ಶಿಕ್ಷಕಿಯರಿಬ್ಬರ ಜಡೆಜಗಳ. ಕನ್ಯಾನ-ಕಣಿಯೂರು ಸರ್ಕಾರಿ ಶಾಲೆಯ ದುರಂತ ಕಥೆ.

ಅಧಿಕಾರಿಗಳ ಮುಂದೆ ಶಿಕ್ಷಕಿಯರ ಜನ್ಮ ಜಾಲಾಡಿ ಪೋಷಕರ ಆಕ್ರೋಶ.‌ ವಿಟ್ಲ: ಶಿಕ್ಷಕಿಯರಿಬ್ಬರ ಒಣ ಪ್ರತಿಷ್ಠೆ ಮತ್ತು ಒಳಜಗಳದಿಂದಾಗಿ ಕನ್ಯಾನ ಗ್ರಾಮದ ಕಣಿಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಂತಾಗಿದೆ. ನಲ್ವತ್ತಾರು ವಿದ್ಯಾರ್ಥಿಗಳಿರುವ ಕಣಿಯೂರು ಸರ್ಕಾರಿ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದಾರೆ. ಇಪ್ಪತ್ತಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನಿತಾ ಎಂಬವರು ಮುಖ್ಯ ಶಿಕ್ಷಕಿಯಾಗಿದ್ದಾರೆ. ಏಳೆಂಟು ವರ್ಷಗಳಿಂದ ಲವಿನಾ ಎಂಬವರು ಸಹಾಯಕ ಶಿಕ್ಷಕಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಸನ ಮೂಲದ ಸುಮಯ್ಯ ಎಂಬವರು ಇದೇ ಕಣಿಯೂರು ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದಾರೆ. […]

Continue Reading

ಬೊಮ್ಮಾಯಿ, ನಿರಾಣಿ ರೇಸಿನಲ್ಲಿ ಕಾಣಿಸಿಕೊಂಡರು; ಅಮಿತ್ ಷಾ ಅವರಿಗೆ ಕಿರಿಕಿರಿ

ಯಡಿಯೂರಪ್ಪ ಹೊಸ ಅಸ್ತ್ರ.? ಸಿದ್ಧುಗೆ ದಿಲ್ಲಿ ಟಾನಿಕ್ ✍️. ಆರ್.ಟಿ. ವಿಠ್ಠಲಮೂರ್ತಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಇದ್ದಕ್ಕಿದ್ದಂತೆ ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿಯವರ ಹೆಸರುಗಳು ಕಾಣಿಸಿಕೊಂಡಿವೆ. ಮೊನ್ನೆ ಮೊನ್ನೆಯ ತನಕ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಅಲುಗಾಡಿಸುವುದು ಕಷ್ಟ ಎಂಬ ಮಾತಿತ್ತಾದರೂ ಇದೀಗ ಇದ್ದಕ್ಕಿದ್ದಂತೆ ಆಟ ಬದಲಾಗುವ ಸೂಚನೆಗಳು ಕಾಣಿಸಿಕೊಂಡಿವೆ.ಬಿಜೆಪಿಯ ಮೂಲಗಳ ಪ್ರಕಾರ, ವಿಜಯೇಂದ್ರ ಅವರನ್ನೇ ಪಕ್ಷಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಯಡಿಯೂರಪ್ಪ ಅವರಿಗೆ ಭರವಸೆ ನೀಡಿದ್ದರು. […]

Continue Reading

ಉಳ್ಳಾಲ: ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿಯ ಪತ್ತೆಗೆ 5 ಲಕ್ಷ ಪೀಡನೆ ಆರೋಪ; ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಗೆ ರಜೆಯ ಸಜೆ.!

ಬಜರಂಗದಳ ರೌಡಿ ಗೆ ‘ಮನ್ನಾ’.. ಕಾಂಗ್ರೆಸ್ ರೌಡಿಗೆ ‘ಕೋಳ’.. ಇನ್ಸ್ ಪೆಕ್ಟರ್ ನಡೆಯ ವಿರುದ್ಧ ಕೆರಳಿ ಕೆಂಡವಾಗಿದ್ದ ಕಾಂಗ್ರೆಸ್ ನಾಯಕರು..! ರಾಜ್ಯದಾದ್ಯಂತ ತೀವ್ರ ಸಂಚಲನವನ್ನೇ ಸೃಷ್ಟಿಸಿದ್ದ, ಮುಖ್ಯಮಂತ್ರಿ ಮಂಗಳೂರು ಭೇಟಿಯ ಸಮಯದಲ್ಲಿ ಮಟ ಮಟ ಮಧ್ಯಾಹ್ನವೇ ಉಳ್ಳಾಲ ತಾಲೂಕಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ ದರೋಡೆಕೋರರು ನುಗ್ಗಿ 15 ಕೋಟಿ ಲಪಟಾಯಿಸಿ ಎಸ್ಕೇಪ್ ಆಗಿದ್ದರು. ಈ ಘಟನೆ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರವನ್ನು ಸೃಷ್ಟಿಸಿತ್ತು. ಉತ್ತರ ಪ್ರದೇಶ, ಬಿಹಾರದಲ್ಲಿ ಕೇಳಿ ಬರುತ್ತಿದ್ದ ಇಂತಹ ಮಾದರಿಯ […]

Continue Reading

ಮಂಗಳೂರು ಅಕ್ರಮ ಮರಳು ದಂಧೆಕೋರರಿಗೆ ಸ್ವರ್ಗ, ಹೊಸ ಸೇತುವೆಗಳೂ ಅಪಾಯದಲ್ಲಿ

✍️. ಕಾಮ್ರೇಡ್ ಮುನೀರ್ ಕಾಟಿಪಳ್ಳ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಪೂರ್ತಿಯಾಗಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ, ಮರಳು ಮಾಫಿಯಾದವರನ್ನು ಹೇಳುವವರು, ಕೇಳುವವರು ಇಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಪೊಲೀಸ್ ಕಮೀಷನರೇಟ್ ಮರಳು ದಂಧೆಕೋರರ ಜೊತೆಗೆ ನೇರವಾಗಿ ಗುರುತಿಸಿಕೊಂಡರೆ, ಜಿಲ್ಲಾಧಿಕಾರಿ ಕಚೇರಿ ಮೌನ ಶಾಮೀಲಾತಿ ಹೊಂದಿದೆ. ದೂರು ನೀಡಿದವರ ಮಾಹಿತಿಯನ್ನು ಪೂರ್ಣ ವಿಳಾಸದೊಂದಿಗೆ ಮರಳು ದಂಧೆಕೋರರಿಗೆ ತಿಳಿಸಿ, ಅವರನ್ನು ಅಪಾಯಕ್ಕೊಡ್ಡುವ ಕಾರ್ಯವೂ ಮಂಗಳೂರಿನಲ್ಲಿದೆ. ಉಡುಪಿ ಪೊಲೀಸ್ ವರಿಷ್ಟಾಧಿಕಾರಿ, ಜಿಲ್ಲಾಧಿಕಾರಿಗಳು ನಿರ್ಬಂಧಿತ ಪ್ರದೇಶಗಳಲ್ಲಿ ಒಂದು ಹಿಡಿ ಮರಳು […]

Continue Reading

ಲೋಕಾಯುಕ್ತದಲ್ಲಿ ಲೇಡಿ ಸಿಂಗಂ.. ಆಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಗಾನಾ ಪ್ರಸನ್ನಕುಮಾರ್. ಭ್ರಷ್ಟರ ಪಾಲಿಗೆ ಈಕೆ ಸಿಂಹಸ್ವಪ್ನೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಆಗಿ ಜನಪ್ರಿಯರಾದವರು ಎಸ್ಪಿ ಅಣ್ಣಾಮಲೈ. ಉಡುಪಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಅಣ್ಣಾಮಲೈರದ್ದೇ ಸುದ್ದಿ. ಪಾತಕಿಗಳು, ದಂಧೆಕೋರರ ಪಾಲಿಗಂತೂ ಅಣ್ಣಾಮಲೈ ಸಿಂಗಂ ಆಗಿ ಗುರುತಿಸಿಕೊಂಡಿದ್ದರು. ಸಿನೆಮಾ ತಾರೆಯರಿಗೆ ಇರುವಷ್ಟು ಜನಪ್ರಿಯತೆ ಪೊಲೀಸ್ ಇಲಾಖೆಯಲ್ಲಿ ಇವರಿಗಿತ್ತು. ಆದರೆ ಯಾವಾಗ ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣ ಪ್ರವೇಶಿಸಿದರೋ ಸಿಂಗಂ ಅಣ್ಣಾಮಲೈ ಚುಯಿಂಗಂ ಆಗಿ ಬದಲಾದರು. ಆ ನಂತರ ತುಂಬಾ ಸಮಯದ ನಂತರ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಇಮೇಜಿನಿಂದ ಯಾರೂ ಗುರುತಿಸಿಕೊಳ್ಳಲಿಲ್ಲ. ಆದರೆ ತರುಣ […]

Continue Reading

ಶವಾಗಾರಕ್ಕೆ ಬಂದ 100 ಕ್ಕೂ ಹೆಚ್ಚು ಮೃತ ದೇಹಗಳೊಂದಿಗೆ ಡೇವಿಡ್ ಪುಲ್ಲರ್ ಎಂಬವನಿಂದ ಅತ್ಯಾಚಾರ.!

ಬ್ರಿಟನ್‌ನಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶವಾಗಾರಕ್ಕೆ ಬಂದ ಶವಗಳ ಮೇಲೆ ಒಬ್ಬ ವ್ಯಕ್ತಿ ಅತ್ಯಾಚಾರ ಮಾಡುತ್ತಿದ್ದ. ಇದರೊಂದಿಗೆ, ಆ ವ್ಯಕ್ತಿ ಮೃತ ದೇಹಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತನ್ನ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದ. ವರದಿಗಳ ಪ್ರಕಾರ, ಆತ 100 ಕ್ಕೂ ಹೆಚ್ಚು ಮೃತ ದೇಹಗಳೊಂದಿಗೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಈ ವ್ಯಕ್ತಿ ಬ್ರಿಟನ್‌ನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಡೇವಿಡ್ ಫುಲ್ಲರ್ ಇಬ್ಬರು ಹುಡುಗಿಯರ ಕೊಲೆ ಮತ್ತು […]

Continue Reading

ಅಡ್ಡೂರು: ಸೇತುವೆ ಕಾಮಗಾರಿಗೆ ಆರಂಭದಲ್ಲೇ ವಿಘ್ನ; ಕಾಮಗಾರಿ ನಡೆಸುತ್ತಿದ್ದ ವೇಳೆ ನದಿಯಲ್ಲಿ ಮುಳುಗಿದ ಟಿಪ್ಪರ್ ಲಾರಿ; ಅಪಾಯದಿಂದ ಚಾಲಕ ಪಾರು

ಬಂಟ್ವಾಳ ತಾಲೂಕಿಗೊಳಪಟ್ಟ ಪೊಳಲಿ ಅಡ್ಡೂರು ಸೇತುವೆ ಬಿರುಕುಗೊಂಡ ಪರಿಣಾಮ ಕಳೆದ ಹಲವಾರು ತಿಂಗಳುಗಳಿಂದ ಈ ಸೇತುವೆಯಲ್ಲಿ ಬಸ್ಸು, ಲಾರಿ ಸೇರಿದಂತೆ ಘನ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು. ಕೈಕಂಬ -ಪೊಳಲಿ- ಬಿಸಿರೋಡ್ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಅಡ್ಡೂರಿನವರೆಗೂ ಮಾತ್ರ ಸಂಚರಿಸುತ್ತಿದ್ದು, ಆ ನಂತರ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಹೋಗಿ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತ ಬಸ್ಸು ಏರಿ ಪ್ರಯಾಣಿಸಲೇಬೇಕಾದ ಕಾರಣ ಈ ಭಾಗದ ಜನರು ತುಂಬಾ ತೊಂದರೆಗೆ ಒಳಗಾಗುತ್ತಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದಾಗಿ ತೀವ್ರ […]

Continue Reading

ಮೂಡ ಸದಸ್ಯನ ಸುಲಿಗೆ ಪುರಾಣ.! ಈತನ ಹರ್ನಿಯಾ ರಿಪೇರಿಗೂ ಮೂಡಾದಿಂದ ಕಲೆಕ್ಷನ್.!

ಮಂಗಳೂರು ಉರ್ವಸ್ಟೋರಿನಲ್ಲಿರುವ ಮೂಡ ಕಚೇರಿಗೆ ಹಿಡಿದ ಶನಿ ಬಿಡುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ರಗಳೆಯ ಮೂಲಕ ಸುದ್ಧಿಯಾಗುತ್ತಲೇ ಇದೆ. ಮೂಡದ ಈ ಹಿಂದಿನ ಆಯುಕ್ತ ಮನ್ಸೂರ್ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಜೈಲು ಪಾಲಾದರು. ಆ ನಂತರ ಬಂದ ಆಯುಕ್ತರು, ಅಧಿಕಾರಿಗಳು ಮೂಡದ ಕರ್ಮಕಥೆ ಬದಲಾಯಿಸುತ್ತಾರೆ ಅಂದುಕೊಂಡಿದ್ದೆವು. ಆದರೆ ಅವರು ಕೂಡ ಅದೇ ದಾರಿ ಹಿಡಿದರು. ಮೂಡದ ಸರಕಾರಿ ಅಧಿಕಾರಿಗಳ ಕಥೆ ನಿಮಗೆಲ್ಲ ಗೊತ್ತೇ ಇದೆ? ಇಲ್ಲಿ ಕಾಸು ಬಿಚ್ಚದೆ ಯಾವ ಕೆಲಸವೂ ನಡೆಯಲ್ಲ. ಒಂದೊಂದು […]

Continue Reading

ಮತ್ತೆ ಭೀಮಾ ತೀರದಲ್ಲಿ ಮಚ್ಚಿನ ಸದ್ದು; ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಬಾಗಪ್ಪ ಹರಿಜನ ಭೀಕರ ಹತ್ಯೆ

ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ. ವಿಜಯಪುರದ ಮದಿನಾ […]

Continue Reading

ಕಂಬಳ ನಡೆಸುವವರಿಂದ ಕ್ರಷಿಭೂಮಿ ಉಳಿಸಲು ಸಾಧ್ಯವೇ..? – ಮುನೀರ್ ಕಾಟಿಪಳ್ಳ ಪ್ರಶ್ನೆ

ಜಮೀನ್ದಾರಿಕೆ ಪದ್ದತಿಯ ವಿರುದ್ಧ ಗೇಣಿದಾರ ರೈತರು ದಶಕಗಳ ಕಾಲ ಸಂಘರ್ಷ ನಡೆಸಿ ಭೂಮಿಯ ಹಕ್ಕು ಪಡೆದ ಉಳ್ಳಾಲ ತಾಲೂಕಿನಲ್ಲಿ ನವ ಭೂಮಾಲಕ ಪದ್ದತಿ ತಲೆ ಎತ್ತಿದೆ. ರೈತರ ನೂರಾರು ಎಕರೆ ಜಮೀನು ಸದ್ದಿಲ್ಲದೆ ಬಲಾಢ್ಯ ವರ್ಗದ ಪಾಲಾಗುತ್ತಿದೆ. ಬಡ ರೈತರ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಗೂಂಡಾ ಪ್ರವೃತ್ತಿಯ ಏಜಂಟರನ್ನು ಮುಂದಿಟ್ಟು ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಮುನ್ನೂರು, ಬೆಳ್ಮ, ಮಂಜನಾಡಿ ಗ್ರಾಮಗಳಲ್ಲಿ ಅತಿ ಕಡಿಮೆ ದರ ನೀಡಿ ಕೃಷಿ ಭೂಮಿ ಸ್ವಾಧೀನ ಪಡಿಸಲಾಗುತ್ತಿದೆ. ಸುತ್ತಲಿನ ಜಮೀನು ಖರೀದಿ ಮಾಡಿ […]

Continue Reading