ಕಾನೂನಿನ ನಿಯಮ ಉಲ್ಲಂಘಿಸಿ ಸಮನ್ಸ್, ವಾರಂಟ್ ಗಳನ್ನು ತಪ್ಪಿಸುವ, ನ್ಯಾಯಾಂಗ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವವರು ಪೂರ್ವ ಜಾಮೀನು ಪಡೆಯಲು ಅರ್ಹರಲ್ಲ: ಸುಪ್ರೀಂ ಕೋರ್ಟ್

ಕಾನೂನಿನ ನಿಯಮವನ್ನು ಉಲ್ಲಂಘಿಸುವ ಮತ್ತು ನ್ಯಾಯಾಲಯದ ಸಮನ್ಸ್ ಅಥವಾ ವಾರಂಟ್ ಗಳನ್ನು ತಪ್ಪಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವ ವ್ಯಕ್ತಿಗಳು ಬಂಧನ ಪೂರ್ವ ಜಾಮೀನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಇಂತಹ ನಡವಳಿಕೆಯು “ನ್ಯಾಯದ ಆಡಳಿತದಲ್ಲಿ ಅಡ್ಡಿ” ಮತ್ತು ನ್ಯಾಯಾಲಯಗಳ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಅದು ಎಚ್ಚರಿಸಿದೆ. “ಅವರು ವಾರಂಟ್ ಗಳ ಅನುಷ್ಠಾನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದರೆ ಅಥವಾ ತಮ್ಮನ್ನು ಮರೆಮಾಚುತ್ತಿದ್ದರೆ ಮತ್ತು ಕಾನೂನಿನ ಅಧಿಕಾರಕ್ಕೆ ಶರಣಾಗದಿದ್ದರೆ, ಅವರಿಗೆ ನಿರೀಕ್ಷಣಾ ಜಾಮೀನು ನೀಡುವ […]

Continue Reading

ಕಾಂಗ್ರೆಸ್ ನೇತ್ರತ್ವದ ಸರ್ಕಾರದಲ್ಲಿ ನಡೆದಿರುವ ಮತ್ತೊಂದು ಬೃಹತ್ ಹಗರಣ ಬಯಲಿಗೆ

ಕೇಂದ್ರ ಸರ್ಕಾರದ ಅಮೃತ್ ಯೋಜನೆಯ 17,000 ಕೋಟಿ ಅನುದಾನ ದುರ್ಬಳಕೆ ಆರೋಪ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿರುವ ಮತ್ತೊಂದು ಬೃಹತ್ ಹಗರಣವನ್ನು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಬಯಲು ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಯೋಜನೆಯ 17,000 ಕೋಟಿ ಮೊತ್ತದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಗುರಿಯಾಗಿರುವ ಸಚಿವರಾದ ಭೈರತಿ ಸುರೇಶ್, ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಲೋಕಾಯುಕ್ತ ಮತ್ತು ಇಡಿಯಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲು ಮಾಡಿದ್ದಾರೆ. ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರರುಗಳಾದ […]

Continue Reading

ಹಣದಾಸೆಗಾಗಿ ಡಬಲ್ ಮರ್ಡರ್. ನಂಬಿಗಸ್ಥ ಗೆಳೆಯರಿಂದಲೇ ಇಬ್ಬರ ಹತ್ಯೆ, ಆರೋಪ ಸಾಬೀತು. ಇಂದು ಶಿಕ್ಷೆ ಪ್ರಕಟಿಸುವ ಸಾಧ್ಯತೆ.

ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿದ ಚಿನ್ನವನ್ನು ಮಾರಾಟ ಮಾಡಿ ಹಣವನ್ನು ಕಬಳಿಸುವ ಉದ್ದೇಶದಿಂದ ಇಬ್ಬರು ಗೆಳೆಯರಾದ ನಫೀರ್‌ ಮತ್ತು ಪಹೀಮ್ ರವರನ್ನು ಹತ್ಯೆಗೈದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾಸರಗೋಡು ನಿವಾಸಿಗಳಾದ ಮೊಹಮ್ಮದ್‌ ಮುಹಜೀರ್‌ ಸನಾಫ್‌, ಮೊಹಮ್ಮದ್‌ ಇರ್ಷಾದ್‌, ಮೊಹಮ್ಮದ್‌ ಸಫ್ವಾನ್‌ ಎಂಬ ಅಪರಾಧಿಗಳಿಗೆ ಏಪ್ರಿಲ್ 9 ರಂದು ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ. ತಲಶ್ಯೇರಿ ನಿವಾಸಿ ನಫೀರ್‌ ಮತ್ತು ಕೋಝಿಕೋಡ್‌ ಪಹೀಮ್ ಹತ್ಯೆಯಾದವರು. ತಲಶ್ಯೇರಿ ನಿವಾಸಿ ನಫೀರ್‌ […]

Continue Reading

ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಸ್ವಯಂ ಸಂಪಾದಿಸಿದ ಆಸ್ತಿ, ಪೂರ್ವಜರ ಆಸ್ತಿಯನ್ನೂ ಪಡೆಯಲು ಅರ್ಹರು: ಒರಿಸ್ಸಾ ಹೈಕೋರ್ಟ್

ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಸ್ವಯಂ ಸಂಪಾದಿಸಿದ ಆಸ್ತಿಯ ಜೊತೆಗೆ ತಮ್ಮ ತಂದೆಯ ಪೂರ್ವಜರ ಆಸ್ತಿಯನ್ನೂ ಪಡೆಯಲು ಅರ್ಹರು ಎಂದು ಒರಿಸ್ಸಾ ಹೈಕೋರ್ಟ್ ಆದೇಶಿಸಿದೆ. 70 ವರ್ಷದ ಮಹಿಳೆಯ ಮೃತ ಪತಿಯ ಎರಡನೇ ಪತ್ನಿಯ ಮಕ್ಕಳಿಗೆ ಆನುವಂಶಿಕ ಹಕ್ಕನ್ನು ಅನುಮತಿಸುತ್ತದೆ ಎಂದು ಕುಟುಂಬ ನ್ಯಾಯಾಲಯದ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ 80 ವರ್ಷದ ಮಹಿಳೆ ಸಲ್ಲಿಸಿದ ವೈವಾಹಿಕ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿಭು ಪ್ರಸಾದ್ ರೌತ್ರೇ ಮತ್ತು ಚಿತ್ತರಂಜನ್ ದಾಶ್ ಅವರ ಪೀಠ ವಜಾಗೊಳಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದ […]

Continue Reading

ಪಿಯುಸಿ ವಿದ್ಯಾರ್ಥಿನಿಯನ್ನು ಏಳು ದಿನಗಳ ಕಾಲ ಕೂಡಿ ಹಾಕಿ, ಮದ್ಯ ಕುಡಿಸಿ, ಬರೋಬ್ಬರಿ 23 ಜನರಿಂದ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಏಳು ದಿನಗಳ ಕಾಲ ಮದ್ಯ ಕುಡಿಸಿ, ಬರೋಬ್ಬರಿ 23 ಜನರಿಂದ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ದಾಖಲಾಗಿದೆ.ಕಳೆದ ಮಾರ್ಚ್ 29 ರಿಂದ ಏಪ್ರಿಲ್ 4 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ puc ತರಗತಿಯ ವಿದ್ಯಾರ್ಥಿನಿಯ ಮೇಲೆ 20 ಕ್ಕೂ ಅಧಿಕ ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು 23 ಮಂದಿ ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಅವರಲ್ಲಿ 11 ಮಂದಿಯ ಗುರುತು […]

Continue Reading

ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಎಪ್ರಿಲ್ 29ರಂದು ಬ್ರಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶ

ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಜನಸಾಮಾನ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಪ್ರಿಲ್ 29ರಂದು ದೇರಳಕಟ್ಟೆ ಜಂಕ್ಷನ್ ನಲ್ಲಿ ಬ್ರಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶವು ಜರುಗಲಿದೆ.ಇದರ ಪೂರ್ವಭಾವಿ ತಯಾರಿಗಾಗಿ ಮುನ್ನೂರು ಯುವಕ ಮಂಡಲದಲ್ಲಿ ಆಯೋಜಿಸಿದ CPIM ಪಕ್ಷದ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿ ಕಂಡಿತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ CPIM ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ ಯಾದವ ಶೆಟ್ಟಿಯವರು,ಉಳ್ಳಾಲ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದರೂ ಇನ್ನೂ […]

Continue Reading

ಕೃಷ್ಣ ಬೈರೇಗೌಡ ಅಂದ್ರೆ ರಾಹುಲ್ ಗೇಕೆ ಇಷ್ಟ.?

ಜೆಡಿಎಸ್ ಬಗ್ಗೆ ಬಿಜೆಪಿಗೆ ಆತಂಕವೇ.? ವಿಜಯೇಂದ್ರ ಇರಲಿ ಅಂದ್ರು ಭಿನ್ನರು. ರೇಣುಕಾಚಾರ್ಯ ಉಚ್ಚಾಟನೆ ಆಗ್ಲೇಬೇಕ್.! ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಧಾನದಿಂದಲೇ ವಾಪಸ್ಸಾದರು. ಕಾರಣ.? ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ನಾಯಕತ್ವದ ಪರವಾಗಿ ಮಾತನಾಡಿದರೆ, ಸೋನಿಯಾ ಗಾಂಧಿಯವರು ‘ಸ್ವಲ್ಪ ಕಾಲ ತಾಳ್ಮೆಯಿಂದಿರಿ’ ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ತಲುಪಿಸಿದ್ದಾರಂತೆ. ಉಳಿದಂತೆ ಸಂಪುಟ ಪುನರ್ ರಚನೆಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ತನಕ ಯಾವುದಕ್ಕೂ ರಾಹುಲ್ ಗಾಂಧಿಯವರೇ ಆಗಲಿ, ಖರ್ಗೆ, ವೇಣುಗೋಪಾಲ್ […]

Continue Reading

ಮಹಿಳೆಯೊಬ್ಬರಿಗೆ ಮಾಟ, ಮಂತ್ರ ಮಾಡಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ; ಲಕ್ಷಾಂತರ ರೂಪಾಯಿ ವಂಚನೆ

ಮಹಿಳೆಯೊಬ್ಬರಿಗೆ ಮಾಟ, ಮಂತ್ರ ಮಾಡಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪ ಆಧಾರದಲ್ಲಿ ಗುರುವಾಯನಕೆರೆಯ ನಿವಾಸಿ ಜಿ. ಅಬ್ದುಲ್‌ ಕರೀಮ್‌ ಎಂಬ ಮಂತ್ರವಾದಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. 2022ರಲ್ಲಿ ಸಂತ್ರಸ್ತೆಗೆ ಖನ್ನತೆಯ ಸಮಸ್ಯೆ ಉಂಟಾಗಿತ್ತು. ಆಕೆ ತನ್ನ ಸಂಬಂಧಿಯ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್‌ ಅಬ್ದುಲ್‌ ಕರೀಮ್‌ ಮನೆಗೆ ಹೋಗಿದ್ದರು. ಅಲ್ಲಿ ಮಂತ್ರವಾದಿ ಅಬ್ದುಲ್‌ ಕರೀಮ್‌ ನಿಮಗೆ ಯಾರೋ ಮಾಟ ಮಂತ್ರ ಮಾಡಿದ್ದಾರೆ. ಅದನ್ನು ಪರಿಹರಿಸಬೇಕು. […]

Continue Reading

ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆ, ಸರ್ಕಾರದಿಂದ ಕೆಲವು ಕಠಿಣ ನಿಯಮ

ಸಿಸಿ, ಒಸಿ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು ನಿರ್ಧಾರ ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆಹಾಕುವ ನಿಟ್ಟಿನಲ್ಲಿ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ರೂಪಿಸಿದ ಬೆನ್ನಲ್ಲೇ, ವಸತಿ ಸೇರಿ ಎಲ್ಲ ಬಗೆಯ ಕಟ್ಟಡಗಳಿಗೂ ಅನ್ವಯವಾಗುವಂತೆ ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು ನಿರ್ಧರಿಸಿವೆ. ಇದು ಮುಂದಕ್ಕೆ ಕಟ್ಟಡ ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ. ಈ ನಿಯಮವು […]

Continue Reading

ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆ. ಬ್ಯಾಡ್ಮಿಂಟನ್ ತರಬೇತುದಾರನಿಂದ ಅಪ್ರಾಪ್ತ ಬಾಲಕಿಯರ ಅತ್ಯಾಚಾರ

ಕೋಚ್ ಸುರೇಶ್ ಮೊಬೈಲ್​ನಲ್ಲಿ 13 ರಿಂದ 16 ವರ್ಷ ವಯಸ್ಸಿನ ಬಾಲಕಿಯರ ನಗ್ನ ಫೋಟೋ, ವೀಡಿಯೊಗಳು ಪತ್ತೆ. ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಬ್ಯಾಡ್ಮಿಂಟನ್ ತರಬೇತುದಾರ​ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಸುರೇಶ್ ಬಾಲಾಜಿ ಎಂಬ ಬ್ಯಾಡ್ಮಿಂಟನ್ ಕೋಚ್ ಆಗಿದ್ದು, ಬ್ಯಾಡ್ಮಿಂಟನ್ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಕೋಚಿಂಗ್​ ಸೇರಿದ್ದ ಬಾಲಕಿಯನ್ನು ಆಗಾಗ […]

Continue Reading