ಮೂಡಬಿದ್ರೆ ಮಾರುಕಟ್ಟೆ ಗುತ್ತಿಗೆದಾರನಿಂದ ಅಧಿಕ ಸುಂಕ ವಸೂಲಿ. ಅನಾಧಿಕೃತ ಸೀಯಾಳ ಅಂಗಡಿ ವಿವಾದ, ಮಾರ್ಕೆಟ್ ಸುಂಕ ವಸೂಲಿ ಗುತ್ತಿಗೆ ರದ್ದು.

ಮೂಡಬಿದ್ರೆ ಮಾರುಕಟ್ಟೆ ಗುತ್ತಿಗೆದಾರನಿಗೆ ಅಧಿಕ ಸುಂಕ ನೀಡದ ಎಳನೀರು ವ್ಯಾಪಾರಿಯ ಅಂಗಡಿ ಪಕ್ಕದಲ್ಲಿ ರಾತ್ರೋರಾತ್ರಿ ಮತ್ತೊಂದು ಎಳನೀರು ಮಾರಾಟದ ಅಂಗಡಿಯನ್ನು ತೆರೆಯಲಾಗಿತ್ತು.ಕಳೆದ ಹಲವಾರು ವರ್ಷಗಳಿಂದ ದಿನೇಶ್ ಎಂಬವರು ಸಿಯಾಳ ವ್ಯಾಪಾರ ಮಾಡುತ್ತಿದ್ದರು. ಎಳನೀರು ವ್ಯಾಪಾರಿ ದಿನೇಶ್ ಅವರು ದಿನಾ 280 ಸುಂಕವನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದರು. ಇತ್ತೀಚೆಗೆ ಮಾರುಕಟ್ಟೆಯ ಟೆಂಡರ್‌ ಅನ್ನು ಹೊಸದಾಗಿ ಪಡೆದ ಗುತ್ತಿಗೆದಾರರು 400 ರೂಪಾಯಿ ಸುಂಕ ನೀಡುವಂತೆ ದಿನೇಶ್ ಅವರಿಗೆ ಸೂಚಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಅವರ ಅಂಗಡಿಯ ಪಕ್ಕದಲ್ಲೇ ಮತ್ತೊಂದು ಅಂಗಡಿಯನ್ನು ಅನಧಿಕೃತವಾಗಿ ತೆರೆಯಲಾಗಿತ್ತು. […]

Continue Reading

ಗಂಜಿಮಠ ‘ಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಶೀಘ್ರ ಸ್ಥಾಪನೆಗೆ ಒತ್ತಾಯಿಸಿ ಸಿಪಿಐಎಂ ಧರಣಿ

ಗಂಜಿಮಠ ‘ಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಕಾರ್ಯರೂಪಕ್ಕೆ ತರಲು, ಗಂಜಿಮಠ ಇಪಿಐಪಿ ಕೈಗಾರಿಕಾ ವಲಯದ ಖಾಲಿ ಬಿದ್ದಿರುವ ಜಮೀನಿನಲ್ಲಿ ಕೈಗಾರಿಕೆಗಳನ್ನು ತಕ್ಷಣ ಆರಂಭಿಸಲು ಆಗ್ರಹಿಸಿ. ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಗುರುಪುರ ವಲಯ ಸಮಿತಿ ನೇತ್ರತ್ವದಲ್ಲಿ ಇಂದು ಗಂಜಿಮಠ ಕೈಗಾರಿಕಾ ವಲಯದ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು. ಧರಣಿಯನ್ನು ಉದ್ದೇಶಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್) ವಾದಿ ಇದರ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಎಂ ಆರ್ ಪಿ ಎಲ್ ನ ಕಚ್ಚಾ ವಸ್ತುಗಳನ್ನು […]

Continue Reading

ಸಚಿವ ಮಾಂಕಾಳ ವೈದ್ಯ ಗುಂಡೇಟು ಹೇಳಿಕೆ: ಪಿಯುಸಿಎಲ್ ಕರ್ನಾಟಕ ಖಂಡನೆ.

ಬೆಂಗಳೂರು: ಇತ್ತೀಚೆಗೆ ಘಟಣೆಯೊಂದಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವ ಮಾಂಕಾಳ ವೈದ್ಯ ಅವರು ಗೋಹತ್ಯೆಗಾರರನ್ನು ಗುಂಡಿಟ್ಟು ಕೊಳ್ಳಬೇಕು ಎಂಬಿತ್ಯಾದಿಯಾಗಿ ಸಂಭೋಧಿಸಿರುವ ಹೇಳಿಕೆಗೆ ಕರ್ನಾಟಕ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಯು ಖಂಡನೆ ವ್ಯಕ್ತ ಪಡಿಸಿದೆ. ಮಾಂಕಾಳ ವೈದ್ಯ ಅವರು ತನ್ನ ಸಾಂವಿಧಾನಿಕ ಭದ್ಧತೆನ್ನು ಮುರಿದಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಸ್ವ ಇಚ್ಛೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಪಿಯುಸಿಎಲ್ ಹೇಳಿದೆ. ಮಾಂಕಾಳ ರವರ […]

Continue Reading

ಸೂರ್ಯಾಸ್ತಮಾನದ ಬಳಿಕವೂ ಮಹಿಳೆಯನ್ನು ಬಂಧಿಸಬಹುದು: ಮದ್ರಾಸ್‌ ಹೈಕೋರ್ಟ್‌

ಸೂರ್ಯಾಸ್ತಮಾನದ ಬಳಿಕವೂ ಮಹಿಳೆಯನ್ನು ಬಂಧಿಸಬಹುದು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಸೂರ್ಯಾಸ್ತದ ಬಳಿಕ ಮಹಿಳೆಯರನ್ನು ಬಂಧಿಸುವಂತಿಲ್ಲ ಎಂದು ಹೇಳಿರುವುದು ನಿರ್ದೇಶನವೇ ಹೊರತು ಅದು ಕಡ್ಡಾಯವಲ್ಲ ಎಂದು ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ಮತ್ತು ನ್ಯಾಯಮೂರ್ತಿ ಜೋತಿರಾಮನ್‌ ಅವರಿದ್ದ ಪೀಠ ಹೇಳಿದೆ. ಅಸಾಧಾರಣ ಸಮಯದಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮಹಿಳೆಯರನ್ನು ಬಂಧಿಸುವುದನ್ನು ನಿರ್ಬಂಧಿಸಲಾಗಿದೆ. ಆದರೂ ಇಂತಹ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆದುಕೊಂಡು ಬಂಧಿಸಬಹುದು ಎಂದು ಕೋರ್ಟ್‌ ಹೇಳಿದೆ. ಮಹಿಳೆಯೊಬ್ಬರ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು […]

Continue Reading

ದೆಹಲಿ ಗದ್ದುಗೆ ಬಿಜೆಪಿ ಗೆದ್ದಿದ್ದು ಹೇಗೆ..?

ರಾಜಕಾರಣಕ್ಕೆ ಹೊಸ ‘ಮಾಡೆಲ್’ ಕೊಟ್ಟು, ದ್ವೇಷ ರಾಜಕಾರಣಕ್ಕೆ ಬಲಿಯಾದ್ರೆ ಕೇಜ್ರಿ..? ದೆಹಲಿಯ ಜನತೆ ಪೊರಕೆ ತೊರೆದು 27 ವರ್ಷಗಳ ನಂತರ ಕಮಲಕ್ಕೆ ಜೈ ಅಂದಿದ್ದಾರೆ. ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಸೊನ್ನೆ ಸುತ್ತಿದೆ. ದೆಹಲಿ ಫಲಿತಾಂಶ ನಂತರ ಹಲವಾರು ವಿಶ್ಲೇಷಣೆಗಳು ನಡೆಯುತ್ತಿದೆ. ಕಾಂಗ್ರೆಸ್ -ಆಪ್ ಪ್ರತ್ಯೇಕವಾಗಿ ಸ್ಪರ್ಧಿಸಿ ಬಿಜೆಪಿಗೆ ಗೆಲುವಿನ ದಾರಿ ಸುಲಭವಾಗಿ ತಂದುಕೊಟ್ಟಿದೆ ಅನ್ನಲಾಗಿದೆ. ಅದು ದಿಟವೂ ಹೌದು. ಹದಿನೇಳು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಸೋಲಲು ಕಾಂಗ್ರೆಸ್ ಪಕ್ಷವೇ ಪ್ರಮುಖ ಕಾರಣ. ಕಾಂಗ್ರೆಸ್ ಪಡೆದ ಮತಕ್ಕಿಂತ ಕಡಿಮೆ […]

Continue Reading

ವ್ಯಭಿಚಾರಕ್ಕೊಂದು ಮಧುರ ಹೆಸರು – ಸುಗರ್ ಡ್ಯಾಡಿ…!!

ಹದಿಹರೆಯದ ಯುವತಿಯರು ಹೈ -ಫೈ ಬದುಕಿಗೆ ಬಟ್ಟೆ ಬಿಚ್ಚುವ ದಂಧೆ ಮಂಗಳೂರಿನಲ್ಲಿ ಸಕ್ರೀಯ.! ✍️. ಇಸ್ಮತ್ ಪಜೀರ್ ಈ ಹೆಸರನ್ನು ಎಷ್ಟು ಮಂದಿ ಕೇಳಿದ್ದೀರೆಂದು ನಾನರಿಯೆ. ಆದರೆ ಇದರ ಹಕೀಕತ್ತು ಅರಿತರೆ ನೀವು ಬೆಚ್ಚಿ ಬೀಳುವುದು ಖಚಿತ. ನಾನು ನಮ್ಮ ಮಂಗಳೂರಿನ ಕತೆ ಮಾತ್ರ ಅರಿತು ಬಲ್ಲೆ. ಬೇರೆ ನಗರಗಳಲ್ಲಿ ಹೇಗೋ ನಾನರಿಯೆ. ನೇರವಾಗಿ ಹೇಳಬೇಕೆಂದರೆ ಇದೊಂದು ಮೈ ಮಾರಾಟ ದಂಧೆ. ಆದರೆ ಇದು ಬಡತನದ ಕಾರಣಕ್ಕಾಗಿ ನಡೆಸುವ Professional Prostitution ಅಲ್ಲ. ಮಂಗಳೂರು ನಗರದಲ್ಲಿ ಮಧ್ಯ […]

Continue Reading

ಅಮೇರಿಕದಲ್ಲಿರುವ ಭಾರತೀಯ ನಾಗರೀಕರನ್ನು ವಲಸಿಗ ಹೆಸರಿನಲ್ಲಿ ಅಮಾನವೀಯವಾಗಿ ಗಡೀಪಾರು ಮಾಡುತ್ತಿರುವ ಟ್ರಂಪ್ ಸರಕಾರದ ಕ್ರಮಕ್ಕೆ ಡಿವೈಎಫ್ಐ ಖಂಡನೆ

104 ಭಾರತೀಯ ನಾಗರಿಕರನ್ನು ಯುನೈಟೆಡ್ ಸ್ಟೇಟ್ಸ್‌ನಿಂದ ಗಡೀಪಾರು ಮಾಡಲಾಗಿರುವ ಅಮಾನವೀಯ ನಡೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಬಲವಾಗಿ ಖಂಡಿಸುತ್ತದೆ. ಭಾರತೀಯ ನಾಗರೀಕರಿಗೆ ಮಿಸುಕಾಡಲೂ ಸಾಧ್ಯವಾಗದಂತೆ ಕೈಕೊಳ ಹಾಕಿ, ಅವರನ್ನು ಒತ್ತಾಯಪೂರ್ವಕವಾಗಿ ನಿರ್ಬಂಧಿಸಿ ಸುದೀರ್ಘವಾಗಿ ಯುಎಸ್ ಮಿಲಿಟರಿ ವಿಮಾನ & ಹಡಗಿನಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಸಾಗಿಸಿರುವುದು ಮಾನವ ಘನತೆ ಮತ್ತು ಮಾನವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಅಮೇರಿಕದ ಈ ಕ್ರೂರ ನಡೆಯು ಶೋಚನೀಯವಾಗಿದ್ದು ಪ್ರತಿ ಭಾರತೀಯರು ಇದನ್ನು ಪ್ರಬಲವಾಗಿ ಖಂಡಿಸಬೇಕು. ಭಾರತೀಯ ನಾಗರಿಕರ ಮೇಲಿನ ಈ […]

Continue Reading

ಮಂಗಳೂರು ಮೂಡದಲ್ಲಿ ದಲ್ಲಾಳಿಗಳ ಶೀತಲ ಸಮರ; ಅಧಿಕಾರಿಗಳಿಗೆ ಪ್ರಾಣಸಂಕಟ.!

ಕಾಂಗ್ರೆಸ್- ಬಿಜೆಪಿ ದಲ್ಲಾಳಿಗಳ ‘ಬಣ’ ಮೇಲಾಟಕ್ಕೆ ಅಂತ್ಯ ಯಾವಾಗ..? ಮಂಗಳೂರು ಮೂಡ ಕಚೇರಿ ದಲ್ಲಾಳಿಗಳ ಸಾಮ್ರಾಜ್ಯವಾಗಿ ಪರಿವರ್ತನೆಗೊಂಡಿದ್ದಕ್ಕೆ ದಶಕಗಳ ಇತಿಹಾಸವೇ ಇದೆ. ಇಲ್ಲಿನ ದಲ್ಲಾಳಿಗಳೇ ತಮಗೆ ಬೇಕಾದ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವಷ್ಟು ಪವರ್ ಫುಲ್ ಆಗಿ ಬೆಳೆದಿರುವುದಂತೂ ಸತ್ಯ. ರಾಜಕೀಯ ಚೇಲಾಗಳೆಲ್ಲ ದಲ್ಲಾಳಿಗಳಾಗಿ ಬದಲಾದ ನಂತರ ಮೂಡದ ಚಿತ್ರಣವೇ ಬದಲಾಗಿದೆ. ತಮ್ಮ ತಮ್ಮ ಪಕ್ಷ ಅಧಿಕಾರದಲ್ಲಿರುವ ಸಂದರ್ಭ ದಲ್ಲಾಳಿಗಳು ತಮ್ಮ ತಮ್ಮ ನಾಯಕರಿಗೆ ದುಂಬಾಲು ಬಿದ್ದು ಅಧಿಕಾರಿಗಳಿಗೆ ಒತ್ತಡ ತಂದು ಕೆಲಸ ಮಾಡಿಕೊಂಡು ಹೋಗುತ್ತಾರೆ. ಇದರಿಂದಾಗಿ ಅಕ್ಷರಶಃ ಬಲಿಪಶುವಾಗುತ್ತಿರುವುದು […]

Continue Reading

ಮಂಗಳದ ಪ್ರಸಿದ್ಧ ನಾಟಿ ವೈದ್ಯ, ಜನಪದ ವೈದ್ಯರತ್ನ, ಎಂ. ಬಿ ಶಿವಣ್ಣಗೌಡ ಗುರುವಾರದಂದು ವಿಧಿವಶರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಪ್ರಸಿದ್ಧ ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ನಿಧನರಾಗಿದ್ದಾರೆ. ಜನಪದ ವೈದ್ಯರತ್ನ, ನಾಟಿ ವೈದ್ಯ ಎಂದೇ ಖ್ಯಾತಿ ಪಡೆದಿದ್ದ ಎಂ.ಬಿ.ಶಿವಣ್ಣಗೌಡ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಣ್ಣಗೌಡ ಗುರುವಾರ ಮುಂಜಾನೆ 4.45ಕ್ಕೆ ದೈವಾಧೀನರಾಗಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಯಾವುದೇ ಪ್ರಚಾರವಿಲ್ಲದೇ ಯಶಸ್ಸು ಕಂಡಿದ್ದರು. ಜನಪದ ವೈದ್ಯರತ್ನ ಎಂದೇ ಖ್ಯಾತಿ,ದೇಶ, ವಿದೇಶಗಳಿಂದ ಔಷಧಿಗಾಗಿ ಜನ ಇವರ […]

Continue Reading

ಮತ್ತೆ ವಿವಾದದ ಸುಳಿಯಲ್ಲಿ RGUHS; ಸೆನೆಟ್ ಚುನಾವಣಾ ಅಕ್ರಮ ಬಗ್ಗೆ CBI ತನಿಖೆಗೆ CRF ಆಗ್ರಹ..

ಸೆನೆಟ್ ಚುನಾವಣಾ ಅಕ್ರಮದ ಕೋಲಾಹಲ; ರಾಜ್ಯಪಾಲರು ಫಲಿತಾಂಶ ತಡೆಹಿಡಿದ ಬೆನ್ನಲ್ಲೇ ಸಿಬಿಐ ತನಿಖೆಗೆ ಕೋರಿ CRF ದೂರು.. ರಾಜೀವ್ ಗಾಂಧಿ ವಿವಿ ಚುನಾವಣಾ ಅಕ್ರಮ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ CRF ದೂರು. ಸೆನೆಟ್ ಚುನಾವಣಾ ಅಕ್ರಮದ ಕೋಲಾಹಲ; ರಾಜ್ಯಪಾಲರು ಫಲಿತಾಂಶ ತಡೆಹಿಡಿದ ಬೆನ್ನಲ್ಲೇ ಸಿಬಿಐ ತನಿಖೆಗೆ ಕೋರಿ CRF ದೂರು.. ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಸೆನೆಟ್ ಚುನಾವಣೆ ಅಕ್ರಮ ಕುರಿತಂತೆ ಕೇಂದ್ರ ತನಿಖಾ ದಳ (CBI) ತನಿಖೆಗೆ ಸಿಟಿಜನ್ ರೈಟ್ಸ್ […]

Continue Reading