ಉಡುಪಿ: ಮಹಿಳಾ ಪೀಡಕ ಅಧಿಕಾರಿಗೆ ಸಿಕ್ತು ಭಡ್ತಿ!

ಸಿ.ಟಿ ರವಿ. ಕೇಸಲ್ಲಿ ಕಣ್ಣೀರು ಸುರಿಸಿದ್ದ ಸಚಿವೆ ತನ್ನ ಉಸ್ತುವಾರಿ ಕ್ಷೇತ್ರದಲ್ಲೇ ಮಹಿಳಾ ಪೀಡಕ ಅಧಿಕಾರಿಗೆ ಭಡ್ತಿ ನೀಡಿರುವುದು ಎಷ್ಟು ಸರಿ.? ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ದಂಡನೆಗೆ ಗುರಿಯಾಗಿದ್ದ ಅಧಿಕಾರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಉನ್ನತ ಹುದ್ದೆಯ ಭಡ್ತಿ ನೀಡಿದ ಘಟನೆ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾಮಣಿ ಉಸ್ತುವಾರಿ ಸಚಿವೆಯಾಗಿರುವ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಡಾ. ಅಶೋಕ ಹೆಚ್. ಇವರೇ, ಮಹಿಳಾ ಸಿಬ್ಬಂದಿಗಳಿಗೆ […]

Continue Reading

ಹಕ್ಕು ಪತ್ರ ಪಡೆದವರಿಗೆ ನಿವೇಶನ ಸ್ವಾಧೀನ ನೀಡದೆ ಅನ್ಯಾಯ : ಸಂತ್ರಸ್ತರಿಂದ ಕುಪ್ಪೆಪದವರು ಪಂಚಾಯತ್ ಮುಂಭಾಗ ಧರಣಿ

ಕುಪ್ಪೆ ಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಸತಿ ರಹಿತರು, ಮನೆ, ನಿವೇಶನಕ್ಕಾಗಿ ಗ್ರಾಮಪಂಚಾಯತ್ ಗೆ ಅರ್ಜಿ ಸಲ್ಲಿಸಿ ದಶಕದಿಂದ ಕಾಯುತ್ತಿದ್ದಾರೆ. ಇದರಲ್ಲಿ 98 ಕುಟುಂಬಗಳಿಗೆ 2018 ರಲ್ಲಿ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ವಿತರಿಸಲಾಗಿತ್ತು. ಆದರೆ, ನಿವೇಶನವನ್ನು ಫಲಾನುಭವಿಗಳಿಗೆ ಸ್ವಾಧೀನ ನೀಡದೆ “ಇಂದು, ನಾಳೆ” ಎಂದು ಸತಾಯಿಸುತ್ತಾ ಬರಲಾಗಿದೆ. ಇದರಿಂದ ಬೇಸತ್ತ ಸಂತ್ರಸ್ತರು “ಮನೆ, ನಿವೇಶನ ಹೋರಾಟ ಸಮಿತಿ, ಕುಪ್ಪೆಪದವು” ಇದರ ನೇತೃತ್ವದಲ್ಲಿ ಇಂದು ಕುಪ್ಪೆಪದವು ಗ್ರಾಮ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್: ಮನೆಯೊಂದು ಮೂರು ಬಾಗಿಲು

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸಿನ ಕೆಲವು ತುಂಡು ಮುಖಂಡರೇ ಕಂಟಕ.! ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಕೇಂದ್ರ ಸ್ಥಾನ ಮಂಗಳೂರಿನಲ್ಲಿದೆ. ಮಂಗಳೂರಿನಲ್ಲಿರುವ ಮಲ್ಲಿಕಟ್ಟೆ ಕಾಂಗ್ರೆಸ್ ಭವನವೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಕೇಂದ್ರ ಸ್ಥಾನ. ಒಂದೊಮ್ಮೆ ಜಿಲ್ಲೆಯಲ್ಲಿ ಗತವೈಭವದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಈ ಪರಿಸ್ಥಿತಿಗೆ ಬಂದು ತಲುಪಲು ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ; ಕಾಂಗ್ರೆಸ್. ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರೇ ಶತ್ರುಗಳು. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ […]

Continue Reading

ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ಸೋಂಕು ತಗುಲಿರುವ ಶಂಕೆ

ಬೆಂಗಳೂರು: ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಸೋಂಕು ತಗುಲಿರುವ ಶಂಕೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಪ್ರಕರಣ ಪತ್ತೆಯಾಗಿದೆ. ರಕ್ತದ ಮಾದರಿಯನ್ನು ಇನ್ನೂ ಪ್ರಯೋಗಾಲಯದಲ್ಲಿ (ಸರ್ಕಾರ) ಪರೀಕ್ಷಿಸಲಾಗಿಲ್ಲ ಮತ್ತು ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Continue Reading

ಪುತ್ತೂರು: ಹನಿಟ್ರ್ಯಾಪ್ ಗೆ ಬಲಿಯಾದ್ರೆ ಹೈದರಾಲಿ?

ಪುತ್ತೂರು ತಾಲೂಕಿನ ಕುಂಬ್ರ ಗಟ್ಟಿಮನೆ ಸನ್ಯಾಸಿಗುಡ್ಡೆ ನಿವಾಸಿ ಹೈದರಾಲಿ ಎಂಬವರು ಡಿಸೆಂಬರ್ 15 ರಂದು ಮನೆ ಸಮೀಪದ ಖಾಸಗಿಯವರಿಗೆ ಸೇರಿದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಸಂಚು ಇರುವುದಾಗಿ ಹೈದರಾಲಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರದ ವ್ಯಾಪಾರಿಯಾಗಿರುವ 37 ವರ್ಷದ ಹೈದರಾಲಿ ಆತ್ಮಹತ್ಯೆಯ ಬಗ್ಗೆ ಸ್ಥಳೀಯವಾಗಿ ನಾನಾ ಊಹಾಪೋಹಗಳು ಎದ್ದಿದ್ದು ಈ ಬಗ್ಗೆ ಹೈದರಾಲಿ ಅಣ್ಣ ಸಯ್ಯದ್ ಅಲವಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮನ […]

Continue Reading

ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ದ.ಕ ಮತ್ತು SKSSF ಮಾಣಿ ಇದರ ವತಿಯಿಂದ ಬ್ರಹತ್ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ

ಬಂಟ್ವಾಳ: ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ದ.ಕ ಕರ್ನಾಟಕ ಮತ್ತು SKSSF ಮಾಣಿ ಸೂರಿಕುಮಾರ್ ನೀರಪಾದೆ ಯೂನಿಟ್ ಇದರ ವತಿಯಿಂದ ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬ್ರಹತ್ ರಕ್ತದಾನ ಶಿಬಿರವು 05/01/25 ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯ ತನಕ ಬದ್ರಿಯಾ ಜುಮ್ಮಾ ಮಸೀದಿ ಸೋರಿಕುಮಾರ್ ವಠಾರದಲ್ಲಿ ಮರ್ಹೂಮ್ ಮೊಹಮ್ಮದ್ ಸರ್ಫ್ರಾಝ್ ವೇದಿಕೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ 63 ರಕ್ತದಾನಿಗಳು ರಕ್ತವನ್ನು ನೀಡುವ ಮೂಲಕ ಜೀವಾಧಾನಿಯಾದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿBJM ಸೂರಿಕುಮೇರ್ ಸ್ಥಳೀಯ ಖತೀಬರಾದ […]

Continue Reading

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸರ್ಕಾರವು 2 ವಿಶೇಷ ವರ್ಗಗಳ ವೀಸಾಗಳನ್ನು ಪ್ರಾರಂಭಿಸಿದೆ

ಹೊಸದಿಲ್ಲಿ: ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತವು ಎರಡು ವಿಶೇಷ ವರ್ಗದ ವೀಸಾಗಳನ್ನು ಪ್ರಾರಂಭಿಸಿದೆ. ‘ಇ-ಸ್ಟೂಡೆಂಟ್ ವೀಸಾ’ ಮತ್ತು ‘ಇ-ಸ್ಟೂಡೆಂಟ್-ಎಕ್ಸ್’ ವೀಸಾವನ್ನು ಗೃಹ ಸಚಿವಾಲಯವು ಪರಿಚಯಿಸಿದೆ ಮತ್ತು ಎಲ್ಲಾ ಅರ್ಜಿದಾರರು ಸರ್ಕಾರವು ಪ್ರಾರಂಭಿಸಿರುವ ‘ಸ್ಟಡಿ ಇನ್ ಇಂಡಿಯಾ’ (ಎಸ್‌ಐಐ) ಪೋರ್ಟಲ್ ಅನ್ನು ಬಳಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. SII ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಅರ್ಹ ವಿದೇಶಿ ವಿದ್ಯಾರ್ಥಿಗಳು ಇ-ವಿದ್ಯಾರ್ಥಿ ವೀಸಾ ಸೌಲಭ್ಯವನ್ನು ಪಡೆಯಬಹುದು ಮತ್ತು ಇ-ವಿದ್ಯಾರ್ಥಿ ವೀಸಾಗಳನ್ನು ಹೊಂದಿರುವವರ ಅವಲಂಬಿತರಿಗೆ ಇ-ವಿದ್ಯಾರ್ಥಿ-x […]

Continue Reading

ಅವಿವಾಹಿತ ದಂಪತಿಗಳು ಇನ್ನು ಮುಂದೆ ಸ್ವಾಗತಿಸುವುದಿಲ್ಲ, OYO ಚೆಕ್-ಇನ್ ನಿಯಮಗಳಲ್ಲಿ ಬದಲಾವಣೆ

ಹೊಸದಿಲ್ಲಿ: ಟ್ರಾವೆಲ್ ಬುಕಿಂಗ್ ಪ್ರಮುಖ OYO ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿಯನ್ನು ಬಿಡುಗಡೆ ಮಾಡಿದೆ, ಮೀರತ್‌ನಿಂದ ಪ್ರಾರಂಭಿಸಿ, ಈ ವರ್ಷ ಪರಿಣಾಮಕಾರಿ ಮಾರ್ಗಸೂಚಿಗಳನ್ನು ಪರಿಚಯಿಸಿದೆ ಮತ್ತು ಅವಿವಾಹಿತ ದಂಪತಿಗಳು ಇನ್ನು ಮುಂದೆ ಚೆಕ್ ಇನ್ ಮಾಡಲು ಸ್ವಾಗತಿಸುವುದಿಲ್ಲ. ಪರಿಷ್ಕೃತ ನೀತಿಯ ಅಡಿಯಲ್ಲಿ, ಚೆಕ್-ಇನ್ ಸಮಯದಲ್ಲಿ ಆನ್‌ಲೈನ್‌ನಲ್ಲಿ ಮಾಡಿದ ಬುಕಿಂಗ್‌ಗಳು ಸೇರಿದಂತೆ ಸಂಬಂಧದ ಮಾನ್ಯ ಪುರಾವೆಗಳನ್ನು ಪ್ರಸ್ತುತಪಡಿಸಲು ಎಲ್ಲಾ ದಂಪತಿಗಳನ್ನು ಕೇಳಲಾಗುತ್ತದೆ. OYO ತನ್ನ ಪಾಲುದಾರ ಹೋಟೆಲ್‌ಗಳ ವಿವೇಚನೆಯನ್ನು ತಮ್ಮ ತೀರ್ಪಿನ ಆಧಾರದ ಮೇಲೆ ಒಂದೆರಡು ಬುಕಿಂಗ್‌ಗಳನ್ನು […]

Continue Reading

ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಯುವ ಪತ್ರಕರ್ತನ ಹತ್ಯೆ

ಮುಖೇಶ್ ಚಂದ್ರಕರ್ ಭೋಪಾಲ್‌ನಲ್ಲಿ ಎನ್‌ಡಿಟಿವಿ ವರದಿಗಾರ ಛತ್ತೀಸ್‌ಗಡದಲ್ಲಿ ಗುತ್ತಿಗೆದಾರನೊಬ್ಬನ 120 ಕೋಟಿ ಮೊತ್ತದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಯುವ ಪತ್ರಕರ್ತನ ಮೃತದೇಹ ಅದೇ ಗುತ್ತಿಗೆದಾರನಿಗೆ ಸೇರಿದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ಹೊಸ ವರ್ಷದ ಜನವರಿ ಒಂದರಂದು ನಾಪತ್ತೆಯಾಗಿದ್ದ ಯುವ ಪತ್ರಕರ್ತ ಮುಕೇಶ್ ಚಂದ್ರಕಾರ್ ಮೃತದೇಹವನ್ನು ಚಟ್ಟನಪರ ಬಸ್ತಿ ಎಂಬಲ್ಲಿ ಪತ್ತೆ ಮಾಡಲಾಗಿದೆ. ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್‌ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ […]

Continue Reading

ಸಿಂಗಾರಿ ಬೀಡಿ ಮಾಲಿಕನ ಮನೆಗೆ ತಡರಾತ್ರಿಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು.

ಎರಡೂವರೆ ಗಂಟೆಗಳ ಕಾಲ ತಪಾಸಣೆ ನಾಟಕ. ಮೂಟೆಗಟ್ಟಲೆ ನಗದು ಹಣ, ಮೊಬೈಲ್ ಹೊತ್ತೊಯ್ದ ಖದೀಮರು. ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪ್ರಸಿದ್ಧ ಬೀಡಿ ಉದ್ಯಮಿ ಸಿಂಗಾರಿ ಹಾಜಿ ಸುಲೈಮಾನ್ ರವರ ಮನೆಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಎಂಟೂವರೆ ಗಂಟೆಗೆ ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಬಂದ ಏಳು ಜನರ ತಂಡ ವ್ಯವಸ್ಥಿತವಾಗಿ ದರೋಡೆ ನಡೆಸಿ ಪರಾರಿಯಾಗಿದೆ. ಹಿಂದಿ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಮಾತನಾಡುವ […]

Continue Reading