ವಿಟ್ಲ-ಸಾಲೆತ್ತೂರು-ಮಂಚಿ ರಸ್ತೆಯಲ್ಲಿ ಟಿಂಬರ್ ಮಾಫಿಯಾ ಅಟ್ಟಹಾಸ.

ಅರಣ್ಯ ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಅಮೇದ್ಯ ತಿಂದು ಗಾಢ ನಿದ್ರೆಯಲ್ಲಿ ಅರಣ್ಯ ಇಲಾಖೆ.? ಹೌದು..ಒಂದೆಡೆ ಪರಿಸರ ರಕ್ಷಣೆಯ ನೆಪದಲ್ಲಿ “ಕಾಡು ಬೆಳೆಸಿ-ನಾಡು ಉಳಿಸಿ”ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತೀ ವರ್ಷ ಲಕ್ಷಾಂತರ ಗಿಡಗಳನ್ನು ಅಲ್ಲಲ್ಲಿ ನೀಡುತ್ತಾ ಫೊಟೋ ಹೊಡೆಸಿ ಅರಣ್ಯ ರಕ್ಷಣೆಯ ಸೋಗಿನಲ್ಲಿ ಬದುಕುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು. ಇನ್ನೊಂದೆಡೆ ಪ್ರತಿನಿತ್ಯ ಹತ್ತಾರು ಅಕ್ರಮ ಮರ ಸಾಗಾಟದ ಮಿನಿ ಲಾರಿಗಳು, ಪಿಕಪ್ ವಾಹನಗಳ ಅಟ್ಟಹಾಸ. ವಿಟ್ಲ-ಸಾಲೆತ್ತೂರು ಹಾಗೂ ಮಂಚಿ-ಸಾಲೆತ್ತೂರು ರಸ್ತೆಯಲ್ಲಿ ಟಿಂಬರ್ ಸಾಗಾಟದ ವಾಹನಗಳದ್ದೇ ಅರ್ಭಟ. ರಾತ್ರಿ ಹಗಲೆನ್ನದೇ ಶರವೇಗದಲ್ಲಿ ಸಾಗುವ […]

Continue Reading

ಅಡ್ಡೂರು: ಸೇತುವೆ ಕಾಮಗಾರಿಗೆ ಮತ್ತೆ ಎದುರಾದ ಸಂಕಷ್ಟ: ಎರಡನೇ ಬಾರಿ ನದಿ ಪಾಲಾದ ಟಿಪ್ಪರ್ ಲಾರಿ

ಬಂಟ್ವಾಳ ತಾಲೂಕಿಗೊಳಪಟ್ಟ ಪೊಳಲಿ ಅಡ್ಡೂರು ಸೇತುವೆ ಬಿರುಕುಗೊಂಡ ಪರಿಣಾಮ ಕಳೆದ ಹಲವಾರು ತಿಂಗಳುಗಳಿಂದ ಈ ಸೇತುವೆಯಲ್ಲಿ ಬಸ್ಸು, ಲಾರಿ ಸೇರಿದಂತೆ ಘನ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು. ಕೈಕಂಬ -ಪೊಳಲಿ- ಬಿಸಿರೋಡ್ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಅಡ್ಡೂರಿನವರೆಗೂ ಮಾತ್ರ ಸಂಚರಿಸುತ್ತಿದ್ದು, ಆ ನಂತರ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಹೋಗಿ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತ ಬಸ್ಸು ಏರಿ ಪ್ರಯಾಣಿಸಲೇಬೇಕಾದ ಕಾರಣ ಈ ಭಾಗದ ಜನರು ತುಂಬಾ ತೊಂದರೆಗೆ ಒಳಗಾಗುತ್ತಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದಾಗಿ ತೀವ್ರ […]

Continue Reading

ಸಿಂಗಾರಿ ಬೀಡಿ ಉದ್ಯಮಿಯ ದರೋಡೆಯ ರೋಚಕ ಸಂಗತಿಗಳು ಒಂದೊಂದಾಗಿಯೇ ಬಯಲಿಗೆ.. ಆರೋಪಿಗಳು ಬಾಯ್ಬಿಟ್ಟ ಸತ್ಯ.!

ಬೋಳಂತೂರಿನ ನಾರ್ಶದ ಸಿಂಗಾರಿ ಬೀಡಿ ಮಾಲಿಕರಾದ ಸುಲೈಮಾನ್‌ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ಹಣ ದರೋಡೆ ಮಾಡಿರುವ ಪ್ರಕರಣ ದಿನಕಳೆದಂತೆ ರೋಚಕ ಸಂಗತಿಗಳು ಹೊರಬರುತ್ತಿದೆ, ದರೋಡೆ ನಡೆಸಲು ಇ.ಡಿ. ಅಧಿಕಾರಿ ಗಳ ಸೋಗಿನಲ್ಲಿ ಬಂದಿದ್ದವರಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ. ದರೋಡೆಕೋರರು ಇ.ಡಿ ಅಧಿಕಾರಿಗಳೆಂದು ನಂಬಿದ್ದ ಉದ್ಯಮಿ ಜಾಗ ಮಾರಿ ಬಂದಿದ್ದ ಮೂರು ಕೋಟಿಗೂ ಅಧಿಕ ಹಣವನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದರು. ತನಿಖೆ , ವಿಚಾರಣೆ ಯಾವುದೇ ಗೋಜು […]

Continue Reading

ತೆಲಂಗಾಣದಲ್ಲಿ ಸುರಂಗದ ಭಾಗ ಕುಸಿದು 8 ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ

ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಯೋಜನೆಯಲ್ಲಿ ಶನಿವಾರ ಸುರಂಗದ ಒಂದು ಭಾಗ ಕುಸಿದ ನಂತರ ಎಂಟು ಜನರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ತೆಲಂಗಾಣ ನೀರಾವರಿ ಸಚಿವ ಎನ್‌ ಉತ್ತಮ್‌ ಕುಮಾರ್‌ ರೆಡ್ಡಿ, ನಾಗರ್‌ಕರ್ನೂಲ್‌ ಜಿಲ್ಲೆಯ ಅಪಘಾತ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ಉತ್ತರಾಖಂಡದಲ್ಲಿ ಇದೇ ರೀತಿಯ ಘಟನೆಯಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಿದವರು ಮತ್ತು ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ […]

Continue Reading

ಬಿಸಿಸಿಐ, ದುಬೈ ಕಾನ್ಸುಲೇಟ್ ಜಂಟಿಯಾಗಿ ಸಮುದಾಯ ಜಾಗೃತಿ ಕಾರ್ಯಕ್ರಮ: ಕಾನ್ಸುಲ್ ಜನರಲ್ ಸತೀಶ್ ಶಿವನ್ ಸಲಹೆ

ದುಬೈನಲ್ಲಿ ಇತ್ತೀಚೆಗೆ ನಡೆದ ಬ್ಯಾರಿ ಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಸತೀಶ್ ಶಿವನ್ ಅವರ ವಿಶೇಷ ಆಹ್ವಾನದ ಮೇರೆಗೆ ದುಬೈನ ಕಾನ್ಸುಲೇಟ್ ಕಚೇರಿಗೆ ಭೇಟಿ ನೀಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಇ ಕಾರ್ಯಕಾರಿ ಸಮಿತಿ ಸದಸ್ಯರು ಸಮುದಾಯದ ಹಾಗೂ ಅನಿವಾಸಿಗಳ ಹಲವಾರು ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸಿದರು. ಇತ್ತೀಚೆಗೆ ಪದೇ ಪದೇ ಕರ್ನಾಟಕದವರು ಎದುರಿಸುತ್ತಿರುವ ವಿಸಾ ಸಮಸ್ಯೆ ಬಗ್ಗೆ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಗಮನಸೆಳೆದಾಗ ಉತ್ತರಿಸಿದ […]

Continue Reading

NRC, CAA ಗೆ ಕೊಟ್ಟ ಪ್ರಾಮುಖ್ಯತೆ ವಕ್ಫ್ ತಿದ್ದುಪಡಿ ಕಾಯ್ದೆ ಹೋರಾಟಕ್ಕೆ ಜಿಲ್ಲೆಯ ಮುಸ್ಲಿಮರು ಕೊಡುತ್ತಿಲ್ಲವೇಕೆ..? ಪ್ರಮುಖ ಮುಸ್ಲಿಂ ಸಂಘಟನೆಗಳು ಮೌನಕ್ಕೆ ಶರಣು.!

ಪ್ರತಿಭಟನಾ ರಹಿತ ಪರಿಹಾರೋಪಾಯ ಸಾಧ್ಯವೇ.? ವಕ್ಫ್ ತಿದ್ದುಪಡಿ ಮಸೂದೆ 2024 ವರದಿಯನ್ನು ಸಂಸದೀಯ ಜಂಟಿ ಸಮಿತಿಯು ಲೋಕಸಭಾ ಸ್ಪೀಕರ್ ಅವರಿಗೆ ನೀಡಿರುವ ಹಿನ್ನಲೆಯಲ್ಲಿ 944 ಪುಟಗಳಿರುವ ವರದಿಯನ್ನು ಓದಿ ಅರ್ಥೈಸಿ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವ ಮತ್ತು ಕೆಲವೊಂದು ವಿವಾದಾತ್ಮಕ ತಿದ್ದುಪಡಿಗಳ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ಪ್ರಯತ್ನಗಳ ಭಾಗವಾಗಿ ಚರ್ಚೆ ಮತ್ತು ವಿಚಾರ ಗೋಷ್ಠಿಗಳು ನಡೆಯಬೇಕಾಗಿದೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ದ ಮುಸ್ಲಿಂ ಕಮಿಟಿಯೊಂದು ಇತ್ತೀಚೆಗೆ ಮಂಗಳೂರಿನಲ್ಲಿ ಈ ಬಗ್ಗೆ ಸಭೆಯೊಂದನ್ನು ಕರೆದಿತ್ತು. […]

Continue Reading

ಶ್ರೀಮಂತರ ಕಪಿಮುಷ್ಠಿಯಲ್ಲಿ ದಾರಿ ತಪ್ಪಿದ “ಬ್ಯಾರಿ ಆಂದೋಲನ”

ದಿ ಸೊ ಕಾಲ್ಡ್ ಬ್ಯಾರಿ ನಾಯಕರು ಬ್ಯಾರಿ ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು ಎಂದು ನೋಡುವುದಾದರೆ “ಶೂನ್ಯ” ವೇ ಉತ್ತರ. ✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು ಕರಾವಳಿ ಕರ್ನಾಟಕದ ಬ್ಯಾರಿ ಸಮುದಾಯವು, ಸರ್ವ ಜನಾಂಗದ ಸಹಬಾಳ್ವೆಯ ಪರಂಪರೆಯನ್ನು ಹೊಂದಿದ್ದು, ಇತ್ತೀಚೆಗೆ ಅದು ತನ್ನ ಭಾಷೆ (ಬ್ಯಾರಿ ಭಾಷೆ), ಸಂಪ್ರದಾಯಗಳು ಮತ್ತು ರಾಜಕೀಯ ಸಂಸ್ಥೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಸಾಮಾಜಿಕ-ಸಾಂಸ್ಕೃತಿಕ ಪುನರುತ್ಥಾನದ ಚಳುವಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಈ ಆಂದೋಲನವು-ಆರಂಭದಲ್ಲಿ ತಳಮಟ್ಟದ ಬುದ್ಧಿಜೀವಿಗಳು, ಶಿಕ್ಷಣತಜ್ಞರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಂದ […]

Continue Reading

ಅನಿವಾಸಿ ಉದ್ಯಮಿ ಬಿ. ಆರ್ ಶೆಟ್ಟಿಗೆ ಸಂಕಷ್ಟದ ಮೇಲೆ ಸಂಕಷ್ಟ; 106 ಮಿಲಿಯನ್ ಡಾಲರ್ ಸಾಲ ಪಾವತಿಸಲು ದುಬೈ ನ್ಯಾಯಾಲಯ ಆದೇಶ

ಭಾರತದ ಅನಿವಾಸಿ ಉದ್ಯಮಿ, ಯುಎಇ ಕಂಪನಿ ಎನ್ ಎಂ ಸಿ ಹೆಲ್ತ್ ಸಂಸ್ಥಾಪಕ ಬಿ ಆರ್ ಶೆಟ್ಟಿಗೆ ಭಾರತದ ಐಸಿಐಸಿಐ ಬ್ಯಾಂಕ್ ಗೆ 106 ಮಿಲಿಯನ್ ಡಾಲರ್ ಪಾವತಿಸುವಂತೆ ದುಬೈ ನ್ಯಾಯಾಲಯ ಆದೇಶ ನೀಡಿದೆ. ಯುಎಇಯಾದ್ಯಂತ 85 ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಿಸುತ್ತಿರುವ ಎನ್ ಎಂ ಸಿ 2022 ರಲ್ಲಿ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ನೇತೃತ್ವದ $4 ಬಿಲಿಯನ್ ಸಾಲ ಪುನರ್ರಚನೆ ನಂತರ ಆಡಳಿತದಿಂದ ಹೊರಬಂದಿತ್ತು. $963 ಮಿಲಿಯನ್ ಬಾಕಿ ಇತ್ತು. ಎನ್ ಎಂ ಸಿ ಹೆಲ್ತ್ ಕೇರ್ […]

Continue Reading

1995ರ ವಕ್ಫ್ ಕಾಯಿದೆಗೆ ತಿದ್ದುಪಡಿ.! ಎಂಬ ಸೋಗಿನಲ್ಲಿ ಪ್ರಸ್ತುತ ಮೋದಿ ಸರ್ಕಾರವು 2024 ರ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿದೆ.

ಆದರೆ ಇದು ತಿದ್ದುಪಡಿಯಲ್ಲ, “ತಿದ್ದುಪಡಿ’ ಎಂಬ ವೇಷದಲ್ಲಿರುವ ಹೊಸ ಕಾಯ್ದೆಯಾಗಿದೆ.!! ವಕ್ಫ್ ತಿದ್ದುಪಡಿ ಮಸೂದೆಯ ಪ್ರಸ್ತುತ ಪರಿಕಲ್ಪನೆಯು ಸಿಎಎ/ಎನ್ಆರ್ಸಿ ಕಾನೂನಿಗೆ ಪೂರಕವಾಗುವಂತೆ ಹುಟ್ಟು ಹಾಕಲಾಗಿದೆ ಮತ್ತು ಸಮುದಾಯ, ದತ್ತಿ ಮತ್ತು ಧಾರ್ಮಿಕ ಹಕ್ಕುಗಳಿಂದ ಮುಸ್ಲಿಮರನ್ನು ನಿಶ್ಯಸ್ತ್ರಗೊಳಿಸಲು ಉದ್ದೇಶಿಸಲಾಗಿದೆ. ಈ ಮಸೂದೆಯು ಮುಸ್ಲಿಮರಿಗೆ ವಕ್ಫ್ ಸಂಸ್ಥೆಗಳನ್ನು ಹೊಂದುವ ಹಕ್ಕುಗಳನ್ನು ಅಳಿಸಿಹಾಕುವ ಗುರಿಯನ್ನು ಹೊಂದಿದೆ. ಇದು ತಿದ್ದುಪಡಿ ಕಾಯಿದೆಯಲ್ಲ, ಬದಲಾಗಿ ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ ಪ್ರತಿಪಾದಿಸಲ್ಪಟ್ಟಂತೆ ವಕ್ಫ್ನ ಸಂಪೂರ್ಣ ಮೂಲಭೂತ ಪರಿಕಲ್ಪನೆಯನ್ನು ತೀವ್ರವಾಗಿ ಬದಲಾಯಿಸುವ ಹೊಸ ಕಾಯಿದೆಯಾಗಿದೆ. ಶೀರ್ಷಿಕೆಯ 2 ನೇ […]

Continue Reading

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ

ರಾಜ್ಯ ಹೆದ್ದಾರಿ, ಪಿಡಬ್ಲ್ಯೂಡಿ ಜಿಲ್ಲಾ ಮುಖ್ಯ ರಸ್ತೆಗಳ ಭೂ ಗಡಿ 6 ಮೀ ನಿಗದಿಗೊಳಿಸಿ ಆದೇಶ; ಕಟ್ಟಡ ಕಟ್ಟುವವರಿಗೆ ಫುಲ್ ಖುಷ್.! ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ರಸ್ತೆ ಮಾರ್ಜಿನ್ ಅಂತರದಲ್ಲಿ ಕಟ್ಟಡ ನಿರ್ಮಿಸುವವರು ಪುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಸರಕಾರದ ಆ ಆದೇಶ ಏನಿದು ಗೊತ್ತೆ? ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೆ ಕಟ್ಟಡ ಕಟ್ಟಲು ಈ ಹಿಂದೆ 25 ಮೀ ನಿಗದಿಪಡಿಸಲಾಗಿದ್ದು, ಆದರೆ ಇದೀಗ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ. […]

Continue Reading