ಇನ್ನೊಬ್ಬರ ಆರ್ ಟಿ ಸಿ ತನ್ನದೆಂದು ನಂಬಿಸಿ ನ್ಯಾಯಾಲಯಕ್ಕೆ ನೀಡಿ ವಂಚನೆ: ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 33//9 ರಲ್ಲಿ 0.08.50 ಎಕ್ರೆ ಜಮೀನಿಗೆ ಎನ್ ಅಬೂಬಕ್ಕರ್ ಎಂಬವರು ಮಾಲಿಕನಾಗಿದ್ದು. ಅವರು ಸದ್ರಿ ಜಮೀನಿಗೆ ಸಂಬಂಧಿಸಿ ದಿನಾಂಕ 31.12.2024 ರಂದು ಪುತ್ತೂರು ತಾಲೂಕು ಕಚೇರಿಯಲ್ಲಿರುವ ಆರ್‌ಟಿಸಿ ಕೇಂದ್ರದಿಂದ ಅವರ ಹಕ್ಕಿನ ಜಮೀನಿನ ಬಾಬ್ತು ಪಹಣಿ ಪತ್ರವನ್ನು ತೆಗೆದು ನೋಡಿದಾಗ, ಸದ್ರಿ ಪಹಣಿ ಪತ್ರದ ಕಾಲಂ 11ರ ಋಣಗಳು ಕಾಲಂನಲ್ಲಿ ಎಂಆರ್‌ಟಿ 4/2024-2025 Spl. Case NO. ನಂಬ್ರ 34/2025(Crime No. 30/2021 of and N Crime […]

Continue Reading

ಮಂಗಳೂರು ಕೋಟಿ ಮೌಲ್ಯದ ಚಿನ್ನದ ಗಟ್ಟಿ ದರೋಡೆ: ಪರಿಚಿತರಿಂದಲೇ ನಡೆದ ಕೃತ್ಯ, ಮಹತ್ವದ ಸುಳಿವು ಲಭ್ಯ

ಮಂಗಳೂರು ನಗರದ ಚಿನ್ನದ ಅಂಗಡಿಯೊಂದರ ಕೆಲಸಗಾರ ಮುಸ್ತಫಾ ಎಂಬವರನ್ನು ದರೋಡೆಕೋರರು ಅಪಹರಿಸಿ 1.5 ಕೋಟಿ ರೂ. ಮೌಲ್ಯದ 1650 ಗ್ರಾಂ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.26ರಂದು ರಾತ್ರಿ 8:30ರ ವೇಳೆಗೆ ಅಂಗಡಿಯಿಂದ ಸುಮಾರು 1.5 ಕೋಟಿ ರೂ.ಮೌಲ್ಯದ 1,650 ಗ್ರಾಂ ತೂಕದ ಮೆಲ್ಟ್ ಮಾಡಿದ ಚಿನ್ನವನ್ನು ಶುದ್ಧ ಚಿನ್ನವಾಗಿ ಪರಿವರ್ತಿಸಲು ನಗರದ ರಥಬೀದಿಯ ಸಂತೋಷ್ ಎಂಬವರ ಚಿನ್ನದ ಅಂಗಡಿಗೆ ಮುಸ್ತಫಾ ತನ್ನ ಸ್ಕೂಟರ್‌ನ ಸೀಟಿನ ಅಡಿಯ ಬಾಕ್ಸ್ ನಲ್ಲಿಟ್ಟು […]

Continue Reading

ಪುತ್ತೂರಿಗೆ ಆಡಳಿತ ಪಕ್ಷದ ಎಂಎಲ್ಎ ಇದ್ದಾರೆ. ಆದರೆ ತಹಶೀಲ್ದಾರ್ ನಾಪತ್ತೆ.

ಪುತ್ತೂರಿನ ವಾಸ್ತುವಿಗೂ ಕೂಡಲಗಿ ಜಾತಕಕ್ಕೂ ಯಾಕೋ ಕೂಡಿ ಬರುತ್ತಿಲ್ಲ. ಇದು ಪುತ್ತೂರಿಗೆ ಅಂಟಿದ ಶನಿಕಾಟವೋ ಏನೋ..? ಪುತ್ತೂರು ತಹಶೀಲ್ದಾರ್ ಸೀಟು ಖಾಲಿ ಇದೆ. ಪುತ್ತೂರಿಗೆ ಆಡಳಿತ ಪಕ್ಷದ ಎಂಎಲ್ಎ ಇದ್ದಾರೆ. ಆದರೆ ತಹಶೀಲ್ದಾರ್ ಇಲ್ಲ. ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಪುರಂದರ ಹೆಗ್ಡೆ ಮನೆಗೆ ಹೋದ ಮೇಲೆ ಪುತ್ತೂರು ತಹಶೀಲ್ದಾರ್ ಚೇಂಬರಿನಲ್ಲಿ ಕೂತವರು ಕೂಡಲಗಿ ಎಂಬವರು. ಪುತ್ತೂರಿನ ವಾಸ್ತುವಿಗೂ ಕೂಡಲಗಿ ಜಾತಕಕ್ಕೂ ಯಾಕೋ ಕೂಡಿ ಬರುತ್ತಿಲ್ಲ. ಇದು ಪುತ್ತೂರಿಗೆ ಅಂಟಿದ ಶನಿಕಾಟವೋ ಏನೋ..? ದಂಡಾಧಿಕಾರಿ ಪರಾರಿಯಾಗಿದ್ದಾರೆ! ಪುತ್ತೂರು ಶಾಸಕರಾಗಿ ಅಶೋಕ್ […]

Continue Reading

ಲಂಚ ಪ್ರಕರಣದ ಆರೋಪಿ ಪುತ್ತೂರು ತಹಶೀಲ್ದಾರ್ ಎಸ್.ಬಿ ಕೂಡಲಗಿಗೆ ಲಭಿಸದ ಜಾಮೀನು.

ಲೋಕಾಯುಕ್ತ ಪರವಾಗಿ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಪುತ್ತೂರು: ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಪುತ್ತೂರು ತಾಲೂಕು ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಸೆಪ್ಟಂಬರ್ 25ರಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಅವರ ವಿಚಾರಣೆ ನಡೆಸಿ ಜಾಮೀನು ನಿರಾಕರಿಸಿರುತ್ತದೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದರು. ಜಮೀನಿನ ನಿರಾಕ್ಷೇಪಣ […]

Continue Reading

ಅಹಂಭಾವವಿಲ್ಲದ, ಜನಪರ ಅಧಿಕಾರಿ ರವಿಚಂದ್ರ ನಾಯಕ್; ಮಂಗಳೂರು ಮಹಾನಗರ ಪಾಲಿಕೆಯ ಹೆಮ್ಮೆಯ ಅಧಿಕಾರಿ

ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ರವಿಚಂದ್ರ ನಾಯಕ್ ಅವರ ಇತ್ತೀಚಿನ ನಡವಳಿಕೆಯೊಂದು ಭಾರೀ ಸುದ್ಧಿಗೆ ಕಾರಣವಾಗಿದೆ. ಸರಕಾರಿ ಸಣ್ಣ ಪುಟ್ಟ ಹುದ್ದೆಯಲ್ಲಿರುವವರು ನಾಗರೀಕರನ್ನು, ಸಿಬ್ಬಂದಿಗಳನ್ನು ಅಸಡ್ಡೆಯಿಂದ ನೋಡುವ ಈ ಕಾಲಘಟ್ಟದಲ್ಲಿ ಮಹಾನಗರ ಪಾಲಿಕೆಯ ಉನ್ನತ ಹುದ್ದೆಯಲ್ಲಿರುವ ರವಿಚಂದ್ರ ನಾಯಕ್ ಅವರು ಇತ್ತೀಚೆಗಷ್ಟೇ ಪೌರ ಕಾರ್ಮಿಕರಿಂದ ಸನ್ಮಾನ ಪಡೆಯುತ್ತಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರು ಆಯುಕ್ತರ ಕಾಲಿಗೆ ನಮಸ್ಕರಿಸಿದಾಗ ಕೂಡಲೇ ಪೌರ ಕಾರ್ಮಿಕರ ಕಾಲು ಹಿಡಿದು ಕೈ ಮುಗಿದ ವಿದ್ಯಮಾನ ನಡೆದಿದೆ. ಪೌರ ಕಾರ್ಮಿಕರು ನಮ್ಮ ನಿಮ್ಮಂತಹ ಮನುಷ್ಯರು, ಅವರ […]

Continue Reading

ಬಂಟ್ವಾಳ ಪುರಸಭೆಯಲ್ಲಿ ದಿನಗೂಲಿ ನೌಕರರದ್ದೇ ಕಾರುಬಾರು. ಬಂಟ್ವಾಳ ಶಾಸಕರೇ ಎಲ್ಲಿದ್ದೀರಾ.?

ಇದು ಬಂಟ್ವಾಳ ಪುರಸಭೆಯ ಕಥೆ ವ್ಯಥೆ . ಇಲ್ಲಿ ಅಧಿಕಾರಿಗಳು ಅನ್ನಿಸಿಕೊಂಡವರು ನಾಮ್ ಕಾವಸ್ತೆ ಮಾತ್ರ. ಆದರೆ ಕಾರುಬಾರು ನಡೆಯುತ್ತಿರುವುದೆಲ್ಲವೂ ದಿನಗೂಲಿ ನೌಕರರದ್ದೇ. ಬಂಟ್ವಾಳ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲ ಕಾರಣವೇ ಈ ದಿನಗೂಲಿ ನೌಕರರು. ಇವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅಧಿಕಾರಿ ವರ್ಗ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಮಾತ್ರ ಅಚ್ಚರಿ ಪಡುವಂತದ್ದು. ಬಂಟ್ವಾಳ ಪುರಸಭೆಯ ಒಳಹೊಕ್ಕರೆ ಯಾವೊಂದು ಕೆಲಸವೂ ಸಲೀಸಾಗಿ ನಡೆಯುತ್ತಿಲ್ಲ. ಖಾತಾ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಲೈಸೆನ್ಸ್ ಯಾವ ಕೆಲಸವೂ ಇಲ್ಲಿ […]

Continue Reading

ಸುಹಾಸ್ ಶೆಟ್ಟಿ ಮರ್ಡರ್: ಎನ್ ಐಎ ತನಿಖೆ ಠುಸ್!

ಕರಾವಳಿಯ ಆ ಎರಡು ಹತ್ಯೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಆ ಇಬ್ಬರು ಯಾರು ಗೊತ್ತೆ? ಹಿಂದೂ ಕಾರ್ಯಕರ್ತ ಕಂ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್, ಮತ್ತೊಬ್ಬ ಹಿಂದೂ ಕಾರ್ಯಕರ್ತ ಕಂ ರೌಡಿಶೀಟರ್ ಸುಹಾಸ್ ಶೆಟ್ಟಿ. ಕರಾವಳಿಯಲ್ಲಿ ನಿತ್ಯ ನಿರಂತರವಾಗಿ ಧರ್ಮ ದಂಗಲ್ ಗೆ ಸರಣಿ ಹತ್ಯೆ ನಡೆಯುತ್ತಿತ್ತು. ಕೊಳತ್ತಮಜಲಿನ ರಹೀಂ ಹತ್ಯೆಯ ನಂತರ ಜಿಲ್ಲೆಯಲ್ಲಿ ಖಡಕ್ಕ್ ಪೋಲಿಸ್ ಆಫೀಸರ್ಸ್ ಚಾರ್ಜ್ ತೆಗೆದುಕೊಂಡ ನಂತರ ಕರಾವಳಿ ಒಂಥರಾ ತಣ್ಣನೆ ಮಲಗಿತ್ತು. 2022 ಜುಲೈ 19 ರಂದು […]

Continue Reading

ಕಣಚೂರು ಸ್ಕೂಲ್ ಕ್ಯಾಂಪಸ್‌ನಲ್ಲಿ ಮೇಲ್ತೆನೆಯ ಪತ್ತನೆ ವರ್ಸತ್ತೆ ಜಲ್ಸ್‌

ಮೇಲ್ತೆನೆ ಪ್ರಕಟಿಸಿದ ಮೇಲ್ತೆನೆಲ್ ಬಿರಿಂಞೆ ಪೂವುಙ ಕವನ ಸಂಕಲನ ಬಿಡುಗಡೆ ದೇರಳಕಟ್ಟೆ: ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ)ದ ದಶಮಾನೋತ್ಸವ (ಪತ್ತನೆ ವರ್ಸತ್ತೆ ಜಲ್ಸ್-2025) ಕಾರ್ಯಕ್ರಮವು ಸೆ.30ರಂದು ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9:30ಕ್ಕೆ ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಉದ್ಘಾಟಿಸಲಿದ್ದಾರೆ. ಮೇಲ್ತೆನೆ ಪ್ರಕಟಿಸಿದ ಮೇಲ್ತೆನೆಲ್ ಬಿರಿಂಞೆ ಪೂವುಙ ಕವನ ಸಂಕಲನವನ್ನು ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. […]

Continue Reading

ಮರಳುಗಾಡಿನ ಚಿನ್ನದ ರಹಸ್ಯ! ಗೋಲ್ಡ್ ಸ್ಮಗ್ಲಿಂಗ್ ಹಿಂದೆ ದೊಡ್ಡ ಮಾಫಿಯಾ

ಹಳದಿ ಲೋಹದ ಮೇಲೆ ಭಾರತೀಯರಿಗೆ ಎಷ್ಟು ವ್ಯಾಮೋಹ ಇದೆ ಎಂದರೆ ಭಾರತೀಯರನ್ನು ‘ಚಿನ್ನಪ್ರಿಯರು’ ಎಂದೇ ಗುರುತಿಸಲಾಗುತ್ತದೆ. ಆದರೆ, ಭಾರತೀಯರಿಗೆ ಬೇಕಾದಷ್ಟು ಚಿನ್ನವನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿವರ್ಷ ಸುಮಾರು 400 ಟನ್ನಷ್ಟು ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಆಮದಾಗುವ ಚಿನ್ನದ ಮೇಲೆ ಸರ್ಕಾರ ವಿಧಿಸುವ ಸುಂಕವನ್ನು ತಪ್ಪಿಸಲು ಕಳ್ಳ ಮಾರ್ಗದಲ್ಲಿ ಚಿನ್ನವನ್ನು ಭಾರತಕ್ಕೆ ತರಲಾಗುತ್ತದೆ. ಇದೊಂದು ದೊಡ್ಡ ದಂಧೆಯಾಗಿದ್ದು, ವಿದೇಶಗಳಿಂದ ಅನಿಯಂತ್ರಿತವಾಗಿ ಕಳ್ಳಸಾಗಣೆ ನಡೆಯುತ್ತಲೇ ಇದೆ. ದುಬೈ ಕಳ್ಳಸಾಗಣೆದಾರರ ಕೇಂದ್ರ ಆಗಿದ್ದು, ಏನಿದು ಚಿನ್ನ ಕಳ್ಳಸಾಗಣೆ?, […]

Continue Reading

ಮುಂಬೈನಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ, ಆರೋಪಿಗಳ ಬಂಧನ

ಆರೋಪಿಗಳಿಂದ 111.83 ಗ್ರಾಂ ಎಂಡಿಎಂಎ ಮತ್ತು 21.03 ಗ್ರಾಂ ಕೊಕೇನ್ ವಶಕ್ಕೆಮಂಗಳೂರು ನಗರದ ಸಿಸಿಬಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್ ಎಂಬಲ್ಲಿ 21-09-2025 ರಂದು ಬೆಳಿಗ್ಗೆ ದಾಳಿ ನಡೆಸಿ, ದ್ವಿಚಕ್ರ ವಾಹನದೊಂದಿಗೆ ಇಬ್ಬರು ಯುವಕರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾವೂರಿನ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ ಸೋಜಾ ಎಂದು ತಿಳಿದುಬಂದಿದ್ದು, ಅವರಿಂದ ರೂಪಾಯಿ 22 ಲಕ್ಷದ 30 ಸಾವಿರ ಮೌಲ್ಯದ 111.83 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. […]

Continue Reading