ಮಂಗಳೂರಿನಲ್ಲಿ ಡಂ..ಢಮಾರ್.! ಸ್ಥಳ ಮಹಜರು ವೇಳೆ ತಪ್ಪಿಸಲು ಪ್ರಯತ್ನಿಸಿದ ಕೋಟಿ ರಾಬರಿ ಕಣ್ಣನ್ ಮಣಿಗೆ ಗುಂಡೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಭೇಟಿ ನೀಡಿದ್ದ ಸಮಯದಲ್ಲಿ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಗೆ ಮಟ ಮಟ ಮಧ್ಯಾಹ್ನದ ಹೊತ್ತಿಗೆ ದರೋಡೆಕೋರರು ನುಗ್ಗಿ 12 ಕೋಟಿ ಬೆಲೆಬಾಳುವ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯಾದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಕ್ಲಿಪ್ರಗತಿಯಲ್ಲಿ ತನಿಖೆಗೆ ಇಳಿದ ಪೊಲೀಸರು ತಮಿಳುನಾಡಿನಲ್ಲಿ ಮೂವರು ದರೋಡೆಕೋರರನ್ನು ಬಂಧಿಸಿದ್ದರು. ಆದರೆ ಇಂದು ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್‌ […]

Continue Reading

ನಿಖಿಲ್ ಇಲ್ಲಿಗೆ ಕುಮಾರಣ್ಣ ದಿಲ್ಲಿಗೆ; ಕೆಪಿಸಿಸಿ ಪಟ್ಟಕ್ಕೆ ಅಪ್ಪಾಜಿ.?

ಯಡಿಯೂರಪ್ಪ ಹೇಳಿದ ಟಾಪ್ ಸೀಕ್ರೆಟ್; ಮಿಂಚಿ ಮರೆಯಾದ ಕು.ಬಂಗಾರಪ್ಪ ✍️. ಆರ್. ಟಿ. ವಿಠ್ಠಲಮೂರ್ತಿ ಕಳೆದ ವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ನಾಯಕರ ಸಭೆ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚಿಂತೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಪದೇ ಪದೇ ಕರ್ನಾಟಕಕ್ಕೆ ಬರುವುದು ಅಷ್ಟು ಸೇಫ್ ಅಲ್ಲ ಎಂದಿದ್ದಾರೆ.ಹೀಗೆ ಏಕಾಏಕಿಯಾಗಿ ದೊಡ್ಡ ಗೌಡರು ಇಂತಹ ಮಾತುಗಳನ್ನಾಡಿದಾಗ ಸಭೆಯಲ್ಲಿದ್ದ ನಾಯಕರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ. ಅವರೇಕೆ ಇಂತಹ ಮಾತುಗಳನ್ನಾಡಿದರು ಎಂದು ತಿಳಿಯದೆ ಮೌನಕ್ಕೆ ಜಾರಿದ್ದಾರೆ.ತಾವಾಡಿದ ಮಾತಿಗೆ ಸಭೆ […]

Continue Reading

ಮೂಡಾ ದಿಗ್ಬಂಧನ ಸ್ಥಿತಿ: ‘ಭೂ’ನಗರೀಕರಣ ದಾಖಲೆಗಳ ಪ್ರಮುಖ ಕೇಂದ್ರ; ಮೂಡಾ ಆಯುಕ್ತರು ಸಾರ್ವಜನಿಕ ಸ್ಪಷ್ಟೀಕರಣ ನೀಡಲಿ.

ಮಂಗಳೂರು: ಜಿಲ್ಲೆಯ ಪ್ರಮುಖ ಭೂನಗರೀಕರಣ ದಸ್ತಾವೇಜುಗಳ ಪ್ರಮುಖ ಕೇಂದ್ರ, ನಗರ ಯೋಜನೆಗೆ ಪೂರಕ ಸುಗಮ ರಸ್ತೆ ಮೀಸಲು, ನಗರ ಸುಂದರೀಕರಣ, ನಿರ್ಮಾಣ ವರ್ಗೀಕರಣ ವಲಯ ಮೀಸಲು, ಕರಾವಳಿ ಅಭಿವೃದ್ಧಿ ಯೋಜನೆ ಇತ್ಯಾದಿ ವಿಷಯಗಳ ಬಗ್ಗೆ ಅಭಿವೃದ್ಧಿ ಅಪೇಕ್ಷಿತ ‘ಭೂ’ ವರ್ಗಾವಣೆಗೆ ಪೂರಕವಾದ ದಾಖಲೆಗಳನ್ನು ಶಿಫಾರಸುಗೊಳಿಸುವ ಪ್ರಮುಖ ಇಲಾಖೆಯ ಭಾಗವಾದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇಂದು ಸಾರ್ವಜನಿಕ ಪ್ರವೇಶ ನಿರ್ಭಂದಿತ ಕಚೇರಿ ಆಗಿ ಮಾರ್ಪಟ್ಟು ನಿಂತಿದೆ. ಸಾರ್ವಜನಿಕರು ಏಕ ನಿವೇಶನ ಅನುಮೋದನೆ, ಭೂ ಅನ್ಯಕ್ರಾಂತ, ವಲಯ ದೃಡೀಕರಣ ಇತ್ಯಾದಿ […]

Continue Reading

ಬಹುಸಂಸ್ಕೃತಿ ಉತ್ಸವ ಕೋಮು ಶಕ್ತಿ ಮಣಿಸಲು.! ಕೋಮು ಶಕ್ತಿಗಳೊಂದಿಗೆ ‘ಕೈ’ ಜೋಡಿಸಿದ ಸೋಕಾಲ್ಡ್ ನಾಯಕರು.!

ಖಾಲಿ ಕುರ್ಚಿಯೆಂದು ಮುಖ್ಯಮಂತ್ರಿಗೆ ಆಂತರಿಕ ವರದಿ ರವಾನೆ ಮಾಡಿದ ನಾ(ಲಾ)ಯಕರು ಯಾರು..? ಉಂಡು ಹೋದ.. ಕೊಂಡು ಹೋದ.. ಹುಳಿ ಹಿಂಡಿದ, ಯಾರೀತ.? ಮಂಗಳೂರು ಪುರಭವನದಲ್ಲಿ ಜನವರಿ 17 ರಂದು ಜರುಗಿದ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ,ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಜಂಟಿ ಸಹಭಾಗಿತ್ವದಲ್ಲಿ ಜರುಗಿದ ಬಹು ಸಂಸ್ಕೃತಿ ಉತ್ಸವ ವಿವಾದ ದಿನದಿಂದ ದಿನಕ್ಕೆ ವಿವಿಧ ಆಯಾಮಗಳನ್ನು ಪಡೆಯುತ್ತಿದೆ. ಕಾಂಗ್ರೆಸ್ ಸರಕಾರವೇ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಿಸಿತ್ತು . ಇದೀಗ ಕಾಂಗ್ರೆಸ್ ನ ಕೆಲವು ಪುಡಿ ನಾಯಕರು […]

Continue Reading

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್ ವರ್ಗಾವಣೆ; ರವಿಚಂದ್ರ ನಾಯಕ್ ನೂತನ ಆಯುಕ್ತರಾಗಿ ಆದೇಶ

ಭ್ರಷ್ಟಾಚಾರಿಗಳ ಪಾಲಿಗೆ ಪರಮಾನಂದರಾಗಿದ್ದ, ಕೋಟಿ, ಕೋಟಿ ಡೀಲ್ ಮಾಸ್ಟರ್ ಗೆ ಎತ್ತಂಗಡಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಸಿ.ಎಲ್ ಆನಂದ್ ಅವರನ್ನು ವರ್ಗಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಆನಂದ್ ಭ್ರಷ್ಟಾಚಾರಿಗಳ ಪಾಲಿಗೆ ಪರಮಾನಂದರಾಗಿದ್ದರು. ಕೋಟಿ ಕೋಟಿ ಡೀಲ್ ಪುರಾಣದಲ್ಲಿ ಭಾಗಿಯಾಗಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರವಾಗಿ ವರದಿ ಮಾಡಿತ್ತು. ಮಹಾನಗರ ಪಾಲಿಕೆಯಲ್ಲಿ ಕಳೆದ 10, 20 ವರ್ಷಗಳಿಂದ ಮೂಲೆ […]

Continue Reading

ಲಿಲ್ಲಿ ಮನೆ, ಪಳ್ಳಿ ಮನೆಯ ಬಾಡೂಟವೇ ಹೆಚ್ಚಾಯ್ತಾ.! ಬಹುಸಂಸ್ಕೃತಿ ಉತ್ಸವಕ್ಕೆ ಸಿ.ಎಂ. ಸಿದ್ದರಾಮಯ್ಯ ಗೈರು; ವ್ಯಾಪಕ ಅಸಮಾಧಾನ

“ಮಧ್ಯಾಹ್ನ ಲಿಲ್ಲಿ ಮನೆ, ಸಂಜೆ ಪಳ್ಳಿ ಮನೆ!” – ಇದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಲೋಗನ್! ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ವಿವಿಧ ಆಕಾಡೆಮಿಗಳ ಜಂಟಿ ಸಹಭಾಗಿತ್ವದಲ್ಲಿ ನಡೆದ ಬಹುಸಂಸ್ಕೃತಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದರೂ ಭಾಗವಹಿಸದಿರುವುದು ಪ್ರಜ್ಞಾವಂತ ನಾಗರಿಕರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರದ ಅಧೀನದಲ್ಲಿರುವ ನಿಗಮ ಮಂಡಳಿಯ ಕಾರ್ಯಕ್ರಮಕ್ಕಿಂತ ತಮ್ಮ ಹಿಂದೆ ಸುತ್ತಾಡುವ ಭಟ್ಟಂಗಿಗಳ ಬಾಡೂಟದ ಕಾರ್ಯಕ್ರಮವೇ ದೊಡ್ಡದಾಯಿತಾ ಅನ್ನುವ ಪ್ರಶ್ನೆ ಎದ್ದಿದೆ. ಮಧ್ಯಾಹ್ನ ಮತ್ತು ಸಂಜೆ ಟೌನ್ ಹಾಲ್ ಬಳಿಯೇ ಬಾಡೂಟ, ಚಹಾದ ಔತಣಕೂಟದಲ್ಲಿದ್ದರೂ ಅಲ್ಲಿಯೇ […]

Continue Reading

ಬಿ.ಸಿ.ರೋಡ್ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿಗಳ ರೌಡಿಸಂ .

ಲಾರಿ ಚಾಲಕನ ಮೇಲೆ ಹಲ್ಲೆ. ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ಬ್ರೇಕ್ ಹಾಕದ ಪೊಲೀಸರು.? ಹಗಲು ದರೋಡೆ ನಡೆಸುತ್ತಿರುವ ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ವಾಹನ ಚಾಲಕರು ನಲುಗಿ ಹೋಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಸಿಬ್ಬಂದಿಗಳ ರೌಡಿಸಂ ಮಿತಿ ಮೀರಿದೆ. ಪ್ರತಿನಿತ್ಯ ವಾಹನ ಚಾಲಕರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದರೂ ಪೊಲೀಸರು ಮತ್ತು ಹೆದ್ದಾರಿ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಶನಿವಾರ ಬೆಳಗ್ಗೆ ಲಾರಿ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ […]

Continue Reading

ಧೋ ನಂಬರ್ ದಂಧೆಕೋರರ ಕೈಗೆ ಸೊಸೈಟಿ..ಮಟ ಮಟ ಮಧ್ಯಾಹ್ನವೇ ನಡೆಯಿತು ರಾಬರಿ..!

ಈ ಹಿಂದೆಯೂ ನಡೆದಿತ್ತು ದರೋಡೆ.. ಬ್ಯಾಂಕ್ ನಿರ್ದೇಶಕರೊಬ್ಬರ ಪತಿಯೇ ಆರೋಪಿಯಾಗಿದ್ದ.! ಹಲವಾರು ಅನುಮಾನಕ್ಕೆ ಕಾರಣವಾಗುತ್ತಿದೆ ಕೋಟೆಕಾರ್ ಕೋಟಿ ಕೋಟಿ ರಾಬರಿ.! ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿರುವಾಗಲೇ ನಡೆದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ರಾಬರಿ ಕಥೆ ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಅಲ್ಲಲ್ಲಿ ತಪಾಸಣೆಯಲ್ಲಿ ಇರುವಾಗಲೇ ನಡೆದ ಕೋಟಿ ಕೋಟಿ ರಾಬರಿ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಹೆಲ್ಮೆಟ್ ಹಾಕದವರನ್ನು ಹಿಡಿಯುವುದಷ್ಟೇ ತಮ್ಮ ಕೆಲಸ ಎಂದು ಪೊಲೀಸರು ತಿಳಿದುಕೊಂಡಿದ್ದಾರೋ ಏನೋ..? ಮಟ ಮಟ […]

Continue Reading

ಜಿದ್ದಿಗೆ ಬಿದ್ದಂತೆ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ‘ಮಹಾ’ ನಾಯಕರುಗಳು.. ಸೆಡ್ಡು, ಜಿದ್ದು ಹಠಮಾರಿತನಕ್ಕೆ ನಲುಗಿಹೋಗಿದೆ ರಾಜ್ಯ ಕಾಂಗ್ರೆಸ್

ಸೆಡ್ಡು, ಜಿದ್ದು ಹಠಮಾರಿತನಕ್ಕೆ ನಲುಗಿಹೋಗಿದೆ ರಾಜ್ಯ ಕಾಂಗ್ರೆಸ್ ಪಕ್ಷ. ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಹೇಳಿಕೆ, ಟೀಕೆ ಜೋರಾಗಿ ಬಿರುಸಿನಿಂದ ನಡೆಯುತ್ತದೆ. ಈ ಆತಂಕದ ಪರಿಸ್ಥಿತಿಯಲ್ಲಿ ಏನಾಗುವುದೋ ಎಂಬ ಭಯದಲ್ಲಿದ್ದಾರೆ ಕಾಂಗ್ರೆಸಿಗರು. ಪಕ್ಷದಲ್ಲಿ ಪ್ರಮುಖ ಹುದ್ದೆಗಳು ಅಂಗಡಿಯಲ್ಲಿ ಸಿಗುವುದಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳೇನು ಸ್ಥಾನಮಾನ ಕೊಡಿಸುವುದಿಲ್ಲ. ನಮ್ಮ ಕೆಲಸ ನೋಡಿ ಪಕ್ಷದ ನಾಯಕರು ಹುದ್ದೆ ನೀಡುತ್ತಾರೆ.! ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ […]

Continue Reading

ವಿವಾಹಿತ ಮಹಿಳೆ ಪ್ರತಿರೋಧ ತೋರದಿದ್ದರೆ, ಪುರುಷನ ದೈಹಿಕ ಸಂಬಂಧ ಆಕೆಯ ಇಚ್ಛೆಗೆ ವಿರುದ್ಧವೆಂದು ಪರಿಗಣಿಸಲಾಗುವುದಿಲ್ಲ: ಅಲಹಬಾದ್ ಹೈಕೋರ್ಟ್

ಲೈಂಗಿಕವಾಗಿ ಅನುಭವಸ್ಥಳಾದ ಒಬ್ಬ ವಿವಾಹಿತ ಮಹಿಳೆ ಪ್ರತಿರೋಧ ತೋರದಿದ್ದರೆ, ಆಕೆಯೊಂದಿಗಿನ ಪುರುಷನ ದೈಹಿಕ ಸಂಬಂಧವನ್ನು ಅವಳ ಇಚ್ಛೆಗೆ ವಿರುದ್ಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಬಾದ್ ಹೈಕೋರ್ಟ್ ಹೇಳಿದೆ. 30 ವರ್ಷದ ವಿಧವೆಯೊಬ್ಬಳು ತನ್ನ 20 ವರ್ಷದ ಪತಿ ಸಹೋದರನ ವಿರುದ್ದ ದೂರು ದಾಖಲಿಸಿದ್ದು, ಆಕೆಯ ಆರೋಪದ ಪ್ರಕಾರ, ಮದುವೆಯಾಗುವುದಾಗಿ ಭರವಸೆ ನೀಡಿ, ಎರಡು ವರ್ಷಗಳ ಕಾಲ ನಿರಂತರವಾಗಿ ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು. ನಂತರ ಆಕೆ ಗರ್ಭಿಣಿಯಾದಾಗ, ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಲ್ಲದೇ ನಂತರ ಸಂಪರ್ಕ ಕಡಿದುಕೊಂಡು ಬೆದರಿಕೆ ಹಾಕಿದಾಗ, […]

Continue Reading