ಪುತ್ತೂರು: ಅಕ್ರಮ ಗೋ ಸಾಗಾಟಗಾರರ ಮೇಲೆ ಫೈರಿಂಗ್ ಪ್ರಕರಣ; ಆರೋಪಿಗಳನ್ನು ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆ ಹಲವರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಸುಳ್ಳು ಸುದ್ದಿ ಹಾಗೂ ಮತೀಯ ಸಂಘರ್ಷಕ್ಕೆ ಕಾರಣವಾಗುವ ವಿಡಿಯೋ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮಕ್ಕೆ ಮುಂದಾಗಿದೆ. ಪೊಲೀಸ್ ಇಲಾಖೆಯ ಇಂತಹ ಕಟ್ಟುನಿಟ್ಟಿನ ಕ್ರಮ ಹಲವು ಸಾಮಾಜಿಕ ಜಾಲತಾಣದ ವೀರರ ನಿದ್ದೆಗೆಡಿಸಿದೆ. ಇದೀಗ ಇತ್ತೀಚೆಗೆ ಪುತ್ತೂರು ಭಾಗದಲ್ಲಿ ಅಕ್ರಮ ಗೋ ಸಾಗಾಟಗಾರರ ಮೇಲೆ ಫೈರಿಂಗ್ ನಡೆಸಿ ಪೊಲೀಸ್ ಇಲಾಖೆ ಆರೋಪಿಗಳ ಹೆಡೆಮುರಿ ಕಟ್ಟಿತ್ತು. ಈ ವಿಚಾರಕ್ಕೆ ಸಂಬಂಧಿಸಿ […]

Continue Reading

ಸೋಮೇಶ್ವರ-ಉಚ್ಚಿಲದ ಯುವಕನ ಮಾನವ ಕಳ್ಳಸಾಗಣೆ; ಮ್ಯಾನ್ಮಾರ್‌ ಸೇನೆಯಿಂದ ಯುವಕನ ಬಂಧನ, ಏಜೆನ್ಸಿ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಉದ್ಯೋಗಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ಉಳ್ಳಾಲ ಸೋಮೇಶ್ವರ ಪರಿಸರದ ಉಚ್ಚಿಲದ ಯುವಕನನ್ನು, ಅಲ್ಲಿನ ಕೆಲವರು ಮಾನವ ಕಳ್ಳಸಾಗಣೆ ಮೂಲಕ ಮ್ಯಾನ್ಮಾರ್‌ಗೆ ಕರೆದೊಯ್ದಿದ್ದಾರೆ. ಮ್ಯಾನ್ಮಾರ್‌ ಸೇನೆಯು ಯುವಕನನ್ನು ಬಂಧಿಸಿದ್ದು, ಆತನನ್ನು ವಿದೇಶಕ್ಕೆ ಕಳುಹಿಸಿದ್ದ ಏಜೆನ್ಸಿ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಉಚ್ಚಿಲದ ಜುಬೇದಾ-ಹುಸೇನ್‌ ದಂಪತಿ ಪುತ್ರ ಹೇಮದ್ ರಜಾಕ್‌ ಮ್ಯಾನ್ಮಾರ್‌ನಲ್ಲಿ ಬಂಧನಕ್ಕೊಳಗಾದ ಯುವಕ ಎಂದು ಪೊಲೀಸರ ಮಾಹಿತಿಯಿಂದ ತಿಳಿದು ಬಂದಿದೆ. ಪಿಯುಸಿ ವಿದ್ಯಾಭ್ಯಾಸ ಪೂರೈಸಿದ್ದ ಹೇಮದ್ ರಜಾಕ್‌ ಉದ್ಯೋಗ ಹುಡುಕುತ್ತಿದ್ದ ಸಮಯದಲ್ಲಿ ಆತನಿಗೆ ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್ […]

Continue Reading

ಪೂಜೆ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ; ಆರೋಪಿಯ ಹೆಡೆಮುರಿ ಕಟ್ಟಿದ ದ. ಕ. ಜಿಲ್ಲಾ ಸೈಬರ್‌ ಅಪರಾಧ ಪೊಲೀಸರು

ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತಕ್ಷಣದಲ್ಲಿ ದೇವರ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ನಂಬಿಸಿ ವ್ಯಕ್ತಿಯೊಬ್ಬರಿಗೆ ಸುಮಾರು 24,78,274 ರೂ ಸೈಬರ್‌ ವಂಚನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87/2025, ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ದ.ಕ ಜಿಲ್ಲೆಯ ಸೈಬರ್ ಅಪರಾಧ ಠಾಣೆಯ ಪೊಲೀಸರು ದಿನಾಂಕ: 04-11-2025 ರಂದು ಆರೋಪಿ ವಾಸುದೇವ ಆರ್‌, ಗೋಕುಲ 1ನೇ ಹಂತ, ಯಶವಂತಪುರ, ಬೆಂಗಳೂರು.‌(ಹಾಲಿ ವಾಸ: […]

Continue Reading

ಕರಾವಳಿ: ಧರ್ಮದಂಗಲ್ ಗೆ ಗುಡ್ ಬೈ.. ಐಟಿಬಿಟಿಯತ್ತ ದಿಟ್ಟ ಹೆಜ್ಜೆ

ಧರ್ಮದಂಗಲ್ ಹಿಂದೆ ಯುವಕರು ಬಿದ್ದದ್ದು ಸಾಕು; ಇನ್ನಾದರೂ ಮಂಗಳೂರು ವಿಶ್ವದರ್ಜೆಯ ಸಿಲಿಕಾನ್ ಸಿಟಿ ಆಗಲಿ. ‘ಏನಾಗುತ್ತಿದೆ ಮಂಗಳೂರಿನಲ್ಲಿ?’ ದಿನ ಬೆಳಗಾದರೆ ಚೂರಿಯದ್ದೇ ಸದ್ದು ಕೇಳುತ್ತಿತ್ತು. ಅಮಾಯಕರು ಓಡಾಡಲು ಹೆದರುವ ಕಾಲವಿತ್ತು. ಮತೀಯ ಕ್ರೌರ್ಯಕ್ಕೆ ಯಾರ್ಯಾರೋ ಮನೆಯ ಬಡಕೂಸು ಜೀವ ಕಳಕೊಳ್ಳುತ್ತಿತ್ತು. ಶಾಂತಿ, ನೆಮ್ಮದಿ, ಭಾತೃತ್ವದ ಸಮಾಜದಲ್ಲಿ ಕತ್ತಿ, ತಲವಾರು, ದ್ವೇಷ ಭಾಷಣಗಳು ಮೊಳಗುತ್ತಿತ್ತು. ರಕ್ತ ಕೊಟ್ಟು ಜೀವ ಉಳಿಸಬೇಕಾದ ಕೈಯಲ್ಲಿ ರಕ್ತ ಮೆತ್ತಿತ್ತು. ಅಪರಾಧ ಸುದ್ಧಿಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು. ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ […]

Continue Reading

ಕಲ್ಲಡ್ಕ ಪ್ರಭಾಕರ ಭಟ್ ಗೆ ಇಂದೂ ಮಂಜೂರಾಗದ ಜಾಮೀನು.! ಬಂಧಿಸಲು ಕಾರಣ ನೀಡಿದ ಪುತ್ತೂರು ಗ್ರಾಮಾಂತರ ಪೊಲೀಸರು.!

ಮಂಗಳೂರು: ‘ಮುಸ್ಲಿಂ ಮಹಿಳೆಯರು ನಾಯಿ ಮರಿ ಹಾಕಿದಂತೆ ಹೆರುತ್ತಾರೆ’ ಎಂದು ಹೇಳಿಕೆ ನೀಡಿ ಕೋಮುಸೌಹಾರ್ದತೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ಇಂದೂ ಇತ್ಯರ್ಥವಾಗದೇ ಮುಂದೂಡಲ್ಪಟ್ಟಿತು. ಬಿಎನ್‌ಎಸ್‌ಎಸ್‌ ಸೆಕ್ಷನ್ 338, 339 ಪ್ರಕಾರ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದು, ವಾದ ಮಂಡಿಸಲು ಸಮಾಯಾವಕಾಶ ಕೇಳಿದರು. ಪೊಲೀಸರ ಪರ ಸರ್ಕಾರಿ ವಕೀಲರು ಜಾಮೀನು […]

Continue Reading

ಸುಳ್ಯ: ಬೆನಿಫಿಟ್ ಸ್ಕೀಂ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ವಂಚಿಸಿದ‌ ಪ್ರಕರಣದ ಆರೋಪಿಗಳಿಗೆ ಶಿಕ್ಷೆ

ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಹೆಸರಿನ ಸಂಸ್ಥೆ ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕ ಎಂಬಲ್ಲಿರುವ ಸಮೃದ್ಧಿ ಎಂಬ ಹೆಸರಿನ ಕಾಂಪ್ಲೆಕ್ಸ್ ನಲ್ಲಿ 2013ರಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿ, ಸದ್ರಿ ಸಂಸ್ಥೆಯ ಪರವಾಗಿ ಸುಳ್ಯ ಪೇಟೆಯ ಗಾಂಧಿನಗರ ಎಂಬಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆದು, ಬೆನಿಫಿಟ್ ಸ್ಕೀಂ ಒಂದನ್ನು ಪ್ರಾರಂಭಿಸಿ ಏಜೆಂಟರುಗಳ […]

Continue Reading

ರೌಡಿಶೀಟರ್ ನೌಫಲ್ ಮರ್ಡರ್: ಯಾರ ಪತ್ವಾ?, ಡಬ್ಬಲ್ ಹಂತಕನ ಖೆಡ್ಡಾಕ್ಕೆ ಕೆಡವಿದವರ್ಯಾರು.? ಹಂತಕರು ಶರಣು.?

ಅತ್ಯಾಪ್ತ ಸಹಚರ ಇಜಾಝ್ ಹತ್ಯೆಯ ದಿನದಂದೇ ನೌಫಲ್ ಗೆ ಮುಹೂರ್ತವಿಟ್ಟ ಹಂತಕ ಪಡೆ.! ಅದು 2017 ಸೆಪ್ಟೆಂಬರ್ 25,ಫರಂಗಿಪೇಟೆಯ ಪೊಲೀಸ್ ಔಟ್ ಪೋಸ್ಟ್ ಎದುರಲ್ಲೇ ರಾತ್ರೋರಾತ್ರಿ ಇಡೀ ಜಿಲ್ಲೆಯೇ ಬೆಚ್ಚಿಬೀಳಿಸುವ ಡಬ್ಬಲ್ ಮರ್ಡರ್ ಪ್ರಕರಣ ನಡೆದಿತ್ತು. ಸ್ವಿಫ್ಟ್ ಕಾರಿನಲ್ಲಿ ಐವರು ಸಹಚರರ ಜೊತೆಗೆ ಫರಂಗಿಪೇಟೆಗೆ ಬಂದಿದ್ದ ಜಿಯಾ. ಇದರ ಮುನ್ಸೂಚನೆ ಅರಿತ ಹಂತಕ ಪಡೆ ಇನೊವಾ ಕಾರಿನಲ್ಲಿ ಅತ್ತ ಧಾವಿಸಿತ್ತು. ಸ್ವಿಫ್ಟ್ ಕಾರಿನಲ್ಲಿದ್ದ ಜಿಯಾ ತಂಡದ ಮೇಲೆ ಹಂತಕ ಪಡೆ ಯದ್ವಾತದ್ವಾ ತಲವಾರು ಬೀಸಿ ಇಬ್ಬರನ್ನು ಬರ್ಬರವಾಗಿ […]

Continue Reading

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದೆ

ಏಕಾಏಕಿ ಒಕ್ಕಲೆಬ್ಬಿಸಿ, ಬೇರೆ ಜಮೀನಾಗಲಿ, ಮನೆಯಾಗಲಿ ಇಲ್ಲದ ಅಕ್ಷರಶ ಬೀದಿ ಪಾಲಾದಂತಾಗಿದೆ. ಸಹಾಯಧನವಿಲ್ಲ, ಪುನರ್ವಸತಿ ಪ್ಯಾಕೇಜ್ ಇಲ್ಲ, ಇದೀಗ ಯಾವ ಪರಿಹಾರವೂ ನೀಡದೆ ಒಕ್ಕಲೆಬ್ಬಿಸುವ ಕಾರ್ಯ ಆರಂಭಿಸಿದ್ದಾರೆ. ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅರಸಿನಮಕ್ಕಿ ಎಂಬಲ್ಲಿನ ನಿವಾಸಿ ಪಿ.ಟಿ ಜೋಸೆಫ್ ಎಂಬವರನ್ನು ಅ. 31ರಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಸಂಪೂರ್ಣ ವಾಗಿ ನಾಶಪಡಿಸಿ […]

Continue Reading

ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ಒಂದು ಬಾರಿಗೆ ದಂಡ ವಿಧಿಸಿ ಪರಿಷ್ಕೃತ ಕಟ್ಟಡ ನಕ್ಷೆ ಮಂಜೂರು ತೀರ್ಮಾನ

ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ದಂಡ ನಿಗದಿ: ನಗರಾಭಿವೃದ್ಧಿ ಇಲಾಖೆ ಆದೇಶ ರಾಜ್ಯದಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ಒಂದು ಬಾರಿಗೆ ದಂಡ ವಿಧಿಸಿ ಪರಿಷ್ಕೃತ ಕಟ್ಟಡ ನಕ್ಷೆ ಮಂಜೂರು ಮಾಡಲು ತೀರ್ಮಾನಿಸಿದೆ. ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ದಂಡ ನಿಗದಿ ಮಾಡಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಕಟ್ಟಡ ಪರವಾನಗಿ ಪಡೆದು ಸೆಟ್ ಬ್ಯಾಕ್‌, ಕವರೇಜ್‌ಗಳಲ್ಲಿ ಶೇ 15 ರ ಮಿತಿಯೊಳಗೆ ಉಲ್ಲಂಘನೆ ಮಾಡಿರುವ […]

Continue Reading

ಪೊಲೀಸ್, ಜಡ್ಜ್ ರೀತಿ ಬಿಂಬಿಸಿ ಸೈಬರ್ ಕಳ್ಳರ ಕೈ ಚಳಕ; ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 17 ಲಕ್ಷ ಹಣ ವರ್ಗಾವಣೆ

ಸೂಕ್ತ ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ದೂರುದಾರರಿಗೆ ಹಣವನ್ನು ಹಿಂದುರುಗಿಸಿರುವ ಸೈಬರ್ ಠಾಣಾ ಪೊಲೀಸರು ಅಕ್ಟೋಬರ್ 23 ರಂದು ಬೆಳಿಗ್ಗೆ ಸುಮಾರು 10:00 ರ ಸಮಯಕ್ಕೆ ಬಿಜೈ ನಿವಾಸಿ 79 ವರ್ಷ ಪ್ರಾಯದ ಹಿರಿಯ ಮಹಿಳಾ ನಾಗರೀಕರಿಗೆ ಯಾರೋ ಅಪರಿಚಿತ ವ್ಯಕ್ತಿಯು ಫೋನ್ ಕರೆ ಮಾಡಿ ಪಿರ್ಯಾದಿದಾರರ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿರುವುದಾಗಿ ಹಾಗೂ ಪಿರ್ಯಾದಿದಾರರನ್ನು ಬಂಧಿಸುವುದಾಗಿ ಹೆದರಿಸಿರುತ್ತಾರೆ. ನಂತರ ಬಂಧನದಿಂದ ಪಾರಾಗಲು ಪಿರ್ಯಾದಿದಾರರು ಹಣವನ್ನು ಆರ್ ಬಿ ಐ ನಲ್ಲಿ ಡೆಪಾಸಿಟ್ ಇಡುವುವಂತೆ ಹಾಗೂ ಸದ್ರಿ ಡೆಪಾಸಿಟ್ […]

Continue Reading