ಹೊರ ಜಿಲ್ಲೆಗಳ ಜೆಸಿಬಿ ಚಾಲಕರ ಮೇಲೆ ಜಿಲ್ಲೆಯ ಜೆಸಿಬಿ ಮಾಲಿಕರಿಂದ ದೌರ್ಜನ್ಯ, ಅನೈತಿಕ ಪೊಲೀಸ್ ಗಿರಿ.

ಸಾರಿಗೆ ನಿಯಮ ಪಾಲಿಸುವ ಹೊರ ಜಿಲ್ಲೆಗಳ ಜೆಸಿಬಿಗಳಿಗೆ ದೊಣ್ಣೆ ನಾಯಕರ ಅಪ್ಪಣೆ ಬೇಕೇ.? ಹೌದು. ದ.ಕ.ಜಿಲ್ಲೆಯು ಒಂದಲ್ಲ ಒಂದು ವಿಚಾರದಲ್ಲಿ ನೈತಿಕ ಪೊಲೀಸ್ ಗಿರಿಯಿಂದಲೇ ಕುಖ್ಯಾತಿ ಪಡೆಯುತ್ತಿದೆ. ಇದೀಗ ಇದೇ ಸಾಲಿಗೆ ಜೆಸಿಬಿ ಮಾಲಿಕರ ಸಂಘವೆಂಬ ಒಂದಿಷ್ಟು ಜನರ ತಂಡ ಹೊರ ಜಿಲ್ಲೆಯ ಜೆಸಿಬಿ ಆಪರೇಟರ್ ಮೇಲೆ ದೌರ್ಜನ್ಯ ಎಸಗಿ ನೈತಿಕ ಪೊಲೀಸ್ ಗಿರಿ ನಡೆಸಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ.ಸಾರಿಗೆ ನಿಯಮದ ಪ್ರಕಾರ ಸಾರಿಗೆ ತೆರಿಗೆ, ಇನ್ಸೂರೆನ್ಸ್ ಮತ್ತು ಚಾಲಕನಿಗೆ ಲೈಸೆನ್ಸ್ ಇದ್ದರೂ ಹೊರ […]

Continue Reading

ದ.ಕ.ಜಿಲ್ಲೆಯಾಧ್ಯಂತ ಬೀಡುಬಿಟ್ಟಿರುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರು..

ಮನೆ ಮನೆಗೆ ಬಂದು ಕಡಿಮೆ ಬೆಲೆಯ ಅಟೋಮ್ಯಾಟಿಕ್ ಸ್ಟವ್ ನೀಡುವ ವಂಚಕರು. ಎಂಟು ಸಾವಿರ ಮುಖಬೆಲೆಯ ಅಟೋಮೆಟಿಕ್ ಸ್ಟವ್ ಕೇವಲ ಎರಡು ಸಾವಿರಕ್ಕೆ ಬಂತೆಂದು ಖುಷಿಪಡ್ತೀರಾ ಜೋಕೆ. ಬೈಕುಗಳಲ್ಲಿ ಸುತ್ತಾಡುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರ ತಂಡ ನಾಳೆ ನಿಮ್ಮ ಮನೆಗೂ ಬರ್ತಾರೆ. ಎಂಟು ಸಾವಿರದಿಂದ ಆರಂಭವಾಗುವ ದರ ಚರ್ಚೆ ಇಳಿಯುತ್ತಾ ಕೊನೆಗೆ ಕೇವಲ ಎರಡು ಸಾವಿರಕ್ಕೆ ಬಂದು ನಿಲ್ಲುತ್ತದೆ. ಹೈಫೈ ಅಟೋಮೆಟಿಕ್ ಸ್ಟವ್ ನಿಮ್ ಕೈಗೆ ಕೊಟ್ಟು ಬೈಕ್ ವಾಲಾ ಹೋಗ್ತಾನೆ‌. ಎರಡು ಸಾವಿರಕ್ಕೆ […]

Continue Reading

2019 ರಿಂದ ವಕ್ಫ್ ಮಂಡಳಿಗೆ ಕೇಂದ್ರದಿಂದ ಭೂಮಿ ನೀಡಿಲ್ಲ: ರಾಜ್ಯಸಭೆಗೆ ಸರ್ಕಾರ ನೀಡಿದ ಮಾಹಿತಿ

ನವದೆಹಲಿ: 2019 ರಿಂದ ಕೇಂದ್ರ ಸರ್ಕಾರವು ವಕ್ಫ್ ಮಂಡಳಿಗೆ ಯಾವುದೇ ಭೂಮಿಯನ್ನು ನೀಡಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೋಮವಾರ ರಾಜ್ಯಸಭೆಗೆ ತಿಳಿಸಿದೆ. 2019 ರಿಂದ ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕ್ಫ್ ಬೋರ್ಡ್‌ಗೆ ಒದಗಿಸಿದ ಒಟ್ಟು ಭೂಮಿಯ ವಿಸ್ತೀರ್ಣ ಕುರಿತು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಎಂಒಎಸ್ ತೋಖಾನ್ ಸಾಹು ಅವರು ಭೂಮಿ ರಾಜ್ಯದ ವಿಷಯವಾಗಿದೆ ಮತ್ತು ಆದ್ದರಿಂದ ರಾಜ್ಯ ಸರ್ಕಾರಗಳು ಒದಗಿಸಿದ ಭೂಮಿಯ ಡೇಟಾ ಇಲ್ಲ ಎಂದು ಹೇಳಿದರು. […]

Continue Reading

ಕರ್ನಾಟಕದ ಮಾಜಿ ಸಿ.ಎಂ ಎಸ್ ಎಂ ಕೃಷ್ಣ ಇನ್ನಿಲ್ಲ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ ಮುಂಜಾನೆ ಅವರ ನಿವಾಸದಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ. 92 ವರ್ಷದ ಹಿರಿಯ ರಾಜಕಾರಣಿ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಮುಂಜಾನೆ 2:45 ಕ್ಕೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಪಾರ್ಥಿವ ಶರೀರವನ್ನು ಇಂದು ಮದ್ದೂರಿಗೆ ಕೊಂಡೊಯ್ಯುವ ಸಾಧ್ಯತೆಯಿದೆ” ಎಂದು ಮೂಲಗಳು ತಿಳಿಸಿವೆ.

Continue Reading

ಕೋಮುಭಾವನೆ ಕೆರಳಿಸುವ ಪೋಸ್ಟ್; ಬಂಟ್ವಾಳ ಅರಳದ ಜಯಪೂಜಾರಿಗೆ 14 ದಿನಗಳ ನ್ಯಾಯಾಂಗ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ಧರ್ಮಗಳ ಮಧ್ಯೆ ಅವಹೇಳನಕಾರಿ ಪೋಸ್ಟ್ ಬರೆದು ವೈರಲ್ ಮಾಡಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯ ಪೂಜಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ ಬರೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ . ಬಂಟ್ವಾಳ ಗ್ರಾಮಾಂತರ ಪೋಲೀಸರು ಈತನನ್ನು ಬಂಧಿಸಿ ಸುಮೋಟೋ ಕೇಸ್ ದಾಖಲಿಸಿದ್ದಾರೆ. ಆರೋಪಿ ಜಯ ಪೂಜಾರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಧರ್ಮ, ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ […]

Continue Reading

ದುಬೈ: ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆಬ್ರವರಿ 9ರಂದು ಅದ್ದೂರಿಯ ಬ್ಯಾರಿ ಮೇಳ

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಸ್ ಯುಎಇ ನೇತೃತ್ವದಲ್ಲಿ ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದಲ್ಲಿ 9 ಫೆಬ್ರವರಿ 2025ರಂದು ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. 8 ಡಿಸೆಂಬರ್ ಅಜ್ಮಾನ್ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು, ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಂಬೆ ಗ್ರೂಪ್ ಸ್ಥಾಪಕರು, ಅನಿವಾಸಿ ಉದ್ಯಮಿ ತುಂಬೆ ಮೊಹಿದ್ದೀನ್ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತ ಚಾಲನೆ […]

Continue Reading

ವಿಟ್ಲ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕಿ. ಬಾಲಕಿಯ ಬಲಿ ಪಡೆದ ಜೋಕಾಲಿ ಹಗ್ಗ.

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಮನಕಲಕುವ ಘಟನೆ ನಡೆದಿದೆ. ಮಡಲ ನಿವಾಸಿ ಕಿಶೋರ್ ಎಂಬವರ ಪುತ್ರಿ ಮಾಣಿ ಸಮೀಪದ ಸೇರ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತೀರ್ಥಶ್ರೀ(8) ಮೃತ ಬಾಲಕಿ.ರವಿವಾರದಂದು ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ಜೋಕಾಲಿ ಹಗ್ಗ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಈ ಹಿಂದೆ ಇದೇ ರೀತಿ ಅನಂತಾಡಿ ಗ್ರಾಮದಲ್ಲಿ, ವಿಟ್ಲ ಸಮೀಪದ ಉಕ್ಕುಡ ದರ್ಬೆಯಲ್ಲೂ ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಪುಟಾಣಿಗಳು ಸಾವನ್ನಪ್ಪಿದ್ದರು. ಮಕ್ಕಳು ಆಟವಾಡುವ ಸಂದರ್ಭ […]

Continue Reading

ಸಿಸಿಬಿ ಪೊಲೀಸರಿಂದ 3,500 ಕೊರಿಯರ್‌ಗಳ ಪರಿಶೀಲನೆ, 606 ಕೊರಿಯರ್‌ಗಳಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಬಗ್ಗೆ ಸಾಕಷ್ಟು ವಿಷಯಗಳು ಹೊರ ಬರುತ್ತಿದ್ದು, ಆಶ್ಚರ್ಯ ಹಾಗೂ ಆತಂಕ ಎರಡೂ ವ್ಯಕ್ತವಾಗುತ್ತಿವೆ. ಬೆಂಗಳೂರು ಸಿಸಿಬಿ ಪೊಲೀಸರು ಕಳೆದ ಅಕ್ಟೋಬರ್ ತಿಂಗಳಲ್ಲಿ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅನುಮಾನಾಸ್ಪದ 3,500 ಕೊರಿಯರ್‌ಗಳನ್ನು ಪರಿಶೀಲಿಸಿದ ವೇಳೆ 606 ಕೊರಿಯರ್‌ಗಳಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಈ ಪ್ರಕರಣ ಬೆನ್ನಟ್ಟಿದ್ದ ಪೊಲೀಸರಿಗೆ ಮಾತ್ರ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಈ ಕೊರಿಯರ್ […]

Continue Reading

ಉಳ್ಳಾಲ: ಗ್ಯಾಸ್ ಸಿಲಿಂಡರ್ ಸ್ಪೋಟ; ತಾಯಿ, ಮೂವರು ಮಕ್ಕಳು ಗಂಭೀರ

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿದ್ದ ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಡಿಸೆಂಬರ್ 7 ರ ಶನಿವಾರ ತಡರಾತ್ರಿ ಸಂಭವಿಸಿದೆ . ಸ್ಪೋಟಗೊಂಡಿದ್ದು, ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಜನಾಡಿ ಕಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಪತ್ನಿ ಕುಬ್ರ (40), ಮಕ್ಕಳಾದ ಮೆಹದಿ(15), ಮಝಿಹಾ (13) ಮಾಯಿ಼ಝಾ (11) ಗಂಭೀರ ಗಾಯಗೊಂಡಿದ್ದಾರೆ. ಪತಿ ವಿದೇಶದಲ್ಲಿ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಐಕಾನ್ ತುಂಬೆ ಶೆಟ್ರು.!

ಕರಾವಳಿ, ಮಲೆನಾಡಿನಲ್ಲಿ ಲಗಾಡಿ ತೆಗೆದ ನಾಯಕರಿಗೆ ಸಿಂಹಸ್ವಪ್ನವಾದ ಯುವ ನಾಯಕ ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಧೂಳೀಪಟ.! ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಡಿಶುಂ.. ಡಿಶುಂ ಸಖತ್ ಸುದ್ದಿ ಮಾಡಿದ್ದಂತೂ ಸತ್ಯ. ಕಛೇರಿ ಒಳಗಡೆ ನಡೆದ ಭಾರೀ ತಮ್ಮಣಕ್ಕೆ ಪೇಚಿಗೆ ಸಿಲುಕಿದ ನಾಲಾಯಕರು ಮೀಡಿಯಾದೆದುರು ನಮ್ಮ ನಡುವೆ ಹಂಗೇನಿಲ್ಲ, ಎಲ್ಲವೂ ಸರಿಯಾಗಿದೆ ಎಂದು ತೇಪೆ ಹಚ್ಚಿದರೂ ಕಾಂಗ್ರೆಸ್ ನಾಯಕರೊಳಗೆ ಬೂದಿ ಮುಚ್ಚಿದ ಕೆಂಡದಂತಿದೆ. ಪಾಪ ಕಾರ್ಯಕರ್ತರು ಮಾತ್ರ ಈ ಹೈಡ್ರಾಮವನ್ನು ಎಂಜಾಯ್ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ […]

Continue Reading