ದ.ಕ ಎಂ.ಪಿ ಟಿಕೆಟ್: ‘ಆಕೆ’ ಒಪ್ಪಿದರೆ ಕಾಂಗ್ರೆಸ್ ಟಿಕೆಟ್ ಫಿಕ್ಸ್.! ಯಾರೀಕೆ.?

ಕಾಂಗ್ರೆಸ್ ಘಟಾನುಘಟಿಗಳನ್ನು ಹಿಂದೆ ಸರಿಯುವಂತೆ ಮಾಡಿದ ‘ಗೌಡ ಅರಸಿ.!’ ಇನ್ನೇನೂ ಕೆಲವೇ ತಿಂಗಳಲ್ಲಿ ಲೋಕ ಸಮರದ ಅಖಾಡ ಸಿದ್ಧವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಲೋಕ ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸತತ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿರುವ ಬಿಜೆಪಿ ಜಿಲ್ಲೆಯಲ್ಲಿ ಗೆಲುವಿನ ಪ್ರಬಲ ದಾವೆದಾರಿಕೆ ಹೊಂದಿದೆ. ಆದರೆ ಶತಾಯಗತಾಯ ಈ ಬಾರಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಲೋಕ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಇದು ಎಷ್ಟು ವರ್ಕ್ ಔಟ್ ಆಗಲಿದೆ ಅನ್ನುವುದು ಚುನಾವಣಾ […]

Continue Reading

ಮಂಗಳೂರು: ನಗರದಲ್ಲಿ ರೆವೆನ್ಯೂ ಡಾಕ್ಯುಮೆಂಟ್ಸ್ ಪ್ಯಾಬ್ರಿಕೇಟಿಂಗ್ ಧಂದೆ, ನಕಲಿ ವೃತ್ತಿದಾರರಿಂದ ಕೃತ್ಯಗಳು.

ಇರುಳಿನಲ್ಲಿ ನಡೆಯುವ ಅವ್ಯವಹಾರ ಡೀಲ್..ಡೀಲ್.! ಮಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ಅಕ್ರಮ ಸ್ವಾಧೀನ, ಪಾಳು ಭೂಮಿ, ಖಾಸಗಿ ಜಮೀನುವಿನೊಂದಿಗೆ ಒತ್ತುವರಿ, ಅಸಮರ್ಪಕ ಕಂದಾಯ ದಾಖಲೆ, ವಾರೀಸು ರಹಿತ ಭೂಮಿ, ಮರಣ ಸಮರ್ಥನ ಪತ್ರದ ಅಲಭ್ಯತೆ, ಒಡೆತನದಾರರ ವಲಸೆ, ಭೂ ಸುಧಾರಣೆ ಆದೇಶ ರಹಿತತೆ, ವಲಯ ನಿರ್ಭಂದಿತ, ಭೂ ಪರಿವರ್ತನೆ ಕಟ್ ಆಫ್ ಡೇಟ್ ಸಮಸ್ಯೆ, ಅಧಿಕ ವಿಸ್ತೀರ್ಣ ಭೂ ಪರಿವರ್ತನೆ, ದಂಡ ಪಾವತಿ ಸಮಸ್ಯೆ, ಇತ್ಯಾದಿ ಸಂಬಂಧಿತ ಜಮೀನುಗಳು ದ.ಕ.ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ಇರುವುದರಿಂದ, ಇಂತಹ ಭೂಮಿಗಳ ಭೂ ವ್ಯವಹಾರವು […]

Continue Reading

ಶೈಕ್ಷಣಿಕ ಕಾಶಿ ಮೂಡಬಿದ್ರೆಯಲ್ಲಿ ಇನ್ಸ್ ಪೆಕ್ಟರ್ ಸಂದೇಶ್ ಖಾಕಿ ‘ಖದರ್’.! ಬಿಲದೊಳಗೆ ಸೇರಿಕೊಂಡ ನಖರಾಗಳ ಪಡೆಗಳು.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ ಶೈಕ್ಷಣಿಕ ಕಾಶಿ ಎಂದೇ ಹೆಸರುವಾಸಿಯಾಗಿರುವ ಪ್ರದೇಶ. ರಾಜ್ಯ, ದೇಶ, ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗಾಗಿ ಆಗಮಿಸುತ್ತಿದ್ದಾರೆ. ಮಂಗಳೂರು ನಗರಕ್ಕಿಂತ 35 ಕಿ.ಮೀ ದೂರದಲ್ಲಿರುವ ಮೂಡುಬಿದಿರೆ ಕೆಲವು ವರ್ಷಗಳಿಂದ ರಾಜಕೀಯ, ಮತೀಯ ಕಾರಣಕ್ಕೆ ಸುದ್ಧಿಯಾದಂತಹ ಪ್ರದೇಶ. ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಹತ್ಯೆಯ ನಂತರ ಭುಗಿಲೆದ್ದಿದ್ದ ಮೂಡುಬಿದಿರೆ ಕೋಮುದಳ್ಳುರಿ ಆನಂತರ ಥಂಡವಾಗಿತ್ತು. ಆನಂತರ ರಾಜಕೀಯ ವಿಚಾರಕ್ಕಾಗಿ ಅಲ್ಲೊಂದು ಇಲ್ಲೊಂದು ಗುಂಪು ಕಟ್ಟಿಕೊಂಡು ಗಲಾಟೆ, ಕ್ರೈಂ ರೇಟುಗಳು ಸದ್ದಿಲ್ಲದೆ ನಡೆಯುತ್ತಿತ್ತು. ಆದರೆ ಕಳೆದ […]

Continue Reading

ಬಂಟ್ವಾಳ: ಬಾಲ್ಯ ವಿವಾಹಕ್ಕೆ ತಯಾರಿ; ಮದುವೆಗೆ ಬ್ರೇಕ್ ಹಾಕಿ,ಎಚ್ಚರಿಕೆ ನೀಡಿದ ಅಧಿಕಾರಿಗಳು

ಅಪ್ರಾಪ್ತ ವಯಸ್ಕ ಬಾಲಕಿಗೆ ಬಾಲ್ಯ ವಿವಾಹ ಮಾಡಲು ತಯಾರಿಯಲ್ಲಿದ್ದ ಮನೆಗೆ ಸರಿಯಾದ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮುನ್ನೆಚ್ಚರಿಕೆ ಬರೆಸಿಕೊಂಡು ಮದುವೆ ನಿಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾ ಎಂಬಲ್ಲಿ ಘಟನೆ ನಡೆದಿದೆ. ವಿಟ್ಲ ಸಿಡಿಪಿಓ ಇಲಾಖೆ ವ್ಯಾಪ್ತಿಗೊಳಪಟ್ಟ ಇರಾ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಯುವಕನೊಬ್ಬನಿಗೆ ಮದುವೆ ನಡೆಸುವ ಉದ್ದೇಶ ದಿಂದ ನಿಶ್ಚಿತಾರ್ಥ ನಡೆದು ಮದುವೆಗಾಗಿ ಹಾಲ್ ಬುಕ್ ಆಗಿತ್ತು. […]

Continue Reading

ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು – ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪ್ರತಿಭಟನಾ ಧರಣಿ

ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿಗಳ ಸಹಿತ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ಧರಣಿಯನ್ನು ಇಂದು ವಾಮಂಜೂರು ಜಂಕ್ಷನ್ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಈ ಧರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ದಕ ಜಿಲ್ಲೆ ಮುಂದುವರೆದ ಜಿಲ್ಲೆಯಾಗಿದ್ದು ಈ ಜಿಲ್ಲೆಯ ಧಣಿಕರ ಜೇಬು ತುಂಬಿಸುವ ಒಟ್ಟು 6 ಖಾಸಗೀ ಮೆಡಿಕಲ್ ಕಾಲೇಜುಗಳು ಈ ಜಿಲ್ಲೆಗೆ ಬಂದರೂ ಕೂಡ ಬೇಡ ಮಧ್ಯಮ ವರ್ಗದ ಜನತೆಗೆ […]

Continue Reading

ಪುತ್ತೂರು: ಖಚಿತ ವರ್ತಮಾನದ ಮಾಹಿತಿ ಮೇರೆಗೆ ಚಿನ್ನದ ವ್ಯಾಪಾರಿಯಿಂದ 25 ಲಕ್ಷ ರೂಪಾಯಿ ಜಪ್ತಿ

ರಾಜಸ್ಥಾನದ ಮೂಲದ ಚಿನ್ನದ ವ್ಯಾಪಾರಿಯಾಗಿರುವ, ಪ್ರಸ್ತುತ ಮಂಗಳೂರು ಜೆಪ್ಪು ಆವೆ ಮರಿಯಾ ಅಪಾರ್ಟ್ಮೆಂಟ್ ನಿವಾಸಿಯಾಗಿರುವ ರಾಮ್ ಭೂಪೇಶ್ ಸಿಂಗ್ ರನ್ನು ಪುತ್ತೂರಿನಲ್ಲಿ ಪೊಲೀಸರು ವಶಕ್ಕೆ ಪಡೆದು ಅವರ ಬಳಿಯಿದ್ದ 25 ಲಕ್ಷ ರೂಪಾಯಿ ಜಪ್ತಿ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಮಹಾರಾಷ್ಟ್ರದಿಂದ ಚಿನ್ನವನ್ನು ತಂದು ಮಂಗಳೂರಿನ ಸ್ಥಳೀಯ ಜ್ಯುವೆಲ್ಲರಿ ಅಂಗಡಿಗೆ ಚಿನ್ನ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದ ರಾಮ್ ಭೂಪೇಶ್ ಸಿಂಗ್ ದಿನಾಂಕ 22-09-2023 ರಂದು ಮಂಗಳೂರಿನಿಂದ ಪುತ್ತೂರು ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಸಮಯದಲ್ಲಿ ಖಚಿತ ವರ್ತಮಾನದ […]

Continue Reading

ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ರಿಂದ ಭ್ರಷ್ಟಾಚಾರ

ಇದೊಂದು ಧಾರ್ಮಿಕ ಹಾಗೂ ಆರ್ಥಿಕ ಭ್ರಷ್ಟಾಚಾರ; ನ್ಯಾಯವಾದಿ ದಿನೇಶ್ ಹೆಗಡೆ ಉಳೆಪಾಡಿ ಆರೋಪ ಕಾರ್ಕಳ: ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಕಾರ್ಕಕಳದ ಪರಶುರಾಮ ಮೂರ್ತಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮೂರ್ತಿ ಸ್ಥಾಪನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾಗಿರುವ ದಿನೇಶ್‌ ಹೆಗಡೆ ಉಳೆಪಾಡಿ ಆರೋಪಿಸಿದ್ದಾರೆ. ಈ ಕುರಿತು ಬರೆದಿರುವ ಅವರು, ಮಾಜಿ ಸಚಿವ ಹಾಗೂ ಹಾಲಿ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಅವರು ಜನರ ಜೀವವನ್ನು ಒತ್ತೆಯಿಟ್ಟು ತಮ್ಮ ರಾಜಕೀಯ […]

Continue Reading

ಹಿಂದುತ್ವ ಎಂಬ ದರೋಡೆ: ಚೈತ್ರಾರನ್ನು ಬೆಳೆಸಿದ ಸಂಘಟನೆ ಬೆಳೆದು ಬಂದ ದಾರಿ ಇದು…

✍️. ಪತ್ರಕರ್ತ ನವೀನ್ ಸೂರಿಂಜೆ 02 ಏಪ್ರಿಲ್ 2010ರಂದು ತೆಹಲ್ಕಾ ಪತ್ರಿಕೆಯು ಒಂದು ರಹಸ್ಯ ಕಾರ್ಯಾಚರಣೆಯನ್ನು ಬಯಲು ಮಾಡಿತ್ತು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೋಮುಗಲಭೆಗಾಗಿ ಹಣಕಾಸಿನ ಡೀಲ್‌‌ಗೆ ಒಪ್ಪಿಕೊಳ್ಳುತ್ತಾರೆ ಸಂಘಪರಿವಾರದ ಕಾಲಾಳುಗಳು ಬೆಳೆದು ಬಂದಿರುವುದೇ ಕುಂದಾಪುರದ ಚೈತ್ರಾ ಮಾದರಿಯಲ್ಲಿ. ಈ ರೀತಿ ಕೇಸರಿಯನ್ನು ಅಡವಿಟ್ಟು ಹಣ ಮಾಡುವ ದಂಧೆ ಮಾಡಿರುವುದು ಚೈತ್ರ ಮೊದಲೂ ಅಲ್ಲ, ಕೊನೆಯೂ ಅಲ್ಲ. ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಶ್ರೀರಾಮಸೇನೆಯ ಇತಿಹಾಸದಲ್ಲಿ ಇಂತಹ ಹಲವು ವಸೂಲಿ ಪ್ರಕರಣಗಳು ದಾಖಲಾಗಿವೆ. ಮಂಗಳೂರು ಉಡುಪಿಯಲ್ಲಿ […]

Continue Reading

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ:ಆರೋಪಿ ಖುಲಾಸೆ

ಆರೋಪಿಯ ಪರ ವಾದ ಮಂಡಿಸಿದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಪುತ್ತೂರು : ಆರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದ,ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಕೋತ್ನಡ್ಕ ನಿವಾಸಿ ಕಿಶೋರ್.ಕೆ ಎಂಬವರನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್.ವಿ ರವರು ನಿರಪರಾಧಿ ಎಂದು ಬಿಡುಗಡೆಗೊಳಿಸಲು ಆದೇಶಿಸಿರುತ್ತಾರೆ. 2017 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದಂಡಕಜೆ ಎಂಬಲ್ಲಿ ಸಿಲ್ವೆಸ್ಟರ್ ಡಿಸೋಜ ರವರ ಹಳೆಯ […]

Continue Reading

ದ.ಕ, ಉಡುಪಿ ಜೆಡಿಎಸ್ ಅಲ್ಪಸಂಖ್ಯಾತ, ಜಾತ್ಯತೀತ ಹಿಂದೂ ನಾಯಕರು ಸಾಮೂಹಿಕ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಸಿದ್ಧತೆ

ರಾಜ್ಯದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಜತೆಗೆ ಮೈತ್ರಿಮಾಡಿಕೊಂಡಿರುವ ಜೆಡಿಎಸ್‌ನ ವರಿಷ್ಠ ನಾಯಕರ ಬಗ್ಗೆ ಆ ಪಕ್ಷದ ಜಾತ್ಯತೀತ ನಿಲುವಿನ ಕಾರ್ಯಕರ್ತರಲ್ಲಿ ಇರಿಸು ಮುರಿಸು ಉಂಟಾಗಿದ್ದು, ಜಾತ್ಯತೀತ ನೆಲೆಗೆ ಧಕ್ಕೆಯಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು ಸಾಮೂಹಿಕವಾಗಿ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನು ಪಕ್ಷದ ಆಯಕಟ್ಟಿನ ಸ್ಥಾನದಲ್ಲಿದ್ದ ಮುಸ್ಲಿಂ ಸಮುದಾಯದ ಮುಖಂಡರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಸೈಯದ್‌ ಶಫಿವುಲ್ಲಾ, ಹೊಸದಿಲ್ಲಿಯಲ್ಲಿನ ವಿಶೇಷ ಪ್ರತಿನಿಧಿ ಮಹಮ್ಮದ್‌ ಅಲ್ತಾಫ್, ಯುವ ಮೋರ್ಚಾ […]

Continue Reading