ಮಾಡೆಲಿಂಗ್ ಹೆಸರಲ್ಲಿ ಚರ್ಮ ದಂಧೆ.!, ಭೂಗತ ಗ್ಯಾಂಗ್‌ಸ್ಟರ್ ಗಳು, ತಾರೆಯರು ಭಾಗಿ ಶಂಕೆ.

ವಿದೇಶದ ಉದ್ಯೋಗ ಹಾಗೂ ಮಾಡೆಲಿಂಗ್​ ಆಸೆ ಹುಟ್ಟಿಸಿ, ಯುವತಿಯರನ್ನು ವಿದೇಶಕ್ಕೆ ಕರೆಸಿಕೊಂಡು ಲೈಂಗಿಕ ದಂಧೆಗೆದೂಡುತ್ತಿದ್ದ ತನಿಖೆಯನ್ನು ಇದೀಗ ತಾರೆಗಳು ಮತ್ತು ಪ್ರಭಾವಿ ಗ್ಯಾಂಗ್‌ಗಳಿಗೂ ವಿಸ್ತರಿಸಲಾಗಿದೆ.ಈ ಪ್ರಕರಣದ ಮುಖ್ಯ ಆರೋಪಿ ಆಲುವಾದ ತೈನಾಟ್ ನಿವಾಸಿ ಸಿಂಧು ಅವರ ಮಗ ಹಾಗೂ ಮಗಳು ನಡೆಸುತ್ತಿರುವ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ಚಿತ್ರರಂಗದ ಹಲವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಯುವತಿಯರನ್ನು ಸೆಳೆಯುವಲ್ಲಿ ಇವರ ಪ್ರಭಾವ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿ ತಿರುವನಂತಪುರ ನಿವಾಸಿ ಅಲೀನಾ ಪ್ರಸ್ತುತ […]

Continue Reading

ಭಾರತಕ್ಕೂ ಎಬೋಲಾ ಭೀತಿ.! ಮತ್ತೊಮ್ಮೆ ಆಗುತ್ತಾ ಲಾಕ್ ಡೌನ್.?

ಆಫ್ರಿಕಾ ದೇಶದಲ್ಲಿ ಕಂಡು ಬಂದಿರುವ ಎಬೋಲಾ ವೈರಸ್‌ಗೆ ಯಾವುದೇ ಅಧಿಕೃತ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಸೋಂಕು ತಗುಲಿದರೆ ಸಾವಿನ ಪ್ರಮಾಣ ಅತ್ಯಂತ ಹೆಚ್ಚಾಗಿರುತ್ತದೆ. ಇದು ಕೋವಿಡ್ ನಂತೆ ಅತಿ ವೇಗವಾಗಿ ಹರಡುವ ಸಾಧ್ಯತೆ ತೀರಾ ಕಡಿಮೆಯಂತೆ. ಈ ವೈರಸ್ ಮೂಲತಃ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇನ್ನು ಮನುಷ್ಯರಿಂದ ಮನುಷ್ಯರಿಗೆ ಹರಡಲು ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕ ಅಗತ್ಯವಾಗಿರುತ್ತದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೂ, […]

Continue Reading

ಭಾರತದಲ್ಲೂ ಜೆನ್ ಜೀ ಕ್ರಾಂತಿ.. ಡಿಜಿಟಲ್ ಮಾಧ್ಯಮಗಳಲ್ಲಿ ಕಾಕ್ರೋಚ್ ಜನತಾ ಪಕ್ಷದ್ದೇ ಕಲರವ.!

ಭಾರತದ ರಾಜಕಾರಣದಲ್ಲಿ ಇದೀಗ ಒಂದು ಹೆಸರು ಬಹಳ ವೈರಲ್ ಆಗುತ್ತಿದೆ. ಇದು ನಗು ಮತ್ತು ಚರ್ಚೆಗೆ ಕಾರಣವಾಗುತ್ತಿರುವುದು ‘ಕಾಕ್ರೋಚ್ ಜನತಾ ಪಕ್ಷ'(CJP). ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಈ ಅಭಿಯಾನ ಈಗ ಯುವಕರ ಕೋಪ, ನಿರುದ್ಯೋಗ, ವ್ಯವಸ್ಥೆಯ ಬಗ್ಗೆ ಅತೃಪ್ತಿ ಮತ್ತು ಮೀಮ್ ಸಂಸ್ಕೃತಿಯ ಪ್ರಮುಖ ಸಂಕೇತವಾಗುತ್ತಿದೆ. ಕುತೂಹಲಕಾರಿ ವಿಷಯವೆಂದರೆ, ಪಕ್ಷವು ತನ್ನನ್ನು ಯುವಕರಿಂದ, ಯುವಕರಿಗಾಗಿ ಯುವಕರ ಪಕ್ಷ ಎಂದು ಕರೆದುಕೊಂಡಿದೆ. ಸಾವಿರಾರು ಜನರು ಆನ್‌ಲೈನ್‌ನಲ್ಲಿ ಪಕ್ಷವನ್ನು ಸೇರಿದ್ದಾರೆ. ಅಲ್ಲದೆ ಅನೇಕರು ಇದನ್ನು ಕೇವಲ ತಮಾಷೆಯಲ್ಲ, ಆದರೆ ಹೊಸ […]

Continue Reading

ಜಾತ್ಯತೀತ ಪಕ್ಷ ಬಿಟ್ಟು ಬಿಜೆಪಿ ಸೇರಿ ‘ಕಟ್ಟರ್ ಹಿಂದುತ್ವ ನಾಯಕ’ರಾದರು; ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕರೇ ಮುಖ್ಯಮಂತ್ರಿಗಳು

ನೀವು ನಂಬಿದರೆ ನಂಬಿ, ಇಲ್ಲದಿದ್ದರೆ ಬಿಡಿ. ಕಾಂಗ್ರೆಸ್ ಆದಿಯಾಗಿ ಜಾತ್ಯತೀತ ಪಕ್ಷದಲ್ಲಿ ನಾಯಕರಾಗಿ ಗುರುತಿಸಿ ಬಿಜೆಪಿ ಸೇರಿದ ಬಹುತೇಕ ನಾಯಕರು ಇಂದು ರಾಜಕಾರಣದಲ್ಲಿ ಕಟ್ಟರ್ ಹಿಂದುತ್ವ ನಾಯಕರಾಗಿ ಮಿಂಚುತ್ತಿದ್ದಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಬಹುನಿರೀಕ್ಷಿತ ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಕಮಲ ಕಮಾಲ್ ಮಾಡಿದೆ. ಕೇರಳದಲ್ಲಿ ಎಡಪಕ್ಷಗಳ ಆಟ ಮುಕ್ತಾಯವಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಗಳಿಸಿದೆ. ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಿದ ಎರಡೇ ವರ್ಷದಲ್ಲಿ ಜೋಸೆಫ್ ವಿಜಯ್ ರ […]

Continue Reading

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಭಾರತದ ಐತಿಹಾಸಿಕ ಯಶಸ್ಸು; 182 ಕೋಟಿ ರೂಪಾಯಿ ಮೌಲ್ಯದ 227.7 ಕೆಜಿ ತೂಕದ ಕ್ಯಾಪ್ಟಗನ್ ವಶ

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಭಾರತದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಐತಿಹಾಸಿಕ ಯಶಸ್ಸು ಸಾಧಿಸಿದೆ. ರಹಸ್ಯ ಕಾರ್ಯಾಚರಣೆ ಆಪರೇಷನ್ ರೇಜ್‌ಪಿಲ್ ಅಡಿಯಲ್ಲಿ ಎನ್‌ಸಿಬಿ ಅಧಿಕಾರಿಗಳು ಭೀಕರ ಉಗ್ರಗಾಮಿ ಕೃತ್ಯಗಳಿಗೆ ಲಿಂಕ್ ಹೊಂದಿರುವ ಸುಮಾರು 227.7 ಕೆಜಿ ತೂಕದ ಕ್ಯಾಪ್ಟಗನ್ ಮಾತ್ರೆ ಹಾಗೂ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 182 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಜಾಲದ ಹಿಂದಿದ್ದ ಸಿರಿಯಾ ಮೂಲದ ವಿದೇಶಿ ಪ್ರಜೆಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಬೃಹತ್ […]

Continue Reading

ಟೋಲ್ ಪ್ಲಾಜಾಗಳು ಸಂಪೂರ್ಣ ಕ್ಯಾನ್ಸಲ್; ‘ಮಲ್ಟಿ-ಲೇನ್ ಫ್ರೀ ಫ್ಲೋ’ (MLFF) ಎಂಬ ಆಧುನಿಕ ವ್ಯವಸ್ಥೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರು ಇನ್ನು ಮುಂದೆ ಟೋಲ್ ಪ್ಲಾಜಾಗಳ ಬಳಿ ವಾಹನ ನಿಲ್ಲಿಸಿ ಹಣ ಪಾವತಿಸುವ ದಿನಗಳು ಅಂತ್ಯವಾಗಲಿವೆ. ಕೇಂದ್ರ ರಸ್ತೆ ಸಾರಿಗೆ ಸಚಿವರು ದೇಶಾದ್ಯಂತ ಹೊಸ ತಂತ್ರಜ್ಞಾನ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಘೋಷಿಸಿದ್ದಾರೆ. 2026ರ ಅಂತ್ಯದೊಳಗೆ ಪ್ರಸ್ತುತ ಇರುವ ಭೌತಿಕ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಗುರಿ ಸರ್ಕಾರ ಹೊಂದಿದೆ. ಈಗಿನ ಟೋಲ್ ಬೂತ್‌ಗಳ ಬದಲಿಗೆ ‘ಮಲ್ಟಿ-ಲೇನ್ ಫ್ರೀ ಫ್ಲೋ’ (MLFF) ಎಂಬ ಆಧುನಿಕ ವ್ಯವಸ್ಥೆ ಜಾರಿಗೆ ಬರಲಿದೆ. […]

Continue Reading

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೌಕರರಿಂದ ಮೇ 25, 26 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಘೋಷಣೆ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೌಕರರು ಮೇ 25 ಮತ್ತು 26 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದ್ದಾರೆ. 1947 ರ ಕೈಗಾರಿಕಾ ವಿವಾದ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವರ್ಕ್‌ಮೆನ್ ವರ್ಗದ ನೌಕರರು ಆಂದೋಲನದಲ್ಲಿ ಭಾಗವಹಿಸುತ್ತಾರೆ ಎಂದು ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ಪರಿಣಾಮವಾಗಿ ಎಲ್ಲಾ ಶಾಖೆಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಪರಿಣಾಮ ಬೀರುವ ಸಾಧ್ಯತೆಯಿದೆ, ಮುಷ್ಕರದ ಪರಿಣಾಮ […]

Continue Reading

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಶೇ.65 ರಷ್ಟು ಮಂದಿ ಶಾಸಕರು ಕ್ರಿಮಿನಲ್ ಹಿನ್ನಲೆಯುಳ್ಳವರು

ಕ್ರಿಮಿನಲ್ ಹಿನ್ನೆಲೆಯ ಶಾಸಕರ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನ; ಕಾಂಗ್ರೆಸ್‌ನ ಇಬ್ಬರು ಶಾಸಕರ ಸ್ವಚ್ಛ ದಾಖಲೆ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರಲ್ಲಿ ಶೇ.65 ರಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ನಡೆಸಿದ ಹೊಸ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಇದು ಹಿಂದಿನ ಚುನಾವಣೆಗಿಂತ ತೀವ್ರ ಹೆಚ್ಚಳವಾಗಿದೆ. 2026 ರ ಚುನಾವಣೆಯಿಂದ ಗೆದ್ದ ಎಲ್ಲಾ 292 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಅಧ್ಯಯನವು ಪರಿಶೀಲಿಸಿದೆ ಮತ್ತು 2021 ರಲ್ಲಿ 142 ಕ್ಕೆ ಹೋಲಿಸಿದರೆ 190 ಶಾಸಕರು […]

Continue Reading

‘ರಾಹುಲ್ ಮಾಡೆಲ್’ ಅನುಷ್ಠಾನಕ್ಕೆ ಕಾಂಗ್ರೆಸ್ ನಲ್ಲಿ ಬಿಗಿ ಪಟ್ಟು.. ಹಿರಿ ತಲೆಗಳ ಸಲಹೆ ನಂಬಿ ಕೆಟ್ಟ ಕಾಂಗ್ರೆಸ್.!

ಎಐಸಿಸಿ ಯಲ್ಲಿ ಹಿರಿತಲೆಗಳಿಗೆ ಬೀಳಲಿದೆ ಬ್ರೇಕ್.. ಇನ್ಮುಂದೆ ಯುವಕರ ಪಾರುಪತ್ಯಕ್ಕೆ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ ಮೆಗಾ ಪ್ಲ್ಯಾನ್.! ದೇಶವಾಳಿದ ಕಾಂಗ್ರೆಸ್ ಸ್ಥಿತಿ ಅಧೋಗತಿಗೆ ಇಳಿದಿದೆ. ಕೆಲವೇ ಕೆಲವು ಸೀಮಿತ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಸ್ಮಿತೆ ಉಳಿದಿದೆ ಅಷ್ಟೇ. ಕರ್ನಾಟಕದಂತಹ ದೊಡ್ಡ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರದಲ್ಲಿದೆ. ಇನ್ನುಳಿದ ಎರಡು ಸಣ್ಣ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ ಅಷ್ಟೇ. ಉಳಿದೆಲ್ಲ ಕಡೆ ಕಾಂಗ್ರೆಸ್ ಕಥೆ ಹರೋಹರ. ಅರವತ್ತು ವರ್ಷ ದೇಶವಾಳಿದ ಕಾಂಗ್ರೆಸ್ ಸಂಕಷ್ಟದ ದಿನಗಳಲ್ಲಿದೆ. ಕಾಂಗ್ರೆಸ್ […]

Continue Reading

30 ಮಂದಿ ಐಪಿಎಸ್‌ ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಕ್ಕೆ ಬಡ್ತಿಗೆ ಹೈಕೋರ್ಟ್ ಆದೇಶ

ರಾಜ್ಯ ಪೊಲೀಸ್‌ ಸೇವೆಯಲ್ಲಿದ್ದ 30 ಐಪಿಎಸ್‌ ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಕ್ಕೆ ಬಡ್ತಿ ನೀಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.ಎಸ್‌ಪಿ ಹುದ್ದೆಗೆ ಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ 2025ರ ಆಗಸ್ಟ್ 20ರಂದು ನೀಡಿರುವ ಆದೇಶ ರದ್ದುಗೊಳಿಸುವಂತೆ ಕೋರಿ ರಾಜ್ಯ ಗೃಹ ಇಲಾಖೆ ಸಲ್ಲಿಸಿದ್ದ ರಿಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಕೆಎಸ್‌ಎಟಿ ಆದೇಶವನ್ನು ಮಾರ್ಪಾಡು ಮಾಡಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, […]

Continue Reading