ ದಾಖಲಾದ ಘಟನೆ ವರದಿಯಾಗಿದೆ. ಇಂದು (9-03-2024) ತನ್ನ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿ ಶಾಂತಕುಮಾರ ಜೊತೆ ರಾಮಯ್ಯ ಹೆಗ್ಡೆ ರೌಂಡ್ಸ್ ತೆರಳಿದ್ದ ಸಂದರ್ಭ ಮೊಬೈಲಿಗೆ ಕರೆ ಮಾಡಿದ ಸಾರ್ವಜನಿಕರೊಬ್ಬರು ಬೆಳ್ತಂಗಡಿ ಕಾಫಿನಡ್ಕ ಎಂಬಲ್ಲಿ ಕಿಡಿಗೇಡಿಗಳು ರಸ್ತೆಯಲ್ಲಿ ಸೋಡಾ ಬಾಟ್ಲಿ ಎಸೆದು ತೊಂದರೆ ಪಡಿಸಿರುವ ಬಗ್ಗೆ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಸಿಬ್ಬಂದಿ […]

Continue Reading

ಕೆನರಾ ಲೈಟಿಂಗ್ ಇಂಡಸ್ಟ್ರಿ ಪುನರೂರು ಇದರ ನಿರ್ದೇಶಕರ ವಿರುದ್ದದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ.

ಮೂಲ್ಕಿ ಪುನರೂರು ಸಮಿಪದ ಕೆನರಾ ಲೈಟಿಂಗ್ ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರ ವಿರುಧ್ದ ಮೂಡಬಿದ್ರೆ ಹಿರಿಯ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ಸಂಖ್ಯೆ 22/2024 ಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಪ್ರಕರಣದ ದೂರುದಾರ ಕಂಪನಿಯ ಉದ್ಯೋಗಿ ಕಿನ್ನಿಗೋಳಿ ನಿವಾಸಿ ಮೆಲ್ವಿನ್ ಎಂಬವವರು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕಂಪನಿಯ ನಿರ್ದೆಶಕರ ವಿರುದ್ದ ದೂರು ದಾಖಲಿಸಿದ್ದರು. ಆದರೆ ಪ್ರಕರಣದ ತನಿಖೆ ಸರಿಯಾಗಿ ನಡೆಯದ ಕಾರಣ ಮೂಡಬಿದ್ರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಸಲ್ಲಿಸಿದ್ದರು. ನ್ಯಾಯಾಲಯದ […]

Continue Reading

ಮಾಣಿಯಲ್ಲಿ ದರೋಡೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ

ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಹಾಗೂ ಆತನ ಪತ್ನಿ ಶಾಂತಿ ಮಾರ್ಟಿಸ್ ಇಬ್ಬರೂ ಆರೋಪಿಗಳು ಸೇರಿ ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ದರೋಡೆ ಗೈದು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನಲ್ಲಿ ನಡೆದಿದೆ. ಮಾಣಿ ಗ್ರಾಮದ ಲಕ್ಕಪ್ಪರ ಕೋಡಿ ನಿವಾಸಿ ಸ್ಟೀವನ್ […]

Continue Reading

ಮಹಿಳೆಯ ಮಾನಭಂಗಕ್ಕೆ ಯತ್ನ, ಸೂರಿಕುಮೇರು- ಬೊರಿಮಾರಿನಲ್ಲಿ ಚಪ್ಪಲಿ ಸೇವೆ, ಕೇಸ್ ದಾಖಲು!

ನಡೆದುಕೊಂಡು ಹೋಗುತ್ತಿದ್ದ ವಿವಾಹಿತ ಮಹಿಳೆಗೆ ಚುಡಾಯಿಸಿದ ವ್ಯಕ್ತಿಯೊಬ್ಬನಿಗೆ ನಡುರಸ್ತೆಯಲ್ಲೇ ಚಪ್ಪಲಿ ಪೂಜೆ ನಡೆಸಿದ ಪ್ರಕರಣ ಬಂಟ್ವಾಳದ ಮಾಣಿಯಲ್ಲಿ ನಡೆದಿದೆ. ಆರೋಪಿಯನ್ನು ಸೂರಿಕುಮೇರು- ಬೊರಿಮಾರು ಸಮೀಪದ, ಮಾಣಿ ಗ್ರಾಮದ ಲಕ್ಕಪ್ಪರ ಕೋಡಿ ನಿವಾಸಿ ಸ್ಟೀವನ್ ಆಲ್ವಿನ್ ಪಾಯಸ್ ಎಂದು ಗುರುತಿಸಲಾಗಿದ್ದು ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಮಾರ್ಚ್ 4ರಂದು ಈ ಘಟನೆ ನಡೆದಿದ್ದು, ಮಹಿಳೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್​ನಲ್ಲಿ ಬಂದ ಸೂರಿಕುಮೇರು- ಬೊರಿಮಾರು ಆಲ್ವಿನ್ ಸ್ಟೀವನ್ ಪಾಯಸ್ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಮಾನಭಂಗಕ್ಕೆ […]

Continue Reading

ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಅಖಿಲ ಭಾರತ ಬ್ಯಾರಿ ಮಹಾಸಭಾದಿಂದ ಪತ್ರಿಕಾಗೋಷ್ಠಿ

ಮಂಗಳೂರು: ಸರಕಾರವು ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಅಖಿಲ ಭಾರತ ಬ್ಯಾರಿ ಮಹಾಸಭಾದ ವತಿಯಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಜರುಗಿತು. ಕರ್ನಾಟಕ ರಾಜ್ಯ ಮತ್ತು ಇತರೆಡೆಗಳಲ್ಲಿ ವಾಸಿಸುತ್ತಿರುವ 25 ಲಕ್ಷ ಜನಸಂಖ್ಯೆಗೂ ಮಿಕ್ಕಿದ ಬ್ಯಾರಿ ಜನಾಂಗವು ಅನಾದಿಕಾಲದಿಂದ ವ್ಯತಸ್ಥ ಜೀವನ ಕ್ರಮದಿಂದ ತನ್ನನ್ನು ಗುರುತಿಸಿಕೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಅಗಾಧವಾಗಿ ಮತ್ತು ಇತರೆಡೆಗಳಲ್ಲಿ ವಿರಳವಾಗಿ ಸಾಮಾಜಿಕ ಬದುಕು ಸಾಗಿಸುತ್ತಿದ್ದು, ಈ ಜನಾಂಗದ ಸಮಗ್ರ ಅಭಿವೃದ್ಧಿಗೆ ಸರಕಾರ ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಲಾಗಿದೆ. ಬ್ಯಾರಿ ಸಮುದಾಯವು ದ್ರಾವಿಡ […]

Continue Reading

ಜೀವನದಿ ಪಲ್ಗುಣಿಗೆ ಒಂದು ಕಡೆಯಿಂದ mrpl ಕೈಗಾರಿಕಾ ತ್ಯಾಜ್ಯವನ್ನು ನೇರವಾಗಿ ಹರಿಸುತ್ತಿದ್ದರೆ, ಮತ್ತೊಂದೆಡೆ ಮರಳು ಮಾಫಿಯ ನದಿಯ ಉದ್ದಕ್ಕೂ ಹಗಲು ರಾತ್ರಿ ಕನ್ನ ಹಾಕಿ ದೋಚುತ್ತಿವೆ: ಮುನೀರ್ ಕಾಟಿಪಳ್ಳ

ತುಳುನಾಡಿನ ಜೀವನದಿ ಪಲ್ಗುಣಿಗೆ ಒಂದು ಕಡೆಯಿಂದ mrpl ಸಹಿತ ಕೈಗಾರಿಕೆಗಳು ಮಾರಕವಾದ ಕೈಗಾರಿಕಾ ತ್ಯಾಜ್ಯವನ್ನು ನೇರವಾಗಿ ಹರಿಸುತ್ತಿದ್ದರೆ, ಮತ್ತೊಂದೆಡೆ ಮರಳು ಮಾಫಿಯ ನದಿಯ ಉದ್ದಕ್ಕೂ ಹಗಲು ರಾತ್ರಿ ಕನ್ನ ಹಾಕಿ ದೋಚುತ್ತಿವೆ. ಮರವೂರು, ಅದ್ಯಪಾಡಿ, ಮಳಲಿ, ಅಡ್ಡೂರು, ಮಲ್ಲೂರು… ಹೀಗೆ ನದಿಯ ಉದ್ದಕ್ಕೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಜಿಲ್ಲಾಡಳಿತ ಮರಳು ಸಾಗಾಟದ ಕುಖ್ಯಾತ ಜಂಕ್ಷನ್ ಗಳಲ್ಲಿ ಹಾಕಿರುವ ಸಿ ಸಿ ಕೆಮೆರಾಗಳು ಸಹ “ಕಣ್ಣುಮುಚ್ಚಿವೆ” ಅಕ್ರಮ ಮರಳು ಸಾಗಾಟದ ಟಿಪ್ಪರ್ ಗಳ ನಂಬರ್ ಪ್ಲೇಟ್ ಗಳಿಗೆ […]

Continue Reading