ವಿಟ್ಲ: ಅಕ್ರಮ ಕೋಳಿ ಅಂಕಕ್ಕೆ ಧಾಳಿ, 27 ಜನರ ವಿರುದ್ದ ಪ್ರಕರಣ ದಾಖಲು.

ಕೋಳಿ ಅಂಕದಲ್ಲೂ ರಾಜಕೀಯ; ನಿನ್ನೆ ಕಾಂಗ್ರೆಸ್ ಶಾಸಕರ ನಾಯಕತ್ವ, ಇಂದು ಬಿಜೆಪಿಯ ಸಂಜೀವ ಮಠಂದೂರು, ಜಿಲ್ಲಾಧ್ಯಕ್ಷ ಸತೀಶ ಕುಂಪಲ ನೇತ್ರತ್ವ ಬಂಟ್ವಾಳ ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ದಿನಾಂಕ 21-12-2025 ರಂದು ಬೆಳಿಗ್ಗೆ ಹಲವು ಜನರು‌ ಸೇರಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿಯಂತೆ ವಿಟ್ಲ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಗದ್ದೆಯಲ್ಲಿ, […]

Continue Reading

ಮೋದಿ ಆಡಳಿತದಿಂದ ಗ್ರಾಮೀಣ ಜನರ ಬದುಕು ಬುಲ್ಡೋಜ್; ಕೇಂದ್ರ ಸರಕಾರದ ವಿರುದ್ಧ ಗುಡುಗಿದ ಸೋನಿಯಾ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದ್ದ ‘ಮನಾರೇಗ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯನ್ನು ಬುಲ್ಡೋಜ್ ಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. “ಹಳ್ಳಿಯ ಜನರ ಉದ್ಯೋಗದ ಹಕ್ಕು ಕಸಿದುಕೊಳ್ಳುವ ಉದ್ದೇಶ ‘ವಿಬಿ ಜಿ ರಾಮ್ ಜಿ’ (ವಿಕಸಿತ ಭಾರತ -ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್) ವಿಧೇಯಕದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸಲಿದೆ. ವಿಧೇಯಕ ಹಿಂದಕ್ಕೆ ಪಡೆಯುವ ತನಕ ಪಕ್ಷದ […]

Continue Reading

ವಿಟ್ಲ: ಅಕ್ರಮ ಕೋಳಿ ಅಂಕ; ಪುತ್ತೂರು ಶಾಸಕರು ಸೇರಿ 16 ಮಂದಿ ವಿರುದ್ದ ಪ್ರಕರಣ ದಾಖಲು:

ದಿನಾಂಕ 20-12-2025 ರಂದು ಮಧ್ಯಾಹ್ನ ಸಮಯ, ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ ದಿನಾಂಕ 20-12-2025 ರಂದು ಕಾನೂನುಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ವಿಟ್ಲ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್‌ ಠಾಣಾ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಕೋಳಿ ಅಂಕದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವು ಜನರು ಕೋಳಿ‌ ಅಂಕಕ್ಕೆ ಬಳಸುವ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿರುವುದು ಕಂಡುಬಂದಿದ್ದು, ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ […]

Continue Reading

ಕೈಕಂಬ: ಖಾಸಗಿ ನರ್ಸಿಂಗ್ ಹೋಮ್ ವೈದ್ಯರ ಕರ್ತವ್ಯ ಲೋಪಕ್ಕೆ ಬಾಣಂತಿ ದಿವ್ಯ ನವೀನ್ ಮಗು ಬಲಿ.

ಮಗು ಕಳೆದುಕೊಂಡ ಬಾಣಂತಿ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ನಷ್ಟ ಪರಿಹಾರ ಒದಗಿಸಿ ಕೊಡಲು ಜಿಲ್ಲಾಧಿಕಾರಿಗಳಿಗೆ ಡಿವೈಎಫ್ಐ ಮನವಿ ಕೈಕಂಬ: ಬಂಟ್ವಾಳ ಭಾಗದ ಅಮ್ಮುಂಜೆ ಪ್ರದೇಶದ ನಿವಾಸಿ ದಿವ್ಯ ನವೀನ್ ದಿನಾಂಕ 28-11-2025 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗುರುಪುರ-ಕೈಕಂಬದ ವಿಜಯ ನರ್ಸಿಂಗ್ ಹೋಮ್ ನಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವ ಮೊದಲು ಕಳೆದ ಒಂಬತ್ತು ತಿಂಗಳ ಎಲ್ಲಾ ಬಗೆಯ ಪರೀಕ್ಷೆಗಳು ಅದೇ ನರ್ಸಿಂಗ್ ಹೋಮ್ ನಲ್ಲಿ ನಡೆಸಿದ್ದರು ಆ ಎಲ್ಲಾ ಪರೀಕ್ಷೆಗಳು ಸಹಜವಾಗಿರುವ (NORMAL) ವರದಿಗಳೇ […]

Continue Reading

ಶತ-ಶತಮಾನಗಳ ಕತ್ತಲ ಬದುಕಿಗೆ ಮುಕ್ತಿ. ಆದಿವಾಸಿ ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಸಂಪರ್ಕವಾದ ಬಳಿಕ ಚಿಮಿಣಿ ಮುಕ್ತ ಗ್ರಾಮವಾಗಿದೆ

ಶತಮಾನಗಳಿಂದ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಮಾಲಿಗೆಬೈಲು ಪ್ರದೇಶದ ಆದಿವಾಸಿ ಮಲೆಕುಡಿಯ 11 ಕುಟುಂಬಗಳಿಗೆ ಇಂದು ವಿದ್ಯುತ್ ಸಂಪರ್ಕ ಕಲ್ಪಿಸುವ ಅವರ ಬದುಕಿನಲ್ಲಿ ಅಭಿವೃದ್ಧಿಯ ಹೊಸ ಬೆಳಕು ಚೆಲ್ಲಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಮಾಲಿಗೆ , ಪಂಜಲ ಪ್ರದೇಶವು ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಂಚಿತಗೊಂಡ ಪ್ರದೇಶವಾಗಿದೆ. ಇಲ್ಲಿ 11 ಮಲೆಕುಡಿಯ ಕುಟುಂಬಗಳು ಸೇರಿದಂತೆ ಒಟ್ಟು 27 ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಜೀವನ […]

Continue Reading

ಬಂಟ್ವಾಳ ಬುಡಾ ಕಛೇರಿಯಲ್ಲಿ ಅಧಿಕಾರಿಗಳದ್ದೇ ಕಾರ್ಬಾರ್.!, ಅಧಿಕಾರಿಗಳು ಆಡಿದ್ದೇ ಆಟ. ಶಾಸಕರು, ಅಧ್ಯಕ್ಷರು ಮೌನ ಯಾಕೆ?

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಜನ ಗ್ರಾಮಾಂತರ ಏಕವಿನ್ಯಾಸ, ತಾಂತ್ರಿಕ ಅನುಮೋದನೆ, ಅಭಿವೃದ್ಧಿ ಇವೆಲ್ಲವುಗಳಿಗೆ ಆಯಾ ತಾಲೂಕಿನ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಬೇಕಿದೆ. ಆದರೆ ಈ ಯೋಜನಾ ಪ್ರಾಧಿಕಾರದ ಕಚೇರಿಗಳ ಸಿಬ್ಬಂದಿಗಳು ಸ್ವಲ್ಪವೂ ಮಾನವೀಯತೆ ಇಲ್ಲದೆ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿಸುವುದೇ ಇವರ ಕೆಲಸ. ಜನಸಾಮಾನ್ಯರನ್ನು ಸತಾಯಿಸುವುದು ಬಿಟ್ಟರೆ ಮಣ್ಣಾಂಗಟ್ಟಿ ಬೇರೇನೂ ಇಲ್ಲಿ ಹಾಗದು. ಅದರಲ್ಲೂ ಎಲ್ಲೂ ಇಲ್ಲದ ಕೆಲವು ನಿಯಮಗಳನ್ನು ಬಂಟ್ವಾಳ ಯೋಜನಾ ಪ್ರಾಧಿಕಾರದ (ಬುಡಾ) ಕಚೇರಿಯಲ್ಲಿ ಜಾರಿಗೆ ತರಲಾಗಿದೆ. ಬಂಟ್ವಾಳದ ಮಿನಿವಿಧಾನ […]

Continue Reading

ಕಟ್ಟಡ ಲೈಸೆನ್ಸ್, ಭೂ ಪರಿವರ್ತನೆಗಾಗಿ ಜನಸಾಮಾನ್ಯ ಆರು ಸರಕಾರಿ ಕಚೇರಿ ಅಲೆದಾಡುವಂತಾಗಿದೆ..

ಸರಕಾರ ಕಾನೂನನ್ನು ಸರಳೀಕರಣ ಗೊಳಿಸಲಿ.. ನಿವೇಶನ ವಿನ್ಯಾಸದ ಅನುಮೋದನೆ ಗ್ರಾಮ ಪಂಚಾಯತ್ ಗೆ ನೀಡಲಿ.. ಸರಕಾರದ ಗಮನ ಸೆಳೆದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆ ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪಡೆಯಲು ಕಷ್ಟ ಪಡಬೇಕಾಗಿದೆ. ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ಸಂದರ್ಭದಲ್ಲೂ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೆಳಗಾವಿ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ […]

Continue Reading

ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಬಜಪೆ ಪೊಲೀಸರ ವಿರುದ್ಧ ಪ್ರಚೋದನಕಾರಿ ಸಂದೇಶ; ಕುಖ್ಯಾತ ಕ್ರಿಮಿನಲ್ ಕಾಟಿಪಳ್ಳ ಅಭಿಷೇಕ್ ಪೊಲೀಸ್ ಬಲೆಗೆ

ಸಾಮಾಜಿಕ ಜಾಲತಾಣವಾದ mr_a_titude ಎಂಬ ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಬಜಪೆ ಪೊಲೀಸರಿಂದ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ಅನ್ನುವ ಅವಹೇಳನಕಾರಿ ಬರಹ ಪ್ರಕಟಿಸಿ ಸಮಾಜದಲ್ಲಿ ದುಷ್ಕೃತ್ಯವನ್ನು ಪ್ರೇರೇಪಿಸುವ ಬರಹ ಪ್ರಕಟಿಸಿದ ಆರೋಪದಲ್ಲಿ ಅಭಿಷೇಕ್ ಅನ್ನುವಾತನನ್ನು ಬಜಪೆ ಪೊಲೀಸರು ಅರೆಸ್ಟ್ ಮಾಡುವಲ್ಲಿ ಸಫಲರಾಗಿದ್ದಾರೆ. mr_a_titude ಅನ್ನುವ ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಹೋಟೆಲ್ ನಿಸರ್ಗ ಎಂಬ ಪೋಟೋವನ್ನು ಹಾಕಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಆರೋಪಿಗಳಿಗೆ ಬಜಪೆ ಪೊಲೀಸರಿಂದ ರಾಜಾತಿಥ್ಯ..ದಿನಾಲೂ ಹೋಟೆಲ್ ನಿಸರ್ಗ ದಿಂದ ಬೀಫ್ […]

Continue Reading

ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಭಾರತೀಯರು ಶಾಶ್ವತವಾಗಿ ದೇಶ ಬಿಟ್ಟು, ತಮ್ಮ ಪೌರತ್ವವನ್ನು ತ್ಯಜಿಸುತ್ತಿದ್ದಾರೆ: ವಿದೇಶಾಂಗ ಸಚಿವಾಲಯ

ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. 2022ರಿಂದ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ಚಳಿಗಾಲದ ಅಧಿವೇಶನದಲ್ಲಿ ವಿದೇಶಾಂಗ ಸಚಿವಾಲಯವು ಅಂಕಿ ಅಂಶಗಳ ಸಹಿತ ಸಂಸತ್ತಿಗೆ ಮಾಹಿತಿ ನೀಡಿದೆ. ಇದರಲ್ಲಿ ಹಲವಾರು ಮಂದಿ ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಹುಟ್ಟಿ ಬೆಳೆದ ಊರು ಬಿಟ್ಟು ಬರುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ […]

Continue Reading

ಬಳ್ಳಾರಿ ಪಾಲಿಟಿಕ್ಸ್ ಮೀರಿಸುವಂತಿದೆ ಬಜ್ಪೆ ಪಾಲಿಟಿಕ್ಸ್.. ಸಿರಾಜ್ ಸೋಲಿಸಲು ಅಖಾಡಕ್ಕೆ ಇಳಿದ ಕಾಂಗ್ರೆಸ್ ಘಟಾನುಘಟಿ ನಾಯಕರು.!

ಲೋಕಲ್ ಪಾಲಿಟಿಕ್ಸ್ ಗೆ ಇಳಿದ ಕೈ ಹೈಲೆವೆಲ್ ನಾಯಕರು; ಕಿಂಗ್ ಮೇಕರ್ ಯಾರು ಗೊತ್ತಾ.? ಒಂದು ಜುಜುಬಿ ಪಟ್ಟಣ ಪಂಚಾಯತ್ ಗೆಲ್ಲಲು ಕಾಂಗ್ರೆಸ್ ಹೈ ಲೆವೆಲ್ ನಾಯಕರು ಇಷ್ಟೊಂದು ಕಠಿಣ ಪರಿಶ್ರಮ ಪಡುವ ಅಗತ್ಯವಿತ್ತಾ..?ದೊಡ್ಡ ದೊಡ್ಡ ನಾಯಕರೆಲ್ಲ ಅಖಾಡಕ್ಕೆ ಇಳಿಯುವ ಪರಿಸ್ಥಿತಿಯ ಅಗತ್ಯವಿತ್ತಾ.? ಬಜಪೆಯ ಜನಮೆಚ್ಚುಗೆ ಪಡೆದ ನಾಯಕ ಸಿರಾಜ್ ಬಜಪೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದ್ದರೆ ಕಾಂಗ್ರೆಸ್ ಹೈ ಲೆವೆಲ್ ನಾಯಕರೆಲ್ಲ ಬಜಪೆಯಲ್ಲಿ ಬೀಡು ಬಿಡುವ ಅಗತ್ಯವಿರಲಿಲ್ಲ. ಒಂದಂತೂ ಸತ್ಯ. ಸಿರಾಜ್ ಬಜ್ಪೆ ಪಕ್ಷೇತರರಾಗಿ ಸ್ಪರ್ಧಿಸುವ […]

Continue Reading