ಬಸ್ಸಿನಲ್ಲಿ ತಿಗಣೆ ಕಾಟ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಪ್ರಕರಣ: ಸಂತ್ರಸ್ತ ಮಹಿಳೆಗೆ 1 ಲಕ್ಷದ 29 ಸಾವಿರ ರೂಪಾಯಿ 6% ಬಡ್ಡಿ ವಿಧಿಸಿ ಪರಿಹಾರ: ದ.ಕ ಜಿಲ್ಲಾ ಗ್ರಾಹಕ ಆಯೋಗ

ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಗೆ 1 ಲಕ್ಷದ 29 ಸಾವಿರ ರೂಪಾಯಿಯನ್ನು ಶೇಕಡಾ 6% ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್ಸಿನ ಮಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಸೋಮಶೇಖರಪ್ಪ ಕೆ.ಹಂಡಿಗೋಲ್‌ ಮತ್ತು ಶಾರದಮ್ಮ ಎಚ್‌.ಜಿ. ಈ ಆದೇಶ ನೀಡಿದ್ದಾರೆ. ಸೀ […]

Continue Reading

ಮುಲ್ಕಿ ಉಳಿಪ್ಪಾಡಿಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ; ಗ್ರಾಮ ಪಂಚಾಯತ್ ಅಧ್ಯಕ್ಷರೇ ಅಕ್ರಮದಲ್ಲಿ ಶಾಮೀಲಂತೆ.!

ಮಂಗಳೂರು ತಾಲೂಕಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಪ್ಪಾಡಿ ಕರಿಯತ್ತಲ ಗುಂಡಿ ಏತ ನೀರಾವರಿ ಪಂಪು ಬಳಿ ದಿನಂಪ್ರತಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಯಾವುದೇ ದಾಖಲೆ ಪತ್ರಗಳಿಲ್ಲದೆ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಎಲ್ಲಾ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಐಕಳ ಪಂಚಾಯತ್ ಅಧ್ಯಕ್ಷರ ಮುಂದಾಳತ್ವದಲ್ಲಿಯೇ ಅಕ್ರಮ ಮರಳು ಸಾಗಾಟ ಪ್ರತಿನಿತ್ಯ ಹಗಲು ರಾತ್ರಿ ನಡೆಸಲಾಗುತ್ತಿದೆ ಎಂಬ ಆರೋಪ ನಾಗರಿಕರದ್ದು. ಮುಲ್ಕಿ ಠಾಣಾ ಪೊಲೀಸರು, ಗಣಿ-ಭೂ ವಿಜ್ಞಾನ ಇಲಾಖೆಯ […]

Continue Reading

ಧಾರ್ಮಿಕ -ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಮುಂದಾಳು ವಿಠಲ ಪೂಜಾರಿ ಅತಿಕಾರಿಬೈಲು ಆತ್ಮಹತ್ಯೆ.

ತೀರಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಮುಂದಾಳು ವಿಟ್ಲ ಹೊರವಲಯದ ವಿಠಲ ಪೂಜಾರಿ (49) ಅತಿಕಾರಬೈಲು ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕೇಸರಿ ಅತಿಕಾರಬೈಲು ಸಂಘಟನೆ, ಚಂದಳಿಕೆ ಶಾಲಾ SDMCಯ ಅಧ್ಯಕ್ಷರಾಗಿ, ನಾಟಕ ಕಲಾವಿದ ಮತ್ತು ಬಿಲ್ಲವ ಸಂಘದಲ್ಲಿ ತೊಡಗಿಸಿಕೊಂಡಿದ್ದ ವಿಠಲ ಪೂಜಾರಿ ಮನೆ ಸಮೀಪದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸಂಪುಟ ಸರ್ಜರಿಗೆ ಸಿದ್ದು ರೆಡಿ; ಸಂಪುಟ ಸೇರುವವರು ಯಾರ್ಯಾರು.?

ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸಚಿವ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ ಕೆಪಿಸಿಸಿ ಪಟ್ಟಕ್ಕೆ ಲಾಬಿ ಜೋರು. ಮಂತ್ರಿ ರಾಜಣ್ಣ ಲೆಟರ್ ಬಾಂಬು ✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ಕಾಲದಿಂದ ಮೂಡಾ ಸಂಕಟದಲ್ಲಿ ಮುಳುಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟ ಸರ್ಜರಿಗೆ ಅಣಿಯಾಗುತ್ತಿದ್ದಾರೆ. ಮೈಸೂರಿನ ಮೂಡಾ ಎಪಿಸೋಡು ಆರಂಭವಾದ ನಂತರ ಸಂಪುಟ ಸರ್ಜರಿಯ ಬಗ್ಗೆ ಆಸಕ್ತಿ ತೋರದ ಸಿದ್ದರಾಮಯ್ಯ ಅವರಿಗೀಗ ಎಲ್ಲ ಕಡೆಯಿಂದ ಸಮಾಧಾನದ ಸುದ್ದಿಗಳು ಬರುತ್ತಿವೆ.ಅವರ ಆಪ್ತರು ಹೇಳುವ ಪ್ರಕಾರ, ಮೂಡಾ ಎಪಿಸೋಡಿನ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ […]

Continue Reading

ಮಂಜನಾಡಿ ಅಡುಗೆ ಅನಿಲ ದುರಂತ, ಸಮಗ್ರ ತನಿಖೆ ನಡೆಯಬೇಕು, ಶಾಸಕ ಯು. ಟಿ ಖಾದರ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಮುನೀರ್ ಕಾಟಿಪಳ್ಳ

ಉಳ್ಳಾಲ ತಾಲೂಕು ಮಂಜನಾಡಿಯ ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸಿಲಿಂಡರ್ ಸ್ಪೋಟದಲ್ಲಿ ಮೃತ ಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಗಾಯಾಳುಗಳಾಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ಮೂರು ವಾರಗಳ ಅವಧಿಯಲ್ಲಿ ಮೂವರು ಮೃತ ಪಟ್ಟಿದ್ದಾರೆ. ಈ ದುರಂತದ ದಾರುಣತೆಗೆ ಜನ ಸಮೂಹ ದುಃಖತಪ್ತವಾಗಿದೆ. ಜೊತೆಗೆ ಬೆಚ್ಚಿಬಿದ್ದಿದೆ. ರಾಜ್ಯ ಸರಕಾರ ಪರಿಹಾರ ಧನ ಘೋಷಿಸಲು ವಿಳಂಬ ಮಾಡುತ್ತಿರುವುದು ಜನತೆಯ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ನೋವಿನ ಜೊತೆಗೆ ಜನತೆ ಬೆಚ್ಚಿ ಬೀಳಲು ಪ್ರಮುಖ ಕಾರಣ, […]

Continue Reading

ಮಂಗಳೂರಿನಲ್ಲಿ ‘ಅಣಬೆ’ ಯಂತೆ ಮತ್ತೆ ಹುಟ್ಟಿಕೊಂಡ ಮಸಾಜ್ ಸೆಂಟರ್; ಏನುಂಟು ಏನಿಲ್ಲ.?

ಯುನಿಸೆಕ್ಸ್ ಹೆಸರಿನಲ್ಲಿ ನಡೆಯುತ್ತಿದೆ ಭರ್ಜರಿ ಚರ್ಮದಂಧೆ! ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗಳು, ಇಸ್ಪೀಟ್ ಕ್ಲಬ್ ಗಳು, ವಿಡಿಯೋ ಗೇಮ್ ಗಳು ಭರ್ಜರಿ ಕಮಾಯಿ ಮಾಡುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಸೆಟ್ಟಿಂಗ್ ಮೂಲಕ ನಡೆಯುತ್ತಿದ್ದವು. ಅಧಿಕಾರಿಗಳಿಗೆ ಮಂತ್ಲಿ ಕಪ್ಪ ಕಾಣಿಕೆ ಕೊಟ್ಟೇ ರಾಜಾರೋಷವಾಗಿ ನಡೆಯುತ್ತಿದ್ದವು. ಕೇರಳದ ಕಾಸರಗೋಡಿನಿಂದ ರೈಲು ಹತ್ತಿ ಮಸಾಜ್ ಸೆಂಟರ್ ಗೆ ಬಂದು ದೇಹ ತಣಿಸಿಕೊಂಡು ಹೋಗುತ್ತಿದ್ದರು. ಈ ಬಗ್ಗೆ ನಾಗರಿಕ ಸಂಘಟನೆಗಳ ಪ್ರತಿಭಟನೆಯಿಂದ ರಾಜಾರೋಷವಾಗಿ ನಡೆಯುತ್ತಿದ್ದ ಇಲ್ಲೀಗಲ್ ದಂಧೆಗೆ ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಮತ್ತೆ […]

Continue Reading

ರಾಜ್ಯದಲ್ಲಿ ಒಂದು ವರ್ಷದಲ್ಲಿ ಬರೋಬ್ಬರಿ 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು.!

ವಂಚಕರಿಂದ ಉದ್ಯಮಿಗಳು, ಸರಕಾರಿ ನೌಕರರು, ವ್ಯಾಪಾರಿಗಳಿಗೆ ಟೋಪಿ..109 ಕೋಟಿ ಲೂಟಿ.! ಸೈಬರ್ ವಂಚಕರು ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿ ಡಿಜಿಟಲ್ ಅರೆಸ್ಟ್ ಮೂಲಕ ನಿತ್ಯ ಕೋಟ್ಯಂತರ ರೂಪಾಯಿ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಬರೋಬ್ಬರಿ 641 ಡಿಜಿಟಲ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 109 ಕೋಟಿಯಷ್ಟು ಹಣ ಕಳೆದುಕೊಂಡಿದ್ದಾರೆ. ಸೈಬರ್ ವಂಚಕರ ಹಾವಳಿಯಿಂದಾಗಿ ದಿನನಿತ್ಯ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಸೈಬರ್ ವಂಚಕರ ಜಾಲದ ಕುರಿತು […]

Continue Reading

ಕಂದಕಕ್ಕೆ ಪಲ್ಟಿ ಹೊಡೆದ ಕಾರು, ಮೂವರು ಸಾವು. ಪುತ್ತೂರು ಬಳಿ ಮುಂಜಾನೆ ನಡೆದ ಅಪಘಾತ.

ಪುತ್ತೂರು ಹೊರವಲಯದ ಪರ್ಲಡ್ಕ ಬೈಪಾಸ್ ರಸ್ತೆ ಬಳಿ ಇಂದು ಮುಂಜಾನೆ ಕಾರೊಂದು ಪಲ್ಟಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಬೈಪಾಸ್ ರಸ್ತೆ ಬದಿಯ ಕಂದಕಕ್ಕೆ ಸುಳ್ಯ ಮೂಲದ ಮಾರುತಿ ಆಲ್ಟೋ ಕಾರು ಪಲ್ಟಿ ಹೊಡೆದಿದೆ. ಮೃತರನ್ನು ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ, ಚಿದಾನಂದ ನಾಯ್ಕ ಮತ್ತು ರಮೇಶ್ ನಾಯ್ಕ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ಲಭ್ಯವಾಗಬೇಕಾಗಿದೆ.

Continue Reading

ಸಿವಿಲ್ ಗುತ್ತಿಗೆದಾರರೊಬ್ಬರ ಹನಿಟ್ರ್ಯಾಪ್ ಪ್ರಕರಣ; ಮೂವರು ಆರೋಪಿಗಳ ಬಂಧನ

ಚಿನ್ನದ ಚೈನ್, ಉಂಗುರ ಕಸಿದು, 27 ಸಾವಿರ ನಗದು, 8 ಸಾವಿರ ಗೂಗಲ್ ಪೇ ಮಾಡಿಸಿಕೊಂಡ ಆರೋಪಿಗಳು ಗುತ್ತಿಗೆದಾರರೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಂತೋಷ್, ಅಜಯ್ ಹಾಗೂ ಜಯರಾಜ್ ಎಂದು ಗುರುತಿಸಲಾಗಿದೆ. ಸಿವಿಲ್ ಗುತ್ತಿಗೆದಾರರೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ನಯನಾ ಎಂಬಾಕೆ ಸೇರಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ. ದೂರುದಾರ ಸಿವಿಲ್ ಕಂಟ್ರಾಕ್ಟರ್‌ಗೆ ಐದಾರು ತಿಂಗಳುಗಳ ಹಿಂದಷ್ಟೇ ಪರಿಚಯವಾಗಿದ್ದ ನಯನಾ […]

Continue Reading

ಅಂದು ಬೊಮ್ಮಾಯಿ.. ಇಂದು ಸಿದ್ದರಾಮಯ್ಯ

ಸ್ಪೀಕರ್ ಸಾಹೇಬ್ರ ಕ್ಷೇತ್ರದಲ್ಲಿ ಇದೆಂತಹ ತಾರತಮ್ಯ.? ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದಾಗ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರ್, ಫಾಝೀಲ್ ಸುರತ್ಕಲ್, ಸುಳ್ಯದ ಯುವಕನೊಬ್ಬನ ಹತ್ಯೆ ನಡೆದಿತ್ತು. ನೆಟ್ಟಾರ್ ಮನೆಗೆ ಭೇಟಿ ನೀಡಿದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆಟ್ಟಾರ್ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಿತ್ತು. ಇಬ್ಬರು ಮುಸ್ಲಿಂ ಅಮಾಯಕ ಯುವಕರ ಕುಟುಂಬಕ್ಕೆ ಪರಿಹಾರ ಘೋಷಿಸಿ ಆ ನಂತರ ಹಿಂಪಡೆದಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಪಸಂಖ್ಯಾತ ವರ್ಗದ ಪಾಲಿಗೆ ಬೊಮ್ಮಾಯಿ ವಿಲನ್ ಆಗಿದ್ದರು. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ […]

Continue Reading