ಮುಲ್ಕಿ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ಅಧಿಕಾರಿಗಳಿಂದ ದಾಳಿ; ಆರೋಪಿಗಳು ಪರಾರಿ; ಪಕ್ಷ – ಭೇದ ಮರೆತ ಮರಳು ಕಳ್ಳರು.!

ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಬಾನೊಟ್ಟು ಶಾಂಭವಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ವ ಮರಳು ಅಡ್ಡೆಗೆ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂದರ್ಭ ಆರೋಪಿಗಳು ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಮೂರು ದೋಣಿಗಳನ್ನು ಹಾಗೂ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಏಕಾಏಕಿ ದಾಳಿ ನಡೆಸಿದಾಗ ಆರೋಪಿಗಳು ಸಿನಿಮೀಯ ರೀತಿಯಲ್ಲಿ ನದಿಯಲ್ಲಿ ದೋಣಿಯನ್ನು ಮುಳುಗಿಸಿಟ್ಟು ಪರಾರಿಯಾಗಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು, ಕರ್ನೀರೆ , ಬಳ್ಕುಂಜೆ, ಏಳಿಂಜೆ, ಪರಿಸರದಲ್ಲಿ […]

Continue Reading

ಮಲ್ಪೆ : ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಿಂದ ದಲಿತ ಯುವಕನ ಮೇಲೆ ಹಲ್ಲೆ : ಮಹಿಳೆ ಸಹಿತ ನಾಲ್ವರ ಮೇಲೆ ಎಫ್ಐಆರ್

ಮಲ್ಪೆ: ಫೆ.06 : ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಹೋಟೇಲ್ ನಲ್ಲಿ ರವಿವಾರ ನಡೆದಿದೆ. ಕರವೇ ಸದಸ್ಯರಾದ ಪ್ರಭಾಕರ, ಕುಶಾಲ್, ಜಯ, ಅಶ್ವಿನಿ ಎಂಬವರು ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ಯುವಕನನ್ನು ಮೂಡುಬೆಳ್ಳೆ ನಿವಾಸಿ ಶಶಿಕುಮಾರ್‌ (34) ಎಂದು ಗುರುತಿಸಲಾಗಿದೆ. ದಿನಾಂಕ. 04.02.2024 ರ ರವಿವಾರ ಸಂಜೆ 4 ಗಂಟೆಗೆ ಕಾರ್ತಿಕ್ ಎಸ್ಟೇಟ್ ಹೋಟೇಲ್ ನಲ್ಲಿ ಕರವೇ ಸಭೆಯನ್ನು ಕರವೇ ಸದಸ್ಯ […]

Continue Reading

ಬಂಟ್ವಾಳ, ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ; ಸುಳ್ಯ, ಬಂಟ್ವಾಳದಲ್ಲಿ ಬಿಜೆಪಿ ಕಚೇರಿಗೆ ಬೀಗ.!

ಕಲ್ಲಡ್ಕ ಭಟ್ಟ್ – ರಾಜೇಶ್ ನಾಯ್ಕ್ ಮಧ್ಯೆ ಫೈಟ್ ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಸ್ತಿನ ಪಕ್ಷ ಎಂದೇ ಕರೆಯಿಸಿಕೊಂಡಿದ್ದ ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರಿದ್ದು, ಬಂಟ್ವಾಳದಲ್ಲಿ ಶಾಸಕ ಮತ್ತು ಪರಿವಾರದ ನಾಯಕರ ಮಧ್ಯೆ ಮೆಗಾ ಫೈಟ್ ಆರಂಭಗೊಂಡಿದೆ. ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಪದಾಧಿಕಾರಿಗಳ ಸಭೆ ನಡೆಸಿ ರಾಮ್ ದಾಸ್ ಬಂಟ್ವಾಳ ಹೆಸರನ್ನು ಅಂತಿಮಗೊಳಿಸಿ ಜಿಲ್ಲಾಧ್ಯಕ್ಷರಿಗೆ ಕಳುಹಿಸಲಾಗಿತ್ತು. ಆದರೆ ಜಿಲ್ಲಾಧ್ಯಕ್ಷರು ರಾಜ್ಯ ಪ್ರಮುಖರಿಗೆ ಕಳುಹಿಸಿದ ಪಟ್ಟಿಯಲ್ಲಿ ರಾಂ ದಾಸ್ ಹೆಸರು ಮಾಯವಾಗಿ ಕಲ್ಲಡ್ಕ ಭಟ್ಟರ […]

Continue Reading

ಉಕ್ಕಿನ ಮಹಿಳೆ ಕುಳಾಯಿ ಶ್ರೀಘ್ರದಲ್ಲಿ ಬಿಜೆಪಿಗೆ.?

BIG POLITICAL NEWS ಪ್ರತಿಭಾ ಕುಳಾಯಿಯನ್ನು ಸೆಳೆಯಲು ರಣತಂತ್ರ ರೂಪಿಸಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷದ ಗಟ್ಟಿಗಿತ್ತಿ, ಉಕ್ಕಿನ ಮಹಿಳೆ ಎಂದೇ ಕರೆಸಿಕೊಂಡಿರುವ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವ ಎಲ್ಲಾ ಸಂಗತಿಗಳು ಗೋಚರಿಸುತ್ತಿದೆ. ಪ್ರತಿಭಾ ಕುಳಾಯಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತೆ ನಾಯಕಿ. ಸಂಘಪರಿವಾರವನ್ನು ಎದುರು ಹಾಕಿಕೊಂಡು […]

Continue Reading

ಮೊಯಿದೀನ್ ಬಾವರವರ ನೇತೃತ್ವದ ತುಳು ಆಂದೋಲನದಲ್ಲಿ ಭಾಗಿಯಾಗೋಣ: ಡಿ.ಐ. ಅಬೂಬಕರ್ ಕೈರಂಗಳ

ಜನಪ್ರಿಯ ಜನನಾಯಕ ಮೊಯಿದಿನ್ ಬಾವರವರ ನಾಯಕತ್ವದಲ್ಲಿ ತುಳು ಭಾಷೆಯನ್ನು 8ನೆಯ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಚಳವಳಿ ನಡೆಯುತ್ತಿದೆ. ಅನೇಕ ತುಳು ಕಲಾವಿದರು,ತುಳು ಅಭಿಮಾನಿಗಳು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಹಿರಿಯರಾದ ಡಾ. ಶ್ರೀ ಹರಿಕೃಷ್ಣ ಪುನರೂರು ಕೂಡಾ ಮುಂಚೂಣಿಯಲ್ಲಿದ್ದು ಅವರು ಮೊಯಿದಿನ್ ಬಾವರವರನ್ನು ” ತುಳುವ ಚಕ್ರವರ್ತಿ” ಎಂದು ಕರೆದಿರುವುದು ಅರ್ಥ ಪೂರ್ಣವೂ ಮೊಯಿದೀನ್ ಬಾವರವರಿಗೆ ಸಂದ ದೊಡ್ಡ ಪ್ರಶಸ್ತಿಯೂ ಆಗಿರುತ್ತದೆ. ತುಳು ಭಾಷೆಯನ್ನು 8ನೆಯ ಪರಿಚ್ಛೇಧಕ್ಕೆ ಸೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೇರಳ ರಾಜ್ಯ ಸರಕಾರಕ್ಕೆ […]

Continue Reading

ಉಡುಪಿ : ನಗರಸಭೆಯ ಬೇಜವಾಬ್ದಾರಿತನ : ಸೂಕ್ತ ಕ್ರಮಕ್ಕೆ ಅನ್ಸಾರ್ ಅಹಮದ್ ಆಗ್ರಹ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬೀಡಿನಗುಡ್ಡೆಯಲ್ಲಿ ಪೌರ ಕಾರ್ಮಿಕನೋರ್ವ ಕಸ ವಿಲೇವಾರಿ ಗಾಡಿಯಲ್ಲಿ ನೇತಾಡಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಮನೆಯಲ್ಲಿ ತಮ್ಮದೇ ಆದ ಕುಟುಂಬ ಕಾಯುತ್ತಿರುತ್ತಾರೆ ಅನ್ನುವ ಯೋಚನೆಯನ್ನೂ ಕೂಡ ಮಾಡದೇ ಪೌರ ಕಾರ್ಮಿಕರು ಇಂತಹ ದುಸ್ಸಾಹಸಕ್ಕೆ ಇಳಿಯುತ್ತಿದ್ದಾರೆ. ಉಡುಪಿಯಲ್ಲಿ ಇಂತಹ ದೃಶ್ಯಗಳು, ಪೌರ ಕಾರ್ಮಿಕರ ಉಡಾಫೆ ವರ್ತನೆ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಮುಂದೆ ನಡೆಯಬಹುದಾದಂತಹ ಅನಾಹುತಕ್ಕೆ ಕಡಿವಾಣ ಹಾಕಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ […]

Continue Reading

ಗಂಜಿಮಠ ಬಿಗ್ ಬ್ಯಾಗ್ ಕಿಕ್ ಬ್ಯಾಕ್..? ಪಂಚಾಯತ್ ಥಂಡಾ.!ಬಡವನಿಗೊಂದು ನ್ಯಾಯ.. ಶ್ರೀಮಂತನಿಗೊಂದು ನ್ಯಾಯ

ಗುರುಪುರ ಭಾಗದಲ್ಲಿ ಅತ್ಯಂತ ದೊಡ್ಡ ಪಂಚಾಯತ್ ಆಗಿರುವ, ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹಿಸಲು ಸಶಕ್ತ ಮೂಲವಿರುವ ಪಂಚಾಯತ್ ಇದ್ದರೆ ಅದು ಗಂಜಿಮಠ ಗ್ರಾಮ ಪಂಚಾಯತ್ ಮಾತ್ರ. ಅತ್ಯಂತ ವೇಗವಾಗಿ ನಗರವಾಗಿ ಬೆಳೆಯುತ್ತಿರುವ ಕೈಕಂಬ ಆಸುಪಾಸಿನ ಪ್ರದೇಶವನ್ನು ಒಡಲಲ್ಲಿ ಇಟ್ಟುಕೊಂಡಿರುವ ಗಂಜಿಮಠ ಗ್ರಾಮ ಪಂಚಾಯತ್ ಈ ಭಾಗದಲ್ಲಿ ಚಿನ್ನದ ಮೊಟ್ಟೆ ಇಡುವ ಪಂಚಾಯತ್ ಅನ್ನುವ ಪ್ರತೀತಿ ಇದೆ. ಬಾನೆತ್ತರಕ್ಕೆ ಬೆಳೆದು ನಿಂತಿರುವ ವಿವಿಧ ಕಟ್ಟಡ ಸಂಕೀರ್ಣಗಳಿಂದಲೇ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ತೆರಿಗೆ ಮೂಲದಿಂದ ಬರುತ್ತಿದೆ. ಇನ್ನು ಈ ಪಂಚಾಯತ್ […]

Continue Reading

ಕಾಂಗ್ರೆಸ್ ಪಕ್ಷದಲ್ಲಿ ಎರಡನೇ ಸಾಲಿನ ನಾಯಕರಿಗೆ ಅಧಿಕಾರ ಭಾಗ್ಯ ಯಾವಾಗ.?

ಜನನಾಯಕ ಯು.ಪಿ ಇಬ್ರಾಹಿಂ ಅಡ್ಡೂರು ರವರಿಗೆ ಎಂಎಲ್ಸಿ ಸ್ಥಾನ ದೊರಕಲಿ: ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲ ಆಗ್ರಹ ಬಿಜೆಪಿಯಿಂದ ಚುನಾವಣಾ ಸಂದರ್ಭದಲ್ಲಿ ಹೈ ಜಂಪ್ ಮಾಡಿ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಗೆ ವಿಧಾನಸಭಾ ಕ್ಷೇತ್ರವನ್ನು ಧಾರೆ ಎಳೆಯಲಾಯಿತು. ತನ್ನ ಆಪ್ತನಿಂದಲೇ ಸೋಲು ಕಂಡ ಶೆಟ್ಟರ್ ಗೆ ಕಾಂಗ್ರೆಸ್ ಹೈಕಮಾಂಡ್ ಎಂಎಲ್ಸಿ ಸ್ಥಾನ ನೀಡಿ ಗೌರವ ನೀಡಿತು. ಆದರೆ ಶೆಟ್ಟರ್ ಮಾಡಿದ್ದೇನು? ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿ ಅರ್ಧದಲ್ಲೇ ಕೈ ಕೊಟ್ಟರು. ಜಗದೀಶ್ ಶೆಟ್ಟರ್ ಪಕ್ಷಾಂತರ ಕಾಂಗ್ರೆಸ್ ಪಕ್ಷಕ್ಕೆ […]

Continue Reading

ಮಹಾತ್ಮ ಗಾಂಧಿ – ನಾರಾಯಣ ಗುರು ಮತ್ತು ಕರಾವಳಿ

ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿಯವರನ್ನು ಪೂಜಿಸಿ, ಅನುಸರಿಸಬೇಕಾದ ಮಂಗಳೂರಿನಲ್ಲಿ ಏನಾಗುತ್ತಿದೆ.? ✍️. ನವೀನ್ ಸೂರಿಂಜೆ, ಪತ್ರಕರ್ತರು ಇಡೀ ದೇಶದಲ್ಲಿ ಗಾಂಧಿಗೆ ತ್ರಿಕಾಲ ಪೂಜೆ ನಡೆಯುತ್ತಿರುವ ಏಕೈಕ ದೇವಸ್ಥಾನವಿರುವುದು ಮಂಗಳೂರಿನಲ್ಲಿ. ಅದೂ ಬಿಲ್ಲವರ ಆಡಳಿತಕ್ಕೊಳಪಟ್ಟ ಗರೋಡಿಯಲ್ಲಿ ! ದುರಂತ ಎಂದರೆ ಬ್ರಹ್ಮಶ್ರಿ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿಯ ಅನುಯಾಯಿಗಳಾಗಬೇಕಾದವರು ಇಂದು ಸಂಘಪರಿವಾರದ ಕಾಲಾಳುಗಳಾಗಿ ಕೊಲ್ಲುವವರೂ, ಕೊಲ್ಲಲ್ಪಡುವವರೂ ಆಗಿ ಹೋಗಿದ್ದಾರೆ. ವಾಸ್ತವವಾಗಿ ಗಾಂಧಿಯ ಸಾವಿಗೆ ಕಾರಣವಾಗಿದ್ದು ಅವರ ಮುಸ್ಲಿಂ ಪ್ರೀತಿಯಲ್ಲ. ಬದಲಾಗಿ ಸಮಾನತೆ ಪರ, ಅಸ್ಪೃಶ್ಯತೆಯ ವಿರುದ್ದದ […]

Continue Reading

ಮಂಗಳೂರು ಸಿಸಿಬಿ ಎಸಿಪಿ ಹುದ್ದೆಗೆ ಚೆಲುವರಾಜು ಬಹುತೇಕ ಪಕ್ಕಾ

ಮಂಗಳೂರು ಸಿಸಿಬಿ ಎಸಿಪಿ ಆಗಿದ್ದ ಪಿ.ಎ ಹೆಗ್ಡೆ ಮುಂಬಡ್ತಿ ಪಡೆದುಕೊಂಡು ಉಡುಪಿಗೆ ವರ್ಗಾವಣೆಯಾಗಿದ್ದೆ ತಡ ಪ್ರಮುಖ ಅಧಿಕಾರಿಗಳು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ತಮ್ಮ ಪ್ರಭಾವ ಬಳಸಿ ಈ ಹುದ್ದೆಗೇರುವ ಪ್ರಯತ್ನವನ್ನು ತೆರೆಮರೆಯಲ್ಲಿ ನಡೆಸುತ್ತಿದ್ದರು. ಆದರೆ ಇದೀಗ ಚೆಲುವರಾಜು ಮಂಗಳೂರು ಸಿಸಿಬಿ ಎಸಿಪಿ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಬಹುತೇಕ ಪಕ್ಕಾ ಆಗಿದೆ. ಡಿವೈಎಸ್ಪಿ ಚೆಲುವರಾಜುರವರು ಅವಿಭಜಿತ ದ.ಕ ಜಿಲ್ಲೆಯ ಪಡುಬಿದ್ರೆ, ಬಜ್ಪೆ, ಜಿಲ್ಲಾ ಅಪರಾಧ ಪತ್ತೆ ದಳ, ಪಣಂಬೂರು, ಬಂದರು ಠಾಣೆ, ಐಜಿಪಿ ಕಚೇರಿ, ಲೋಕಾಯುಕ್ತ […]

Continue Reading