ವಕ್ಫ್ ತಿದ್ದುಪಡಿ ಕಾಯ್ದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ – ಮುಸ್ಲಿಮರ ನೈತಿಕ ಜಯ

ಸಂವಿಧಾನ, ನ್ಯಾಯ ಹಾಗೂ ನ್ಯಾಯಾಲಗಳ ಮೇಲೆ ಮುಸ್ಲಿಂ ಸಮುದಾಯದ ನಂಬಿಕೆ ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತದ ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆ, 2023–2025ರ ವಿರುದ್ಧ ಸಲ್ಲಿಸಲಾದ ಹಲವು ವೃತ್ತಿ ಅರ್ಜಿಗಳ ವಿಚಾರಣೆಯಲ್ಲಿ ನೀಡಿರುವ ಮಧ್ಯಂತರ ತಡೆಯಾಜ್ಞೆವು ಭಾರತದಲ್ಲಿನ ಮುಸ್ಲಿಂ ಸಮುದಾಯಕ್ಕೆ ಒಂದು ನೈತಿಕ ಜಯ ಹಾಗೂ ನ್ಯಾಯದತ್ತ ನಂಬಿಕೆಗೆ ಹೊಸ ಬೆಳಕು ಮೂಡಿಸಿದೆ. ಈ ಆದೇಶವು ಕೇವಲ ಕಾನೂನು ತಾತ್ಕಾಲಿಕ ತಡೆಯಾಗಿ ಮಾತ್ರವಲ್ಲದೆ, ಧಾರ್ಮಿಕ ಸ್ವಾತಂತ್ರ್ಯ, ಆಸ್ತಿಯ ರಕ್ಷಣಾ ಹಕ್ಕುಗಳು ಮತ್ತು ಸಂಸ್ಥೆಗಳ […]

Continue Reading

ವಾಹನಗಳ ಮೇಲೆ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುವುದು ನಿಷಿದ್ಧ – ಕಾನೂನು ಮಾಹಿತಿ

ರಾಷ್ಟ್ರಧ್ವಜವನ್ನು ಅವಮಾನಿಸುವ, ಅಥವಾ ಅದರ ಬಳಕೆಯಲ್ಲಿ ತಪ್ಪು ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತೀಯ ರಾಷ್ಟ್ರಧ್ವಜ — ತ್ರಿವರ್ಣ ಧ್ವಜ — ದೇಶದ ಸ್ವಾಭಿಮಾನ, ಅಖಂಡತೆ ಮತ್ತು ಗೌರವವನ್ನು ಪ್ರತಿನಿಧಿಸುವ ಅತ್ಯುನ್ನತ ಚಿಹ್ನೆ. ಈ ಧ್ವಜವನ್ನು ಗೌರವದಿಂದ ಬಳಸುವ ನಿಯಮಗಳನ್ನು ರೂಪಿಸಲು ಭಾರತ ಸರ್ಕಾರ 2002ರಲ್ಲಿ ಭಾರತೀಯ ಧ್ವಜ ಸಂಹಿತೆ (Flag Code of India) ಅನ್ನು ಜಾರಿಗೆ ತಂದಿದೆ. ಈ ಸಂಹಿತೆ, ಧ್ವಜದ ಸರಿಯಾದ ಬಳಕೆ, ಪ್ರದರ್ಶನ ಮತ್ತು […]

Continue Reading

ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲ.

ಕೇಂದ್ರದ ಯಾವುದೇ ಕಾನೂನನ್ನು ಪಾಲಿಸದಿರುವುದು ಸಂವಿಧಾನದ ವೈಫಲ್ಯವೆಂದು ಪರಿಗಣಿಸಲಾಗುತ್ತದೆ. ಭಾರತಾದ್ಯಂತ ವಕ್ಫ್ ಕಾಯಿದೆಯ ಬಗ್ಗೆ ಬಹಳ ಜೋರಾದ ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಸಮುದಾಯಗಳ ಒಳಗೆ ವಾದ-ವಿವಾದಗಳು ಜೋರಾಗಿವೆ. ಕಾರಣ, ಕೇಂದ್ರ ಸರ್ಕಾರ 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು. ಈಗಾಗಲೇ ತಿದ್ದುಪಡಿಯೂ ಆಗಿ, ಲೋಕಸಭೆ, ರಾಜ್ಯಸಭೆಯಲ್ಲಿ ಅಂಗಿಕಾರಗೊಂಡು, ರಾಷ್ಟ್ರಪತಿಗಳ ಅಂಕಿತವೂ ಆಗಿ ಕಾಯ್ದೆಯಾಗಿ ಜಾರಿಯಾಗಿದೆ. ಕಳೆದ ಏಪ್ರಿಲ್ 3ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಏ. 4ರಂದು ರಾಜ್ಯಸಭೆಯಲ್ಲಿ ಪಾಸ್‌ ಆಗಿದೆ. ಬಳಿಕ ರಾಷ್ಟ್ರಪತಿ […]

Continue Reading

ಸಿವಿಲ್‌ ಪ್ರಕರಣಗಳಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ತಪ್ಪು, ಈ ನಡೆ ಸ್ವೀಕಾರಾರ್ಹವಲ್ಲ

ಉ.ಪ್ರದೇಶ ಪೊಲೀಸರಿಗೆ 50 ಸಾವಿರ ದಂಡ ವಿಧಿಸಿದ ಸುಪ್ರೀಂಕೋರ್ಟ್ ಸಿವಿಲ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ ಕಾರಣಕ್ಕೆ ಉತ್ತರ ಪ್ರದೇಶದ ಇಬ್ಬರು ‍ಪೊಲೀಸ್‌ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ರೂಪಾಯಿ 50 ಸಾವಿರ ದಂಡ ವಿಧಿಸಿದೆ. ಸಿಜೆಐ ಸಂಜೀವ್‌ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದ್ದು, ಸಿವಿಲ್‌ ಪ್ರಕರಣಗಳಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ತಪ್ಪು, ಈ ನಡೆ ಸ್ವೀಕಾರಾರ್ಹವಲ್ಲ ಎಂದಿದೆ. ಅಲ್ಲದೇ, ಸಿವಿಲ್‌ ಪ್ರಕರಣಗಳನ್ನು ಕ್ರಿಮಿನಲ್‌ ಪ್ರಕರಣಗಳನ್ನಾಗಿ […]

Continue Reading

ಉಳ್ಳಾಲ: ನೇತ್ರಾವತಿ ಸೇತುವೆ ದುರಸ್ತಿ ಕಾರ್ಯ, ಪ್ರಯಾಣಿಕರು ಕಂಗಾಲು; ನಾಲ್ಕು ಮಂದಿ ಕಾರ್ಮಿಕರು, ಒಂದು ಟಿಪ್ಪರ್, ಸುತ್ತಿಗೆಯ ಬಡಿತದ ಶಬ್ದ ಮಾತ್ರ

ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ಕಟ್ಟಲಾಗಿರುವ ಉಳ್ಳಾಲ ಹಳೆಯ ಸೇತುವೆಯಲ್ಲಿ ಹೊಂಡ, ಗುಂಡಿಯಾಗಿದ್ದ ಹಿನ್ನೆಲೆ 2016ರಲ್ಲಿ ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯ ನಡೆದಿತ್ತು. ಬಳಿಕ 2024ರ ಡಿಸೆಂಬರ್ ತಿಂಗಳಲ್ಲಿ ಹಳೇ ಸೇತುವೆ ದುರಸ್ತಿ ನಡೆದಿದೆ. ಇದೀಗ ಮೂರು ತಿಂಗಳ ಬಳಿಕ ಮತ್ತೆ ರಿಪೇರಿ ಕಾಮಗಾರಿ ನಡೆಯುತ್ತಿದೆ. NHA 66 ಮಂಗಳೂರು ಟೂ ಕೇರಳಕ್ಕೆ ಸಂಪರ್ಕಿಸುವ ಉಳ್ಳಾಲ ಸೇತುವೆಯಲ್ಲಿ ಸಂಚರಿಸುವುದೇ ಒಂದು ಸಾಹಸದ ಪರಿಸ್ಥಿತಿಯಾಗಿ ನಿರ್ಮಾಣವಾಗಿದೆ. ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ನಿರ್ಮಿಸಿರುವ ಹಳೆಯ ಸೇತುವೆಯನ್ನು ಇದೀಗ […]

Continue Reading

‘ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಪೊರೆವ ಶಕ್ತಿ’ ನಾನು

ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ ಏ.20 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆ ಅವರ ಐದನೇ ಕೃತಿ ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ ಏ.20 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ತುಳು ಹಾಗೂ ಕನ್ನಡ ಸಾಹಿತಿ, ಜಾನಪದ ಸಂಶೋಧಕ ಡಾ. ಗಣನಾಥ ಶೆಟ್ಟಿ ಎಕ್ಕಾರು ಬರೆದಿರುವ ಮುನ್ನುಡಿ… ನವೀನ್ ಸೂರಿಂಜೆಯವರು ನಾನು ಅತಿ ಗೌರವದಿಂದ ಕಾಣುವ ಪ್ರಗತಿಪರ ಚಿಂತಕ. ಕರಾವಳಿಯ ನಿಜವಾದ ಅಂತಃಸತ್ವವನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ಅವರ ರೀತಿ ನನಗೆ […]

Continue Reading

ಯೋಗಿ ನಾಡಿನಲ್ಲಿ ಭಾವಿ ಪತಿಯೆದುರೇ ಎಂಟು ಮಂದಿ ದುಷ್ಕರ್ಮಿಗಳಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ಬಿಜೆಪಿ ಮುಖಂಡ ಸೇರಿ ಎಂಟು ಮಂದಿ ಆರೋಪಿಗಳ ಬಂಧನ ಯುವತಿಯೊಬ್ಬಳನ್ನು ಆಕೆಯ ಭಾವಿ ಪತಿಯೆದುರೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಯೋಗಿ ಅಧಿತ್ಯನಾಥ್ ರಾಜ್ಯಭಾರ ಮಾಡುತ್ತಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಭಾವಿ ಗಂಡನ ಎದುರೇ ಯುವತಿಯನ್ನು ಬಿಜೆಪಿ ಮುಖಂಡನ ಸಹಿತ ಎಂಟು ಮಂದಿಯ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ಥ ಯುವತಿ ಮತ್ತು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ […]

Continue Reading

ಸಾರ್ವಜನಿಕ ರಸ್ತೆ, ಸರ್ಕಾರಿ ಜಮೀನು ಅತಿಕ್ರಮಣ, ತೋಟಕ್ಕೂ ಸಿಸಿ ಟೀವಿ ಕಣ್ಗಾವಲು, ಕಂದಾಯ ಅಧಿಕಾರಿಗಳ ದಾಳಿ

ಸೊತ್ತುಗಳು ಮುಟ್ಟುಗೋಲು. ಅತಿಕ್ರಮಣ ತೆರವುಗೊಳಿಸಿದ ಕಂದಾಯ ಅಧಿಕಾರಿಗಳು. ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದಲ್ಲಿ ಬಡ ಕುಟುಂಬಗಳ ಮನೆಗೆ ಹೋಗುವ ರಸ್ತೆಯ ಸರ್ಕಾರಿ ಜಮೀನನ್ನು ವ್ಯಕ್ತಿಗಳಿಬ್ಬರು ಅತಿಕ್ರಮಿಸಿ ಕೃಷಿ ಮಾಡಿರುವುದನ್ನು ಕಂದಾಯ ಅಧಿಕಾರಿಗಳ ತಂಡ ತೆರವುಗೊಳಿಸಿದೆ. ಕರೋಪಾಡಿ ಗ್ರಾಮದ ನಡುಮಜಲು ಎಂಬಲ್ಲಿ ಅನಿತಾ ವೇಗಸ್ ಮತ್ತು ವಿಕ್ಟರ್ ವೇಗಸ್ ಎಂಬವರ ಮನೆಗಳಿಗೆ ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ರಸ್ತೆ ಸಂಪರ್ಕವಿತ್ತು. ಅದೇ ಪರಿಸರ ನಿವಾಸಿಗಳಾದ ಲಿಯೋ ಡಿಸೋಜಾ ಮತ್ತು ಟೈಟಿಸ್ ಡಿಸೋಜಾ ಎಂಬವರು ರಸ್ತೆಯನ್ನು ತುಂಡರಿಸಿ ಸರ್ಕಾರಿ ಜಮೀನಿನಲ್ಲಿ […]

Continue Reading

ಹಕ್ಕು ಪತ್ರ ಪಡೆದವರಿಗೆ ನಿವೇಶನ ನೀಡದೆ ವಂಚನೆ; ಗುರುಪುರ ನಾಡ ಕಚೇರಿ ಮುಂಭಾಗ ಸಂತ್ರಸ್ತರ ಪ್ರತಿಭಟನೆ

ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕು ಪತ್ರ ಪಡೆದ 97 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ಏಳು ವರ್ಷಗಳು ಕಳೆದರೂ ನಿವೇಶನ ಸ್ವಾಧೀನ ನೀಡದೆ ವಂಚಿಸುತ್ತಿರುವುದನ್ನು ಖಂಡಿಸಿ ಸಂತ್ರಸ್ತರು ಗುರುಪುರ ನಾಡ ಕಚೇರಿ ಮುಂಭಾಗ “ನಿವೇಶನ ರಹಿತರ ಹೋರಾಟ ಸಮಿತಿ, ಕುಪ್ಪೆಪದವು” ಇದರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 2018 ರಲ್ಲಿ ಶಾಸಕ ಭರತ್ ಶೆಟ್ಡಿ ನೇತೃತ್ವದಲ್ಲಿ ತರಾತುರಿಯುಲ್ಲಿ 97 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ನಿವೇಶನಗಳನ್ನು ಗುರುತು ಮಾಡಲಾಗಿತ್ತು. ಆ ತರುವಾಯ ನಿವೇಶನ […]

Continue Reading

ಹನಿಟ್ರ್ಯಾಪ್​​​ ಪ್ರಕರಣ; ಸಹಕಾರ ಸಚಿವ ಕೆ.ಎನ್​​.ರಾಜಣ್ಣ ವಿರುದ್ಧ ದೂರು ದಾಖಲು. ರಾಜಣ್ಣರನ್ನು ಬಂಧಿಸಿ ವಿಚಾರಣೆಗೆ ನಡೆಸಲು ಆಗ್ರಹ

ಇತ್ತೀಚೆಗೆ ಅಧಿವೇಶನದ ಕಲಾಪದಲ್ಲಿ ಹನಿಟ್ರ್ಯಾಪ್​​​ ವಿಚಾರವಾಗಿ ಮಾತನಾಡಿದ್ದ ಸಹಕಾರ ಸಚಿವ ಕೆ.ಎನ್​​.ರಾಜಣ್ಣ ಅವರ ವಿರುದ್ಧ ಆರ್​​​​ಟಿಐ ಕಾರ್ಯಕರ್ತ ಓರ್ವರು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಮಾಣವಚನ ಸ್ವೀಕರಿಸುವಾಗ ಗೌಪ್ಯತೆ ಕಾಪಾಡುತ್ತೇನೆ ಎಂದಿದ್ದರು. ಆದರೆ ಸದನದಲ್ಲಿ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ಮಾತನಾಡಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಹೀಗಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನವೇ ದೂರು ದಾಖಲಿಸಿದ್ದಾಗಿ ಆರ್​​​​ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ತಿಳಿಸಿದ್ದಾರೆ. ಹನಿಟ್ರ್ಯಾಪ್​​ ಬಗ್ಗೆ ಮಾತನಾಡಿರುವ ರಾಜಣ್ಣ ಅವರು ಸಿಡಿ […]

Continue Reading